Advertisement
ಅಂತರಂಗ

ಬೀದಿಯ ಕಸ – ಕಾರುವುದು ವಿಷ

Share
ಕಸವನು ಸುರಿವರು ಬೀದಿಯ ಬದಿಯಲಿ
ಸ್ವಚ್ಛತೆ ಎಲ್ಲಿದೆ ಹೇಳಮ್ಮ
ತುಚ್ಛ ಮನುಜರು ಹಾದಿಯ ಬಿಡುವರೆ
ಹುಚ್ಚರು ಇವರು ತಿಳಿಯಮ್ಮ ||
ತೊಟ್ಟಿಯು ತುಂಬಲು ಸುತ್ತಲು ಚೆಲ್ಲಲು
ಕೆಟ್ಟ ವಾಸನೆ ಹಬ್ಬುತಿದೆ
ರೋಗದ ಮಾರಿಯು ಕಾಯುತ ಕೂರಲು
ಪಕ್ಕದ ಜನರನು ಕಾಡುತಿದೆ ||
ನಿತ್ಯದ ಬದುಕಲಿ ನರಕದ ದರ್ಶನ
ಸಹಿಸಲಸಾಧ್ಯದ ವಾಸನೆಯು
ನಿಷ್ಠೆಯ ಪಥದಲಿ ಸಾಗಿರಿ ಮನುಜರೆ
ಮಾಡಲೇ ಬೇಡಿರಿ ಮೋಸವನು ||
ನಾಳಿನ ಬಾಳಿಗೆ ಕೊಳ್ಳಿಯ ಇಡುವರು
ಮಳ್ಳಿಯ ಹಾಗೆ ನಡೆಯುತಲಿ
ಬಾಳಿನ ಮೂಲಕೆ ಕುತ್ತನು ತರುವರು
ಮುಳ್ಳಿನ ಕೂಪಕೆ ಬೀಳುತಲಿ ||
ನಮ್ಮನೆ ಕಸವನು ತಿಪ್ಪೆಗೆ ಎಸೆಯದೆ
ಒಳ್ಳೆಯ ಗೊಬ್ಬರ ಮಾಡೋಣ
ಕಸದಿಂದ ರಸವನು ತಪ್ಪದೆ ಗಳಿಸುತ
ಸ್ವಸ್ಥತೆಯನ್ನು ಪಡೆಯೋಣ  ||
ಪರಿಸರ ಕಾಳಜಿ ನಮ್ಮಲಿ ಬೆಳೆಯಲಿ
ಸ್ವಚ್ಛ ಭಾರತ ತೋರೋಣ
ಮುಂದಿನ ಜನರಿಗೆ ಬಳುಬಳಿಯಾಗಿಸಿ
ಭೂತಾಯಿಯ ಮಡಿಲಲಿ ನಲಿಯೋಣ ||
#ರೂಪಾಪ್ರಸಾದ ಕೋಡಿಂಬಳ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಹವಾಮಾನ ವರದಿ | 24-08-2026 | ಕರಾವಳಿಯಲ್ಲಿ ಮಳೆ ಮುಂದುವರಿಕೆ – ಕರ್ನಾಟಕದಲ್ಲಿ ಮಳೆ ಪರಿಸ್ಥಿತಿ ಹೇಗೆ..?

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 26ರವರೆಗೆ ಮೋಡ ಮತ್ತು ಅಲ್ಲಲ್ಲಿ ಬಿಟ್ಟುಬಿಟ್ಟು…

8 hours ago

ಉದ್ಯೋಗಗಳಿಲ್ಲವೇ? ಅಥವಾ ಉದ್ಯೋಗಕ್ಕೆ ಬೇಕಾದ ಕೌಶಲ್ಯವಿರುವವರು ಇಲ್ಲವೇ?

ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…

14 hours ago

ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ – ಕ್ಯಾ. ಚೌಟಗೆ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಭರವಸೆ

ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…

1 day ago

ಹವಾಮಾನ ವರದಿ | 23-08-2026 | ಆಗಸ್ಟ್ 25 ರವರೆಗೆ ಮಳೆ – ಕರಾವಳಿ-ಮಲೆನಾಡಿನಲ್ಲಿ ಉತ್ತಮ ಮಳೆ ಸಾಧ್ಯತೆ

ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…

1 day ago

ಅಳಿವಿನಂಚಿನಲ್ಲಿದ್ದ ಪೆರಿಯಾರ್ ಹಸುವಿಗೆ ರಾಷ್ಟ್ರೀಯ ತಳಿ ಮಾನ್ಯತೆ – ಕೇರಳದ ಎರಡನೇ ದೇಶಿ ಗೋತಳಿ

ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…

1 day ago