ಕವನ | ಬದುಕು ಮತ್ತು ಸಾವು

November 14, 2021
11:30 AM

ಹುಟ್ಟಿದಾಗ ದೃಷ್ಟಿ ಕಳೆದುಕೊಂಡಾತ
ಜಗತ್ತನ್ನು ಕಾಣಲಾಗಲಿಲ್ಲವೆಂದು,
ಬದುಕನ್ನು ಕಳೆದುಕೊಂಡಿದ್ದರೆ
ಜಗದಲ್ಲಿ ಕುರುಡರೇ
ಕಾಣಸಿಗುತ್ತಿರಲಿಲ್ಲ….!

Advertisement
Advertisement

ಕಿವಿಗಳಿಲ್ಲದವರು ತನ್ನವರ
ನುಡಿಗಳ ಕೇಳಿಸಿಕೊಳ್ಳಲಾಗುತ್ತಿಲ್ಲವೆಂದು
ಬದುಕಿಗೆ ಅಂತ್ಯವಿಡುತ್ತಿದ್ದರೆ
ಇಂದು ಕಿವುಡರೇ
ಕಾಣ ಸಿಗುತ್ತಿರಲಿಲ್ಲ…..!

ಪ್ರೀತಿ ಸಿಗದೇ ಇದ್ದವರೆಲ್ಲಾ,
ತಮ್ಮ ಬದುಕನ್ನು
ಅಂತ್ಯಗಾಣಿಸುತ್ತಿದ್ದರೆ,
ಅನಾಥವೆಂಬ ಪದಕೆ
ಅರ್ಥವೇ ಇರುತ್ತಿರಲಿಲ್ಲ…!

ಕಷ್ಟಕ್ಕೆ ಹೆದರಿ ಎಲ್ಲರೂ
ಬದುಕನ್ನು ಕಳೆದುಕೊಂಡಿದ್ದರೆ
ಬದುಕಿನ ಸುಂದರ ಕ್ಷಣಗಳ
ಯಾರು ಅನುಭವಿಸುತ್ತಿರಲಿಲ್ಲ..!

ಕಷ್ಟಗಳ ಬದುಕಿನ ದಾರಿಯಾಗಿಸಬೇಕು
ನೋವುಗಳನ್ನೇ ಬದುಕಿನ ಬೆಳಕಾಗಿಸಬೇಕು
ಬದುಕಿ ಏನನ್ನೂ ಸಾಧಿಸಲಾಗಲಿಲ್ಲವೆಂದ ಮೇಲೆ,
ಸತ್ತು ಸಾಧಿಸುವುದೇನಿದೆ….?

Advertisement

#ಅಪೂರ್ವ ಕೊಲ್ಯ

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ಬದುಕು ಪುರಾಣ | ಎಲ್ಲರೊಳಗೂ ಏಕಲವ್ಯನಿದ್ದಾನೆ!
May 25, 2025
6:00 AM
by: ನಾ.ಕಾರಂತ ಪೆರಾಜೆ
ಅಡಿಕೆ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿ | ವರವೋ ಶಾಪವೋ?
May 24, 2025
9:13 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ರೊಟ್ಟಿ
May 24, 2025
8:00 AM
by: ದಿವ್ಯ ಮಹೇಶ್
ಛದ್ಮ ವೇಷದಲ್ಲಿ ನಮ್ಮ ಪ್ರಜಾಪ್ರಭುತ್ವ
May 22, 2025
6:53 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror

Join Our Group