ಕೃಷ್ಣರಾಜ ಸಾಗರ ಅಣೆಕಟ್ಟು (ಕೆಆರ್ಎಸ್) ನಲ್ಲಿ ನೀರಿನ ಮಟ್ಟ ಬೇಸಿಗೆಯ ತೀವ್ರತೆಗೆ ಕೇವಲ 15 ದಿನಗಳಲ್ಲಿ 8 ಅಡಿಗಳಷ್ಟು ಕುಸಿದಿದೆ. ಪ್ರಸ್ತುತ ಅಣೆಕಟ್ಟಿನಲ್ಲಿ 92.90 ಅಡಿಗಳಷ್ಟು ಮಾತ್ರ ನೀರು ಲಭ್ಯವಿದೆ.
124.80 ಅಡಿ ಗರಿಷ್ಠ ಸಾಮರ್ಥ್ಯದ ಈ ಅಣೆಕಟ್ಟಿನಲ್ಲಿ ಈಗ ಕೇವಲ 92 ಅಡಿಗಳಷ್ಟು ಮಾತ್ರ ನೀರಿದ್ದು, ಮುಂಗಾರು ಮಳೆಯು ಸಮಯಕ್ಕೆ ಆರಂಭವಾಗದಿದ್ದರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಕೆಆರ್ಎಸ್ ಅಣೆಕಟ್ಟಿನಿಂದ ಮಂಡ್ಯ, ಮೈಸೂರು ಹಾಗೂ ಬೆಂಗಳೂರು ನಗರಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಪ್ರತಿದಿನ 4,379 ಕ್ಯೂಸೆಕ್ ನೀರು ಪೂರೈಸಲಾಗುತ್ತಿದೆ.
ಇದೇ ವೇಳೆ ಮಂಡ್ಯ ಜಿಲ್ಲೆಯ ಕೃಷಿ ಬೆಳೆಗಳು ಒಣಗದಂತೆ ಉಳಿಸಲು ಕಳೆದ ಒಂದು ವಾರದಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಜೊತೆಗೆ ತಮಿಳುನಾಡುಕ್ಕೂ ನೀರು ಹರಿಸಲಾಗುತ್ತಿದೆ.
ಆದಾಗ್ಯೂ, ತಕ್ಷಣಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
The water level in KRS dam has dropped by 8 feet in just 15 days due to summer. With current levels at 92.90 feet, concerns are rising over potential water shortage in the Cauvery basin if monsoon is delayed.

