ಆಗಾಗ ಭೂಕುಸಿತ-ಪ್ರವಾಹಗಳು ನಡೆಯುತ್ತಿವೆ. ಅದರಲ್ಲೂ ಮಲೆನಾಡು, ಪಶ್ಚಿಮಘಟ್ಟ ಪ್ರದೇಶದ ತಪ್ಪಲು ಪ್ರದೇಶಗಳಲ್ಲಿ ಮಳೆ ಬಂದಾಗ ಭಯದ ವಾತಾವರಣ ಕಂಡುಬಂದಿದೆ. ಈಚೆಗೆ ಸುಳ್ಯದ ಸಂಪಾಜೆ, ಕಲ್ಮಕಾರು ಪ್ರದೇಶದಲ್ಲಿ ತಿಂಗಳಲ್ಲಿ ಎರಡು ಬಾರಿ ಭೂಕುಸಿತ , ಪ್ರವಾಹ ಕಂಡುಬಂದಿದೆ. ಇದೆಕ್ಕೆಲ್ಲಾ ಕಾರಣ ಏನು ಎಂಬುದರ ಬಗ್ಗೆ ಯೋಚಿಸುತ್ತಿದ್ದಾರೆ ಕೃಷಿಕ ಟಿ ಆರ್ ಸುರೇಶ್ಚಂದ್ರ ಕಲ್ಮಡ್ಕ.
ಏಕೆ ಭೂಕುಸಿತವಾಗುತ್ತಿದೆ…?,ಇದೊಂದು ಪ್ರಶ್ನೆ ಎಲ್ಲೆಡೆ ಇದೆ. ಇದಕ್ಕೆ ಕಾರಣ ಸರಳ. ಮರಗಳ್ಳರ ಹಾವಳಿ…ಐನೂರು ಸಾವಿರ ವರ್ಷದ ಬೃಹತ್ ಮರಗಳನ್ನು ಕಡಿದು ಮುಕ್ಕಿ.ಈಗ ಪಾತಾಳಕ್ಕಿಳಿದಿದ್ದ ಅದರ ಬೇರುಗಳು ಕುಸಿದು ಅಲ್ಲಲ್ಲಿ ದೊಡ್ಡ ದೊಡ್ಡ ಗಾತ್ರದ ಹೊಂಡಗಳು ಆಗಿ ಅಲ್ಲೇ ನೀರು ನುಗ್ಗಿ, ಭೂಮಿ ಕುಸಿದು ಜರ್ಜರಿತಾವಾಯ್ತು ಅಷ್ಟೇ. ಎಸ್ಟೇಟ್ ವಿಸ್ತರಣೆ, ಮರಕಳ್ಳತನಗಳೇ ಪ್ರದಾನ ಕಾರಣ.ಸರಳವಾಗಿ ಆಲೋಚಿಸೋಣ..
ಬೇರೆಲ್ಲೂ ನೋಡೋದು ಬೇಡ…ನಮ್ಮ ನಮ್ಮ ಊರಿನ ಕಾಡುಗಳನ್ನೆ ನೋಡಿ ,ಅಲೋಚುಸಿ ,ಅಷ್ಟೇ ಸಾಕು…
ಪಶ್ಚಿಮ ಘಟ್ಟಗಳ ಅವ್ಯಾಹತ ಲೂಟಿ ಸುರುವಾದ್ದೇ ಕೆಟ್ಟ ರಾಜಕಾ….ಗಳ ಕೃಪಾಕಟಾಕ್ಷದಲ್ಲಿ ಮರದ ದಂಧೆ….ಇಂದಿಗೂ ನಡೆಯುತ್ತಿದೆ… ಕುಸಿಯಲೇಬೇಕಿದೆ….ಕುಸಿತಕ್ಕೆ ಆಹ್ವಾನ ಕೊಟ್ಟಾಗಿದೆ….ಇನ್ನು ಉಳಿದಿರೋದು ಕುಸಿತ ಮಾತ್ರ….. ಮಾನವ ದಾಹಕ್ಕೆ ಮಿತಿ ಇದೆಯಾ… ಗಮನಿಸಿ, ನಮ್ಮ ತೋಟದ ಬದಿಯ ತೋಡೋ,ಹೊಳೆಯೋ, ಬರೆಯೋ,ಇನ್ನೇನೋ, ಬದಿಯಲ್ಲಿ ಇದ್ದ ಒಂದು ತೆಂಗಿನ ಮರ ಬಿದ್ದೋ ,ಸತ್ತೋ ಕಡಿದರೆ ಸುಮಾರು ಏಳೆಂಟು ವರ್ಷಗಳಲ್ಲಿ ಅಲ್ಲಿ ಏನಾಗುತ್ತದೆ ಎಂದು…ಅಲ್ಲಿ ಮಣ್ಣು ಸಡಿಲವಾಗಿ…ಕುಸಿಯುತ್ತದೆಯಲ್ಲಾ….ಅದೇ ,ಅದೇ ಕಾಟ…ಮಾನವನ ದಾಹದ ಕಾಟ….ಸಾರ್ವಜನಿಕ ಆಸ್ತಿ ಕಾಡನ್ನೇ ನುಂಗಿ ನೊಣೆದ ದಾಹ….ಬೃಹತ್ ಕಿರಾಲ್ ಭೋಗಿಗಳಂತಹ ಮರಗಳನ್ನು ಕಬ್ಬಿಣದೊಂದಿಗೆ ಜೋಡಿಸಬಹುದು…. ಅದರ ಗಟ್ಟಿತನದಿಂದಾಗಿ…ರೈಲ್ವೆ ಟ್ರಾಕ್ ಮಾಡಲು ಸ್ಲೀಪರ್ ಗಾಗಿ …ನಮ್ಮೂರಿನ ಬಂಟಮಲೆಯ ತುತ್ತತುದಿಗೂ ಆ ಕಾಲದಲ್ಲೇ…ಅಂದರೆ ಸುಮಾರು ಐವತ್ತು ವರ್ಷಗಳ ಹಿಂದೆ ರಸ್ತೆ ಮಾಡಿ ಮರ ಎಳೆಸಿದ್ದಾರಂತೆ….ಆ ಕಬ್ಬಿಣ ಸದೃಶ ,ಗಗನ ಚುಂಬಿ, ನಿತ್ಯ ಹರಿದ್ವರ್ಣದ ಮರ ಬೆಳೆಯಲು ಎಷ್ಟು ವರ್ಷವಾಗಿರಬಹುದು…ಅದರ ಬೇರುಗಳು ಎಷ್ಟು ಆಳಕ್ಕೆ,ವಿಸ್ತಾರಕ್ಕೆ ಇಳಿದಿರಬಹುದು….ನಲ್ವತ್ತು ಐವತ್ತು ವರ್ಷಗಳೇ ಬೇಕು ಅದು ಜೀರ್ಣವಾಗಲು….ಅಂದು ಮಾಡಿದ ದಂಧೆ, ಇಂದು ಫಲಮಾಗಿ ಪ್ರತಿಫಲ ಕೊಡುತ್ತಿದೆ…..ಆ ಗಗನಚುಂಬೀ ಮರಗಳ ರೋಧನ ಇಂದು ಮನುಜನ ಮೂರನೇ ತಲೆಮಾರಿಗೆ ಶಾಪವಾಗಿ ತಟ್ಟುತ್ತಿದೆ…..ಅನುಭವಿಸಲೇ ಬೇಕು…. ಕುಸಿತವೇ ಕುಸಿತ…
ಉದಾಹರಣೆಗೆ..
ಹಾಗೇ ಈ ಮರದ ದಂದೆಯೂ…ಒಂದಕ್ಕೆ ಅನುಮತಿ….ಒಂದರ ಮುಂದೆ ಸೊನ್ನೆಗಳ ಸೇರಿಸುತ್ತಾ ಹೋಗಿ ಕಡಿಕಡಿದು….ಖಾಲಿ ಅದ ಪರಿಣಾಮ…. ಅದು ಬಿಟ್ಟು ಕೃಷಿ ಮಾಡಿ ಅಲ್ಲ…. ನಿಜ ಕೃಷಿಯ ಪರಿಣಾಮ ನಗಣ್ಯ ಇರಬಹುದು….. ಹಣದ , ದಾಹದ ಕೃಷಿಯ ಪರಿಣಾಮ… ಕುಸಿತವೇ ಕುಸಿತ…. ಎಲ್ಲೆಲ್ಲೂ ಕುಸಿತ…ಭೂ ಕುಸಿತ, ಮನೆ ಕುಸಿತ, ನೈತಿಕತೆಯ ಕುಸಿತ……. ಇನ್ನು ಈ ರೀತಿಯ ಜನಸಂಖ್ಯೆ ಏರಿದಾಗ ಮತ್ತೊಂದು ಭಾಗ ಕುಸಿಯಲೇ ಬೇಕಲ್ಲಾ…. ಕಣ್ಮುಚ್ಚಿ , ಬಾಯ್ಮುಚ್ಚಿ, ಕುಸಿತ ನೋಡ್ತಾ ನೊಡ್ತಾ ಕುಸಿಯೋಣ…. ಟೊಳ್ಳು ಟೊಳ್ಳು ಸುಳ್ಳರ ಕೂಪದ ಜಗದೊಳಗೆ ಕುಸಿತವೇ ಅಂತಿಮ…. ಟುಸ್ಸಾ…
ಬರಹ :
ಟಿ ಆರ್ ಸುರೇಶ್ಚಂದ್ರ , ಕಲ್ಮಡ್ಕ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel