Advertisement
ಅಂತರಂಗ

ಬೀದಿಯ ಕಸ – ಕಾರುವುದು ವಿಷ

Share
ಕಸವನು ಸುರಿವರು ಬೀದಿಯ ಬದಿಯಲಿ
ಸ್ವಚ್ಛತೆ ಎಲ್ಲಿದೆ ಹೇಳಮ್ಮ
ತುಚ್ಛ ಮನುಜರು ಹಾದಿಯ ಬಿಡುವರೆ
ಹುಚ್ಚರು ಇವರು ತಿಳಿಯಮ್ಮ ||
ತೊಟ್ಟಿಯು ತುಂಬಲು ಸುತ್ತಲು ಚೆಲ್ಲಲು
ಕೆಟ್ಟ ವಾಸನೆ ಹಬ್ಬುತಿದೆ
ರೋಗದ ಮಾರಿಯು ಕಾಯುತ ಕೂರಲು
ಪಕ್ಕದ ಜನರನು ಕಾಡುತಿದೆ ||
ನಿತ್ಯದ ಬದುಕಲಿ ನರಕದ ದರ್ಶನ
ಸಹಿಸಲಸಾಧ್ಯದ ವಾಸನೆಯು
ನಿಷ್ಠೆಯ ಪಥದಲಿ ಸಾಗಿರಿ ಮನುಜರೆ
ಮಾಡಲೇ ಬೇಡಿರಿ ಮೋಸವನು ||
ನಾಳಿನ ಬಾಳಿಗೆ ಕೊಳ್ಳಿಯ ಇಡುವರು
ಮಳ್ಳಿಯ ಹಾಗೆ ನಡೆಯುತಲಿ
ಬಾಳಿನ ಮೂಲಕೆ ಕುತ್ತನು ತರುವರು
ಮುಳ್ಳಿನ ಕೂಪಕೆ ಬೀಳುತಲಿ ||
ನಮ್ಮನೆ ಕಸವನು ತಿಪ್ಪೆಗೆ ಎಸೆಯದೆ
ಒಳ್ಳೆಯ ಗೊಬ್ಬರ ಮಾಡೋಣ
ಕಸದಿಂದ ರಸವನು ತಪ್ಪದೆ ಗಳಿಸುತ
ಸ್ವಸ್ಥತೆಯನ್ನು ಪಡೆಯೋಣ  ||
ಪರಿಸರ ಕಾಳಜಿ ನಮ್ಮಲಿ ಬೆಳೆಯಲಿ
ಸ್ವಚ್ಛ ಭಾರತ ತೋರೋಣ
ಮುಂದಿನ ಜನರಿಗೆ ಬಳುಬಳಿಯಾಗಿಸಿ
ಭೂತಾಯಿಯ ಮಡಿಲಲಿ ನಲಿಯೋಣ ||
#ರೂಪಾಪ್ರಸಾದ ಕೋಡಿಂಬಳ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಅಂಡಮಾನಿಗೆ ಮುಂಗಾರು ಶೀಘ್ರ ಪ್ರವೇಶ ಸಾಧ್ಯತೆ : ಕೇರಳಕ್ಕೆ ಮುಂಗಾರು ಬೇಗನೆ ಆಗಮನದ ಸೂಚನೆ

ಮೇ 15 ರ ಸುಮಾರಿಗೆ ಮುಂಗಾರು ಅಂಡಮಾನ್ ಸಮುದ್ರ ಪ್ರವೇಶಿಸುವ ಸಾಧ್ಯತೆ ಇದೆ.…

8 hours ago

ಹವಾಮಾನ ವರದಿ | 14-05-2026 | ಮೇ 20-25 ರೊಳಗೆ ಕೇರಳಕ್ಕೆ ಮುಂಗಾರು ಪ್ರವೇಶ ಸಾಧ್ಯತೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ ಮುಂದುವರಿದಿದೆ. ಮೇ 20-25ರೊಳಗೆ…

8 hours ago

ಹವಾಮಾನ ವರದಿ | 13-05-2026| ಕರ್ನಾಟಕದಲ್ಲಿ ಇನ್ನೂ ಕೆಲ ದಿನ ಗುಡುಗು ಸಹಿತ ಮಳೆ| ಮೇ 20-25ರೊಳಗೆ ಮುಂಗಾರು ಪ್ರವೇಶ ಸಾಧ್ಯತೆ!

ಕರ್ನಾಟಕದಲ್ಲಿ 14.05.2026ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯ ಪ್ರಕಾರ ಕರಾವಳಿ, ಮಲೆನಾಡು…

1 day ago

ಹವಾಮಾನ ವರದಿ | 12-05-2026 | ಮೇ 20ರ ಸುಮಾರಿಗೆ ಕರಾವಳಿಯಲ್ಲಿ ಮುಂಗಾರು ಮಾದರಿಯ ಮಳೆ ಸಾಧ್ಯತೆ..! |

ರಾಜ್ಯದ ಬಹುತೇಕ ಭಾಗಗಳಲ್ಲಿ ಬಿಸಿಲು ಮುಂದುವರಿದರೂ ಸಂಜೆ, ರಾತ್ರಿ ಗುಡುಗು ಸಹಿತ ಮಳೆಯ…

2 days ago

ರೋಸ್ಟೆಡ್‌ ಅಡಿಕೆ- ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ | “ರೋಸ್ಟೆಡ್‌ ಅಡಿಕೆ” ವರ್ಗೀಕರಣಕ್ಕೆ ಮುದ್ರೆ, ಜಪ್ತಿ ಸರಕುಗಳಿಗೆ ಮಾರ್ಗಸೂಚಿ

‘ರೋಸ್ಟೆಡ್‌ ಅಡಿಕೆ’ ವರ್ಗೀಕರಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅಲಹಾಬಾದ್‌ ಹೈಕೋರ್ಟ್‌ ಆದೇಶಕ್ಕೆ ತಾತ್ಕಾಲಿಕ…

3 days ago