ಇಡೀ ವಿಶ್ವ ಇಂದು ಹವಾಮಾನ ವೈಪರೀತ್ಯಕ್ಕೆ ಒಳಗಾಗಿದೆ. ಜಗತ್ತನ್ನು ಹವಾಮಾನ ವೈಪರೀತ್ಯದಿಂದ ರಕ್ಷಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಶ್ವ ಹಸಿರು ಜಲಜನಕ ಸಮಾವೇಶ ಉದ್ದೇಶಿಸಿ ವರ್ಚುವಲ್ ಮಾಧ್ಯಮದ ಮೂಲಕ ಪ್ರಧಾನಿ, ಭಾರತ ಹಸಿರು ಇಂಧನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ರಾಷ್ಟ್ರೀಯ ಹಸಿರು ಇಂಧನ ಮಿಷನ್ ಕಾರ್ಯಕ್ರಮ ಜಾರಿಗೊಳಿಸಿದೆ. ಮುಂದಿನ ಪೀಳಿಗೆಗೆ ಸ್ವಾಸ್ಥ್ಯ ಪರಿಸರ ನೀಡುವುದು ನಮ್ಮೆಲ್ಲರ ಗುರುತರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸುಸಜ್ಜಿತ, ಸುಭದ್ರ ಹಸಿರು ಜಲಜನಕ ಬಳಕೆ ನಮ್ಮ ಆದ್ಯತೆಯಾಗಬೇಕು. ಈ ನಿಟ್ಟಿನಲ್ಲಿ ಭಾರತ, ಜಿ-20 ಶೃಂಗಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದ ಸಂದರ್ಭದಲ್ಲಿ ಹಸಿರು ಹೈಡ್ರೋಜನ್ ಪ್ರಾಮುಖ್ಯತೆ ಪ್ರತಿಪಾದಿಸಿತ್ತು. ಹಸಿರು ಇಂಧನ ಬಳಕೆಯಲ್ಲಿ ಜಿ-20 ರಾಷ್ಟ್ರಗಳ ಪಾತ್ರ ಹಿರಿದು ಎಂದರು. ವಿಶ್ವ ಇಂದು ಎದುರಿಸುತ್ತಿರುವ ಹವಾಮಾನ ಬದಲಾವಣೆ ಸವಾಲನ್ನು ಸಮರ್ಥವಾಗಿ ನಿಭಾಯಿಸಬೇಕಾದರೆ, ಜಾಗತಿಕ ಸಮೂಹದ ಒಗ್ಗೂಡುವಿಕೆ ಅಗತ್ಯ. ಹೊಸ ಅಲೋಚನೆಗಳು, ಆವಿಷ್ಕಾರಗಳಿಂದ ಈ ಸಮಸ್ಯೆಯನ್ನು ನಿವಾರಿಸಬಹುದು ಎಂದು ತಿಳಿಸಿದ ನರೇಂದ್ರ ಮೋದಿ ಅವರು, ಇಂದು ನಾವು ತೆಗೆದುಕೊಳ್ಳುವ ನಿರ್ಣಯ, ಮುಂದಿನ ಪೀಳಿಗೆಯ ಮೇಲೆ ಪ್ರಭಾವ ಬೀರಲಿದೆ. ಹಾಗಾಗಿ ಹೊಸ ಕ್ಷೇತ್ರದಲ್ಲಿ ನವ ಚಿಂತನೆಯ ಅಗತ್ಯವಿದೆ ಎಂದು ಹೇಳಿದರು.
ಅಡಿಕೆ ಸಿಪ್ಪೆಯ ರಸದಿಂದ ತಯಾರಿಸಿ ಸೋಪಿಗೆ ಈಗ ಪೇಟೆಂಟ್ ಲಭಿಸಿದೆ. ಪುತ್ತೂರಿನ ಸತ್ವಂ…
ಕೃಷಿಕರಿಗೆ ತಾವು ಕೊಂಡ ಗಿಡ/ತಳಿಗಳ ಮಾಹಿತಿಯನ್ನು ಸುಲಭದಲ್ಲಿ ಪಡೆಯಲನುವಾಗುವ ಕ್ಯೂಆರ್ ಕೋಡ್ ಹಾಗೂ…
ಈಗಿನ ಹವಾಮಾನ ಪರಿಸ್ಥಿಯಲ್ಲಿ ರಾಜ್ಯದಲ್ಲಿ ನಿರ್ದಿಷ್ಟ ಪರಿಸರದಲ್ಲೇ ಮಳೆಯ ಮುನ್ಸೂಚನೆ ನೀಡಿಲು ಸಾಧ್ಯವಾಗುತ್ತಿಲ್ಲ.
ಪಿಎಂ ಸೂರ್ಯಘರ್-ಉಚಿತ ವಿದ್ಯುತ್ ಯೋಜನೆ ದೇಶದಾದ್ಯಂತ ಚಾಲನೆಗೊಂಡಿದೆ. ಈ ಯೋಜನೆಯಡಿ “ಮಾದರಿ ಸೌರ…
ಹಾಲಿನ ದರ ಹೆಚ್ಚಳದ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳೂ…
https://www.youtube.com/watch?v=fe-pas2_28A