Advertisement
Exclusive - Mirror Hunt

ಕುಕ್ಕೆ ಸುಬ್ರಹ್ಮಣ್ಯ | ನೀರುಬಂಡಿ ಉತ್ಸವದಲ್ಲಿ ತುಂಟಾಟವಾಡಿದ ಆನೆ…! | ನೀರಿಗೆ ಬಿದ್ದ ಸೆಕ್ಯುರಿಟಿ….! | ಮಕ್ಕಳ ಆಟಕ್ಕೂ ಬೇಕಿದೆ ಎಚ್ಚರಿಕೆ… |

Share

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಟಿ ಉತ್ಸವದ ಬಳಿಕ ಕೊಪ್ಪರಿಗೆ ಇಳಿದ ನಂತರ ರಾತ್ರಿ ನೀರು ಬಂಡಿ ಉತ್ಸವ ನಡೆಯುತ್ತದೆ. ನೀರಿನಲ್ಲಿ ನಡೆಯುವ ಈ ಉತ್ಸವದ ವೇಳೆ ಈ ಬಾರಿ ಕುಕ್ಕೆ ಸುಬ್ರಹ್ಮಣ್ಯದ ಆನೆ “ತುಂಟಾಟ”ವಾಡಿದೆ. ಮಹಿಳಾ ಸೆಕ್ಯುರಿಟಿ ಒಬ್ಬರನ್ನು ಸೊಂಡಿಲಿನಿಂದ ಎಳೆದು ನೀರಿಗೆ ಹಾಕಿದೆ..!. ವಿಪರೀತ ಜನ ಸೇರುವ “ಮಕ್ಕಳಾಟ” ಉತ್ಸವ ಆಗುತ್ತಿರುವ ಈ ಬಗ್ಗೆ ಎಚ್ಚರಿಕೆ ವಹಿಸಬೇಕಾದ್ದು ಅಗತ್ಯವಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಉತ್ಸವದ  ಬಳಿಕ ಕೊಪ್ಪರಿಗೆ ಇಳಿದ ನಂತರ ರಾತ್ರಿ ನೀರು ಬಂಡಿ ಉತ್ಸವ ನಡೆಯುತ್ತದೆ. ಕಳೆದ ಕೆಲವು ವರ್ಷಗಳಿಂದ ಈ ಉತ್ಸವಕ್ಕೆ ಮಕ್ಕಳಿಂದ ತೊಡಗಿ ಅನೇಕರು ಈ ಉತ್ಸವಕ್ಕೆ ಆಗಮಿಸಿ ನೀರು ಬಂಡಿ ಉತ್ಸವದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈಚೆಗೆ ಇದೊಂದು ಸೇವೆಯ ಜೊತೆಗೆ “ಮಕ್ಕಳಾಟ”ದ ಉತ್ಸವವೂ ಆಗುತ್ತಿದೆ. ಆನೆಯೂ ನೀರಿನಲ್ಲಿ ಕುಣಿದು ಕುಪ್ಪಳಿಸುವ ವಿಡಿಯೋ, ಫೋಟೋ ವೈರಲ್‌ ಆಗುವ ಕಾರಣದಿಂದ ಈ ಉತ್ಸವ  ನೋಡಲೆಂದೇ ಜನರು ಬರುತ್ತಾರೆ. ಬಂದವರು ಸಹಜವಾಗಿಯೇ ನೀರಿನ ಮೋಜಿಗೆ ಸೆಳೆತಗೊಂಡು ಮಕ್ಕಳೂ ಈ ಉತ್ಸವದಲ್ಲಿ ತೊಡಗಿಸಿಕೊಳ್ಳುತ್ತಾರೆ. ಆನೆಯ ಮೇಲೆ ನೀರು ಎರಚುವುದಿಂದ ತೊಡಗಿಕೊಂಡು ಬಂದವರ ಮೇಲೆಲ್ಲಾ ನೀರೇ ನೀರು. ಇದು ಉತ್ಸವ ಆದ್ದರಿಂದ ಸಂಭ್ರಮ…

ವಿಡಿಯೋ….

ಆದರೆ ಈ ಬಾರಿ ಆನೆಯು ನೀರಿನಲ್ಲಿ ಆಟವಾಡುವುದರ ಜೊತೆಗೆ ಮಹಿಳಾ ಸೆಕ್ಯುರಿಟಿ ಒಬ್ಬರನ್ನು ಎಳೆದು ಹಾಕಿದೆ..!. ಇದು ಆನೆಯ ತುಂಟಾಟವೇನೋ ಹೌದು. ಸಾವಿರಾರು ಜನರು ಈ ಉತ್ಸವದಲ್ಲಿ ಇರುತ್ತಾರೆ, ಆನೆಯ ತುಂಟಾಟವು ನೂಕುನುಗ್ಗಲಿಗೂ ಕಾರಣವಾಗಬಹುದು, ಇಂತಹ ಸಂದರ್ಭದಲ್ಲಿ ನೀರು ತುಂಬಿರುವ ಹೊರಾಂಗಣದಲ್ಲಿ ಓಡುವುದೂ ಕಷ್ಟ, ಈ ಸಮಯ ನೀರಿಗೆ ಬಿದ್ದರೂ ಅಪಾಯವೇ ಸರಿ. ಪುಣ್ಯ ಸ್ಥಳದಲ್ಲಿ ಇಂತಹ ಅವಘಡಗಳಿಗೆ ಕಾರಣವಾಗುವ ಮೊದಲು ಆಡಳಿತ ಮಂಡಳಿ ಎಚ್ಚರಿಗೆ ವಹಿಸಬೇಕಿದೆ. ಮುಂದಿನ ವರ್ಷದಿಂದ ನೀರಿನ ಆಟಕ್ಕೆ ನಿಯಂತ್ರಣ ಹೇರಬೇಕಿದೆ. ಉತ್ಸವವು ಆಟದ ಸ್ವರೂಪ ಹೋಗುವುದಕ್ಕೆ ಆಡಳಿತ ವ್ಯವಸ್ಥೆ ನಿಯಂತ್ರಣ ಹೇರಬೇಕಿದೆ.

Nirubandi Utsav held after the Champa Shashti Utsav at the Kukke Subrahmanya Temple. In this utsav   Subrahmanya’s elephant ,dragged a women security guard into the water. So caution is needed in such festivals.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆ ಎಚ್ಚರಿಕೆ – ಉಡುಪಿ, ದಕ್ಷಿಣ ಕನ್ನಡ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ, ಗಂಟೆಗೆ 50 ಕಿ.ಮೀ. ವೇಗದ ಗಾಳಿ ಸಾಧ್ಯತೆ

ಮುಂದಿನ 3 ಗಂಟೆಗಳ ಕಾಲ ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ…

10 hours ago

ಯುವಕರ ಮೊದಲ ಆದ್ಯತೆ ಏನಿರಬೇಕು? ರಾಜಕೀಯವಲ್ಲ, ಆರ್ಥಿಕ ಸ್ವಾವಲಂಬನೆ!

ಯುವಕರ ಮೊದಲ ಆದ್ಯತೆ ರಾಜಕೀಯವಲ್ಲ, ಕೌಶಲ್ಯ ಮತ್ತು ಆರ್ಥಿಕ ಸ್ವಾವಲಂಬನೆ ಆಗಿರಬೇಕು ಎಂಬುದು…

3 days ago

ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?

ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…

3 days ago

ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…

3 days ago

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

4 days ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

4 days ago