ಶಿವಂ ಶಿವೋಹಂ… ಶಿವಮಯವಾದ ಈ ದಿನ ಶಿವರಾತ್ರಿ. ಶಿವನಿಗೆ ಪ್ರಿಯವಾದ ದಿನ ಶಿವರಾತ್ರಿ.
Advertisement
ಮಾಘ ಮಾಸದ ಶುಕ್ಲ ಪಕ್ಷದ ಚತುರ್ದಶಿಯ ದಿನವೇ ಮಹಾಶಿವರಾತ್ರಿ. 14 ಇಂದ್ರಿಯಗಳನ್ನು ಜಯಿಸಿದವನು ಶಿವ. 14 ಲೋಕಗಳಿಗೆ ಒಡೆಯನಾಗಿರುವ ಪರಮೇಶ್ವರನಿಗೆ ಚತುರ್ದಶಿ ಯಂದು ಪೂಜಿಸುವುದು ಬಹು ವಿಶೇಷವಾಗಿರುತ್ತದೆ. ಶಿವರಾತ್ರಿ ಯಂದು ಶಿವಪಾರ್ವತಿಯರು ಜತೆಗೂಡಿ ಪ್ರಪಂಚ ಪರ್ಯಟನೆ ಮಾಡುತ್ತಾರೆ. ತನ್ನನ್ನು ಯಾರು ಭಕ್ತಿಯಿಂದ ಪೂಜಿಸುತ್ತಾರೋ ಶಿವ ಅವರಿಗೊಲಿಯುತ್ತಾನೆ, ಇಷ್ಟಗಳನ್ನು ಈಡೇರಿಸುತ್ತಾನೆ, ತಪ್ಪುಗಳನ್ನು ಮನ್ನಿಸುತ್ತಾನೆ , ಪಾಪಗಳಿಂದ ಮುಕ್ತನಾಗಿಸುತ್ತಾನೆ, ಎಂಬುದು ಭಕ್ತರ ನಂಬುಗೆ. ನಿರಾಭರಣನಾದ ಶಿವನಿಗೆ ಬಿಲ್ವಪತ್ರೆ, ಎಕ್ಕದ ಹೂಗಳೆಂದರೆ ಬಲು ಪ್ರಿಯ.
ಸಾಮಾನ್ಯವಾಗಿ ಹಬ್ಬಗಳೆಂದರೆ ನೆನಪಾಗುವುದು ಭಕ್ಷ್ಯ ಭೋಜನಗಳು. ಆದರೆ ಶಿವರಾತ್ರಿ ಇದಕ್ಕೆ ಅಪವಾದ. ಈ ದಿನ ಉಪವಾಸಕ್ಕೇ ಪ್ರಾಮುಖ್ಯತೆ. ನಮ್ಮಲ್ಲಿ ಶಿವರಾತ್ರಿಯ ದಿನ ರಾತ್ರಿ ನೈವೇದ್ಯಕ್ಕಾಗಿ ಬಾಳೆಕಾಯಿ ದೋಸೆ ಅದೂ ಉಪ್ಪು ಹಾಕದೆ ಮಾಡಲಾಗುತ್ತದೆ. ಜೊತೆಗೆ ಬಾಳೆಹಣ್ಣು ರಸಾಯನ. ನಮ್ಮನೆಯಲ್ಲಿ ಬೆಳೆದ ಕದಳಿ ಬಾಳೆಕಾಯಿಯ ದೋಸೆ ಮಾಡುತ್ತೇವೆ. ಬಾಳೆಕಾಯಿಯ ಸಿಪ್ಪೆ ತೆಗೆದು ನುಣ್ಣಗೆ ಬೀಸಬೇಕು. ದೋಸೆ ಕಾವಲಿಯಲ್ಲಿ ಬರಿ ಕೈಯಿಂದ ಬೀಸಿದ ಬಾಳೆಕಾಯಿ ಹಿಟ್ಟಿನ ತೆಳ್ಳನೆಯ ದೋಸೆ ಮಾಡಲಾಗುತ್ತದೆ. ಅದರೊಂದಿಗೆ ಬಾಳೆಹಣ್ಣು ರಸಾಯನ . ಕೆಲವೆಡೆ ಬೇಯಿಸಿದ ಬಾಳೆಕಾಯಿಯ ಸೇಮಿಗೆಯೂ ಮಾಡುವ ಪರಿಪಾಠವಿದೆ.
ಅನನ್ಯ ಭಟ್ ಹಾಡಿರುವ ಹಾಡು….
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement