ಮಂಡೆಕೋಲು ಗ್ರಾಮದ ಮಡಿವಾಳಮೂಲೆ ಶ್ರೀ ಮಹಾದೇವಿ ಭಜನಾ ಮಂದಿರದಲ್ಲಿ ನವರಾತ್ರಿ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಲಾಯಿತು. ಸೆ.26 ರಿಂದ ನವರಾತ್ರಿ ಉತ್ಸವ ಆರಂಭಗೊಳ್ಳಲಿದೆ.
ನವರಾತ್ರಿ ಮೊದಲನೇ ದಿನ ಬೆಳಿಗ್ಗೆ ಗಣಹೋಮ, ರಾತ್ರಿ ಗಂಟೆ 8 ರಿಂದ 9 ರ ತನಕ ಎಂಟು ದಿನ ಪೂಜೆ ನಡೆಯಲಿದೆ. ಒಂಬತ್ತನೇ ದಿನ ರಾತ್ರಿ ಗಂಟೆ 8 ಕ್ಕೆ ಶ್ರೀ ಮಹಾದೇವಿಯ ದೊಂದಿ ಸೇವೆ ಕಾರ್ಯಕ್ರಮ ನಂತರ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಗುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಂದಿರದ ಪ್ರಧಾನ ಅರ್ಚಕರು ಬಾಲಕೃಷ್ಣ ಮಡಿವಾಳಮೂಲೆ, ಪ್ರಧಾನ ದೇವಿ ಪಾತ್ರಿ ಕುಶಲ ಮಡಿವಾಳಮೂಲೆ, ಆಡಳಿತ ಸಮಿತಿ ಗೌರವಧ್ಯಕ್ಷರು ಪೊಡಿಯ ಮಡಿವಾಳಮೂಲೆ, ಅಧ್ಯಕ್ಷರು ಸುನಿಲ್ ಶಿವಾಜಿನಗರ, ಕಾರ್ಯದರ್ಶಿ ಪ್ರಶಾಂತ್ ಮಡಿವಾಳಮೂಲೆ, ಕೋಶಾಧಿಕಾರಿ ಹರಿಶ್ಚಂದ್ರ ಮಡಿವಾಳಮೂಲೆ, ವಸಂತ, ಚರಣ್ ಕುಮಾರ್, ಸುಂದರ, ವಿಶ್ವನಾಥ, ರಮೇಶ್, ಉತ್ತಯ್ಯ, ಕಮಲಾಕ್ಷ, ಅನಿಲ್, ಮಿಥುನ್, ಹರೀಶ, ಬಾಲಕೃಷ್ಣ, ಶಂಕರ, ದಿನೇಶ್, ಅಶೋಕ್, ಸಂಜೀವ, ಚಂದ್ರಶೇಖರ, ಪ್ರದೀಪ್,ಅಶ್ವಥ್, ಸುರೇಶ್, ಜಯಾನಂದ,ಆನಂದ ಕೆ, ಶುಭಶ್ಚಂದ್ರ, ಸಂದೇಶ್, ಸಂದೀಪ್ ಸಭೆಯಲ್ಲಿ ಉಪಸ್ಥಿತರಿದ್ದರು.
2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…
ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…
ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…
ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…
ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…
ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…