ಮಾನವನಾಗಿ ಹುಟ್ಟಿದ ಮೇಲೆ ಸೋಲು ಗೆಲುವು ಸಾಮಾನ್ಯ,
ಅವುಗಳನೆಲ್ಲಾ ಎದುರಿಸಿ ನಿಲ್ಲು ನೀನಾಗುವೆ ಸನ್ಮಾನ್ಯ…
ನಿನ್ನಯ ಬದುಕನು ರೂಪಿಸೋ ಹೊಣೆಯು ನಿನ್ನದೇ ತಿಳಿಯೋ ಮನುಜ,
ಜೀವನ ರೂಪಿಸೊ ಹೋರಾಟದಲಿ ನೋವು ನಲಿವೆಲ್ಲಾ ಸಹಜ,
ಅವುಗಳಿಗೆಲ್ಲಾ ಹೆದರಿ ಕುಳಿತರೆ ಗೆಲ್ಲಲಾರೆ ನೀ ಬದುಕಿನಲಿ…
ಬದುಕಿನ ಪ್ರತಿದಿನ ಪ್ರತಿಕ್ಷಣ ನೀನು ಎಚ್ಚರದಿಂದ ಹೋರಾಡು,
ನಿನ್ನಯ ಬದುಕಿನ ಹಾದಿಯಲ್ಲಿ ನಿನ್ನವರಾರು ನೀ ತಿಳಿಯೋ,
ನಿನ್ನ ಸೋಲಿನಲ್ಲಿ ನಿನ್ನೊಂದಿಗಿದ್ದವರು ಮಾತ್ರ ಇಲ್ಲಿ ನಿನ್ನವರು…
ನಿನ್ನಯ ಏಳಿಗೆ ನೋಡಿ ಸಹಿಸದ ವ್ಯಕ್ತಿಗಳಿಹರು ತುಂಬಾ,
ಯಾರ ಎದುರು ತೋರಿಸಬೇಡ ಎಂದೆಂದಿಗೂ ನೀ ಜಂಭ…
ಬದುಕಲಿ ಎಷ್ಟೇ ಎತ್ತರ ಬೆಳೆದರೂ ಮೆರೆಯಬೇಡ ನೀ ತುಂಬಾ…
ನಿನ್ನಯ ಸೋಲಿಗೆ ಕಾಯುವ ಜನರಿಗೆ ಗೆಲುವಿನ ಮೂಲಕ ಉತ್ತರಿಸು,
ಕಷ್ಟದಿಂದ ಬಂದ ಜನರ ಕಷ್ಟಗಳಿಗೆ ನೀ ಸಹಕರಿಸು…
ನಿನ್ನಿಂದ ಸಹಾಯ ಪಡೆದವರ ಆಶಿರ್ವಾದವೇ ನಿನಗೆ ಶ್ರೀರಕ್ಷೆ…
ಹಣಕ್ಕಾಗಿ ನೀ ಬದುಕಬೇಡ, ಗುಣಕ್ಕಾಗಿ ನೀ ಬದುಕು…
ಜೀವನದಲ್ಲಿ ಸೋಲಿನ ಕಥೆಗಳೇ ನಿನ್ನಯ ಬದುಕಿಗೆ ಸ್ಪೂರ್ತಿ…
ನೂರು ಪಾಠವ ಕಲಿಸುವ ಸೋಲೇ, ಗೆಲುವಿನ ಹಾದಿಯ ತೋರುವುದು…
ಮಾನವನಾಗಿ ಹುಟ್ಟಿದ ಮೇಲೆ ಸೋಲು-ಗೆಲುವು ಸಾಮಾನ್ಯ,
ಅವುಗಳನೆಲ್ಲಾ ಎದುರಿಸಿ ನಿಲ್ಲು ನೀನಾಗುವೆ ಸನ್ಮಾನ್ಯ…
# ಉಲ್ಲಾಸ್ ಕಜ್ಜೋಡಿ
ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…
ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…
ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…
ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…
ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…