ಕುಕ್ಕೆ ಸುಬ್ರಹ್ಮಣ್ಯದ ಕುಮಾರಪರ್ವತದ ತುದಿಯಲ್ಲಿ ಕುಮಾರ ಲಿಂಗಕ್ಕೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಸಂಪ್ರದಾಯದಂತೆ ಪೂಜೆ ನೆರವೇರಿಸಿದರು.ದೇಗುಲದ ಆಡಳಿತ ಮಂಡಳಿ ಸೇರಿದಂತೆ ನೂರಾರು ಭಕ್ತರು ಕುಕ್ಕೆಯಿಂದ 18 ಕಿ.ಮೀ. ದೂರವಿರುವ ಎತ್ತರದ ಪರ್ವತ ಏರಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕುಕ್ಕೆ ಸುಬ್ರಹ್ಮಣ್ಯವು ನಾಗಾರಾಧನೆಯ ಪ್ರಮುಖ ಕ್ಷೇತ್ರ ಎನಿಸಿಕೊಂಡಿದೆ, ಜೊತೆಗೆ ಕುಕ್ಕೆಯ ಹಿಂದೆ ಇರುವ ಕುಮಾರಪರ್ವತವೂ ಪ್ರವಾಸಿ ತಾಣವಾಗಿದೆ. ಚಾರಣ ಪ್ರದೇಶವಾಗಿಯೂ ಗಮನ ಸೆಳೆದಿದೆ. ಕೇವಲ ಚಾರಣಕ್ಕೆ ಮಾತ್ರವಲ್ಲದೆ ಪೌರಾಣಿಕ ಹಾಗೂ ಧಾರ್ಮಿಕವಾಗಿಯೂ ಪ್ರಸಿದ್ಧಿ ಪಡೆದಿದೆ. ಕುಕ್ಕೆ ದೇವಸ್ಥಾನಕ್ಕೆ ಮತ್ತು ಕುಮಾರಪರ್ವತಕ್ಕೆ ಪವಿತ್ರ ಸಂಬಂಧವಿದ್ದು, ಪೂರ್ವ ಶಿಷ್ಠ ಸಂಪ್ರದಾಯದ ಪ್ರಕಾರ ನಡೆದ ಕುಮಾರಯಾತ್ರೆಯ ಕೊನೆಯಲ್ಲಿ ಅರ್ಚಕರು ಕುಮಾರಲಿಂಗದ ಮೂಲಕ ಕುಮಾರಪಾದಗಳಿಗೆ ಜಲಾಭಿಷೇಕ, ಸೀಯಾಳ ಅಭಿಷೇಕ ಮಾಡಿದರು.
ಬೆಳಗ್ಗೆ 5.30 ರ ಸಮಯದಲ್ಲಿ ದೇವಳದ ಮುಂಭಾಗದಿಂದ ಕುಮಾರ ಪರ್ವತ ಚಾರಣ ಆರಂಭಿಸಿ 18 ಕಿಮೀ ಯಾತ್ರೆಯ ಮೂಲಕ ಕುಮಾರ ಪರ್ವತ ತಲುಪಿ ಮಧ್ಯಾಹ್ನ ಪೂಜೆಯನ್ನು ನೆರೇವೇರಿಸಲಾಯಿತು.
ಅಸ್ಸಾಂನ ಕ್ಯಾಚರ್ ಜಿಲ್ಲೆಯ ಲಖಿಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ವಶಪಡಿಸಿಕೊಂಡ ಸುಮಾರು…
ಗುಜ್ಜೆ ಕಟ್ಲೇಟ್ ಮಾಡುವ ವಿಧಾನದ ಬಗ್ಗೆ ಗೃಹಿಣಿ ದಿವ್ಯಮಹೇಶ್ ಅವರು ಇಲ್ಲಿ ವಿವರ…
ಪ್ರಯಾಗ್ ರಾಜ್ ತಲಪುವ ವೇಳೆ ಆಗುತ್ತಿರುವ ಸಂತಸದ ಬಗ್ಗೆ ಸುರೇಶ್ಚಂದ್ರ ಅವರು ಬರೆದಿದ್ದಾರೆ…
ಶಿಕ್ಷಣವೆಂದರೆ ಅದು ಹಣ ಕೊಟ್ಟು ಪಡೆಯುವ ವಸ್ತುವಿನಂತೆ ಬಿಕರಿಯಾಗುತ್ತಿದೆ. ಈ ದೃಷ್ಠಿಯಿಂದ ಶಿಕ್ಷಣ…
ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲೆಗಳಲ್ಲಿ…
ಕೃಷಿಕರಿಗೆ ಹವಾಮಾನದ ಬದಲಾವಣೆಯ ಮಾಹಿತಿ ಇರುವುದಿಲ್ಲ. ಇದಕ್ಕಾಗಿ ಡಿಸೀಸ್ ಫಾರ್ಕಾಸ್ಟ್ ಅಂದರೆ ಯಾವ…