Advertisement
MIRROR FOCUS

55 ಎಕ್ರೆಯಲ್ಲಿ 50 ಬಗೆಯ ಕೃಷಿ | ಗುತ್ತಿಗೆ ಪಡೆದು ಕೃಷಿ ಮಾಡಿದ ಮಹಿಳೆಗೆ “ಕೃಷಿ ತಿಲಕಂ” ಪ್ರಶಸ್ತಿ |

Share

55 ಎಕ್ರೆ ಜಮೀನಿನಲ್ಲಿ 50 ಬಗೆಯ ಕೃಷಿ ಮಾಡಿ ಗಮನ ಸೆಳೆದ ಮಹಿಳೆ ಬಿಂದು ಅವರು ಕೇರಳ ಸರ್ಕಾರದ ಕೃಷಿ ತಿಲಕಂ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. …..ಮುಂದೆ ಓದಿ….

Advertisement
Advertisement

ಕೇರಳ ಸರ್ಕಾರವು ಕೇರಳದ ಅತ್ಯುತ್ತಮ ರೈತ ಮಹಿಳೆಗಾಗಿ ‘ಕೃಷಿತಿಲಕಂ‘ ಪ್ರಶಸ್ತಿಯನ್ನು ನೀಡುತ್ತಿದೆ. ಕಣ್ಣೂರು ಜಿಲ್ಲೆಯ ಪಟ್ಟುವಂ ಪ್ರದೇಶದ ಹರಿತಾ ಮಹಿಳಾ ತಂಡದ ಸದಸ್ಯೆ ಕೆ ಬಿಂದು ಅವರು  ಸುಮಾರು 25 ವರ್ಷಗಳಿಂದ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಕೇವಲ 15 ಸೆಂಟ್ಸ್‌ ಸ್ಥಳ ಹೊಂದಿರುವ ಬಿಂದು ಅವರು ಗುತ್ತಿಗೆ ಆಧಾರದಲ್ಲಿ ಜಾಗವನ್ನು ಪಡೆದುಕೊಂಡು ಕೃಷಿ ಮಾಡುತ್ತಿದ್ದಾರೆ. ಬೆಳೆ ಬೆಳೆಯುವುದರಲ್ಲಿಯೇ ಖುಷಿ ಕಾಣುವ ಅವರು ಹರಿತಾ ಜೆಎಲ್‌ಜಿ ತಂಡದ ಸದಸ್ಯೆಯೂ ಹೌದು.

ಬಿಂದು ಅವರು 55 ಎಕರೆ ಜಮೀನಿನಲ್ಲಿ 50 ಸಾಗುವಳಿ ಮಾಡಿದ್ದಾರೆ. ಎಕರೆಗಟ್ಟಲೆ ಭತ್ತದ ಕೃಷಿ, ನಂತರ ತರಕಾರಿ ಕೃಷಿ, ಅರಿಶಿಣ ಕೃಷಿ, ಶುಂಠಿ ಕೃಷಿ ಹೀಗೆ ವಿನೂತನ ಕಲ್ಪನೆಗಳನ್ನು ಕೃಷಿ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸುತ್ತಿರುವ ಈ ರೈತ ಮಹಿಳೆಗೆ ಸ್ವಂತ ಮನೆ, 15 ಸೆಂಟ್ಸ್ ಜಮೀನು ಇದೆ.

ಬಿಂದು ಅವರು 26 ಎಕರೆ ಜಮೀನಿನಲ್ಲಿ ಭತ್ತ, ಹೂವು, ಅರಿಶಿನ, ಶುಂಠಿ, ತರಕಾರಿ, ಎಳ್ಳು, ಕಡಲೆ ಸೇರಿದಂತೆ ಹಲವು ಬೆಳೆಗಳನ್ನು ನಿರಂತರವಾಗಿ ಬೆಳೆಯುತ್ತಿದ್ದಾರೆ. ಉಳಿದ 25 ಎಕ್ರೆ ಜಾಗದಲ್ಲಿ ಇತರ ಬೆಳೆಯನ್ನು ಬೆಳೆಯುತ್ತಾರೆ.  ಅಷ್ಟೇ ಅಲ್ಲ ಬಿಂದು ಅವರು “ಕುಟುಂಬಶ್ರೀ” ಸದಸ್ಯರಿಗೆ ಕೃಷಿ ಯಂತ್ರೋಪಕರಣಗಳನ್ನು ನಿರ್ವಹಿಸಲು ತರಬೇತಿಯನ್ನೂ ನೀಡುತ್ತಾರೆ.

ಬಿಂದು ಅವರು ಕುಟುಂಬ ಶ್ರೀ ತಂಡವು ವಿಶೇಷವಾಗಿ ಆಯುರ್ವೇದದಲ್ಲಿ ಬಳಕೆ ಮಾಡುವ ವಸ್ತುಗಳು ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸುತ್ತದೆ. ವಾರ್ಷಿಕವಾಗಿ ಇವರ  ವಹಿವಾಟು 7 ಲಕ್ಷ ರೂಪಾಯಿಗಳಷ್ಟಿದೆ. ಗ್ರಾಮೀಣ ಭಾಗದಲ್ಲಿ ಈ ಸಾಧನೆ ಸಣ್ಣದೇನಲ್ಲ. ಬಿಂದು ಅವರು ಕೃಷಿಕ ಮಹಿಳೆಯಾಗಿ  ಹಲವಾರು ಪ್ರಶಸ್ತಿಗಳನ್ನು ಕೂಡಾ ಪಡೆದಿದ್ದಾರೆ.

ಪ್ರತೀ ದಿನ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಬಿಂದು ಅವರ ಶ್ರಮಶಕ್ತಿ ಗೆದ್ದಿದೆ, ಎಲ್ಲರ ಸಹಕಾರವೂ ಇದೆ ಎನ್ನುವ ಬಿಂದು  ಅವರ ಇಚ್ಛಾಶಕ್ತಿಯೇ ಈ ಎಲ್ಲಾ ಸಾಧನೆಗೆ ಕಾರಣವಾಗಿದೆ.  ಬಿಂದು ಅವರ ಕೃಷಿ ಕಾರ್ಯಕ್ಕೆ ಸಹಾಯ ಮಾಡಲು ಪತಿ ಟಿ.ಮನೋಹರನ್ ಕೂಡ ಜೊತೆಗಿದ್ದಾರೆ.

ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ…

The Kerala Government is awarding the ‘ KARSHAKA THILAKAM ‘ award to the best woman farmer in Kerala. K Bindu, a member of the Haritha Women’s Team from the Pattuvam area of Kannur district, has been actively involved in agriculture for almost 25 years. Despite having only 15 cents of land, Bindu is cultivating the land on a lease basis. She is also a member of the Haritha JLG team and is passionate about growing crops. Her dedication and hard work are truly inspiring.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ನಿಷೇಧ ಇಲ್ಲ – ಈಗ ಅಡಿಕೆ ಬಳಕೆಯ ನಿಯಂತ್ರಣದತ್ತ ಫೋಕಸ್

ಅಡಿಕೆ ನಿಷೇಧಕ್ಕಿಂತ ಬಳಕೆಯ ನಿಯಂತ್ರಣವೇ ಪರಿಣಾಮಕಾರಿ ಎಂದು WHO ಅಭಿಪ್ರಾಯಪಟ್ಟಿದೆ. ಆಗ್ನೇಯ ಏಷ್ಯಾದ…

4 hours ago

ಅಡಿಕೆ ಬಳಕೆಯ ನಿಯಂತ್ರಣಕ್ಕೆ ‘MPOWER’ ನೀತಿ ಅಗತ್ಯ : ವಿಶ್ವ ಆರೋಗ್ಯ ಸಂಸ್ಥೆ

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಅಡಿಕೆ ಬಳಕೆಯಿಂದ ಹೆಚ್ಚುತ್ತಿರುವ ಬಾಯಿ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ…

8 hours ago

ಅರೆಕಾನಟ್ ಚಾಲೆಂಜ್ : ಅಡಿಕೆ ನಿಯಂತ್ರಣ ಕುರಿತು WHO ಉತ್ಸುಕತೆ – ಕ್ಲಿನಿಕಲ್ ಪರೀಕ್ಷೆಗಳ ಅಗತ್ಯಕ್ಕೆ ತಜ್ಞರ ಒತ್ತಾಯ

ಅರೆಕಾನಟ್ ಚಾಲೆಂಜ್ : ಟರ್ನಿಂಗ್ ಪಾಲಿಸಿ ಇನ್ಟು ಇಂಪ್ಯಾಕ್ಟ್ ಇನ್ ದ ಸೌತ್…

8 hours ago

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ

ಸಣ್ಣ ರೈತರ ಕೃಷಿಯಲ್ಲಿ ಕಾರ್ಮಿಕ ಕೊರತೆ, ವೆಚ್ಚ ಏರಿಕೆ ಸಮಸ್ಯೆ ನಿವಾರಣೆಗೆ ರೋಬೋಟಿಕ್ಸ್,…

18 hours ago

“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ

ಕ್ಯಾನ್ಸರ್ ವಿರುದ್ಧ ಹೋರಾಟ ಎಂದರೆ ಕೇವಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಮಾತ್ರವಲ್ಲ. ರೋಗ…

18 hours ago

ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ

ರಾಜ್ಯದಲ್ಲಿ ಅಕ್ರಮ ವಲಸಿಗರು ಹಾಗೂ ಬಾಂಗ್ಲಾ ಅಕ್ರಮ ವಲಸಿಗರ ಬಗ್ಗೆ ಮಾಹಿತಿಯನ್ನು ವಿಧಾನಪರಿಷತ್‌…

18 hours ago