Advertisement
Opinion

ಜೀವಕ್ಕೆ ಕುತ್ತು ತರಬಲ್ಲುದು ಮಧುಮೇಹ | ಸಕ್ಕರೆ ಕಾಯಿಲೆ ನಿಯಂತ್ರಣ ನಿಮ್ಮ ಕೈಯಲ್ಲಿದೆ | ಆಯುರ್ವೇದದಲ್ಲಿದೆ ಪರಿಹಾರ

Share

ದೇಹದಲ್ಲಿ ಗ್ಲುಕೋಸ್ #Glucose ಪದಾರ್ಥದ ನಿಯಂತ್ರಣ ವ್ಯವಸ್ಥೆಯು ಸರಿಯಾಗದೆ ಉಂಟಾಗುವ ಒಂದು ಕಾಯಿಲೆಯ ಸ್ಥಿತಿ ಹಾಗೂ ವಂಶ ಪಾರಂಪರ್ಯದಿಂದ ಬರಬಹುದಾದ ಕಾಯಿಲೆ ಮಧುಮೇಹ #Diabetes. ಗ್ಲುಕೋಸ್ ಒಂದು ರೀತಿಯ ಸಕ್ಕರೆಯಾಗಿದ್ದು ಇದನ್ನು ಪ್ರಮುಖವಾಗಿ ಪ್ಯಾಂಕ್ರಿಯಾಸ್ #Pancreas ಅಂಗವು ಉತ್ಪತ್ತಿ ಮಾಡಿ ಇನ್ಸುಲಿನ್ ಎಂಬ ಹಾರ್ಮೋನ್ ಅನ್ನು ನಿಯಂತ್ರಿಸುತ್ತದೆ.

Advertisement
Advertisement
Advertisement
Advertisement

ವಿಧಗಳು (Types):3
1) ಇನ್ಸುಲಿನ್ ಅವಲಂಬಿತ #InsulinDependent – ಮೇದೋಜೀರಕ ಗ್ರಂಥಿ ಇನ್ಸುಲಿನ ಉತ್ಪಾದಿಸಲು ವಿಫಲವಾದಾಗ ದೇಹದಲ್ಲಿ ಸಕ್ಕರೆ ಅಂಶ ಜಾಸ್ತಿಯಾಗಿ ಬರುವಂತದ್ದು
2) Non insulin Dependent- ಇನ್ಸುಲಿನ್ ಗೆ ಸರಿಯಾಗಿ ಪ್ರತಿಕ್ರಿಯೆ ನೀಡದೆ ಇರುವಾಗ ಸಕ್ಕರೆ ಅಂಶ ಹೆಚ್ಚಾಗಿ ಬರುವಂತಹ ಮಧುಮೇಹ. Type 1 & Type 2 ಮಧುಮೇಹ ವನ್ನು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ ಟೈಪ್ 3 ಸಿ ಮಧುಮೇಹ ಅತ್ಯಂತ ಮಾರಕ ರೋಗವಾಗಿದೆ.
3) Type 3 c ಇದರಲ್ಲಿ ಇನ್ಸುಲಿನ್ ಪ್ರಮಾಣ ಕಡಿಮೆಯಾಗಲು ಪ್ರಾರಂಭಿಸುತ್ತದೆ ಅಲ್ಲದೆ ದೇಹದಲ್ಲಿ ಹಾರ್ಮೋನ್ ಗಳ ಜೊತೆಗೆ ಜೀರ್ಣವಾಗುವ ಪ್ರೋಟೀನ್ ಗಳ ಪ್ರಮಾಣವೂ ಕಡಿಮೆ ಆಗುತ್ತದೆ. ಸಿಟಿ ಸ್ಕ್ಯಾನ್ ಅಥವಾ ಎಂಆರ್‌ಐ (CT scan orMRI scan ) ಮೂಲಕ ಇದನ್ನು ಪತ್ತೆ ಹಚ್ಚುತ್ತಾರೆ ಇದರಲ್ಲಿ ಅಲ್ಜ್ಯಮರ್ ಅಥವಾ ಮರೆವು ರೋಗ ಲಕ್ಷಣಗಳು ಪ್ರಮುಖವಾಗಿರುತ್ತದೆ ಅಧಿಕ ತೂಕ ಹೊಂದಿದ್ದು ಕುಟುಂಬದಲ್ಲಿ ಮಧುಮೇಹ ಇದ್ದರೆ ಅಥವಾ ಪಿಸಿಒಎಸ್ (pcos )ಒಳಗಾದವರಲ್ಲಿ ಹಾಗೂ ಖಿನ್ನತೆಗೆ ಒಳಗಾದವರಲ್ಲಿ ಹೆಚ್ಚಾಗಿ ಕಾಣಬಹುದು ಟೈಪ್1 ಹಾಗೂ ಟೈಪ್ 2 ಮಧುಮೇಹಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆದೆ ಹೋದಲ್ಲಿ ಟೈಪ್ ತ್ರಿ ಸಿ ಮಧುಮೇಹ ಬರುವ ಸಾಧ್ಯತೆ ಇದೆ.

Advertisement

ದೈಹಿಕ ವ್ಯಾಯಾಮವಿಲ್ಲದೆ ಇರುವುದರಿಂದ ಹಾಗೂ ಅತಿಯಾದ ಕಾರ್ಬೋಹೈಡ್ರೇಟ್ಸ್ ಸೇವನೆಯಿಂದ ದೇಹದಲ್ಲಿ ಕೊಬ್ಬು ಮತ್ತು ಸಕ್ಕರೆ ಅಂಶ ಹೆಚ್ಚಾಗುತ್ತದೆ.

ಸಾಮಾನ್ಯ ಲಕ್ಷಣಗಳು :
* ಪದೇ ಪದೇ ಮೂತ್ರ ವಿಸರ್ಜನೆ
* ಅತಿ ಬಾಯಾರಿಕೆ
* ಹಸಿವು ಹೆಚ್ಚಾಗುವಿಕೆ
*ತೂಕದಲ್ಲಿ ಹೆಚ್ಚಳ ಅಥವಾ ಅಸಾಮಾನ್ಯ ತೂಕ ಇಳಿಕೆ
* ಅತಿಯಾದ ಆಯಾಸ
* ಪುರುಷರಲ್ಲಿ ಲೈಂಗಿಕ ದೌರ್ಬಲ್ಯತೆ
* ದೃಷ್ಟಿ ಮಂಜಾಗುವಿಕೆ
*ಗಾಯ ಬಹು ಸಮಯದವರೆಗೆ ವಾಸಿಯಾಗದೇ ಇರುವುದು… ಮುಂತಾದವುಗಳು

Advertisement

ಮಧುಮೇಹ ನಿಯಂತ್ರಣ:
– ಮಧುಮೇಹ ನಿಯಂತ್ರಣ ಮಾಡಲು ಆಯುರ್ವೇದದಲ್ಲಿ ಹಲವು ಪರಿಹಾರಗಳಿವೆ. ಮಧುಮೇಹ ರೋಗಿಗಳಿಗೆ ಆಯುರ್ವೇದ ಔಷಧಗಳು ಮತ್ತು ಔಷಧೀಯ ಮೌಲ್ಯಗಳಿಂದ ಸಮೃದ್ಧವಾಗಿರುವ ಆಹಾರ ಪದಾರ್ಥಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ ಹಾಗೂ ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸಿ ಮಧುಮೇಹವನ್ನು ನಿಯಂತ್ರಿಸುತ್ತದೆ
– ಮಧುಮೇಹ ನಿಯಂತ್ರಣದಲ್ಲಿ ಸಹಕಾರಿಯದ ಕೆಲವು ಆಹಾರ ಪದಾರ್ಥಗಳು : ಹಾಗಲಕಾಯಿ, ಮೆಂತ್ಯ ಬೀಜಗಳು, ನೇರಳೆ ಹಣ್ಣು, ನೆಲ್ಲಿಕಾಯಿ, ಅಮೃತಬಳ್ಳಿ, ಬೇವು ಇತ್ಯಾದಿ
– ದಿನನಿತ್ಯ ಅರ್ಧ ಗಂಟೆ ವಾಕಿಂಗ್ ಯೋಗಾಸನ ಪ್ರಾಣಾಯಾಮ ಧ್ಯಾನ ಸರಳ ವ್ಯಾಯಾಮಗಳನ್ನು ಮಾಡುವುದರಿಂದ ನಮ್ಮ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಬಹುದು
ಮಧುಮೇಹವನ್ನು ಸರಿಯಾಗಿ ನಿಯಂತ್ರಿಸದಿದ್ದರೆ ಅನೇಕ ಉಪದ್ರವಗಳು ಕಾಣಿಸಿಕೊಳ್ಳುತ್ತವೆ
– Diabetic retinopathy – ಕಣ್ಣಿನ ತೊಂದರೆ
– Diabetic Neuropathy – ನರಗಳ ತೊಂದರೆ
ಹೀಗೆ ಕಿಡ್ನಿ ಸಮಸ್ಯೆ, ಹೃದಯ ತೊಂದರೆ ಅನೇಕ ಸಮಸ್ಯೆಗಳು ಕಾಣಿಸಬಹುದು. ಆದ ಕಾರಣ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆಯನ್ನು ತೆಗೆದು ಕೊಂಡು ಮಧುಮೇಹ ನಿಯಂತ್ರಣದಲ್ಲಿರಿಸುವು ದು ಉತ್ತಮ …

ಬರಹ :
ಡಾ.ಜ್ಯೋತಿ ಕೆ, ಲಕ್ಷ್ಮೀ ಕ್ಲಿನಿಕ್ ಮಂಗಳೂರು. 94481 68053
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕಾಫಿ ಉತ್ಪಾದನೆಯಲ್ಲಿ ಭಾರತವು  ಏಳನೇ ದೇಶ |

ಭಾರತವು ಕಾಫಿ ಉತ್ಪಾದನೆಯಲ್ಲಿ ಏಳನೇ ಅತಿ ದೊಡ್ಡ ಮತ್ತು ಜಾಗತಿಕವಾಗಿ ಐದನೇ ಅತಿ…

8 hours ago

ತೊಗರಿ ಖರೀದಿಗೆ ನೋಂದಣಿ ಮಾಡಿಸುವಂತೆ ಕಲಬುರ್ಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮನವಿ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಎಫ್.ಎ.ಕ್ಯೂ.…

8 hours ago

ಚಿಕ್ಕಮಗಳೂರು ಕಾಡ್ಗಿಚ್ಚಿನಿಂದ ಕಾಫಿ ತೋಟ, ಅರಣ್ಯ ಪ್ರದೇಶ ನಾಶ | ಡ್ರೋನ್‌ ಮೊರೆ ಹೋಗಿತ್ತಿರುವ ಅರಣ್ಯ ಇಲಾಖೆ |

ಕಳೆದ ಕೆಲವು ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ.…

9 hours ago

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತಾಪಮಾನ ಏರಿಕೆ | ಹವಮಾನ ಇಲಾಖೆ ಮುನ್ಸೂಚನೆ

ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ತಾಪಮಾನ ಏರಿಕೆಯಾಗಲಿದೆ ಎಂದು ಹವಾಮಾನ…

18 hours ago

ಕುಂಭಸ್ನಾನ ಮತ್ತು ವಿಜ್ಞಾನ

ಸ್ನಾನದ ಮೂಲಕವೂ ನದಿಯನ್ನು ಆರಾಧಿಸಬಹುದೆಂಬ ಭಾರತೀಯ ಕಲ್ಪನೆ ನಿಜಕ್ಕೂ ಅದ್ಭುತವಾದುದು ಎಂಬುದಾಗಿ ಎರಿಕ್…

19 hours ago

ಹವಾಮಾನ ವರದಿ | 27-02-2025 | ಮಳೆಯ ಸಾಧ್ಯತೆ ಕ್ಷೀಣ | ಒಣ ಹವೆ ಮುಂದುವರಿಕೆ | ಕೆಲವು ಕಡೆ ತುಂತುರು ಮಳೆ ನಿರೀಕ್ಷೆ |

ತಾಪಮಾನ ಅಧಿಕವಾಗಿದ್ದರೂ, ರಾತ್ರಿಯ ವೇಳೆ ತಂಪು ವಾತಾವರಣ ಇರುವುದರಿಂದ ಮಳೆಯ ಸಾಧ್ಯತೆ ಕ್ಷೀಣಿಸುತ್ತಿದೆ.

1 day ago