ತುಳುನಾಡಿನ ದೈವಗಳನ್ನು ಏಕೆ ನಂಬಬೇಕು ? | ದೈವಾರಾಧನೆಗೆ ಇಲ್ಲಿ ಮಹತ್ವ ಏಕಿದೆ? | ಇಲ್ಲಿದೆ ಪ್ರತ್ಯಕ್ಷ ಘಟನೆ |

April 1, 2021
10:29 PM

ತುಳುನಾಡು ಎಂದರೆ ದೈವಗಳ ನಾಡು. ದೈವಾರಾಧನೆಯೇ ಇಲ್ಲಿ ಪ್ರಮುಖ. ಹೀಗಾಗಿ ನಂಬಿದವನಿಗೆ ಇಂಬು ಖಚಿತ ಎಂಬುದು ಹಿಂದಿನಿಂದೂ ನಡೆದುಕೊಂಡಿದೆ ಬಂದಿದೆ. ಅಂತಹ ಪವಿತ್ರ ದೈವೀ ಶಕ್ತಿಗಳ ಪ್ರಕಟೀಕರಣವಾಗಿದೆ. ಮಂಗಳೂರಿನಲ್ಲಿ ಕೊರಗಜ್ಜ ದೈವಸ್ಥಾನ ಅಪವಿತ್ರಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೇ ಕ್ಷೇತ್ರದಲ್ಲಿ ತಪ್ಪೊಪ್ಪಿ ಇದೀಗ ಪೊಲೀಸ್‌ ಇಲಾಖೆಯೂ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ.

Advertisement

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಯ ಹಲವು ಕಡೆಗಳಲ್ಲಿ ಕೊರಗಜ್ಜ ದೈವಸ್ಥಾನ ಇದೆ. ಅತ್ಯಂತ ಕಾರಣಿಕವಾದ ಈ ದೈವಗಳ ಆರಾಧನೆಯೂ ಶ್ರದ್ಧಾ ಭಕ್ತಿಯಿಂದ ಎಲ್ಲೆಡೆ ನಡೆಯುತ್ತದೆ. ಅಂತಹ ದೈವದ ಹುಂಡಿಯನ್ನು ಅಪವಿತ್ರಗೊಳಿಸಿದ ಘಟನೆ ನಡೆದಿತ್ತು. ಇದಕ್ಕಾಗಿ ಪೊಲೀಸ್‌ ಇಲಾಖೆಯೂ ಕ್ರಮ ಕೈಗೊಂಡಿತ್ತು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿತ್ತು.ಆದರೆ ಆರೋಪಿ ಪತ್ತೆಯಾಗಲಿಲ್ಲ.

ಇದೀಗ ಎಮ್ಮೆಕೆರೆಯಲ್ಲಿ ನಡೆದ ದೈವಸ್ಥಾನದ ಜಾತ್ರೆಯಲ್ಲಿ ವ್ಯಕ್ತಿಯೊಬ್ಬ ದೈವದ ಮುಂದೆ ಕ್ಷಮೆ ಕೇಳಿದ್ದು , ಎಲ್ಲಾ ಘಟನೆಗಳನ್ನು ವಿವರಿಸಿದ್ದಾನೆ, ಒಬ್ಬ ಮೃತಪಟ್ಟಿದ್ದು ಇನ್ನೊಬ್ಬನ ಆರೋಗ್ಯವೂ ಹದಗೆಟ್ಟಿದೆ ಎಂದೂ ಹೇಳಿದ್ದ.
ಈ ಘಟನೆಯ ಬಳಿಕ ಪೊಲೀಸ್‌ ಇಲಾಖೆ ಮಾಹಿತಿ ಪಡೆದಿದೆ. ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಯುತ್ತಿದೆ.

ತುಳುನಾಡಿನ ದೈವ ದೇವರುಗಳು ನಂಬಿಕೆಯ ಪ್ರತೀಕಗಳು. ಹೀಗಾಗಿ ಇಲ್ಲಿ ದೈವಾರಾಧನೆ, ದೇವತಾ ಆರಾಧನೆಗಳಲ್ಲಿ ಎಲ್ಲೂ ಲೋಪಗಳು ನಡೆಯುವುದಿಲ್ಲ, ಮಾತ್ರವಲ್ಲ ಆ ದೈವೀ ಶಕ್ತಿಗಳ ಮುಂದೆ, ನಂಬಿಕೆಗಳ ಮುಂದೆ ಯಾವ ಆಟವೂ ನಡೆಯುವುದಿಲ್ಲ ಎನ್ನುವುದೂ ತಿಳಿಯುತ್ತದೆ ಎಂದು ಭಕ್ತರು ಅಭಿಪ್ರಾಯ ಪಡುತ್ತಾರೆ.

Advertisement

 

Advertisement

 

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಭಾಷೆ- ಸಂಸ್ಕೃತಿಯ ಸ್ವಾಭಿಮಾನ ಮೆರೆಯೋಣ : ರಾಘವೇಶ್ವರ ಶ್ರೀ
August 12, 2025
7:45 AM
by: The Rural Mirror ಸುದ್ದಿಜಾಲ
ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆ – ಹೂ, ಹಣ್ಣುಗಳ   ಖರೀದಿ – ಭರದಿಂದ ಸಾಗಿರುವ ಸಿದ್ಧತೆ ಕಾರ್ಯಗಳು
August 7, 2025
11:16 PM
by: The Rural Mirror ಸುದ್ದಿಜಾಲ
ಕಲುಷಿತ ಭಾಷೆಯ ಶುದ್ಧೀಕರಣಕ್ಕೆ ಆದ್ಯತೆ: ರಾಘವೇಶ್ವರ ಶ್ರೀ
August 2, 2025
9:46 PM
by: The Rural Mirror ಸುದ್ದಿಜಾಲ
ನಾಡಿನೆಲ್ಲೆಡೆ ನಾಗರಪಂಚಮಿ ಸಂಭ್ರಮ | ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ವಿಶೇಷ ಪೂಜೆ
July 29, 2025
8:08 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group