Advertisement
The Rural Mirror ವಾರದ ವಿಶೇಷ

ಶೀಘ್ರದಲ್ಲೇ ಬರಲಿದೆ ಮುಂಗಾರು….?

Share

” ನೆನೆವುದೆನ್ನ ಮನಂ ಮಲೆನಾಡ .. ಮಳೆನಾಡ ವೈಭವಂ “

ಇನ್ನೇನು ಮಳೆಗಾಲ ಬಂದೇ ಬಿಡ್ತು ಅನ್ನುವಷ್ಟು ಹತ್ತಿರದಲ್ಲಿದೆ ಮಾನ್ಸೂನ್. ಸಾಮಾನ್ಯವಾಗಿ ಜೂನ್ 6 ನೈರುತ್ಯ ಮುಂಗಾರು ಕರ್ನಾಟಕ ಕರಾವಳಿ ಪ್ರವೇಶಿಸುವ ವಾಡಿಕೆ ದಿನ. ಕಳೆದ 1976 ರಿಂದ ಅಂದರೆ ಕಳೆದ 46 ವರ್ಷಗಳಲ್ಲಿ ಮೇ ತಿಂಗಳಲ್ಲಿಯೇ ಮಳೆಗಾಲ ಆರಂಭವಾಗಿರುವುದು ಹತ್ತು ಬಾರಿ.. ಈ ಎಲ್ಲ ವರ್ಷಗಳಲ್ಲಿ ಅರಬ್ಬೀಸಮುದ್ರ ದಲ್ಲಿ ಕಂಡು ಬಂದ ಚಂಡಮಾರುತಗಳು ಮುಂಗಾರು ಮಾರುತದ ಮೇಲೆ ಪ್ರಭಾವ ಬೀರಿವೆ. ಈ ಬಾರಿ ಮೇ 09/10 ರ ಸುಮಾರಿಗೆ ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಳ್ಳಬಹುದಾದ ಚಂಡಮಾರುತದ ಪ್ರಭಾವ ದಿಂದ 12 ಯಾ 13 ರ ಸುಮಾರಿಗೆ ಮುಂಗಾರು ಮಾರುತಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಾಮಾನ್ಯವಾಗಿ ಅಂಡಮಾನ್ ಪ್ರವೇಶಿಸಿದ ಮುಂಗಾರು ಇತ್ತ ಕೇರಳ ಪ್ರವೇಶಿಸಲು ಮತ್ತೆ ಹದಿನೈದು ದಿನಗಳ ಕಾಲ ಬೇಕಾಗುತ್ತದೆ. ಎಲ್ಲವೂ ಗಾಳಿಯ ಚಲನೆ, ಬಂಗಾಳಕೊಲ್ಲಿಯ ಚಂಡಮಾರುತ ಅರಬ್ಬೀಸಮುದ್ರ ಪ್ರವೇಶಿಸುವ ಸಾಧ್ಯತೆಯನ್ನು ಹೊಂದಿಕೊಂಡು ವ್ಯತ್ಯಯ ಆಗಬಹುದು. ಮುಂದಿನ ವಾರ ಸ್ಪಷ್ಟ ಚಿತ್ರಣ ಸಿಗಬಹುದು. ಕಳೆದ ಕೆಲದಿನಗಳಿಂದ ಉತ್ತರ ಭಾರತದಲ್ಲಿನ ತಾಪಮಾನ ಸಾಮಾನ್ಯಕ್ಕಿಂತ ಅಧಿಕವಾಗಿರುವುದು ಕೂಡಾ ತಮಿಳುನಾಡು, ಕೇರಳ, ಕರ್ನಾಟಕದ ಅನೇಕ ಕಡೆ ಮಳೆ ಸುರಿಯಲು ಕಾರಣವಾಗಿದೆ. ಮೇ ತಿಂಗಳ ಮಧ್ಯಭಾಗದ ನಂತರ ಉತ್ತರಭಾರತದಲ್ಲಿ ತಾಪಮಾನ ಗರಿಷ್ಟ ಪ್ರಮಾಣ ತಲುಪಿ ಮುಂಗಾರು ಭಾರತೀಯ ಉಪಖಂಡ ಪ್ರವೇಶಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗುವುದು ಸರ್ವೇಸಾಮಾನ್ಯ.

ಆದರೆ ಚಂಡಮಾರುತಗಳು ಮುಂಗಾರು ಪ್ರವೇಶದ ಲೆಕ್ಕಾಚಾರ ಅಡಿಮೇಲು ಮಾಡಿದ ಪ್ರಸಂಗಗಳು ಹಲವಾರು ಇವೆ. ಮುಂಗಾರು ಅವಧಿಪೂರ್ವ ಆರಂಭವಾಗಿ ದುರ್ಬಲವಾಗಿಯೇ ಸಾಗಿದ ಉದಾಹರಣೆಗಳೂ ಇವೆ. ಯಾವುದಕ್ಕೂ ಕೆಲ ದಿನ ಕಾದು ನೋಡೋಣ…ಅಂದ ಹಾಗೆ 1999 ರಲ್ಲಿ ಅತಿ ಬೇಗನೆ ಮೇ 20 ರಂದೇ ಮುಂಗಾರು ದ.ಕ ಪ್ರವೇಶಿಸಿತ್ತು. (1976 ರಿಂದ ಈಚೆಗೆ ಅವಧಿಪೂರ್ವ ಮಳೆಗಾಲ ಆರಂಭವಾದ ದಿನ ಹಾಗೂ ಆ ವರ್ಷ ಬಾಳಿಲದಲ್ಲಿ ದಾಖಲಾದ ಮಳೆಯ ವಿವರವನ್ನು ಕೋಷ್ಟಕದಲ್ಲಿ ಕಾಣಬಹುದು)

# ಪಿ ಜಿ ಎಸ್‌ ಎನ್‌ ಪ್ರಸಾದ್ , ಬಾಳಿಲ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

Published by
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

Recent Posts

ದೇಹ–ಮನಸ್ಸು–ಆತ್ಮದ ಸಮತೋಲನವೇ ನಿಜವಾದ ಆರೋಗ್ಯ: ಆಯುರ್ವೇದದ ಪರಮ ಗುರಿ ಆತ್ಮಜ್ಞಾನ – ರಾಘವೇಶ್ವರ ಶ್ರೀ

ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…

19 hours ago

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

1 day ago

ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…

1 day ago

ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…

1 day ago

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

2 days ago

ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…

2 days ago