Advertisement
ಸುದ್ದಿಗಳು

ಚಪ್ಪಲಿ ಬಿಡಿ, ಬರಿಗಾಲಲ್ಲಿ ನಡೆಯಿರಿ | ಬರಿಗಾಲ ನಡಿಗೆಯಿಂದ ವೃದ್ಧಿಯಾಗುತ್ತೆ ಆರೋಗ್ಯ…! |

Share

ವಾರಕ್ಕೆ ಒಮ್ಮೆಯಾದರೂ ಒಂದು ಕಿ.ಮೀ ದೂರ ಚಪ್ಪಲಿ ಇಲ್ಲದೆ ನಡೆದರೆ ಆರೋಗ್ಯ ಹೆಚ್ಚುತ್ತದೆ. ದೇಹದಲ್ಲಿ ರಕ್ತ ಸಂಚಾರ ಸರಾಗವಾಗುತ್ತದೆ ಹಾಗೂ ಆಕ್ಯುಪ್ರೆಶರ್‌ ಸಾಧ್ಯವಾಗುತ್ತದೆ ಎನ್ನುವುದು  ವರದಿ. ಇದಕ್ಕಾಗಿ ವಾರಕ್ಕೆ ಒಮ್ಮೆಯಾದರೂ ಒಂದು ಕಿ.ಮೀ ದೂರ ಚಪ್ಪಲಿ ಇಲ್ಲದೆ ನಡೆಯುವ ಪ್ರಯತ್ನ ಮಾಡಿದರೆ ಉತ್ತಮ ಎನ್ನುವುದು  ಇಲ್ಲಿ ನೀಡಿರುವ ಸಂದೇಶ.

Advertisement

ಮನುಷ್ಯನ ಪಾದಗಳಲ್ಲಿ ಅನೇಕ ನರಗಳ ತುದಿ ಇರುತ್ತದೆ. ಹೆಚ್ಚು ಹೊತ್ತು ಪಾದರಕ್ಷೆಗಳನ್ನು ಬಳಸುವುದರಿಂದ ಸೂಕ್ಷ್ಮವಾದ ಈ ನರಗಳು ಸಂವೇದನೆಯನ್ನು ಕಳೆದುಕೊಳ್ಳುತ್ತವೆ. ಚಪ್ಪಲಿ ಇಲ್ಲದಂತೆ ನಡೆಯುವುದರಿಂದ ಈ ನರಗಳು ಆಕ್ಟೀವ್ ಆಗಿ ಇರುತ್ತದೆ.

ಚಪ್ಪಲಿ ಇಲ್ಲದೆ ನಡೆಯುವುದರಿಂದ  ದೇಹದ ಭಂಗಿ ಸೂಕ್ತ ರೀತಿಯಲ್ಲಿರುತ್ತದೆ. ಹೊಟ್ಟೆಯ ಮೇಲೆ ಒತ್ತಡ ಉಂಟಾಗಿ, ಜೀರ್ಣಕ್ರಿಯೆ ಸೂಕ್ತ ರೀತಿಯಲ್ಲಿ ನಡೆಯುತ್ತದೆ. ಚಪ್ಪಲಿ ಇಲ್ಲದಂತೆ ನಡೆಯುವುದರಿಂದ, ಮರಳು, ಚಿಕ್ಕ ಚಿಕ್ಕ ಕಲ್ಲುಗಳು ಮೃದುವಾಗಿ ಚುಚ್ಚಿಕೊಳ್ಳುವುದರಿಂದ, ನಿಮ್ಮ ರಕ್ತದ ಒತ್ತಡ ನಿಯಂತ್ರಣದಲ್ಲಿರುತ್ತದೆ. ಹೊಸ ಸ್ಪರ್ಶವನ್ನು ಪಾದಗಳು ಪಡೆಯುವುದರಿಂದ ಮೈಂಡ್ ರಿಲ್ಯಾಕ್ಸ್ ಆಗುತ್ತದೆ.ರಕ್ತ ಸಂಚಲನೆ ವ್ಯವಸ್ಥೆ ಕ್ರಿಯೆ ಉತ್ತಮಗೊಳ್ಳುತ್ತದೆ.  ಸಹನೆ ಹೆಚ್ಚುತ್ತದೆ.

ಇದಕ್ಕಾಗಿ ಎಲ್ಲೆಡೆ ಅಲ್ಲದಿದ್ದರೂ, ಕಚೇರಿಯಲ್ಲಿ, ಮನೆಯಲ್ಲಿ ಚಪ್ಪಲಿ ಇಲ್ಲದಂತೆ ನಡೆಯುವ ಅಭ್ಯಾಸ ಮಾಡಿದರೆ ಉತ್ತಮ ಎನ್ನುವುದು  ವರದಿ. ಸಮೀಕ್ಷೆ ಪ್ರಕಾರ ಯಾರು ಪ್ರತಿ ವಾರ ಕನಿಷ್ಠ 2 ಗಂಟೆ ಚಪ್ಪಲಿ ಇಲ್ಲದೆ ನಡೆಯುತ್ತಾರೋ, ಅಂತಹವರಲ್ಲಿ ಹೆಚ್ಚಿನವರಿಗಿಂತ ಆರೋಗ್ಯವಾಗಿ ಮತ್ತು ಕಾಯಿಲೆ ಬರದಂತೆ ಇರುತ್ತಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ರಾಜ್ಯದಲ್ಲಿ ಬಿಸಿಲು ಬಿಸಿ ತೀವ್ರ : ಮೈಸೂರಿನಲ್ಲಿ ಸನ್ ಸ್ಟ್ರೋಕ್ ವಾರ್ಡ್ ಆರಂಭಿಸಿದ ಆಸ್ಪತ್ರೆ

ತಾಪಮಾನ ಏರಿಕೆಯಿಂದ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ 30 ಹಾಸಿಗೆಗಳ ಸನ್ ಸ್ಟ್ರೋಕ್ ವಾರ್ಡ್…

7 hours ago

ರೈತರು ಇಂಧನದಾತರಾಗಬೇಕು – ಭೂಮಿ ಉಳಿಸಿ ಸಮ್ಮೇಳನದಲ್ಲಿ ಸಂದೇಶ

ಭೂಮಿ ಉಳಿಸಿ ಸಮ್ಮೇಳನದಲ್ಲಿ ನಿತಿನ್ ಗಡ್ಕರಿ, ರೈತರು ಇಂಧನ ಉತ್ಪಾದನೆಗೆ ಕೈಜೋಡಿಸಿದರೆ ಮಾಲಿನ್ಯ…

7 hours ago

ರೈತರ ಆದಾಯ ಹೆಚ್ಚಿಸಲು ಸಮಗ್ರ ಕೃಷಿ ಮಾದರಿ ಅಗತ್ಯ

ರೈತರಿಗೆ ಸರಳ ಹಣಕಾಸು ವ್ಯವಸ್ಥೆ ಅಗತ್ಯವಿದ್ದು, ಸಮಗ್ರ ಕೃಷಿ ಮಾದರಿಯಿಂದ ಆದಾಯ ಹೆಚ್ಚಿಸಬಹುದು…

7 hours ago

ಹವಾಮಾನ ವರದಿ | 23-04-2026 | ಏಪ್ರಿಲ್ 25 ರಿಂದ ಮಳೆಯ ಸಾಧ್ಯತೆ ಹೆಚ್ಚು

ರಾಜ್ಯದಲ್ಲಿ ಬಿಸಿಲು ಮುಂದುವರಿದರೂ, ಏಪ್ರಿಲ್ 25ರಿಂದ ಮಳೆಯ ಚಟುವಟಿಕೆ ಹೆಚ್ಚಾಗುವ ಸೂಚನೆ ಇದೆ.…

8 hours ago

ಹವಾಮಾನ ವರದಿ | 22-04-2026 | ಎ.25ರಿಂದ ಮತ್ತೆ ಮಳೆ – ಯಾವ ಭಾಗಕ್ಕೆ ಏನು ಮುನ್ಸೂಚನೆ?

ರಾಜ್ಯದಲ್ಲಿ ಮುಂದಿನ ಎರಡು ದಿನ ಮಳೆಯ ಪ್ರಮಾಣ ಕಡಿಮೆ ಇರಲಿದ್ದು, ಏಪ್ರಿಲ್ 25ರಿಂದ…

1 day ago

ಹವಾಮಾನ ವರದಿ | 21-04-2026 | ಕರಾವಳಿ-ಮಲೆನಾಡಿನಲ್ಲಿ ಮಳೆ ಜೋರಾಗಲಿದೆ, ಉತ್ತರ ಒಳನಾಡಿಗೂ ಗುಡುಗು ಮಳೆ..!

ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಮುಂದುವರಿಯಲಿದ್ದು, ಉತ್ತರ ಒಳನಾಡಿನಲ್ಲಿ ಏಪ್ರಿಲ್ 25ರವರೆಗೆ…

2 days ago