ಭಾರತದ ಹಲವು ಮಹಾನಗರಗಳಲ್ಲಿ ವಾಣಿಜ್ಯ LPG ಸಿಲಿಂಡರ್ಗಳ ಕೊರತೆ ಕಂಡುಬರುತ್ತಿರುವುದು ಹೋಟೆಲ್ ಮತ್ತು ಆಹಾರ ವಿತರಣೆ ಕ್ಷೇತ್ರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹಾಗೂ ಸಾಗಣೆ ಅಡಚಣೆಗಳಿಂದ LPG ಆಮದು ಸರಬರಾಜು ಸರಪಳಿ ಮೇಲೆ ಒತ್ತಡ ಉಂಟಾಗಿ, ಕೆಲವು ನಗರಗಳಲ್ಲಿ ಅಡುಗೆ ಗ್ಯಾಸ್ ಲಭ್ಯತೆ ಕುಸಿದಿರುವ ವರದಿಗಳು ಬರುತ್ತಿವೆ. ಈ ನಡುವೆ ಭಾರತದಲ್ಲಿ LPG ಸರಬರಾಜು ಬಗ್ಗೆ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗೃಹ ಬಳಕೆ LPG ಗೆ ಆದ್ಯತೆ ನೀಡಲು ರಾಜ್ಯಗಳಿಗೆ ಸೂಚನೆ ನೀಡಿದೆ.
ಫೈನಾಶ್ಸಿಯಲ್ ಎಕ್ಸ್ಪ್ರೆಸ್ ವರದಿ ಪ್ರಕಾರ, ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಸಣ್ಣ ಹೋಟೆಲ್ಗಳು, ಧಾಬಾಗಳು, ಸೇರಿದಂತೆ ಸಣ್ಣ ಅಂಗಡಿಗಳು ಗ್ಯಾಸ್ ಸಿಗದೇ ಮೆನು ಕಡಿಮೆ ಮಾಡುವುದು ಅಥವಾ ತಾತ್ಕಾಲಿಕವಾಗಿ ಕಾರ್ಯಾಚರಣೆ ಕಡಿಮೆ ಮಾಡುವ ಪರಿಸ್ಥಿತಿ ಎದುರಿಸುತ್ತಿವೆ. ಕೆಲವೆಡೆ ವಾಣಿಜ್ಯ ಸಿಲಿಂಡರ್ ಗಳ ಬೆಲೆ ಹೆಚ್ಚಾಗಿ ಬ್ಲಾಕ್ ಮಾರ್ಕೆಟ್ ಚಟುವಟಿಕೆಗಳ ಆತಂಕವೂ ವ್ಯಕ್ತವಾಗಿದೆ ಎಂದು ವರದಿ ಮಾಡಿದೆ.
ಸರ್ಕಾರ ಗೃಹ ಬಳಕೆದಾರರಿಗೆ LPG ಸರಬರಾಜಿಗೆ ಆದ್ಯತೆ ನೀಡಲು ತೈಲ ಕಂಪನಿಗಳಿಗೆ ಸೂಚಿಸಿರುವ ಹಿನ್ನೆಲೆ, ವಾಣಿಜ್ಯ ಬಳಕೆದಾರರಿಗೆ ಸಿಲಿಂಡರ್ ಸರಬರಾಜು ಕಡಿಮೆಯಾಗಿರುವುದಾಗಿ ಉದ್ಯಮ ವಲಯ ಹೇಳುತ್ತಿದೆ. ಇದರಿಂದ ಆಹಾರ ಸರಬರಾಜು ಇಳಿಕೆ ಹಾಗೂ ಇತರ ಆದಾಯಕ್ಕೂ ಪರಿಣಾಮ ಬೀರುತ್ತಿರುವುದು ಗಮನಾರ್ಹ.
ಇನ್ನೊಂದೆಡೆ ಭಯದಿಂದ ಅನಗತ್ಯ ಬುಕಿಂಗ್ ಹಾಗೂ ಸರಬರಾಜು ಒತ್ತಡದಿಂದ ಕೆಲವು ಪ್ರದೇಶಗಳಲ್ಲಿ ಗೃಹಬಳಕೆಯ ಅನಿಲ ವಿತರಣೆಗಳಲ್ಲಿ ತಡವಾಗುತ್ತಿರುವ ವರದಿಗಳೂ ಲಭ್ಯವಾಗಿವೆ. ಆದರೆ ದೊಡ್ಡ ಮಟ್ಟದ ಗೃಹ ಬಳಕೆ LPG ಕೊರತೆ ಇನ್ನೂ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಜ್ಞರ ಪ್ರಕಾರ ತೈಲ ಸಾಗಣೆ ಅಡಚಣೆ ಮುಂದುವರಿದರೆ LPG ಮಾರುಕಟ್ಟೆಯಲ್ಲಿ ಇನ್ನಷ್ಟು ಒತ್ತಡ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಹೋಟೆಲ್, ಕ್ಯಾಟರಿಂಗ್, ಸಣ್ಣ ಆಹಾರ ಉದ್ಯಮಗಳು ಪರ್ಯಾಯ ಅಡುಗೆ ವಿಧಾನಗಳತ್ತ ತಿರುಗುವ ಅನಿವಾರ್ಯತೆ ಎದುರಾಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
Commercial LPG shortages in major Indian cities are affecting restaurants, cloud kitchens, and food delivery operations due to supply disruptions linked to West Asian tensions. While the government is prioritizing domestic LPG consumers, delays and localized panic booking have been reported in some regions.
ರೋಸ್ಟೆಡ್ ಅಡಿಕೆಯ ಆಮದು ನೀತಿಯನ್ನು 2025ರ ಏಪ್ರಿಲ್ನಲ್ಲಿ ಬದಲಾಯಿಸಲಾಗಿದ್ದು, ಕೆ.ಜಿಗೆ ₹351 ಅಥವಾ…
ತೆಂಗು ಬೆಳೆಯನ್ನು PMFBY ಅಥವಾ RWBCIS ಅಡಿಯಲ್ಲಿ ವಿಮಾ ವ್ಯಾಪ್ತಿಗೆ ತರುವ ಅಧಿಕಾರ…
ಕರಾವಳಿ ಜಿಲ್ಲೆಗಳಲ್ಲಿ ಮಳೆಯ ನಡುವೆ ಹೆಚ್ಚಿನ ಬಿಡುವಿನ ಅವಧಿಯೊಂದಿಗೆ ಬಿಸಿಲು–ಮೋಡದ ವಾತಾವರಣ ಮುಂದುವರಿಯಲಿದ್ದು,…
ಬಿ.ಎಸ್ಸಿ. ಕೃಷಿ ಪದವೀಧರರಿಗೆ ಸರ್ಕಾರಿ ಉದ್ಯೋಗ, ಖಾಸಗಿ ಕಂಪನಿಗಳು, ಬ್ಯಾಂಕಿಂಗ್, ಸಂಶೋಧನೆ ಮತ್ತು…
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2026-27ನೇ ಸಾಲಿನ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ಅಡಿಕೆ…
ಮಧ್ಯಪ್ರದೇಶದಲ್ಲಿ ಹೊಸ ತಿರುವಿಕೆ ಪರಿಣಾಮ: ಕರಾವಳಿ, ಮಲೆನಾಡಿನಲ್ಲಿ ಮಳೆ ಚುರುಕು ಸಾಧ್ಯತೆ ಕರ್ನಾಟಕದ…