ಮಾನವನಾಗಿ ಹುಟ್ಟಿದ ಮೇಲೆ ಸೋಲು ಗೆಲುವು ಸಾಮಾನ್ಯ,
ಅವುಗಳನೆಲ್ಲಾ ಎದುರಿಸಿ ನಿಲ್ಲು ನೀನಾಗುವೆ ಸನ್ಮಾನ್ಯ…
ನಿನ್ನಯ ಬದುಕನು ರೂಪಿಸೋ ಹೊಣೆಯು ನಿನ್ನದೇ ತಿಳಿಯೋ ಮನುಜ,
ಜೀವನ ರೂಪಿಸೊ ಹೋರಾಟದಲಿ ನೋವು ನಲಿವೆಲ್ಲಾ ಸಹಜ,
ಅವುಗಳಿಗೆಲ್ಲಾ ಹೆದರಿ ಕುಳಿತರೆ ಗೆಲ್ಲಲಾರೆ ನೀ ಬದುಕಿನಲಿ…
ಬದುಕಿನ ಪ್ರತಿದಿನ ಪ್ರತಿಕ್ಷಣ ನೀನು ಎಚ್ಚರದಿಂದ ಹೋರಾಡು,
ನಿನ್ನಯ ಬದುಕಿನ ಹಾದಿಯಲ್ಲಿ ನಿನ್ನವರಾರು ನೀ ತಿಳಿಯೋ,
ನಿನ್ನ ಸೋಲಿನಲ್ಲಿ ನಿನ್ನೊಂದಿಗಿದ್ದವರು ಮಾತ್ರ ಇಲ್ಲಿ ನಿನ್ನವರು…
ನಿನ್ನಯ ಏಳಿಗೆ ನೋಡಿ ಸಹಿಸದ ವ್ಯಕ್ತಿಗಳಿಹರು ತುಂಬಾ,
ಯಾರ ಎದುರು ತೋರಿಸಬೇಡ ಎಂದೆಂದಿಗೂ ನೀ ಜಂಭ…
ಬದುಕಲಿ ಎಷ್ಟೇ ಎತ್ತರ ಬೆಳೆದರೂ ಮೆರೆಯಬೇಡ ನೀ ತುಂಬಾ…
ನಿನ್ನಯ ಸೋಲಿಗೆ ಕಾಯುವ ಜನರಿಗೆ ಗೆಲುವಿನ ಮೂಲಕ ಉತ್ತರಿಸು,
ಕಷ್ಟದಿಂದ ಬಂದ ಜನರ ಕಷ್ಟಗಳಿಗೆ ನೀ ಸಹಕರಿಸು…
ನಿನ್ನಿಂದ ಸಹಾಯ ಪಡೆದವರ ಆಶಿರ್ವಾದವೇ ನಿನಗೆ ಶ್ರೀರಕ್ಷೆ…
ಹಣಕ್ಕಾಗಿ ನೀ ಬದುಕಬೇಡ, ಗುಣಕ್ಕಾಗಿ ನೀ ಬದುಕು…
ಜೀವನದಲ್ಲಿ ಸೋಲಿನ ಕಥೆಗಳೇ ನಿನ್ನಯ ಬದುಕಿಗೆ ಸ್ಪೂರ್ತಿ…
ನೂರು ಪಾಠವ ಕಲಿಸುವ ಸೋಲೇ, ಗೆಲುವಿನ ಹಾದಿಯ ತೋರುವುದು…
ಮಾನವನಾಗಿ ಹುಟ್ಟಿದ ಮೇಲೆ ಸೋಲು-ಗೆಲುವು ಸಾಮಾನ್ಯ,
ಅವುಗಳನೆಲ್ಲಾ ಎದುರಿಸಿ ನಿಲ್ಲು ನೀನಾಗುವೆ ಸನ್ಮಾನ್ಯ…
# ಉಲ್ಲಾಸ್ ಕಜ್ಜೋಡಿ
ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದರೂ ಅದರ ಬಲ ಇನ್ನೂ ದುರ್ಬಲವಾಗಿದೆ. ಕರಾವಳಿಯಲ್ಲಿ ಜೂನ್ 8ರಿಂದ…
ನಾರ್ವೆ ಚೆಸ್ 2026 ಟೂರ್ನಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಇತಿಹಾಸವನ್ನು…
ಆಸ್ಟ್ರೇಲಿಯಾದಲ್ಲಿ ವರೋವಾ ಮೈಟ್ ಹಾವಳಿಯಿಂದ ಜೇನುನೊಣಗಳ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದ್ದು, ಆಹಾರ ಬೆಳೆಗಳ…
ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಜೂನ್ 6ರಂದು ಕಾಸರಗೋಡು ಜಿಲ್ಲೆಯ ಎಲ್ಲಾ ಶಿಕ್ಷಣ…
ಮಲೆನಾಡಿನ ಕೃಷಿ ಸಮಸ್ಯೆಗಳನ್ನು ಪ್ರವಾಸೋದ್ಯಮದ ಅವಕಾಶಗಳಾಗಿ ಪರಿವರ್ತಿಸುವ ಹೊಸ ಪರಿಕಲ್ಪನೆಯನ್ನು ಪ್ರಬಂಧ ಅಂಬುತೀರ್ಥ…
ಮಹಾರಾಷ್ಟ್ರ FDA ದಾಳಿಯಲ್ಲಿ 14 ಮಂದಿ ಬಂಧನವಾಗಿದ್ದು, ₹32 ಲಕ್ಷ ಮೌಲ್ಯದ ನಿಷೇಧಿತ…