Advertisement
ಸಾಹಿತ್ಯ

ಕವನ | ಸೋಲು-ಗೆಲುವಿನ ಬದುಕು

Share

ಮಾನವನಾಗಿ ಹುಟ್ಟಿದ ಮೇಲೆ ಸೋಲು ಗೆಲುವು ಸಾಮಾನ್ಯ,
ಅವುಗಳನೆಲ್ಲಾ ಎದುರಿಸಿ ನಿಲ್ಲು ನೀನಾಗುವೆ ಸನ್ಮಾನ್ಯ…

Advertisement
Advertisement

ನಿನ್ನಯ ಬದುಕನು ರೂಪಿಸೋ ಹೊಣೆಯು ನಿನ್ನದೇ ತಿಳಿಯೋ ಮನುಜ,
ಜೀವನ ರೂಪಿಸೊ ಹೋರಾಟದಲಿ ನೋವು ನಲಿವೆಲ್ಲಾ ಸಹಜ,
ಅವುಗಳಿಗೆಲ್ಲಾ ಹೆದರಿ ಕುಳಿತರೆ ಗೆಲ್ಲಲಾರೆ ನೀ ಬದುಕಿನಲಿ…

Advertisement

ಬದುಕಿನ ಪ್ರತಿದಿನ ಪ್ರತಿಕ್ಷಣ ನೀನು ಎಚ್ಚರದಿಂದ ಹೋರಾಡು,
ನಿನ್ನಯ ಬದುಕಿನ ಹಾದಿಯಲ್ಲಿ ನಿನ್ನವರಾರು ನೀ ತಿಳಿಯೋ,
ನಿನ್ನ ಸೋಲಿನಲ್ಲಿ ನಿನ್ನೊಂದಿಗಿದ್ದವರು ಮಾತ್ರ ಇಲ್ಲಿ ನಿನ್ನವರು…

ನಿನ್ನಯ ಏಳಿಗೆ ನೋಡಿ ಸಹಿಸದ ವ್ಯಕ್ತಿಗಳಿಹರು ತುಂಬಾ,
ಯಾರ ಎದುರು ತೋರಿಸಬೇಡ ಎಂದೆಂದಿಗೂ ನೀ ಜಂಭ…
ಬದುಕಲಿ ಎಷ್ಟೇ ಎತ್ತರ ಬೆಳೆದರೂ ಮೆರೆಯಬೇಡ ನೀ ತುಂಬಾ…

Advertisement

ನಿನ್ನಯ ಸೋಲಿಗೆ ಕಾಯುವ ಜನರಿಗೆ ಗೆಲುವಿನ ಮೂಲಕ ಉತ್ತರಿಸು,
ಕಷ್ಟದಿಂದ ಬಂದ ಜನರ ಕಷ್ಟಗಳಿಗೆ ನೀ ಸಹಕರಿಸು…
ನಿನ್ನಿಂದ ಸಹಾಯ ಪಡೆದವರ ಆಶಿರ್ವಾದವೇ ನಿನಗೆ ಶ್ರೀರಕ್ಷೆ…
ಹಣಕ್ಕಾಗಿ ನೀ ಬದುಕಬೇಡ, ಗುಣಕ್ಕಾಗಿ ನೀ ಬದುಕು…

ಜೀವನದಲ್ಲಿ ಸೋಲಿನ ಕಥೆಗಳೇ ನಿನ್ನಯ ಬದುಕಿಗೆ ಸ್ಪೂರ್ತಿ…
ನೂರು ಪಾಠವ ಕಲಿಸುವ ಸೋಲೇ, ಗೆಲುವಿನ ಹಾದಿಯ ತೋರುವುದು…
ಮಾನವನಾಗಿ ಹುಟ್ಟಿದ ಮೇಲೆ ಸೋಲು-ಗೆಲುವು ಸಾಮಾನ್ಯ,
ಅವುಗಳನೆಲ್ಲಾ ಎದುರಿಸಿ ನಿಲ್ಲು ನೀನಾಗುವೆ ಸನ್ಮಾನ್ಯ…

Advertisement

 # ಉಲ್ಲಾಸ್ ಕಜ್ಜೋಡಿ

Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಆಹಾರ ಬದಲಾವಣೆಯಿಂದ ವಾತಾವರಣದ ತಾಪಮಾನ ಏರಿಕೆಯ ಸಮಸ್ಯೆಗೂ ಪರಿಹಾರ…! | ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಖಾದರ್ ಪ್ರತಿಪಾದನೆ |

ಮಿಲ್ಲೆಟ್ಸ್‌ ಬೆಳೆಯ ಕಾರಣದಿಂದ ನೀರಿನ ಸಂರಕ್ಷಣೆ, ಪರಿಸರ ಅಭಿವೃದ್ಧಿ, ಕೃಷಿ ಉಳಿಸುವ, ಮಣ್ಣಿನ…

1 min ago

Karnataka Weather | 06-05-2024 | ಮೋಡದ ವಾತಾವರಣ | ಅಲ್ಲಲ್ಲಿ ಮಳೆ ಹತ್ತಿರವಾಯ್ತು… |

ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…

20 hours ago

ತಾಪಮಾನದ ಬರೆ…! ಎಳೆ ಅಡಿಕೆ ಬೀಳುತ್ತಿದೆ…! | ಮಳೆ ಬಾರದಿದ್ದರೆ ಸಂಕಷ್ಟ… ಮಳೆ ಬಂದರೂ ಕಷ್ಟ..! |

ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…

2 days ago

Karnataka Weather | 05-05-2024 | ಮೋಡ-ಒಣ ಹವೆ | ಮೇ.6 ನಂತರವೇ ಉತ್ತಮ ಮಳೆ |

ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…

2 days ago

Karnataka Weather | 04-05-2024 | ರಾಜ್ಯದಲ್ಲಿ ಬಿಸಿಲು-ಮೋಡದ ವಾತಾವರಣ | ಮೇ 6 ರಿಂದ ಮುಂಗಾರು ಪೂರ್ವ ಮಳೆ ಆರಂಭ

ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…

3 days ago