Advertisement
ಅಂತರಂಗ

ಬೀದಿಯ ಕಸ – ಕಾರುವುದು ವಿಷ

Share
ಕಸವನು ಸುರಿವರು ಬೀದಿಯ ಬದಿಯಲಿ
ಸ್ವಚ್ಛತೆ ಎಲ್ಲಿದೆ ಹೇಳಮ್ಮ
ತುಚ್ಛ ಮನುಜರು ಹಾದಿಯ ಬಿಡುವರೆ
ಹುಚ್ಚರು ಇವರು ತಿಳಿಯಮ್ಮ ||
ತೊಟ್ಟಿಯು ತುಂಬಲು ಸುತ್ತಲು ಚೆಲ್ಲಲು
ಕೆಟ್ಟ ವಾಸನೆ ಹಬ್ಬುತಿದೆ
ರೋಗದ ಮಾರಿಯು ಕಾಯುತ ಕೂರಲು
ಪಕ್ಕದ ಜನರನು ಕಾಡುತಿದೆ ||
ನಿತ್ಯದ ಬದುಕಲಿ ನರಕದ ದರ್ಶನ
ಸಹಿಸಲಸಾಧ್ಯದ ವಾಸನೆಯು
ನಿಷ್ಠೆಯ ಪಥದಲಿ ಸಾಗಿರಿ ಮನುಜರೆ
ಮಾಡಲೇ ಬೇಡಿರಿ ಮೋಸವನು ||
ನಾಳಿನ ಬಾಳಿಗೆ ಕೊಳ್ಳಿಯ ಇಡುವರು
ಮಳ್ಳಿಯ ಹಾಗೆ ನಡೆಯುತಲಿ
ಬಾಳಿನ ಮೂಲಕೆ ಕುತ್ತನು ತರುವರು
ಮುಳ್ಳಿನ ಕೂಪಕೆ ಬೀಳುತಲಿ ||
ನಮ್ಮನೆ ಕಸವನು ತಿಪ್ಪೆಗೆ ಎಸೆಯದೆ
ಒಳ್ಳೆಯ ಗೊಬ್ಬರ ಮಾಡೋಣ
ಕಸದಿಂದ ರಸವನು ತಪ್ಪದೆ ಗಳಿಸುತ
ಸ್ವಸ್ಥತೆಯನ್ನು ಪಡೆಯೋಣ  ||
ಪರಿಸರ ಕಾಳಜಿ ನಮ್ಮಲಿ ಬೆಳೆಯಲಿ
ಸ್ವಚ್ಛ ಭಾರತ ತೋರೋಣ
ಮುಂದಿನ ಜನರಿಗೆ ಬಳುಬಳಿಯಾಗಿಸಿ
ಭೂತಾಯಿಯ ಮಡಿಲಲಿ ನಲಿಯೋಣ ||
#ರೂಪಾಪ್ರಸಾದ ಕೋಡಿಂಬಳ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್‌ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…

3 hours ago

ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ

ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…

3 hours ago

ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ

ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…

5 hours ago

ಕೇರಳದಲ್ಲಿ ಭಾರಿ ಮಳೆ ಆರ್ಭಟ : ಮಲಪ್ಪುರಂನಲ್ಲಿ ಸರಣಿ ಭೂಕುಸಿತ , ಸಂಚಾರ ಸಂಪೂರ್ಣ ಸ್ಥಗಿತ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…

8 hours ago