Advertisement
MIRROR FOCUS

55 ಎಕ್ರೆಯಲ್ಲಿ 50 ಬಗೆಯ ಕೃಷಿ | ಗುತ್ತಿಗೆ ಪಡೆದು ಕೃಷಿ ಮಾಡಿದ ಮಹಿಳೆಗೆ “ಕೃಷಿ ತಿಲಕಂ” ಪ್ರಶಸ್ತಿ |

Share

55 ಎಕ್ರೆ ಜಮೀನಿನಲ್ಲಿ 50 ಬಗೆಯ ಕೃಷಿ ಮಾಡಿ ಗಮನ ಸೆಳೆದ ಮಹಿಳೆ ಬಿಂದು ಅವರು ಕೇರಳ ಸರ್ಕಾರದ ಕೃಷಿ ತಿಲಕಂ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. …..ಮುಂದೆ ಓದಿ….

ಕೇರಳ ಸರ್ಕಾರವು ಕೇರಳದ ಅತ್ಯುತ್ತಮ ರೈತ ಮಹಿಳೆಗಾಗಿ ‘ಕೃಷಿತಿಲಕಂ‘ ಪ್ರಶಸ್ತಿಯನ್ನು ನೀಡುತ್ತಿದೆ. ಕಣ್ಣೂರು ಜಿಲ್ಲೆಯ ಪಟ್ಟುವಂ ಪ್ರದೇಶದ ಹರಿತಾ ಮಹಿಳಾ ತಂಡದ ಸದಸ್ಯೆ ಕೆ ಬಿಂದು ಅವರು  ಸುಮಾರು 25 ವರ್ಷಗಳಿಂದ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಕೇವಲ 15 ಸೆಂಟ್ಸ್‌ ಸ್ಥಳ ಹೊಂದಿರುವ ಬಿಂದು ಅವರು ಗುತ್ತಿಗೆ ಆಧಾರದಲ್ಲಿ ಜಾಗವನ್ನು ಪಡೆದುಕೊಂಡು ಕೃಷಿ ಮಾಡುತ್ತಿದ್ದಾರೆ. ಬೆಳೆ ಬೆಳೆಯುವುದರಲ್ಲಿಯೇ ಖುಷಿ ಕಾಣುವ ಅವರು ಹರಿತಾ ಜೆಎಲ್‌ಜಿ ತಂಡದ ಸದಸ್ಯೆಯೂ ಹೌದು.

ಬಿಂದು ಅವರು 55 ಎಕರೆ ಜಮೀನಿನಲ್ಲಿ 50 ಸಾಗುವಳಿ ಮಾಡಿದ್ದಾರೆ. ಎಕರೆಗಟ್ಟಲೆ ಭತ್ತದ ಕೃಷಿ, ನಂತರ ತರಕಾರಿ ಕೃಷಿ, ಅರಿಶಿಣ ಕೃಷಿ, ಶುಂಠಿ ಕೃಷಿ ಹೀಗೆ ವಿನೂತನ ಕಲ್ಪನೆಗಳನ್ನು ಕೃಷಿ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸುತ್ತಿರುವ ಈ ರೈತ ಮಹಿಳೆಗೆ ಸ್ವಂತ ಮನೆ, 15 ಸೆಂಟ್ಸ್ ಜಮೀನು ಇದೆ.

ಬಿಂದು ಅವರು 26 ಎಕರೆ ಜಮೀನಿನಲ್ಲಿ ಭತ್ತ, ಹೂವು, ಅರಿಶಿನ, ಶುಂಠಿ, ತರಕಾರಿ, ಎಳ್ಳು, ಕಡಲೆ ಸೇರಿದಂತೆ ಹಲವು ಬೆಳೆಗಳನ್ನು ನಿರಂತರವಾಗಿ ಬೆಳೆಯುತ್ತಿದ್ದಾರೆ. ಉಳಿದ 25 ಎಕ್ರೆ ಜಾಗದಲ್ಲಿ ಇತರ ಬೆಳೆಯನ್ನು ಬೆಳೆಯುತ್ತಾರೆ.  ಅಷ್ಟೇ ಅಲ್ಲ ಬಿಂದು ಅವರು “ಕುಟುಂಬಶ್ರೀ” ಸದಸ್ಯರಿಗೆ ಕೃಷಿ ಯಂತ್ರೋಪಕರಣಗಳನ್ನು ನಿರ್ವಹಿಸಲು ತರಬೇತಿಯನ್ನೂ ನೀಡುತ್ತಾರೆ.

ಬಿಂದು ಅವರು ಕುಟುಂಬ ಶ್ರೀ ತಂಡವು ವಿಶೇಷವಾಗಿ ಆಯುರ್ವೇದದಲ್ಲಿ ಬಳಕೆ ಮಾಡುವ ವಸ್ತುಗಳು ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸುತ್ತದೆ. ವಾರ್ಷಿಕವಾಗಿ ಇವರ  ವಹಿವಾಟು 7 ಲಕ್ಷ ರೂಪಾಯಿಗಳಷ್ಟಿದೆ. ಗ್ರಾಮೀಣ ಭಾಗದಲ್ಲಿ ಈ ಸಾಧನೆ ಸಣ್ಣದೇನಲ್ಲ. ಬಿಂದು ಅವರು ಕೃಷಿಕ ಮಹಿಳೆಯಾಗಿ  ಹಲವಾರು ಪ್ರಶಸ್ತಿಗಳನ್ನು ಕೂಡಾ ಪಡೆದಿದ್ದಾರೆ.

ಪ್ರತೀ ದಿನ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಬಿಂದು ಅವರ ಶ್ರಮಶಕ್ತಿ ಗೆದ್ದಿದೆ, ಎಲ್ಲರ ಸಹಕಾರವೂ ಇದೆ ಎನ್ನುವ ಬಿಂದು  ಅವರ ಇಚ್ಛಾಶಕ್ತಿಯೇ ಈ ಎಲ್ಲಾ ಸಾಧನೆಗೆ ಕಾರಣವಾಗಿದೆ.  ಬಿಂದು ಅವರ ಕೃಷಿ ಕಾರ್ಯಕ್ಕೆ ಸಹಾಯ ಮಾಡಲು ಪತಿ ಟಿ.ಮನೋಹರನ್ ಕೂಡ ಜೊತೆಗಿದ್ದಾರೆ.

ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ…

The Kerala Government is awarding the ‘ KARSHAKA THILAKAM ‘ award to the best woman farmer in Kerala. K Bindu, a member of the Haritha Women’s Team from the Pattuvam area of Kannur district, has been actively involved in agriculture for almost 25 years. Despite having only 15 cents of land, Bindu is cultivating the land on a lease basis. She is also a member of the Haritha JLG team and is passionate about growing crops. Her dedication and hard work are truly inspiring.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

12 hours ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

1 day ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುತ್ತಿದೆಯೇ? – ಹೊಸ ಅಧ್ಯಯನದ ಎಚ್ಚರಿಕೆ

ಕೈಗಾರಿಕಾ ಕೋಳಿ ಸಾಕಾಣಿಕೆ ಆಹಾರ ವಿಷಬಾಧೆಗೆ ಕಾರಣವಾಗುವ ಕ್ಯಾಂಪಿಲೋಬ್ಯಾಕ್ಟರ್ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ವೇಗಗೊಳಿಸುತ್ತಿದೆ…

2 days ago

ಹವಾಮಾನ ಬದಲಾವಣೆಯಿಂದ ರೈತರ ರಕ್ಷಣೆಗೆ ಸರ್ಕಾರದ ತಂತ್ರ – 310 ಜಿಲ್ಲೆಗಳು ಅಪಾಯದಲ್ಲಿ, 2,661 ಸಹಿಷ್ಣು ತಳಿಗಳ ಅಭಿವೃದ್ಧಿ

ದೇಶದ 651 ಕೃಷಿ ಜಿಲ್ಲೆಗಳ ಹವಾಮಾನ ಅಪಾಯ ಮೌಲ್ಯಮಾಪನದಲ್ಲಿ 310 ಜಿಲ್ಲೆಗಳು ದುರ್ಬಲವೆಂದು…

2 days ago