Advertisement
The Rural Mirror ವಾರದ ವಿಶೇಷ

ಶೀಘ್ರದಲ್ಲೇ ಬರಲಿದೆ ಮುಂಗಾರು….?

Share

” ನೆನೆವುದೆನ್ನ ಮನಂ ಮಲೆನಾಡ .. ಮಳೆನಾಡ ವೈಭವಂ “

Advertisement
Advertisement

ಇನ್ನೇನು ಮಳೆಗಾಲ ಬಂದೇ ಬಿಡ್ತು ಅನ್ನುವಷ್ಟು ಹತ್ತಿರದಲ್ಲಿದೆ ಮಾನ್ಸೂನ್. ಸಾಮಾನ್ಯವಾಗಿ ಜೂನ್ 6 ನೈರುತ್ಯ ಮುಂಗಾರು ಕರ್ನಾಟಕ ಕರಾವಳಿ ಪ್ರವೇಶಿಸುವ ವಾಡಿಕೆ ದಿನ. ಕಳೆದ 1976 ರಿಂದ ಅಂದರೆ ಕಳೆದ 46 ವರ್ಷಗಳಲ್ಲಿ ಮೇ ತಿಂಗಳಲ್ಲಿಯೇ ಮಳೆಗಾಲ ಆರಂಭವಾಗಿರುವುದು ಹತ್ತು ಬಾರಿ.. ಈ ಎಲ್ಲ ವರ್ಷಗಳಲ್ಲಿ ಅರಬ್ಬೀಸಮುದ್ರ ದಲ್ಲಿ ಕಂಡು ಬಂದ ಚಂಡಮಾರುತಗಳು ಮುಂಗಾರು ಮಾರುತದ ಮೇಲೆ ಪ್ರಭಾವ ಬೀರಿವೆ. ಈ ಬಾರಿ ಮೇ 09/10 ರ ಸುಮಾರಿಗೆ ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಳ್ಳಬಹುದಾದ ಚಂಡಮಾರುತದ ಪ್ರಭಾವ ದಿಂದ 12 ಯಾ 13 ರ ಸುಮಾರಿಗೆ ಮುಂಗಾರು ಮಾರುತಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹವನ್ನು ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

ಸಾಮಾನ್ಯವಾಗಿ ಅಂಡಮಾನ್ ಪ್ರವೇಶಿಸಿದ ಮುಂಗಾರು ಇತ್ತ ಕೇರಳ ಪ್ರವೇಶಿಸಲು ಮತ್ತೆ ಹದಿನೈದು ದಿನಗಳ ಕಾಲ ಬೇಕಾಗುತ್ತದೆ. ಎಲ್ಲವೂ ಗಾಳಿಯ ಚಲನೆ, ಬಂಗಾಳಕೊಲ್ಲಿಯ ಚಂಡಮಾರುತ ಅರಬ್ಬೀಸಮುದ್ರ ಪ್ರವೇಶಿಸುವ ಸಾಧ್ಯತೆಯನ್ನು ಹೊಂದಿಕೊಂಡು ವ್ಯತ್ಯಯ ಆಗಬಹುದು. ಮುಂದಿನ ವಾರ ಸ್ಪಷ್ಟ ಚಿತ್ರಣ ಸಿಗಬಹುದು. ಕಳೆದ ಕೆಲದಿನಗಳಿಂದ ಉತ್ತರ ಭಾರತದಲ್ಲಿನ ತಾಪಮಾನ ಸಾಮಾನ್ಯಕ್ಕಿಂತ ಅಧಿಕವಾಗಿರುವುದು ಕೂಡಾ ತಮಿಳುನಾಡು, ಕೇರಳ, ಕರ್ನಾಟಕದ ಅನೇಕ ಕಡೆ ಮಳೆ ಸುರಿಯಲು ಕಾರಣವಾಗಿದೆ. ಮೇ ತಿಂಗಳ ಮಧ್ಯಭಾಗದ ನಂತರ ಉತ್ತರಭಾರತದಲ್ಲಿ ತಾಪಮಾನ ಗರಿಷ್ಟ ಪ್ರಮಾಣ ತಲುಪಿ ಮುಂಗಾರು ಭಾರತೀಯ ಉಪಖಂಡ ಪ್ರವೇಶಿಸಲು ಅನುಕೂಲಕರ ವಾತಾವರಣ ನಿರ್ಮಾಣವಾಗುವುದು ಸರ್ವೇಸಾಮಾನ್ಯ.

Advertisement

ಆದರೆ ಚಂಡಮಾರುತಗಳು ಮುಂಗಾರು ಪ್ರವೇಶದ ಲೆಕ್ಕಾಚಾರ ಅಡಿಮೇಲು ಮಾಡಿದ ಪ್ರಸಂಗಗಳು ಹಲವಾರು ಇವೆ. ಮುಂಗಾರು ಅವಧಿಪೂರ್ವ ಆರಂಭವಾಗಿ ದುರ್ಬಲವಾಗಿಯೇ ಸಾಗಿದ ಉದಾಹರಣೆಗಳೂ ಇವೆ. ಯಾವುದಕ್ಕೂ ಕೆಲ ದಿನ ಕಾದು ನೋಡೋಣ…ಅಂದ ಹಾಗೆ 1999 ರಲ್ಲಿ ಅತಿ ಬೇಗನೆ ಮೇ 20 ರಂದೇ ಮುಂಗಾರು ದ.ಕ ಪ್ರವೇಶಿಸಿತ್ತು. (1976 ರಿಂದ ಈಚೆಗೆ ಅವಧಿಪೂರ್ವ ಮಳೆಗಾಲ ಆರಂಭವಾದ ದಿನ ಹಾಗೂ ಆ ವರ್ಷ ಬಾಳಿಲದಲ್ಲಿ ದಾಖಲಾದ ಮಳೆಯ ವಿವರವನ್ನು ಕೋಷ್ಟಕದಲ್ಲಿ ಕಾಣಬಹುದು)

Advertisement

# ಪಿ ಜಿ ಎಸ್‌ ಎನ್‌ ಪ್ರಸಾದ್ , ಬಾಳಿಲ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

Published by
ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

Recent Posts

20 ಕೃಷಿ ಉತ್ಪನ್ನಗಳ ರಫ್ತುಗಳಿಗೆ ಉತ್ತೇಜನ ನೀಡುವ ಯೋಜನೆ |

ಬಾಳೆಹಣ್ಣು, ಮಾವು, ಆಲೂಗಡ್ಡೆ ಮತ್ತು ಬೇಬಿ ಕಾರ್ನ್ ಸೇರಿದಂತೆ 20 ಕೃಷಿ ಉತ್ಪನ್ನಗಳ …

8 hours ago

Karnataka Weather | 27-04-2024 | ಮೋಡ- ಬಿಸಿಗಾಳಿ | ಮಳೆ ಸಾಧ್ಯತೆ ಕಡಿಮೆ |

ಈಗಿನಂತೆ ಎಪ್ರಿಲ್ 29 ಹಾಗೂ 30ರಂದು ಉತ್ತರ ಒಳನಾಡು, ದಕ್ಷಿಣ ಕರಾವಳಿ ಹಾಗೂ…

14 hours ago

ಕೋವಿ ಠೇವಣಾತಿ ಪ್ರಕರಣ | ಬೆಳ್ಳಾರೆ ಜಯಪ್ರಸಾದ್ ಜೋಶಿ ಹಾಗೂ ಇತರ 4 ರಿಟ್ ಅರ್ಜಿದಾರರ ಪರ ಹೈಕೋರ್ಟ್ ಆದೇಶ‌ |

ಚುನಾವಣಾ ಸಮಯದಲ್ಲಿ ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು…

15 hours ago

ಮಲೆನಾಡಗಿಡ್ಡ ಉಳಿಸುವ ಆಂದೋಲನಕ್ಕೆ ತೊಡಗುವ ಅನಿವಾರ್ಯತೆ ಇದೆ | ಯಾಕೆ ಗೊತ್ತಾ…?

ದೇಸೀ ಗೋವು ಅದರಲ್ಲೂ ಮಲೆನಾಡು ಗಿಡ್ಡ ತಳಿಯ ಹಸು ಉಳಿಯಬೇಕು, ಅದರ ಉಳಿವು…

2 days ago

ಏರಿದ ತಾಪಮಾನ | ರಾಜ್ಯದಲ್ಲಿ ಮುಂದಿನ 5 ದಿನ ಬೀಸಲಿದೆ ಬಿಸಿಗಾಳಿ ಎಚ್ಚರಿಕೆ..!

ದಿನದಿಂದ ದಿನಕ್ಕೆ ತಾಪಮಾನ(Temperature) ಏರುತ್ತಿದೆ. ಬಿಸಿ ಗಾಳಿ(Heat wave) ಬೀಸುತ್ತಿದೆ. ನೀರಿಗೆ ಅಭಾವ(Water…

2 days ago

ನೆಲ್ಯಾಡಿ | ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕ-ರಕ್ಷಕ ಸಂಘದ ಮಹಾಸಭೆ | ನೂತನ ಪದಾಧಿಕಾರಿಗಳ ನೇಮಕ

ವಿಶ್ವ ವಿದ್ಯಾಲಯ ಕಾಲೇಜು, ನೆಲ್ಯಾಡಿಯ ಶಿಕ್ಷಕ-ರಕ್ಷಕ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ…

2 days ago