ಪವಿತ್ರ ತುಳಸಿಯೂ ದೇವಸ್ಥಾನಕ್ಕೆ ಕಂಟಕವಾಯ್ತು | ಅತಿಯಾದ ವಿಷ ಸಿಂಪಡಣೆಯ ಪರಿಣಾಮ |

November 4, 2024
5:52 AM

ಕೇರಳದ ತ್ರಿಶೂರ್‌ನಲ್ಲಿರುವ ಪ್ರಸಿದ್ಧ ಗುರುವಾಯೂರ್ ಶ್ರೀಕೃಷ್ಣ ದೇವಾಲಯದಲ್ಲಿ ತುಳಸಿ  ಸಮರ್ಪಣೆಗೆ ನಿರ್ಬಂಧ ವಿಧಿಸಲಾಗಿದೆ. ಹಾಗೆಂದು ದೇವಸ್ಥಾನದಲ್ಲಿ ದೇವರಿಗೆ ತುಳಸಿ ಅರ್ಪಣೆಯನ್ನೇ ಸ್ಥಗಿತಗೊಳಿಸಿಲ್ಲ. ವಿಷ ಸಿಂಪಡಣೆ ಮಾಡಿರುವ ತುಳಸಿ ಅರ್ಪಣೆಗಷ್ಟೇ ನಿರ್ಬಂಧ ಇದೆ.

ದೇವಸ್ಥಾನದಲ್ಲಿ ಕೀಟನಾಶಕ ಸಿಂಪಡಣೆಯ ತುಳಸಿಯನ್ನು  ಬಳಸುವುದನ್ನು ಮಾತ್ರಾ ನಿರ್ಬಂಧಿಸಿದೆ. ದೇವಾಲಯದ ಸಿಬ್ಬಂದಿಗಳು ಇಂತಹ ‘ತುಳಸಿ’ಯನ್ನು ಪದೇ ಪದೇ ದೇವರಿಗೆ ಅರ್ಪಣೆ ಮಾಡುವುದರಿಂದ ಅವರಿಗೆ  ಅಲರ್ಜಿ ಮತ್ತು ತುರಿಕೆಯಂತಹ ಸಮಸ್ಯೆಗಳು ಆಗಾಗ ಕಂಡುಬರುತ್ತಿದ್ದ ಬಗ್ಗೆ  ದೂರುಗಳು ಬರುತ್ತಿದ್ದವು.

ಬಹುತೇಕ ಯಾತ್ರಾರ್ಥಿಗಳು ಅಂಗಡಿಗಳಿಂದ ‘ತುಳಸಿ’ಯನ್ನು ದೇವರಿಗೆ ಅರ್ಪಣೆ ಮಾಡುತ್ತಿದ್ದರು.  ಹೆಚ್ಚಿನ ಪ್ರಮಾಣದ ಕೀಟನಾಶಕವನ್ನು ಬಳಸಿಕೊಂಡು ವಾಣಿಜ್ಯ ಉದ್ದೇಶಗಳಿಗಾಗಿ  ತುಳಿಸಿಯನ್ನು ಬೆಳೆಸಲಾಗುತ್ತದೆ, ಇದರಿಂದಾಗಿ ಅವುಗಳನ್ನು ದಿನಗಳವರೆಗೆ ಸಂರಕ್ಷಿಸಲಾಗುತ್ತದೆ. ಕೀಟನಾಶಕ ಮಿಶ್ರಿತ ‘ತುಳಸಿ’ಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಅಲರ್ಜಿ ಮತ್ತು ತುರಿಕೆಯಂತಹ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ  ‘ತುಳಸಿ’ ಮೇಲೆ ನಿರ್ಬಂಧ ಹೇರಲಾಗಿದೆ” ಎಂದು ದೇವಸ್ಥಾನದ ಆಡಳಿತವು ತಿಳಿಸಿದೆ.

ಆದರೆ, ದೇವಸ್ಥಾನದಲ್ಲಿ ತುಳಸಿ ಬಳಕೆಯೇ ನಿಷೇಧವಾಗಿಲ್ಲ. ತುಳಸಿ ಪ್ರಿಯ ಕೃಷ್ಣನಿಗಾಗಿ  ಪ್ರತ್ಯೇಕವಾಗಿ ಕೀಟನಾಶಕ ರಹಿತವಾದ ತುಳಿಸಿಯನ್ನು ಬೆಳೆದು ಅರ್ಪಣೆ ಮಾಡಲಾಗುತ್ತಿದೆ.  ಆದರೆ, ದೇವಾಲಯದಲ್ಲಿ ತುಳಸಿಯನ್ನು ನಿಷೇಧಿಸಲಾಗಿದೆ ಎಂದು ಕೆಲವು ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ದೇವಾಲಯದ ನಿರ್ಧಾರದ ಹಿಂದೆ ಕೇರಳದ ಸಿಪಿಐ ಸರಕಾರವನ್ನು ದೂಷಿಸಲಾಗುತ್ತಿದೆ. ಆದರೆ ಇದಕ್ಕೂ ರಾಜಕೀಯ ಪಕ್ಷಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಗುರುವಾಯೂರು ದೇವಸ್ಥಾನದ ಅಧ್ಯಕ್ಷ ವಿ.ಕೆ.ವಿಜಯನ್ ಹೇಳಿದ್ದಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಬೆಳಗಾವಿಯಲ್ಲಿ ಮಳೆ ಕೊರತೆಯ ಆತಂಕ ದೂರ ; ಜುಲೈ ಮಳೆಯಿಂದ ಕೃಷಿ ಚಟುವಟಿಕೆಗೆ ಚುರುಕು
August 18, 2026
7:33 AM
by: ದ ರೂರಲ್ ಮಿರರ್.ಕಾಂ
‘ಉಚಿತ ಎಲೆಕ್ಟ್ರಿಕ್ ಸ್ಟೌ ವಿತರಣೆ’ ನಕಲಿ ಸುದ್ದಿ : ಸಾರ್ವಜನಿಕರಿಗೆ ಕೇಂದ್ರ ಸಚಿವರಿಂದ ಮಾಹಿತಿ
August 18, 2026
7:25 AM
by: ದ ರೂರಲ್ ಮಿರರ್.ಕಾಂ
ಆಗಸ್ಟ್ 28 ರೊಳಗೆ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ವಿತರಣೆ: ಸಚಿವ ಮಧು ಬಂಗಾರಪ್ಪ
August 18, 2026
7:18 AM
by: ದ ರೂರಲ್ ಮಿರರ್.ಕಾಂ
ರಾಜ್ಯಾದ್ಯಂತ ಆಹಾರ ಸುರಕ್ಷತೆ ಪರಿಶೀಲನೆಗೆ ದಾಳಿ ಮುಂದುವರಿಕೆ : ಉಲ್ಲಂಘನೆಗೆ ಕ್ಷಮೆಯಿಲ್ಲ ಎಂದ ಆರೋಗ್ಯ ಸಚಿವ
August 18, 2026
7:10 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror