ಕುಕ್ಕೆಯ ಜಾತ್ರೆಯ ಸಂದರ್ಭ ನಾಲ್ಕು ಹನಿಯಾದರೂ ಮಳೆ ಬರುತ್ತದೆ…!. ಇದು ಸಂಪ್ರದಾಯದಿಂದ, ಪರಂಪರಾಗತವಾಗಿ ಬಂದಿರುವ ಮಾತು. ಈ ಬಾರಿಯೂ ಈ ವಾಡಿಕೆಯ ಮಾತು ನಿಜವಾಯ್ತು. ಪಂಚಮಿಯ ದಿನ ಸಂಜೆ ಕುಕ್ಕೆಯಲ್ಲಿ ಮಳೆ ಸುರಿಯಿತು. ಈ ಮೂಲಕ ಚಂಪಾಷಷ್ಠಿ ಮಹೋತ್ಸವದ ಪಂಚಮಿ ರಥೋತ್ಸವ ವೀಕ್ಷಿಸಲು ಆಗಮಿಸಿದ ಭಕ್ತರಿಗೆ ಮಳೆರಾಯನ ಸಿಂಚನವಾಯಿತು. ವಾಡಿಕೆಯ ಮಾತು ಈ ಬಾರಿಯೂ ನಿಜವಾಗಿದೆ. ಇದುವರೆಗೂ ಈ ವಾಡಿಕೆಯ ಮಾತುಗಳು ನಿಜವಾಗಿದೆ.
ಸುಬ್ರಹ್ಮಣ್ಯ ಹಾಗೂ ಆಸುಪಾಸಿನ ಕೃಷಿಕರು ಕೂಡಾ ಕುಕ್ಕೆಯ ಜಾತ್ರೆಯ ನಂತರ ತಮ್ಮ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಜಾತ್ರೆಯ ನಂತರ ಕೃಷಿ ಕಾರ್ಯಗಳು, ಅಡಿಕೆ ತೋಟದ ಕಾರ್ಯಗಳು, ಮರ ಏರುವ ಕಾರ್ಯಗಳು ನಡೆಯುತ್ತದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel