Advertisement
Exclusive - Mirror Hunt

ಕುಕ್ಕೆ ಸುಬ್ರಹ್ಮಣ್ಯ | ನೀರುಬಂಡಿ ಉತ್ಸವದಲ್ಲಿ ತುಂಟಾಟವಾಡಿದ ಆನೆ…! | ನೀರಿಗೆ ಬಿದ್ದ ಸೆಕ್ಯುರಿಟಿ….! | ಮಕ್ಕಳ ಆಟಕ್ಕೂ ಬೇಕಿದೆ ಎಚ್ಚರಿಕೆ… |

Share

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಟಿ ಉತ್ಸವದ ಬಳಿಕ ಕೊಪ್ಪರಿಗೆ ಇಳಿದ ನಂತರ ರಾತ್ರಿ ನೀರು ಬಂಡಿ ಉತ್ಸವ ನಡೆಯುತ್ತದೆ. ನೀರಿನಲ್ಲಿ ನಡೆಯುವ ಈ ಉತ್ಸವದ ವೇಳೆ ಈ ಬಾರಿ ಕುಕ್ಕೆ ಸುಬ್ರಹ್ಮಣ್ಯದ ಆನೆ “ತುಂಟಾಟ”ವಾಡಿದೆ. ಮಹಿಳಾ ಸೆಕ್ಯುರಿಟಿ ಒಬ್ಬರನ್ನು ಸೊಂಡಿಲಿನಿಂದ ಎಳೆದು ನೀರಿಗೆ ಹಾಕಿದೆ..!. ವಿಪರೀತ ಜನ ಸೇರುವ “ಮಕ್ಕಳಾಟ” ಉತ್ಸವ ಆಗುತ್ತಿರುವ ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದ್ದು ಅಗತ್ಯವಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಉತ್ಸವದ  ಬಳಿಕ ಕೊಪ್ಪರಿಗೆ ಇಳಿದ ನಂತರ ರಾತ್ರಿ ನೀರು ಬಂಡಿ ಉತ್ಸವ ನಡೆಯುತ್ತದೆ. ಕಳೆದ ಕೆಲವು ವರ್ಷಗಳಿಂದ ಈ ಉತ್ಸವಕ್ಕೆ ಮಕ್ಕಳಿಂದ ತೊಡಗಿ ಅನೇಕರು ಈ ಉತ್ಸವಕ್ಕೆ ಆಗಮಿಸಿ ನೀರು ಬಂಡಿ ಉತ್ಸವದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈಚೆಗೆ ಇದೊಂದು ಸೇವೆಯ ಜೊತೆಗೆ “ಮಕ್ಕಳಾಟ”ದ ಉತ್ಸವವೂ ಆಗುತ್ತಿದೆ. ಆನೆಯೂ ನೀರಿನಲ್ಲಿ ಕುಣಿದು ಕುಪ್ಪಳಿಸುವ ವಿಡಿಯೋ, ಫೋಟೋ ವೈರಲ್‌ ಆಗುವ ಕಾರಣದಿಂದ ಈ ಉತ್ಸವ  ನೋಡಲೆಂದೇ ಜನರು ಬರುತ್ತಾರೆ. ಬಂದವರು ಸಹಜವಾಗಿಯೇ ನೀರಿನ ಮೋಜಿಗೆ ಸೆಳೆತಗೊಂಡು ಮಕ್ಕಳೂ ಈ ಉತ್ಸವದಲ್ಲಿ ತೊಡಗಿಸಿಕೊಳ್ಳುತ್ತಾರೆ. ಆನೆಯ ಮೇಲೆ ನೀರು ಎರಚುವುದಿಂದ ತೊಡಗಿಕೊಂಡು ಬಂದವರ ಮೇಲೆಲ್ಲಾ ನೀರೇ ನೀರು. ಇದು ಉತ್ಸವ ಆದ್ದರಿಂದ ಸಂಭ್ರಮ…

ವಿಡಿಯೋ….

ಆದರೆ ಈ ಬಾರಿ ಆನೆಯು ನೀರಿನಲ್ಲಿ ಆಟವಾಡುವುದರ ಜೊತೆಗೆ ಮಹಿಳಾ ಸೆಕ್ಯುರಿಟಿ ಒಬ್ಬರನ್ನು ಎಳೆದು ಹಾಕಿದೆ..!. ಇದು ಆನೆಯ ತುಂಟಾಟವೇನೋ ಹೌದು. ಸಾವಿರಾರು ಜನರು ಈ ಉತ್ಸವದಲ್ಲಿ ಇರುತ್ತಾರೆ, ಆನೆಯ ತುಂಟಾಟವು ನೂಕುನುಗ್ಗಲಿಗೂ ಕಾರಣವಾಗಬಹುದು, ಇಂತಹ ಸಂದರ್ಭದಲ್ಲಿ ನೀರು ತುಂಬಿರುವ ಹೊರಾಂಗಣದಲ್ಲಿ ಓಡುವುದೂ ಕಷ್ಟ, ಈ ಸಮಯ ನೀರಿಗೆ ಬಿದ್ದರೂ ಅಪಾಯವೇ ಸರಿ. ಪುಣ್ಯ ಸ್ಥಳದಲ್ಲಿ ಇಂತಹ ಅವಘಡಗಳಿಗೆ ಕಾರಣವಾಗುವ ಮೊದಲು ಆಡಳಿತ ಮಂಡಳಿ ಎಚ್ಚರಿಗೆ ವಹಿಸಬೇಕಿದೆ. ಮುಂದಿನ ವರ್ಷದಿಂದ ನೀರಿನ ಆಟಕ್ಕೆ ನಿಯಂತ್ರಣ ಹೇರಬೇಕಿದೆ. ಉತ್ಸವವು ಆಟದ ಸ್ವರೂಪ ಹೋಗುವುದಕ್ಕೆ ಆಡಳಿತ ವ್ಯವಸ್ಥೆ ನಿಯಂತ್ರಣ ಹೇರಬೇಕಿದೆ.

Nirubandi Utsav held after the Champa Shashti Utsav at the Kukke Subrahmanya Temple. In this utsav   Subrahmanya’s elephant ,dragged a women security guard into the water. So caution is needed in such festivals.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 20.09.2026 |ಕರ್ನಾಟಕದಲ್ಲಿ ಸೆ.25ರವರೆಗೆ ಮಳೆಯ ಲಕ್ಷಣ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಉ ತ್ತಮ ಮಳೆಯ…

4 hours ago

ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ

ಕರ್ನಾಟಕದಲ್ಲಿ ಮಳೆಯ ಚಟುವಟಿಕೆ ಮತ್ತೆ ಹೆಚ್ಚಾಗುವ ಸೂಚನೆ ದೊರೆತಿದ್ದು, ಮುಂದಿನ ಏಳು ದಿನಗಳ…

9 hours ago

ತೆಂಗಿನಕಾಯಿ ರಫ್ತಿನಲ್ಲಿ ಭಾರತ ಶೇ.62ರಷ್ಟು ಏರಿಕೆ

ಭಾರತದ ತೆಂಗಿನಕಾಯಿ ರಫ್ತು ಮೌಲ್ಯ ಒಂದೇ ವರ್ಷದಲ್ಲಿ ಶೇ.62ರಷ್ಟು ಏರಿಕೆಯಾಗಿ ₹7,038 ಕೋಟಿಗೆ…

1 day ago

ಸಮುದ್ರ ಮಾರ್ಗದಲ್ಲಿ ಅಡಿಕೆ ಸಾಗಾಟ : ಒಡಿಶಾದ ಬಾಲಸೋರ್‌ನಲ್ಲಿ ₹2 ಕೋಟಿಗೂ ಅಧಿಕ ಅಡಿಕೆ ವಶ- ಅಡಿಕೆ ಜಾಲದ ಹಿಂದೆ ಬಿದ್ದಿರುವ ಪೊಲೀಸರು

ಒಡಿಶಾದ ಬಾಲಸೋರ್‌ನಲ್ಲಿ ಸಮುದ್ರ ಮಾರ್ಗದ ಮೂಲಕ ಅಡಿಕೆ ಸಾಗಾಟದ ಹಲವು ಪ್ರಕರಣಗಳು ಪತ್ತೆಯಾಗಿದ್ದು,…

1 day ago

ಹವಾಮಾನ ವರದಿ | 19-09-2026 | ಸೆ.22 ರಿಂದ ಮಳೆ ಹೆಚ್ಚಳದ ಸೂಚನೆ – ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ

ಕರ್ನಾಟಕದ ಹಲವು ಭಾಗಗಳಲ್ಲಿ ಮಳೆ ಮುಂದುವರಿಯುವ ಸೂಚನೆ ಇದ್ದು, ಸೆ.22ರಿಂದ ಕರಾವಳಿ–ಮಲೆನಾಡಿನಲ್ಲಿ ಮಳೆ…

1 day ago

ಗೋಮಯದಿಂದ ಗಣೇಶನ ಮೂರ್ತಿ – ದೇಶದಾದ್ಯಂತ ಸಾವಿರಾರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿತರಣೆ

ತಂದೆಯ ನೆನಪಿಗಾಗಿ ಇಂದೋರ್‌ನ ವ್ಯಕ್ತಿಯೊಬ್ಬರು ಗೋಮಯದಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ…

2 days ago