ಮಾನವನಾಗಿ ಹುಟ್ಟಿದ ಮೇಲೆ ಸೋಲು ಗೆಲುವು ಸಾಮಾನ್ಯ,
ಅವುಗಳನೆಲ್ಲಾ ಎದುರಿಸಿ ನಿಲ್ಲು ನೀನಾಗುವೆ ಸನ್ಮಾನ್ಯ…
ನಿನ್ನಯ ಬದುಕನು ರೂಪಿಸೋ ಹೊಣೆಯು ನಿನ್ನದೇ ತಿಳಿಯೋ ಮನುಜ,
ಜೀವನ ರೂಪಿಸೊ ಹೋರಾಟದಲಿ ನೋವು ನಲಿವೆಲ್ಲಾ ಸಹಜ,
ಅವುಗಳಿಗೆಲ್ಲಾ ಹೆದರಿ ಕುಳಿತರೆ ಗೆಲ್ಲಲಾರೆ ನೀ ಬದುಕಿನಲಿ…
ಬದುಕಿನ ಪ್ರತಿದಿನ ಪ್ರತಿಕ್ಷಣ ನೀನು ಎಚ್ಚರದಿಂದ ಹೋರಾಡು,
ನಿನ್ನಯ ಬದುಕಿನ ಹಾದಿಯಲ್ಲಿ ನಿನ್ನವರಾರು ನೀ ತಿಳಿಯೋ,
ನಿನ್ನ ಸೋಲಿನಲ್ಲಿ ನಿನ್ನೊಂದಿಗಿದ್ದವರು ಮಾತ್ರ ಇಲ್ಲಿ ನಿನ್ನವರು…
ನಿನ್ನಯ ಏಳಿಗೆ ನೋಡಿ ಸಹಿಸದ ವ್ಯಕ್ತಿಗಳಿಹರು ತುಂಬಾ,
ಯಾರ ಎದುರು ತೋರಿಸಬೇಡ ಎಂದೆಂದಿಗೂ ನೀ ಜಂಭ…
ಬದುಕಲಿ ಎಷ್ಟೇ ಎತ್ತರ ಬೆಳೆದರೂ ಮೆರೆಯಬೇಡ ನೀ ತುಂಬಾ…
ನಿನ್ನಯ ಸೋಲಿಗೆ ಕಾಯುವ ಜನರಿಗೆ ಗೆಲುವಿನ ಮೂಲಕ ಉತ್ತರಿಸು,
ಕಷ್ಟದಿಂದ ಬಂದ ಜನರ ಕಷ್ಟಗಳಿಗೆ ನೀ ಸಹಕರಿಸು…
ನಿನ್ನಿಂದ ಸಹಾಯ ಪಡೆದವರ ಆಶಿರ್ವಾದವೇ ನಿನಗೆ ಶ್ರೀರಕ್ಷೆ…
ಹಣಕ್ಕಾಗಿ ನೀ ಬದುಕಬೇಡ, ಗುಣಕ್ಕಾಗಿ ನೀ ಬದುಕು…
ಜೀವನದಲ್ಲಿ ಸೋಲಿನ ಕಥೆಗಳೇ ನಿನ್ನಯ ಬದುಕಿಗೆ ಸ್ಪೂರ್ತಿ…
ನೂರು ಪಾಠವ ಕಲಿಸುವ ಸೋಲೇ, ಗೆಲುವಿನ ಹಾದಿಯ ತೋರುವುದು…
ಮಾನವನಾಗಿ ಹುಟ್ಟಿದ ಮೇಲೆ ಸೋಲು-ಗೆಲುವು ಸಾಮಾನ್ಯ,
ಅವುಗಳನೆಲ್ಲಾ ಎದುರಿಸಿ ನಿಲ್ಲು ನೀನಾಗುವೆ ಸನ್ಮಾನ್ಯ…
# ಉಲ್ಲಾಸ್ ಕಜ್ಜೋಡಿ
ಮಿಲ್ಲೆಟ್ಸ್ ಬೆಳೆಯ ಕಾರಣದಿಂದ ನೀರಿನ ಸಂರಕ್ಷಣೆ, ಪರಿಸರ ಅಭಿವೃದ್ಧಿ, ಕೃಷಿ ಉಳಿಸುವ, ಮಣ್ಣಿನ…
ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…
ನಿನ್ನೆ ನನ್ನ ಬಂಧುಗಳ ಮನೆಯ ಸಮಾರಂಭದಲ್ಲಿ ಭಾಗವಹಿಸಿ ಮನೆಗೆ ಮರಳಿ ಬರುವಾಗ ಮಾರ್ಗ…
ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…
ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…
ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…