ಸುದ್ದಿಗಳು

ನಂಬಬೇಕು ಅದೃಷ್ಟ, ಕೊಹ್ಲಿಯಿಂದ ದುರಾದೃಷ್ಟವೇ?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬುಧವಾರ ಅಫ್ಘಾನಿಸ್ತಾನ ವಿರುದ್ಧ ನಡೆದ ಟಿ 20 ವಿಶ್ವಕಪ್ ನಲ್ಲಿ ಭಾರತ ಹಳೆಯ ಬ್ಯಾಟಿಂಗ್ ಖದರ್ ತೋರಿಸಿದ್ದು, ಸಂಘಟಿತ ಪ್ರದರ್ಶನ ಸಂತೋಷವೇ. ಆದರೆ ಸೆಮೀಫೈನಲ್ ಗೆ ಅದೃಷ್ಟ ಕೈ ಹಿಡಿಯುವುದೆ ಎಂಬ ಪ್ರಶ್ನೆ ಉದ್ಭವಿಸಿದೆ.
ಹೌದು,ಕ್ರೀಡಾಭಿಮಾನಿಗಳು ಯೋಚಿಸಬೇಕಾದ ವಿಚಾರವೇ. ಕಾಗದದ ಮೇಲೆ ಟಿ 20 ಮಾದರಿಗೆ ಹೇಳಿ ಮಾಡಿಸಿದಂತೆ ಬಲಾಢ್ಯ ತಂಡವೇ ಆಗಿದ್ದರೂ ಒಗ್ಗಟಿನ ಕೊರತೆಯಿಂದ ಹಾಗೂ ಸ್ವಯಂ ತಪ್ಪುಗಳಿಂದ ಸೆಮಿಸ್ ಹಾದಿ ದುರ್ಗಮಗೊಳಿಸಿಕೊಂಡಿದೆ ಎನ್ನುವುದೂ ನಿಜ ಆಗಿದೆ.

Advertisement
Advertisement

ಆಫ್ಘನ್ ವಿರುದ್ಧ ತೋರಿದ ಅತ್ಯದ್ಭುತ ತಾಕತ್ತಿನ ಪ್ರದರ್ಶನ ಪಾಕಿಸ್ತಾನ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧ ಬಂದಿದ್ದರೆ ಅಭಿಮಾನಿಗಳ ಹರ್ಷಕ್ಕೆ ಎಲ್ಲೆಯೇ ಇರುತ್ತಿರಲಿಲ್ಲವೇನೊ. ವಾಸ್ತವದಲ್ಲಿ ಭಾರತಕ್ಕೆ ಹೋಲಿಸಿದರೆ ಅಫ್ಘಾನಿಸ್ತಾನ ಇನ್ನೂ ಕ್ರಿಕೆಟ್ ಕೂಸು.ಆದರೂ ಭಾರತಕ್ಕಿಂತ ಎರಡು ಸ್ಥಾನ ಮೇಲಿರುವುದು ಹಾಗೂ ಎಲ್ಲ ವಿಭಾಗಗಳಲ್ಲಿಯೂ ಭಾರತಕ್ಕೆ ಸಮಾನ ಪ್ರದರ್ಶನ ನೀಡುತ್ತಿರುವುದು ನಮ್ಮ ಪಾಲಿನ ದುರಾದೃಷ್ಟ.

ಇಲ್ಲಿ ಮುಖ್ಯವಾಗಿ ಕಂಡು ಬರುವ ತಪ್ಪುಗಳು ಇವುಗಳೇ ಆಗಿವೆ. ನಾಯಕ ವಿರಾಟ್ ಕೊಹ್ಲಿಯ ಅತಿರೇಖದ ಎಡವಟ್ಟುಗಳು ಹಾಗೂ ಅನಗತ್ಯ ಪ್ರಯೋಗಗಳು. ಕೊಹ್ಲಿ ಕೋರಿಕೆ ಮೇರೆ ಚಾಂಪಿಯನ್ ನಾಯಕ ಮಹೇಂದ್ರ ಸಿಂಗ್ ಧೋನಿಯವರನ್ನು ಬಿಸಿಸಿಐ ಮೆಂಟರ್ ಎಂದು ನೇಮಕ ಮಾಡಿದರೂ ಅವರ ಸಲಹೆಗಳಿಗೆ ಕಿಮ್ಮತ್ತಿನ ಬೆಲೆ ಇಲ್ಲ. ಪರಿಣಾಮ ಗೆಲ್ಲುವಂಥ ಪಂದ್ಯಗಳನ್ನು ಸುಲಭವಾಗಿ ಕೈ ಚೆಲ್ಲಿದ್ದು.

ಇದೀಗ ಭಾರತದ ಸೆಮಿಸ್ ಹಾದಿ ಸುಗಮಗೊಳ್ಳಲು ಮುಂದಿನ ಎರಡೂ ಪಂದ್ಯಗಳನ್ನು ಭಾರಿ ಅಂತರದಿಂದ ಗೆಲ್ಲಬೇಕಿದ್ದು,ಜತೆಗೆ ಬದ್ಧ ವೈರಿ ಪಾಕಿಸ್ತಾನ ಮುಂದಿನ ಪಂದ್ಯದಲ್ಲಿ ಗೆಲ್ಲಬೇಕಿದೆ.ಜತೆಗೆ ನ್ಯೂಜಿಲ್ಯಾಂಡ್ ಮುಂದಿನ ಪಂದ್ಯದಲ್ಲಿ ಸೋಲಬೇಕಿದೆ.ಇದರಿಂದ ಮಾತ್ರ ಭಾರತದ ಸೆಮಿಸ್ ಹಾದಿ ಸುಗಮವಾಗಲಿದೆ ಎಂದು ಕ್ರಿಕೆಟ್ ಪಂಡಿಥ ಲೆಕ್ಕಾಚಾರ.

ಹಿರಿಯ ಹಾಗೂ ಮಾಜಿ ಆಟಗಾರರ ಆಕ್ರೋಶ, ಧೋನಿ ಕೊಹ್ಲಿ ನಡುವೆ ಇದೇ ವಿಶೇಷ ವ್ಯತ್ಯಾಸ. ಧೋನಿಯವರು ಹಿರಿಯ ಹಾಗೂ ಮಾಜಿ ಆಟಗಾರರ ಸಲಹೆಗಳನ್ನು ಗೌರವಿಸಿದರೆ,ಕೊಹ್ಲಿ ತಿರಸ್ಕರಿಸುವ ಮೂಲಕ ಎಡವಟ್ಟು ನಿರ್ಧಾರಗಳಿಗೆ ಕೈ ಹಾಕುತ್ತಿರುವುದೇ ತಂಡಕ್ಕೆ ಬಹು ದೊಡ್ಡ ಹಿನ್ನಡೆ. ಜತೆಗೆ ಡಿ.ಆರ್.ಎಸ್ ಬಳಕೆಯಲ್ಲಿಯೂ ವಿಫಲವಾಗುತ್ತಿರುವುದು ಕೂಡ ದುಬಾರಿಯಾಗುತ್ತಿದೆ.

Advertisement

ಏನೆ ಆಗಲಿ, ಮುಂದಿನ ಪಂದ್ಯಗಳಲ್ಲಿ ಕೊಹ್ಲಿ ಇಂತಹ ತಪ್ಪುಗಳನ್ನು ಪುನರಾವರ್ತಿಸದೆ ಇದ್ದರೆ ಹಾಗೂ ಅದೃಷ್ಟ ಕೈಗೂಡಿದರೆ ಮಾತ್ರ ವಿಶ್ವಕಪ್ ನಮ್ಮದಾಗಲಿದೆ ಎಂಬುದು ಸತ್ಯ.

# ಬಾಲಚಂದ್ರ ಕೋಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಬದುಕು ಪುರಾಣ | ಅಂದು ಒಬ್ಬ ಬಕಾಸುರ.. ಇಂದು?

ಭೋಜನವೆಂದರೆ ಉದರಾಗ್ನಿಯನ್ನು ತಣಿಸುವ ಯಜ್ಞ. ಉದರಾಗ್ನಿಗೆ ಖಾದ್ಯಗಳೇ ಆಜ್ಯಗಳು. ಯಜ್ಞವೆಂದಾಗ ಶ್ರದ್ಧೆ, ಭಕ್ತಿ ಮತ್ತು…

7 hours ago

ಪರಿಘ ಯೋಗ, ಈ 5 ರಾಶಿಗೆ ಅತ್ಯಂತ ಶುಭ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

7 hours ago

ಹವಾಮಾನ ವರದಿ | 07-06-2025 | ಜೂನ್ 11 ರಿಂದ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆ

ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಇದರ ಪ್ರಭಾವದಿಂದ ಜೂನ್ 11 ರಿಂದ…

1 day ago

ಸುಸ್ಥಿರ ಅಭಿವೃದ್ಧಿ ಯಾವಾಗಲೂ ತತ್ವಶಾಸ್ತ್ರ ಮತ್ತು ಸಿದ್ಧಾಂತದ ಮೂಲತತ್ವಾಗಿದೆ

ಇತ್ತೀಚಿನ  ದಿನಗಳಲ್ಲಿ ಮಾಲಿನ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿ, ಪರಿಸರ ಸಂರಕ್ಷಣೆಯ ಬಗ್ಗೆ ಚಿಂತಿಸುವಂತೆ…

1 day ago

ನಿಮಗೆ ಸಾಡೇಸಾತಿ ಶುರುವಾಗಿದ್ರೆ ಶನಿ ನೀಡ್ತಾನೆ ಈ 6 ಸೂಚನೆ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

1 day ago

ಹೊಸರುಚಿ | ಹಲಸಿನ ಹಣ್ಣಿನ ಮಲ್ಪುರಿ

ಹಲಸಿನ ಹಣ್ಣಿನ ಮಲ್ಪುರಿಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣಿನ ಪಲ್ಪ್ 1/2 ಕಪ್,…

1 day ago