ಸುಳ್ಯದ ಕಾಳುಮಜಲು ನಿವಾಸಿ ಮಾನಸ ಭಾರದ್ವಾಜ್ ಅವರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೊ. ಈಶ್ವರ.ಪಿ ಅವರ ಮಾರ್ಗದರ್ಶನದಲ್ಲಿ “A study on savings and investment behaviour of working women in Dakshina Kannada district”” ಮಹಾಪ್ರಬಂಧವನ್ನು ಸಿದ್ಧಪಡಿಸಿದ್ದರು.
ಅರಂಬೂರು ಭಾರದ್ವಾಜ ಆಶ್ರಮದ ಬಂಗಾರು ಭಾರದ್ವಾಜ್ ಮತ್ತು ಸೌಮ್ಯ ದಂಪತಿಯ ಪುತ್ರಿಯಾಗಿರುವ ಮಾನಸ, ಮುಳ್ಯ ಕಾಳುಮಜಲು ವಿಕ್ರಮ ಸೋಮಯಾಗಿ ಅವರ ಪತ್ನಿ. ಸ್ನೇಹ ಹಾಗೂ ರೋಟರಿ ಶಾಲೆಗಳಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿ, ಪಿಯುಸಿ, ಪದವಿ ಶಿಕ್ಷಣವನ್ನು ನೆಹರು ಮೆಮೋರಿಯಲ್ ಕಾಲೇಜು, ಹಾಗೂ ಸ್ನಾತಕೋತ್ತರ ಪದವಿಯನ್ನು ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟದಿಂದ ಪಡೆದಿರುತ್ತಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel