ಕೇರಳ ಕೃಷಿ ಇಲಾಖೆಯು ಬೆಳೆ ವಿಮಾ ಯೋಜನೆಯನ್ನು ಮಾರ್ಪಡು ಮಾಡಿದ್ದು ರೈತರು ಸಾವನ್ನಪ್ಪಿದ ಸಂದರ್ಭದಲ್ಲಿ ಅಥವಾ ಪಾರ್ಶ್ವವಾಯು ಮತ್ತು ಹಾಸಿಗೆ ಹಿಡಿದರೆ ಬೆಳೆ ನಷ್ಟ ಪರಿಹಾರವನ್ನು ನಾಮನಿರ್ದೇಶಿತರಿಗೆ ಸಂಗ್ರಹಿಸಲು ಅನುವು ಮಾಡುವಂತೆ ವ್ಯವಸ್ಥೆ ಮಾಡಿದೆ.
ಬೆಳೆ ವಿಮಾ ಯೋಜನೆಯಲ್ಲಿ ಅರ್ಜಿ ಸಲ್ಲಿಸುವಾಗ ರೈತರು ತಮ್ಮ ನಾಮಿನಿಗಳನ್ನು ಸೂಚಿಸಬೇಕು ಎಂದು ಇಲಾಖೆಯು ಸೆ.24 ರ ಆದೇಶದಲ್ಲಿ ಯೋಜನೆಯ ಮಾರ್ಗಸೂಚಿಗಳಿಗೆ ಮಾರ್ಪಾಡುಗಳನ್ನು ಪಟ್ಟಿ ಮಾಡಿದೆ. ಹೀಗಾಗಿ ಅನಿವಾರ್ಯ ಸಂದರ್ಭಗಳಲ್ಲಿ ರೈತರ ನಾಮಿನಿಯು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ನಿಬಂಧನೆಯು ಬೇರೆ ಯಾವುದೇ ಪರಿಸ್ಥಿತಿಯಲ್ಲಿ ಅನ್ವಯಿಸುವುದಿಲ್ಲ ಎಂದು ಕೃಷಿ ಇಲಾಖೆ ತಿಳಿಸಿದೆ.
ಈ ವರ್ಷದ ಜನವರಿ ಮತ್ತು ಜೂನ್ನಲ್ಲಿ ಕೃಷಿ ನಿರ್ದೇಶಕರು ಸಲ್ಲಿಸಿದ ಪ್ರಸ್ತಾವನೆಗಳ ಆಧಾರದ ಮೇಲೆ ಮಾರ್ಪಾಡುಗಳನ್ನು ಮಾಡಲಾಗಿದೆ. 2017 ರಲ್ಲಿ, ರಾಜ್ಯ ಸರ್ಕಾರವು ಪ್ರಮುಖ ಬೆಳೆಗಳಿಗೂ ಬೆಳೆ ವಿಮಾ ಯೋಜನೆಯನ್ನು ವಿಸ್ತರಿಸಿ ವಿಮಾ ಯೋಜನೆಯ ನಿಯಮವನ್ನು ರಚಿಸಿತ್ತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel