Advertisement
MIRROR FOCUS

55 ಎಕ್ರೆಯಲ್ಲಿ 50 ಬಗೆಯ ಕೃಷಿ | ಗುತ್ತಿಗೆ ಪಡೆದು ಕೃಷಿ ಮಾಡಿದ ಮಹಿಳೆಗೆ “ಕೃಷಿ ತಿಲಕಂ” ಪ್ರಶಸ್ತಿ |

Share

55 ಎಕ್ರೆ ಜಮೀನಿನಲ್ಲಿ 50 ಬಗೆಯ ಕೃಷಿ ಮಾಡಿ ಗಮನ ಸೆಳೆದ ಮಹಿಳೆ ಬಿಂದು ಅವರು ಕೇರಳ ಸರ್ಕಾರದ ಕೃಷಿ ತಿಲಕಂ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. …..ಮುಂದೆ ಓದಿ….

Advertisement
Advertisement

ಕೇರಳ ಸರ್ಕಾರವು ಕೇರಳದ ಅತ್ಯುತ್ತಮ ರೈತ ಮಹಿಳೆಗಾಗಿ ‘ಕೃಷಿತಿಲಕಂ‘ ಪ್ರಶಸ್ತಿಯನ್ನು ನೀಡುತ್ತಿದೆ. ಕಣ್ಣೂರು ಜಿಲ್ಲೆಯ ಪಟ್ಟುವಂ ಪ್ರದೇಶದ ಹರಿತಾ ಮಹಿಳಾ ತಂಡದ ಸದಸ್ಯೆ ಕೆ ಬಿಂದು ಅವರು  ಸುಮಾರು 25 ವರ್ಷಗಳಿಂದ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಕೇವಲ 15 ಸೆಂಟ್ಸ್‌ ಸ್ಥಳ ಹೊಂದಿರುವ ಬಿಂದು ಅವರು ಗುತ್ತಿಗೆ ಆಧಾರದಲ್ಲಿ ಜಾಗವನ್ನು ಪಡೆದುಕೊಂಡು ಕೃಷಿ ಮಾಡುತ್ತಿದ್ದಾರೆ. ಬೆಳೆ ಬೆಳೆಯುವುದರಲ್ಲಿಯೇ ಖುಷಿ ಕಾಣುವ ಅವರು ಹರಿತಾ ಜೆಎಲ್‌ಜಿ ತಂಡದ ಸದಸ್ಯೆಯೂ ಹೌದು.

Advertisement

ಬಿಂದು ಅವರು 55 ಎಕರೆ ಜಮೀನಿನಲ್ಲಿ 50 ಸಾಗುವಳಿ ಮಾಡಿದ್ದಾರೆ. ಎಕರೆಗಟ್ಟಲೆ ಭತ್ತದ ಕೃಷಿ, ನಂತರ ತರಕಾರಿ ಕೃಷಿ, ಅರಿಶಿಣ ಕೃಷಿ, ಶುಂಠಿ ಕೃಷಿ ಹೀಗೆ ವಿನೂತನ ಕಲ್ಪನೆಗಳನ್ನು ಕೃಷಿ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸುತ್ತಿರುವ ಈ ರೈತ ಮಹಿಳೆಗೆ ಸ್ವಂತ ಮನೆ, 15 ಸೆಂಟ್ಸ್ ಜಮೀನು ಇದೆ.

ಬಿಂದು ಅವರು 26 ಎಕರೆ ಜಮೀನಿನಲ್ಲಿ ಭತ್ತ, ಹೂವು, ಅರಿಶಿನ, ಶುಂಠಿ, ತರಕಾರಿ, ಎಳ್ಳು, ಕಡಲೆ ಸೇರಿದಂತೆ ಹಲವು ಬೆಳೆಗಳನ್ನು ನಿರಂತರವಾಗಿ ಬೆಳೆಯುತ್ತಿದ್ದಾರೆ. ಉಳಿದ 25 ಎಕ್ರೆ ಜಾಗದಲ್ಲಿ ಇತರ ಬೆಳೆಯನ್ನು ಬೆಳೆಯುತ್ತಾರೆ.  ಅಷ್ಟೇ ಅಲ್ಲ ಬಿಂದು ಅವರು “ಕುಟುಂಬಶ್ರೀ” ಸದಸ್ಯರಿಗೆ ಕೃಷಿ ಯಂತ್ರೋಪಕರಣಗಳನ್ನು ನಿರ್ವಹಿಸಲು ತರಬೇತಿಯನ್ನೂ ನೀಡುತ್ತಾರೆ.

Advertisement

ಬಿಂದು ಅವರು ಕುಟುಂಬ ಶ್ರೀ ತಂಡವು ವಿಶೇಷವಾಗಿ ಆಯುರ್ವೇದದಲ್ಲಿ ಬಳಕೆ ಮಾಡುವ ವಸ್ತುಗಳು ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸುತ್ತದೆ. ವಾರ್ಷಿಕವಾಗಿ ಇವರ  ವಹಿವಾಟು 7 ಲಕ್ಷ ರೂಪಾಯಿಗಳಷ್ಟಿದೆ. ಗ್ರಾಮೀಣ ಭಾಗದಲ್ಲಿ ಈ ಸಾಧನೆ ಸಣ್ಣದೇನಲ್ಲ. ಬಿಂದು ಅವರು ಕೃಷಿಕ ಮಹಿಳೆಯಾಗಿ  ಹಲವಾರು ಪ್ರಶಸ್ತಿಗಳನ್ನು ಕೂಡಾ ಪಡೆದಿದ್ದಾರೆ.

Advertisement

ಪ್ರತೀ ದಿನ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಬಿಂದು ಅವರ ಶ್ರಮಶಕ್ತಿ ಗೆದ್ದಿದೆ, ಎಲ್ಲರ ಸಹಕಾರವೂ ಇದೆ ಎನ್ನುವ ಬಿಂದು  ಅವರ ಇಚ್ಛಾಶಕ್ತಿಯೇ ಈ ಎಲ್ಲಾ ಸಾಧನೆಗೆ ಕಾರಣವಾಗಿದೆ.  ಬಿಂದು ಅವರ ಕೃಷಿ ಕಾರ್ಯಕ್ಕೆ ಸಹಾಯ ಮಾಡಲು ಪತಿ ಟಿ.ಮನೋಹರನ್ ಕೂಡ ಜೊತೆಗಿದ್ದಾರೆ.

ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ…

Advertisement

The Kerala Government is awarding the ‘ KARSHAKA THILAKAM ‘ award to the best woman farmer in Kerala. K Bindu, a member of the Haritha Women’s Team from the Pattuvam area of Kannur district, has been actively involved in agriculture for almost 25 years. Despite having only 15 cents of land, Bindu is cultivating the land on a lease basis. She is also a member of the Haritha JLG team and is passionate about growing crops. Her dedication and hard work are truly inspiring.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಉದ್ಯೋಗ ಮಾಹಿತಿಯ ಸೇವೆ | ಪುತ್ತಿಲ ಪರಿವಾರದಿಂದ ಯುವಕರಿಗೆ ಉದ್ಯೋಗದ ದಾರಿ |

ಪುತ್ತೂರಿನಲ್ಲಿ ಪುತ್ತಿಲ ಪರಿವಾರ ಕಳೆದ ಕೆಲವು ಸಮಯಗಳಿಂದ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಮಾರ್ಚ್‌…

1 hour ago

ಹವಾಮಾನ ವರದಿ | 12.09.2024 | ರಾಜ್ಯದ ಹಲವೆಡೆ ಸಾಮಾನ್ಯ ಮಳೆ ಸಾಧ್ಯತೆ

13.09.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

12 hours ago

ಧರ್ಮಕ್ಕೆ ಸಿಗುವುದಾದರೆ ಇರಲಿ ಎಂಬ ಮನೋಭಾವ

ದುಡ್ಡು ಕೊಡದೆ ಸಿಗುತ್ತದೆಂದಾದರೆ ತಾನೆಷ್ಟು ತೆಗೆದುಕೊಳ್ಳಬೇಕು? ತನಗೆಷ್ಟು ಬೇಕು? ಎಂಬುದರ ವಿವೇಚನೆ ಬೇಕು.

1 day ago

ಪ್ಲಾಸ್ಟಿಕ್ ಮರು ಬಳಕೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ

ಪ್ಲಾಸ್ಟಿಕ್ ಮರು ಬಳಕೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ವಿಧಾನಸಭಾ ಅಧ್ಯಕ್ಷ…

1 day ago

ಜಗತ್ತನ್ನು ಹವಾಮಾನ ವೈಪರೀತ್ಯದಿಂದ ರಕ್ಷಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ | ಪ್ರಧಾನಿ ಮೋದಿ |

ಇಡೀ ವಿಶ್ವ ಇಂದು  ಹವಾಮಾನ ವೈಪರೀತ್ಯಕ್ಕೆ  ಒಳಗಾಗಿದೆ.  ಜಗತ್ತನ್ನು  ಹವಾಮಾನ ವೈಪರೀತ್ಯದಿಂದ ರಕ್ಷಿಸಬೇಕಾದ…

1 day ago

ರೈತರಿಗೆ ತಾಳೆ ಬೆಳೆ ಜಾಗೃತಿ ಮೂಡಿಸುವಂತೆ ಸಚಿವರಿಂದ ಅಧಿಕಾರಿಗಳಿಗೆ ಸೂಚನೆ

ಕಬ್ಬು ಬೆಳೆ ಮುಧೋಳ ತಾಲೂಕಿನ ವಾಣಿಜ್ಯ ಬೆಳೆಯಾಗಿದ್ದು, ಪರ್ಯಾಯವಾಗಿ ತೋಟಗಾರಿಕೆ ಬೆಳೆಯಾದ ತಾಳೆ…

1 day ago