ಬನ್ನೇರುಘಟ್ಟದಲ್ಲಿ ಚಿರತೆಗಳಿಗಾಗಿ ತಾಣ ನಿರ್ಮಾಣ

January 10, 2022
10:59 PM

ಮೊದಲ ಚಿರತೆ ಸಫಾರಿ ಶೀಘ್ರದಲ್ಲೇ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 50 ಎಕರೆ ಪ್ರದೇಶದಲ್ಲಿ ಬರಲಿದೆ. ಬನ್ನೇರುಘಟ್ಟವು ಯಾವುದೇ ಮೃಗಾಲಯದಲ್ಲಿ ಅತಿ ಹೆಚ್ಚು ಚಿರತೆಗಳನ್ನು ಹೊಂದಿದೆ ಮತ್ತು ಸಫಾರಿಗೆ ಲಭ್ಯವಿರುವ ಸ್ಥಳವನ್ನು ಬಳಸಿಕೊಳ್ಳಲು ಆಡಳಿತವು ವ್ಯಾಪಾಕವಾಗಿ ಕಾರ್ಯನಿರ್ವಹಿಸುತ್ತಿದೆ.

Advertisement

ಚಿರತೆ ಸಫಾರಿಗಾಗಿ ಮೀಸಲಿಟ್ಟ ಪ್ರದೇಶವು ಸ್ಲಾತ್ ಬೇರ್ ಸಫಾರಿ ಮತ್ತು ಪಾರುಗಾಣಿಕಾ ಕೇಂದ್ರಕ್ಕಿಂತ ಬಿನ್ನವಾಗಿದೆ. ಮಹಾರಾಷ್ಟ್ರದ ಬಾಳಾಸಾಹೇಬ್ ಠಾಕ್ರೆ ಗೊರೆವಾಡ ಅಂತರಾಷ್ಟ್ರೀಯ ಝೂಲಾಜಿಕಲ್ ಪಾರ್ಕ್ ನಲ್ಲಿ ಚಿರತೆಗಳು ಹೇಗೆ ನೆಲೆಸಿವೆ ಎಂಬುದನ್ನು ಅಧ್ಯಯನ ಮಾಡಲು ಬನ್ನೇರುಘಟ್ಟದಿಂದ ಒಂದು ತಂಡವನ್ನು ಮಹಾರಾಷ್ಟ್ರಕ್ಕೆ ಕಳುಹಿಸಲಾಗಿದೆ.

ನಾವು ಕೇವಲ ಬೇಲಿ ಮತ್ತು ಗೋಡೆಗಳ ಎತ್ತರವನ್ನು ಹೆಚ್ಚಿಸಿ ಆಳವಾದ ಕಂಕಗಳನ್ನು ರಚಿಸುತ್ತಿಲ್ಲ, ನಾವು ಚಿರತೆಗಳಿಗೆ ರೇಡಿಯೋ ಕಾಲರ್ ಮಾಡುವ ಕೆಲಸವನ್ನೂ ಮಾಡುತ್ತಿದ್ದೇವೆ.ಇದರಿಂದ ಒಂದು ಚಿರತೆಯಾದರೂ ತಪ್ಪಿಸಿಕೊಂಡರೂ, ಟ್ರ‍್ಯಾಕ್ ಮಾಡುವುದು ಸುಲಭ. 15 ದಿನಗಳ ಪ್ರಯೋಗ ಅವಧಿಯನ್ನು ಸಹ ಅಧ್ಯಯನ ಮಾಡಲು ಯೋಜಿಸಲಾಗಿದೆ. ಪ್ರಾಣಿಗಳ ವರ್ತನೆ, ಜೀಪು ಮತ್ತು ಬಸ್ ಸಂಚಾರಕ್ಕೆ ಅವು ಹೇಗೆ ಪ್ರತಿಕ್ರಿಯಿಸುತ್ತದೆ, ಸುತ್ತಮುತ್ತಲಿನ ಜನರ ಉಪಸ್ಥಿತಿಯನ್ನು ನೋಡಿ, ಸಿಂಹ ಮತ್ತು ಹುಲಿ ಸಫಾರಿ ಇರುವಾಗ, ಚಿರತೆಗಳ ವೈಶಿಷ್ಟ್ಯವು ವಿಭಿನ್ನವಾಗಿರುತ್ತದೆ. ಆದ್ದರಿಂದ ಎಚ್ಚರಿಕೆ ವಹಿಸಬೇಕು ಎಂದು ಬಿಬಿಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ಬನ್ನೇರುಘಟ್ಟದಲ್ಲಿ 39 ಚಿರತೆಗಳು ಇವೆ. ಚಿರತೆಗಳು ಚಾಣಾಕ್ಷ ಮತ್ತು ನಿರ್ವಹಿಸಲು ತುಂಬಾ ಕಷ್ಟ. ಚಿರತೆಗಳು ಸಫಾರಿಗೆ ಹೋಗುವಾಗ ನಾಗರಿಕರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಮಾರ್ಗಗಳು, ಚಿರತೆಗಳು ದೂರಸರಿಯುವ ಮತ್ತು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕದ ಮೃಗಾಲಯ ಪ್ರಾಧಿಕಾರದ ಅಧಿಕಾರಿ ತಿಳಿಸಿದ್ದಾರೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಜಮ್ಮು- ಕಾಶ್ಮೀರ | ಪ್ರವಾಸಿಗರ ಮೇಲೆ ಉಗ್ರರ ದಾಳಿ | ಉಗ್ರರ ದಾಳಿಗೆ ಕನ್ನಡಿಗ ಸೇರಿ 20 ಕ್ಕೂ ಹೆಚ್ಚು ಜನರು ಬಲಿ
April 22, 2025
9:35 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 22.04.2025 | ಅಲ್ಲಲ್ಲಿ ಸಂಜೆ ಗುಡುಗು ಸಹಿತ ಮಳೆ | ಎ.26ರಿಂದ ಮಳೆ ಹೆಚ್ಚಾಗುವ ನಿರೀಕ್ಷೆ
April 22, 2025
5:50 PM
by: ಸಾಯಿಶೇಖರ್ ಕರಿಕಳ
ಭಾರತದ ತೋಟಗಾರಿಕಾ ಹಣ್ಣಿನ ಬೆಳೆಗಳತ್ತ ಚಿತ್ತ | ಜಾಗತಿಕ ಮಾರುಕಟ್ಟೆಗೆ ಭಾರತೀಯ ತಾಜಾ ಹಣ್ಣುಗಳ ಪರಿಚಯ |
April 22, 2025
7:18 AM
by: ದ ರೂರಲ್ ಮಿರರ್.ಕಾಂ
ಮಕ್ಕಳಿಗೆ ಪರಿಸರದ ಬಗ್ಗೆ ಕಾಳಜಿ ಕುರಿತು ಹೆಚ್ಚು ತಿಳುವಳಿಕೆ ನೀಡಬೇಕಾದ ಅಗತ್ಯವಿದೆ
April 22, 2025
6:51 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group