ಕೂದಲಿಗೆ ಬಳಸುವ ಎಣ್ಣೆಯ ಪ್ರಯೋಜನ

December 16, 2025
7:22 AM

ಚಳಿಗಾಲ ಎಂದರೆ ಒಂದು ರೀತಿಯಲ್ಲಿ ಕಿರಿಕಿರಿ. ವಯಸ್ಸಾದವರಂತೆ ಚರ್ಮ ಸುಕ್ಕು ಕಟ್ಟುವುದು, ಆರೋಗ್ಯದಲ್ಲಿ ಕಿರಿಕಿರಿ. ತಲೆ ನೋವು ಆದೇಷ್ಟೋ ಹೇಳಿಕೊಳ್ಳಲಾಗದಷ್ಟು ತೊಂದರೆಯನ್ನು ಅನುಭವಿಸುತ್ತೇವೆ. ಆದರಲ್ಲೂ ಹೆಣ್ಣುಮಕ್ಕಳು ಮುಖದಲ್ಲಾಗುವ ಬದಲಾವಣೆಯಿಂದ ಪಾರ್ಲರ್ ಮೊರೆ ಹೋಗಿ ಹಣ ಖರ್ಚು ಮಾಡುವವರಿದ್ದರೆ. ಮುಖದ ಸಮಸ್ಯೆ ಮಾತ್ರವಲ್ಲ ಈ ಚಳಿಗಾಲದಲ್ಲಿ ಕೂದಲಿನ ಸಮಸ್ಯೆಯು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೂದಲು ಉದುರುವುದು ಕಾಣಿಸಿಕೊಂಡಾಗ ಎಲ್ಲರಿಗೂ ಹೆದರಿಕೆಯಾಗಿ ಹಣ ಖರ್ಚು ಮಾಡಿ ಬೇರೆ ಬೇರೆ ಎಣ್ಣೆಯನ್ನು ಪ್ರಯತ್ನಿಸುತ್ತಾರೆ.

ಯಾವುದಾದರಲ್ಲೂ ಫಲ ನೀಡದೇ ಇದ್ದಾಗ ಸುಮ್ಮನಾಗುತ್ತಾರೆ. ಆದರೆ ಚಳಿಗಾಲದಲ್ಲಿ ನಾವು ಬಳಸುವ ಎಣ್ಣೆಯು ಯಾವರೀತಿ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ತಿಳಿದುಕೊಂಡರೆ, ಕೂದಲು ಉದುರುವುದನ್ನು ತಡೆಯಬಹುದು.

  • ಕ್ಯಾಸ್ಟರ್ ಎಣ್ಣೆ: ಇದು ರಿಸಿನೋಲಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಕೂದಲಿನ ಬೆಳವಣಿಗೆಗೆ ಅತ್ಯಂತ ಪ್ರಯೋಜನಕಾರಿ ಮತ್ತು ಕೂದಲನ್ನು ದಪ್ಪವಾಗಿಸುತ್ತದೆ.
  • ತೆಂಗಿನ ಎಣ್ಣೆ: ಇದು ಕೂದಲನ್ನು ಆಳವಾಗಿ ಪೋಷಸುತ್ತದೆ, ತೇವಗೊಳಿಸುತ್ತದೆ ಮತ್ತು ಪ್ರೋಟೀನ್ ನಷ್ಟವನ್ನು ತಡೆಯುತ್ತದೆ.
  • ಸಾಸಿವೆ ಎಣ್ಣೆ: ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ಕೂದಲು ಕಿರುಚೀಲಗಳನ್ನು ಬಲಪಡಿಸುತ್ತದೆ ಮತ್ತು ಹೊಸ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
  • ಕರಿಬೇವು ಎಣ್ಣೆ: ಇದು ಕೂದಲು ಉದುರುವಿಕೆಯನ್ನು ತಡೆಯುತ್ತದೆ ಮತ್ತು ಆಕಾಲಿಕ ಬೂದುಬಣ್ಣವನ್ನು ಕಡಿಮೆ ಮಾಡುತ್ತದೆ.
  • ಕಲೋಂಜಿ ಬೀಜಗಳು: ಇದು ಶಿಲೀಂಧ್ರನಾಶಕ ಮತ್ತು ಬ್ಯಾಕ್ಟಿರಿಯಾ ವಿರೋಧಿ ಗುಣಳನ್ನು ಹೊಂದಿದೆ. ಇದು ನೆತ್ತಿಯ ಸೋಂಕುಗಳನ್ನು ದೂರವಿಡುತ್ತದೆ.
  • ನೆಲ್ಲಿಕಾಯಿ: ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃಧ್ಧವಾಗಿರುವ ಆಮ್ಲಾ ಕೂದಲನ್ನು ಕಪ್ಪ ಬಲವಾದ ಮತ್ತು ಹೊಳೆಯುವಂತೆ ಮಾಡುತ್ತದೆ.
  • ಮೆಂತ್ಯ ಬೀಜಗಳು: ಪ್ರೋಟೀನ್ ಮತ್ತು ನಿಕೋಟಿನಿಕ್ ಆಮ್ಲದಲ್ಲಿ ಸಮೃದ್ಧವಾಗಿರುವ ಮೆಂತ್ಯವು ಕೂದಲನ್ನು ಬಲಪಡಿಸುತ್ತದೆ ಮತ್ತು ತಲೆಹೊಟ್ಟು ನಿವಾರಿಸುತ್ತದೆ.
  • ಈರುಳ್ಳಿ: ಗಂಧಕದಲ್ಲಿ ಸಮೃದ್ಧವಾಗಿರುವ ಈರುಳ್ಳಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಕೂದಲು ಕಿರುಚೀಲಗಳ್ನು ಪುನರುಜ್ಜೀವನಗೊಳಿಸುತ್ತದೆ.
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ
August 30, 2026
10:38 PM
by: ದ ರೂರಲ್ ಮಿರರ್.ಕಾಂ
ಮಳೆ ಕೊರತೆ ನೀಗಿಸಲು ಕರ್ನಾಟಕದಲ್ಲಿ ಮೋಡ ಬಿತ್ತನೆ
August 30, 2026
10:18 PM
by: ದ ರೂರಲ್ ಮಿರರ್.ಕಾಂ
ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ
August 30, 2026
10:09 PM
by: ದ ರೂರಲ್ ಮಿರರ್.ಕಾಂ
ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?
August 30, 2026
11:59 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror