ಸುದ್ದಿಗಳು

ಬನ್ನೇರುಘಟ್ಟದಲ್ಲಿ ಚಿರತೆಗಳಿಗಾಗಿ ತಾಣ ನಿರ್ಮಾಣ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮೊದಲ ಚಿರತೆ ಸಫಾರಿ ಶೀಘ್ರದಲ್ಲೇ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 50 ಎಕರೆ ಪ್ರದೇಶದಲ್ಲಿ ಬರಲಿದೆ. ಬನ್ನೇರುಘಟ್ಟವು ಯಾವುದೇ ಮೃಗಾಲಯದಲ್ಲಿ ಅತಿ ಹೆಚ್ಚು ಚಿರತೆಗಳನ್ನು ಹೊಂದಿದೆ ಮತ್ತು ಸಫಾರಿಗೆ ಲಭ್ಯವಿರುವ ಸ್ಥಳವನ್ನು ಬಳಸಿಕೊಳ್ಳಲು ಆಡಳಿತವು ವ್ಯಾಪಾಕವಾಗಿ ಕಾರ್ಯನಿರ್ವಹಿಸುತ್ತಿದೆ.

Advertisement

ಚಿರತೆ ಸಫಾರಿಗಾಗಿ ಮೀಸಲಿಟ್ಟ ಪ್ರದೇಶವು ಸ್ಲಾತ್ ಬೇರ್ ಸಫಾರಿ ಮತ್ತು ಪಾರುಗಾಣಿಕಾ ಕೇಂದ್ರಕ್ಕಿಂತ ಬಿನ್ನವಾಗಿದೆ. ಮಹಾರಾಷ್ಟ್ರದ ಬಾಳಾಸಾಹೇಬ್ ಠಾಕ್ರೆ ಗೊರೆವಾಡ ಅಂತರಾಷ್ಟ್ರೀಯ ಝೂಲಾಜಿಕಲ್ ಪಾರ್ಕ್ ನಲ್ಲಿ ಚಿರತೆಗಳು ಹೇಗೆ ನೆಲೆಸಿವೆ ಎಂಬುದನ್ನು ಅಧ್ಯಯನ ಮಾಡಲು ಬನ್ನೇರುಘಟ್ಟದಿಂದ ಒಂದು ತಂಡವನ್ನು ಮಹಾರಾಷ್ಟ್ರಕ್ಕೆ ಕಳುಹಿಸಲಾಗಿದೆ.

ನಾವು ಕೇವಲ ಬೇಲಿ ಮತ್ತು ಗೋಡೆಗಳ ಎತ್ತರವನ್ನು ಹೆಚ್ಚಿಸಿ ಆಳವಾದ ಕಂಕಗಳನ್ನು ರಚಿಸುತ್ತಿಲ್ಲ, ನಾವು ಚಿರತೆಗಳಿಗೆ ರೇಡಿಯೋ ಕಾಲರ್ ಮಾಡುವ ಕೆಲಸವನ್ನೂ ಮಾಡುತ್ತಿದ್ದೇವೆ.ಇದರಿಂದ ಒಂದು ಚಿರತೆಯಾದರೂ ತಪ್ಪಿಸಿಕೊಂಡರೂ, ಟ್ರ‍್ಯಾಕ್ ಮಾಡುವುದು ಸುಲಭ. 15 ದಿನಗಳ ಪ್ರಯೋಗ ಅವಧಿಯನ್ನು ಸಹ ಅಧ್ಯಯನ ಮಾಡಲು ಯೋಜಿಸಲಾಗಿದೆ. ಪ್ರಾಣಿಗಳ ವರ್ತನೆ, ಜೀಪು ಮತ್ತು ಬಸ್ ಸಂಚಾರಕ್ಕೆ ಅವು ಹೇಗೆ ಪ್ರತಿಕ್ರಿಯಿಸುತ್ತದೆ, ಸುತ್ತಮುತ್ತಲಿನ ಜನರ ಉಪಸ್ಥಿತಿಯನ್ನು ನೋಡಿ, ಸಿಂಹ ಮತ್ತು ಹುಲಿ ಸಫಾರಿ ಇರುವಾಗ, ಚಿರತೆಗಳ ವೈಶಿಷ್ಟ್ಯವು ವಿಭಿನ್ನವಾಗಿರುತ್ತದೆ. ಆದ್ದರಿಂದ ಎಚ್ಚರಿಕೆ ವಹಿಸಬೇಕು ಎಂದು ಬಿಬಿಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ಬನ್ನೇರುಘಟ್ಟದಲ್ಲಿ 39 ಚಿರತೆಗಳು ಇವೆ. ಚಿರತೆಗಳು ಚಾಣಾಕ್ಷ ಮತ್ತು ನಿರ್ವಹಿಸಲು ತುಂಬಾ ಕಷ್ಟ. ಚಿರತೆಗಳು ಸಫಾರಿಗೆ ಹೋಗುವಾಗ ನಾಗರಿಕರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಮಾರ್ಗಗಳು, ಚಿರತೆಗಳು ದೂರಸರಿಯುವ ಮತ್ತು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕದ ಮೃಗಾಲಯ ಪ್ರಾಧಿಕಾರದ ಅಧಿಕಾರಿ ತಿಳಿಸಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಅಡಿಕೆ ಧಾರಣೆ ಏರಿಕೆಗೆ ಕಾರಣ ಇದೆ | ಈಗ ಅಡಿಕೆ ಮಾರುಕಟ್ಟೆಗೆ ಅನ್ವಯಿಸುವ ಸಿದ್ಧಾಂತಗಳು ಯಾವುದು..?

ಈ ಬಾರಿ ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತ, ಅಡಿಕೆ ಬೆಳೆ ಕಡಿಮೆ, ಧಾರಣೆ ಏರಿಕೆ…

4 hours ago

2025: ಲಕ್ಷ್ಮೀನಾರಾಯಣ ಯೋಗ | ಈ ರಾಶಿಗೆ ಅದೃಷ್ಟದ ಬಾಗಿಲು ಓಪನ್

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490

4 hours ago

ರೈತರ ಪಂಪ್ ಸೆಟ್ ಗಳಿಗೆ ಹಗಲು ಹೊತ್ತಿನಲ್ಲಿಯೇ ವಿದ್ಯುತ್ ನೀಡಲು ತೀರ್ಮಾನ

ಕುಸುಮ್ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ 20 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್…

12 hours ago

ಹೀಟ್‌ವೇವ್‌ ಸಂಕಷ್ಟದಲ್ಲಿ ತೆಲಂಗಾಣ-ಹೈದರಾಬಾದ್‌ |

ತೆಲಂಗಾಣ ಹಾಗೂ ಹೈದ್ರಾಬಾದ್‌ ಪ್ರದೇಶದಲ್ಲಿ ಹೀಟ್‌ವೇವ್‌ ಪರಿಸ್ಥಿತಿ ಕಂಡುಬಂದಿದೆ. ಹೀಗಾಗಿ ಹೆಚ್ಚುತ್ತಿರುವ ಉಷ್ಣ…

12 hours ago

ಜೀವನದಿ ಕಾವೇರಿ ಸಾಕ್ಷ್ಯಚಿತ್ರದ ಟ್ರೇಲರ್ ಬಿಡುಗಡೆ | ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಚಾಲನೆ

ಚಾಮರಾಜನಗರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಅರಣ್ಯ ಇಲಾಖೆ ಹಾಗೂ  ಹೊಳೆಮತ್ತಿ ನೇಚರ್…

20 hours ago

ಹವಾಮಾನ ವರದಿ | 04-05-2025 | ಕೆಲವು ಕಡೆ ಮಳೆ ನಿರೀಕ್ಷೆ | ಮಲೆನಾಡಿನಲ್ಲಿ ಸಾಮಾನ್ಯ ಮಳೆ ಮುಂದುವರಿಯುವ ಲಕ್ಷಣ |

ಘಟ್ಟದ ಕೆಳಗಿನ ಪ್ರದೇಶಗಳ ಒಂದೆರಡು ಕಡೆ ಗುಡುಗು ಸಹಿತ ಸಾಮಾನ್ಯ ಮಳೆಯ ಸಾಧ್ಯತೆಗಳಿವೆ.…

23 hours ago