ದೇಶದಾದ್ಯಂತ ಪರಿಸರ ಕಾಳಜಿಯ ಕಡೆಗೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಎಲ್ಲೆಡೆಯೂ ಪ್ಲಾಸ್ಟಿಕ್ ತುಂಬಿಕೊಳ್ಳುತ್ತಿದೆ. ಒಂದೇ ಬಾರಿ ಬಳಕೆ ಮಾಡುವ ಪ್ಲಾಸ್ಟಿಕ್ ನಿಷೇಧವಾದರೂ ಅಲ್ಲಲ್ಲಿ ಕಾಣುತ್ತಿದೆ. ಕೃಷಿಯಲ್ಲೂ ಹಲವು ಸಂದರ್ಭ ಪ್ಲಾಸ್ಟಿಕ್ ಬಳಕೆಯಾಗುತ್ತದೆ. ಇದೀಗ ಕೇರಳದ ಕೃಷಿ ಇಲಾಖೆ ಕೃಷಿಯಲ್ಲಿ ಪ್ಲಾಸ್ಟಿಕ್ ಗ್ರೋಬ್ಯಾಗ್ ಬಳಕೆ ಬೇಡ ಎಂದು ಹೇಳಿದೆ. ಜೈವಿಕವಾದ ಗ್ರೋಬ್ಯಾಗ್ ಬಳಕೆಗೆ ಆದ್ಯತೆ ನೀಡಲು ಕೃಷಿಕರನ್ನು ಪ್ರೇರೇಪಿಸಿದೆ.
ಕೃಷಿಯಲ್ಲಿ ಪ್ಲಾಸ್ಟಿಕ್ ಗ್ರೋ ಬ್ಯಾಗ್ ಬೇಡ ಎಂದು ಹೇಳಿದ ಕೇರಳ ಕೃಷಿ ಇಲಾಖೆ ತನ್ನ ಯೋಜನೆಗಳಿಗಾಗಿ ಇಲಾಖೆಯು ಪ್ಲಾಸ್ಟಿಕ್ ಚೀಲಗಳ ಬದಲಾಗಿ ಪರಿಸರ ಸ್ನೇಹಿ ಪರ್ಯಾಯಗಳಾದ ಜೇಡಿಮಣ್ಣು ಅಥವಾ ತೆಂಗಿನಕಾಯಿಯ ಮಡಿಕೆಗಳು ಮತ್ತು ಮರುಬಳಕೆ ಮಾಡಬಹುದಾದ ಹೆಚ್ಚಿನ ಸಾಂದ್ರತೆಯ ಪಾಲಿಥಿಲೀನ್ ಪಾತ್ರೆಗಳೊಂದಿಗೆ ಬದಲಾಯಿಸಲು ಸಿದ್ಧತೆ ನಡೆಸಿದೆ. ಪರಿಸರ ಸ್ನೇಹಿ ಮಾರ್ಗವನ್ನು ತುಳಿಯುತ್ತಿರುವ ಕೇರಳದ ಕೃಷಿ ಇಲಾಖೆಯು ರಾಜ್ಯದಾದ್ಯಂತ ತರಕಾರಿ ತೋಟಗಳು ಮತ್ತು ಮೇಲ್ಛಾವಣಿ ಫಾರ್ಮ್ಗಳಲ್ಲಿ ಪ್ಲಾಸ್ಟಿಕ್ ಗ್ರೋ ಬ್ಯಾಗ್ಗಳನ್ನು ಬಳಸುವುದನ್ನು ನಿಲ್ಲಿಸಲು ನಿರ್ಧರಿಸಿದೆ. ಸರ್ಕಾರವೇ ಈ ಮಾದರಿಗಳನ್ನು ಮಾಡಿ ಜನರನ್ನು ಪ್ರೇರೇಪಿಸುತ್ತಿದೆ.
ಜೈವಿಕವಲ್ಲದ ಚೀಲಗಳನ್ನು ಕೃಷಿ ಉದ್ದೇಶಗಳಿಗಾಗಿ ಬಳಸುವುದರಿಂದ ಪರಿಸರಕ್ಕೆ ಗಮನಾರ್ಹ ಹಾನಿ ಉಂಟಾಗುತ್ತದೆ ಮತ್ತು ಅವುಗಳ ಬಳಕೆಯನ್ನುಕಡಿಮೆ ಮಾಡಬೇಕು ಎಂದು ಇಲಾಖೆ ತನ್ನ ಕಚೇರಿಗಳಿಗೆ ಹೊರಡಿಸಿದ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ. ಕೃಷಿ ಇಲಾಖೆ ಜಾರಿಗೆ ತಂದಿರುವ ಯೋಜನೆಗಳಲ್ಲಿ ಇನ್ನು ಮುಂದೆ ಪ್ಲಾಸ್ಟಿಕ್ ಗ್ರೋ ಬ್ಯಾಗ್ಗಳನ್ನು ಬಳಸಬಾರದು ಎಂದು ಸುತ್ತೋಲೆಯಲ್ಲಿ ಸೇರಿಸಿದೆ.
ಮನೆಯ ಮಟ್ಟದಲ್ಲಿ ತರಕಾರಿ ಕೃಷಿಯನ್ನು ಉತ್ತೇಜಿಸಲು ‘ಸುಭಿಕ್ಷಾ ಕೇರಳಂ’ ನಂತಹ ಆಹಾರ ಭದ್ರತಾ ಯೋಜನೆಗಳನ್ನು ಹೊರತಂದ ನಂತರ ರಾಜ್ಯಾದ್ಯಂತ ಗ್ರೋ ಬ್ಯಾಗ್ಗಳು ಹೆಚ್ಚು ಪರಿಚಯವಾಗಿತ್ತು.ಇದರಿಂದ ಕೃಷಿಯಲ್ಲೂ ಮತ್ತಷ್ಟು ಪ್ಲಾಸ್ಟಿಕ್ ತುಂಬುವ ಆತಂಕವಿತ್ತು. ಪರಿಸರ ಸ್ನೇಹಿ ವಿಧಾನಗಳ ಮೂಲಕ ಸುಸ್ಥಿರತೆ ಮತ್ತು ಆಹಾರ ಭದ್ರತೆಯನ್ನು ಇನ್ನಷ್ಟು ಗಟ್ಟಿಪಡಿಸಲು ಕೇರಳದ ಕೃಷಿ ಇಲಾಖೆ ಮಹತ್ವದ ಹೆಜ್ಜೆ ಇರಿಸಿದೆ.
ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…
ನಬಾರ್ಡ್ ಸಮೀಕ್ಷೆಯ ಪ್ರಕಾರ, ಭಾರತದ ಗ್ರಾಮೀಣ ಕುಟುಂಬಗಳ ಪೈಕಿ ಶೇ.53ರಷ್ಟು ಕುಟುಂಬಗಳ ಆದಾಯ…
ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…
ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…
ಜಾಗತಿಕ ತಾಪಮಾನ ಪ್ರತಿ 1 ಡಿಗ್ರಿ ಏರಿದರೆ ಭಾರತದ ಭತ್ತದ ಇಳುವರಿ ಶೇ.6.6ರಷ್ಟು…
ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…