ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಅಂದಾಜು 800 ರಿಂದ 900 ಟನ್ ಮಾವು ವಹಿವಾಟು ನಡೆಯುತ್ತಿದೆ. ನಾಳೆ ಮಾವು ಬೆಳೆಗಾರರು ಕರೆ ಕೊಟ್ಟಿರುವ ಬಂದ್ ನಿಂದಾಗಿ ಈಗಾಗಲೇ ಸಂಕಷ್ಟದಲ್ಲಿರುವ ಮಾವು ಬೆಳೆಗಾರರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಮಾವು ಬೆಳೆಗಾರರು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮನವಿ ಮಾಡಿದ್ದಾರೆ.
ಕೋಲಾರದಲ್ಲಿ ಮಾವು ಬೆಳೆಗಾರರಿಗೆ ಈ ಬಾರಿ ನಷ್ಟ ಉಂಟಾಗಿದೆ. ಮಾವಿನ ಹಂಗಾಮಿನ ಆರಂಭದಲ್ಲೇ ಧಾರಣೆ ಕುಸಿತಉಂಟಾಗಿದ್ದು, ಇಳುವರಿ ಕುಸಿತದ ನಡುವೆ ಕಂಗಾಲಾಗಿರುವ ಬೆಳೆಗಾರರಿಗೆ ಈಗ ಧಾರಣೆ ಕುಸಿತವೂ ಸಂಕಷ್ಟ ತಂದಿದೆ. ಹೀಗಾಗಿ ತಕ್ಷಣವೇ ಮಾವಿಗೂ ಬೆಂಬಲ ಬೆಲೆ ಘೋಷಣೆಗೆ ಒತ್ತಾಯ ಕೇಳಿಬಂದಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel