Advertisement
ಸುದ್ದಿಗಳು

ಅಣಬೆ ತ್ಯಾಜ್ಯದಿಂದ ಕೋಳಿ ಸಾಯುವ ಪ್ರಮಾಣ ಕಡಿಮೆ ಮಾಡಬಹುದು – ಸಂಶೋಧನಾ ವರದಿ

Share

ಕೋಳಿ ಸಾಕಾಣಿಕೆ ಮಾಡುವವರಿಗೆ ಈಚೆಗೆ ಕೋಳಿಗಳಿಗೆ ನೀಡುವ ಆಹಾರದಲ್ಲಿ ವಿಷಕಾರಿ ಶಿಲೀಂಧ್ರಗಳದೇ ಸಮಸ್ಯೆಯಾಗಿದೆ. ಈ ಶಿಲೀಂದ್ರಗಳು ಕೋಳಿಗಳ ಆರೋಗ್ಯ ಕೆಡಿಸುತ್ತಿದೆ. ಮಾತ್ರವಲ್ಲದೆ, ಅವುಗಳ ಮೊಟ್ಟೆ ಮತ್ತು ಮಾಂಸದ ಗುಣಮಟ್ಟದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತಿದ್ದು. ಇದರಿಂದ ಕೋಳಿ ಸಾಕಾಣಿಕೆ ಮಾಡಲು ರೈತ ಹಿಂದು ಮುಂದು ನೋಡುವಂತಾಗಿದೆ. ಆದರೆ, ಈ ಸಮಸ್ಯೆಗಳಿಗೆ ಈಗ ಒಂದು ಸುಲಭ ಮತ್ತು ನೈಸರ್ಗಿಕ ಪರಿಹಾರವನ್ನು ಉತ್ತರ-ಪಶ್ಚಿಮ ವಿಶ್ವವಿದ್ಯಾಲಯದ ಎಂಎಸ್ಸಿ ಪದವೀಧರೆ ದಿನಿಯೋ ಮಜೋಂಗ್ ಅವರು ಸಂಶೋಧನೆಯ ಮೂಲಕ ಕಂಡುಹಿಡಿದಿದ್ದಾರೆ.

ಸಾಮಾನ್ಯವಾಗಿ ಅಣಬೆ ಬೆಳೆದ ನಂತರ ಉಳಿಯುವ ತ್ಯಾಜ್ಯವನ್ನು ಎಸೆಯದೇ ಕೋಳಿಗಳಿಗೆ ನೀಡುವ ಆಹಾರದಲ್ಲಿ ಶೇ.2 ರಷ್ಟು ಅಣಬೆ ತ್ಯಾಜ್ಯವನ್ನು ಬೆರೆಸಿದರೆ ಸಾಕು. ಇದರಿಂದ ಕೋಳಿಗಳ ಮೊಟ್ಟೆಯ ಗುಣಮಟ್ಟ ಮಾತ್ರವಲ್ಲ ಅವುಗಳ ಆರೋಗ್ಯವು ಸುಧಾರಿಸುತ್ತದೆ. ಆದರೆ ಈ ಅಣಬೆ ತ್ಯಾಜ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸದೆ ಕೇಲವ 2% ರಷ್ಟು ಬಳಸಬೇಕೆಂದು ದಿನಿಯೋ ಮಜೋಂಗ್ ಹೇಳಿದ್ದಾರೆ.

ಆಯಿಸ್ಟರ್ ಅಣಬೆಗಳಲ್ಲಿ ವಿಶೇಷವಾದ ನೈಸರ್ಗಿಕ ಕಿಣ್ವಗಳಿರುತ್ತದೆ. ಇವು ಕೋಳಿ ಆಹಾರದಲ್ಲಿರುವ ಕಠಿಣವಾದ ವಿಷಕಾರಿ ಅಂಶಗಳನ್ನು ಒಡೆಯುವ ಶಕ್ತಿಯನ್ನು ಹೊಂದಿದೆ. ಇವುಗಳನ್ನು ಕೋಳಿಗಳ ಆಹಾರದಲ್ಲಿ ಮಿಶ್ರಣ ಮಾಡಿಕೊಂಡುವುದರಿಂದ ಆದರದಲ್ಲಿರುವ ವಿಷಕಾರಿ ಅಂಶಗಳನ್ನು ನಿಷ್ಟ್ರಿಯಗೊಳಿಸುತ್ತದೆ. ಇದರಿಂದ ಕೋಳಿಗಳು ಸುರಕ್ಷಿತವಾಗಿ ಸಾಯುವ ಪ್ರಮಾಣ ಕಡಿಮೆಯಾಗುತ್ತದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ – ಆಲಿಕಲ್ಲು ಮಳೆಯಿಂದ ರೈತರ ಬೆಳೆ ನಷ್ಟ

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…

2 hours ago

ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!

ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…

19 hours ago

ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಮತ್ತು ನಾಗರಿಕ ಸಂಸ್ಕೃತಿ – ಸಮಾಜದ ನಿಜವಾದ ಅಳತೆ

ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಸಮಾಜದ ನಿಜವಾದ ಸಂಸ್ಕೃತಿಯನ್ನು ತೋರಿಸುತ್ತದೆ. ಸಣ್ಣ ಸಣ್ಣ ಸರಿಯಾದ…

24 hours ago

ಗುಜ್ಜೆ-ಕಡಲೆ ಗಸಿ – ಸರಳ ಪದಾರ್ಥಗಳಿಂದ ಸೊಗಸಾದ ಸಾಂಪ್ರದಾಯಿಕ ಸವಿರುಚಿ!

ಗುಜ್ಜೆ ಮತ್ತು ಕಡಲೆ ಬಳಸಿ ತಯಾರಿಸುವ ಸಾಂಪ್ರದಾಯಿಕ ಗಸಿ ರುಚಿಕರ ಆಹಾರ. ಚಪಾತಿ…

2 days ago

ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ

ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…

2 days ago