ಮಾವಿನಕಟ್ಟೆಯಲ್ಲಿ ನಡೆದ ಯಕ್ಷಗಾನದ ಚರ್ಚೆ ಇದು | ಧಾರ್ಮಿಕ ಕ್ಷೇತ್ರದಲ್ಲೇ ಯಕ್ಷಗಾನಕ್ಕೆ ಅವಮಾನವಾಯ್ತೇ…? | ಮಕ್ಕಳು ಕಟ್ಟಿದ ಗೆಜ್ಜೆ ಅರ್ಧದಲ್ಲೇ ಬಿಚ್ಚಿದರೇ ? ಮೈಕ್‌ ಆಫ್‌ ಮಾಡಿ ಮಂಗಳ ಪದಕ್ಕೂ ಅವಕಾಶ ಸಿಗಲಿಲ್ವೇ ? |

March 21, 2021
10:02 PM

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಮಾವಿನಕಟ್ಟೆಯ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ  ಮಕ್ಕಳ ಯಕ್ಷಗಾನಕ್ಕೆ ಅವಮಾನ ಮಾಡಲಾಯಿತೇ ? ಹೀಗೊಂದು ಚರ್ಚೆ ಈಗ ಆರಂಭವಾಗಿದೆ. ಮಕ್ಕಳು ಯಕ್ಷಗಾನ ನಡೆಸುತ್ತಿದ್ದಾಗ ವೇದಿಕೆಗೆ ಬಂದು ಪ್ರಮುಖರೊಬ್ಬರು ಮೈಕ್‌ ಆಪ್‌ ಮಾಡಿ ಯಕ್ಷಗಾನ ನಿಲ್ಲಿಸುವಂತೆ ಸೂಚಿಸಿದ್ದಾರೆ. ಇದೀಗ ಈ ಪ್ರಕರಣ ಕಲಾರಾಧಕರಲ್ಲಿ  ಅಸಮಾಧಾನ ಹಾಗೂ ಚರ್ಚೆಗೆ ಕಾರಣವಾಗಿದೆ.

Advertisement
Advertisement

ಯಕ್ಷಗಾನ ಎನ್ನುವುದು  ಕನ್ನಡ ನಾಡಿನ ಪ್ರಸಿದ್ಧ ಕಲೆ ಮಾತ್ರವಲ್ಲ ಈ ನಾಡಿನ ಹೆಮ್ಮೆ. ಧಾರ್ಮಿಕ ಹಿನ್ನೆಲೆಯೂ, ಕಲಾರಾಧನೆಯ ದಾರಿಯೂ ಹೌದು. ಈ ನಾಡಿನಲ್ಲಿ  ಕಟೀಲು , ಧರ್ಮಸ್ಥಳ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳ ಹೆಸರಿನಲ್ಲಿಯೇ ಕಲಾರಾಧನೆಯೂ ನಡೆಯುತ್ತದೆ. ಇಂತಹ ಕಲಾರಾಧನೆ ಇಂದು ಪುಟ್ಟ ಪುಟ್ಟ ಮಕ್ಕಳಿಂದಲೂ ನಡೆಯುತ್ತದೆ. ಇಂತಹ ಪುಟ್ಟ ಮಕ್ಕಳಿಂದ ಸುಳ್ಯ ತಾಲೂಕಿನ ಮಾವಿನಕಟ್ಟೆಯ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಯಕ್ಷಗಾನ  ನಡೆದಿತ್ತು, ಆದರೆ ಇಡೀ ಯಕ್ಷಗಾನ ಪೂರ್ತಿಯಾಗುವ ಮುನ್ನವೇ ಮೈಕ್‌ ಆಫ್‌ ಮಾಡಿ ಯಕ್ಷಗಾನ ಅರ್ಧದಲ್ಲೇ ನಿಲ್ಲಿಸುವಂತೆ ಸೂಚಿಸಿದ್ದು  ಹಾಗೂ ಮಂಗಳ ಪದಕ್ಕೂ ಅವಕಾಶ ನೀಡದೇ ಇದ್ದದ್ದು ಈಗ ಚರ್ಚೆಯ ವಿಷಯವಾಗಿದೆ. ಯಾವುದೇ ಯಕ್ಷಗಾನ ಆರಂಭಕ್ಕೆ ಮುನ್ನ ಕಲಾ ದೇವಿಗೆ ಪೂಜೆ ನಡೆಯುತ್ತದೆ, ಅದಾದ  ನಂತರವೇ ವೇದಿಕೆಯ ಮೇಲೆ ಯಕ್ಷಗಾನ ನಡೆಯುತ್ತದೆ, ಕೊನೆಗೆ ಮಂಗಳ ಪದ ಹಾಡಿ ಕಲಾ ದೇವಿಗೆ ಆರತಿಯೂ ನಡೆಯುತ್ತದೆ.  ಆದರೆ ಇಲ್ಲಿ ಅರ್ಧದಲ್ಲಿಯೇ ಯಕ್ಷಗಾನವನ್ನು ಮೈಕ್‌ ಆಫ್‌ ಮಾಡಿ ನಿಲ್ಲಿಸಿದ್ದು ಕಲೆಗೆ ಮಾಡಿರುವ ಅವಮಾನ ಇದಾಗಿದೆ ಎಂದು ಕಲಾರಾಧರು ಅಸಮಾಧಾನ ಹೇಳಿಕೊಂಡಿದ್ದಾರೆ.

ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಮಾವಿನಕಟ್ಟೆಯ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ  ಮಕ್ಕಳ ಯಕ್ಷಗಾನಕ್ಕೆ ಅವಮಾನ ಮಾಡಲಾಯಿತೇ ? ಹೀಗೊಂದು ಚರ್ಚೆ ಈಗ ಆರಂಭವಾಗಿದೆ. ಮಕ್ಕಳು ಯಕ್ಷಗಾನ ನಡೆಸುತ್ತಿದ್ದಾಗ ವೇದಿಕೆಗೆ ಬಂದು ಪ್ರಮುಖರೊಬ್ಬರು ಮೈಕ್‌ ಆಪ್‌ ಮಾಡಿ ಯಕ್ಷಗಾನ ನಿಲ್ಲಿಸುವಂತೆ ಸೂಚಿಸಿದ್ದಾರೆ. ಇದೀಗ ಈ ಪ್ರಕರಣ ಕಲಾರಾಧಕರಲ್ಲಿ  ಅಸಮಾಧಾನ ಹಾಗೂ ಚರ್ಚೆಗೆ ಕಾರಣವಾಗಿದೆ

ಮಾವಿನಕಟ್ಟೆಯ ಉದಯಗಿರಿಯಲ್ಲಿ  ಪ್ರಸಿದ್ಧವಾದ ಒತ್ತೆಕೋಲ ನಡೆಯುತ್ತದೆ. ಸಾಕಷ್ಟು ಕಾರಣಿಕವಾದ ಕ್ಷೇತ್ರವೂ ಇದಾಗಿದೆ, ದೈವದ ಕ್ಷೇತ್ರವೂ ಇದಾಗಿರುವ ಕಾರಣ ಎಚ್ಚರಿಕೆ ನಡೆ ಇಲ್ಲಿ ಇರಬೇಕಾದ್ದು ಹಿಂದೂ ಧರ್ಮದ, ಆಚರಣೆಯಲ್ಲಿ ಪರಂಪರೆಯಿಂದಲೂ ನಡೆದುಕೊಂಡು ಬಂದಿದೆ. ಇಲ್ಲಿನ ಒತ್ತೆಕೋಲದ ಸಂದರ್ಭ ಪ್ರತೀ ವರ್ಷ ವಿವಿಧ ಕಲಾರಾಧನೆ ನಡೆಯುತ್ತದೆ. ಈ ಬಾರಿ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಯಕ್ಷಗಾನ ಕಲಾಕೇಂದ್ರ ಹಾಗೂ ಶ್ರೀ ಶಾರದಾಂಬ ಯಕ್ಷಗಾನ ಅಧ್ಯಯನ ಕೇಂದ್ರ “ಕಲಾ ಕ್ಷೇತ್ರ” ಪಂಜ ಇದರ ವಿದ್ಯಾರ್ಥಿಗಳಿಂದ “ಭಾರ್ಗವ-ರಾಮ” ಯಕ್ಷಗಾನ ಪ್ರಸಂಗ ಹಮ್ಮಿಕೊಳ್ಳಲಾಗಿತ್ತು.ರಾತ್ರಿ 8  ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಮಕ್ಕಳ ಕಾರ್ಯಕ್ರಮ ಇದಾಗಿದ್ದರಿಂದ ತಿಂಗಳುಗಳಿಂದ ಮಕ್ಕಳಿಗೆ ತರಬೇತಿ ನೀಡಲಾಗಿತ್ತು. ಸಹಜವಾಗಿಯೇ ಮಕ್ಕಳು ಉತ್ಸಾಹದಿಂದ ತೊಡಗಿಸಿಕೊಂಡಿದ್ದರು.

ಇಲ್ಲಿ ರಾತ್ರಿ 7 ಗಂಟೆಯಿಂದ ಭಂಡಾರ ತೆಗದು ನಂತರ ಮೇಲೇರಿಗೆ ಅಗ್ನಿಸ್ಪರ್ಶದ ನಂತರ ಯಕ್ಷಗಾನ ಬಯಲಾಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ನಡುವೆ ಸಭಾ ಕಾರ್ಯಕ್ರಮವೂ ಇದ್ದುದರಿಂದ ಯಕ್ಷಗಾನದ ಆರಂಭ ಕೊಂಚ ವಿಳಂಬವಾಗಿತ್ತು. ಸಭಾ ಕಾರ್ಯಕ್ರಮಕ್ಕೆ ಮುನ್ನ ಒಂದು ಪ್ರಸಂಗ ಮುಗಿಸಿದ್ದ ಪುಟಾಣಿಗಳು ಇನ್ನೊಂದು ಪ್ರಸಂಗಕ್ಕೆ ಕಾಯುತ್ತಿದ್ದರು. ಸಭಾ ಕಾರ್ಯಕ್ರಮದ ಬಳಿಕ  3 ಗಂಟೆಯ ಯಕ್ಷಗಾನ ಪ್ರಸಂಗಕ್ಕೆ ಮಕ್ಕಳು ತಯಾರಾಗಿದ್ದರು. ಯಕ್ಷಗಾನ ಆರಂಭವಾದ ಬಳಿಕ ಅರ್ಧದಲ್ಲಿ ಯಕ್ಷಗಾನ ನಿಲ್ಲಿಸಿ ಎಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲಿ  ಯಕ್ಷಗಾನದಂತಹ , ಅದರಲ್ಲೂ ಪುಟಾಣಿಗಳು ಗೆಜ್ಜೆ ಕಟ್ಟಿ ಕುಣಿಯುತ್ತಿದ್ದ ಬಯಲಾಟವನ್ನು ಅರ್ಧದಲ್ಲೇ ನಿಲ್ಲಿಸಿರುವುದು ಈಗ ಚರ್ಚೆಗೆ ಹಾಗೂ ವಿಷಾದಕ್ಕೆ ಕಾರಣವಾದ ಸಂಗತಿಯಾಗಿದೆ.

ಧಾರ್ಮಿಕ ಕಾರ್ಯಕ್ರಮದಲ್ಲಿ ಸಹಜವಾಗಿಯೇ ಧಾರ್ಮಿಕ ಕಾರ್ಯಗಳ ನಡುವೆ ಸಮಯದ ಹೊಂದಾಣಿಕೆಗೆ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯುತ್ತದೆ. ಆದರೆ ಯಕ್ಷಗಾನದಂತಹ ಕಲೆಗಳಿಗೆ ಸಾಕಷ್ಟು ಸಮಯ ಬೇಕಾಗುತ್ತದೆ, ಅದರಲ್ಲೂ ಮಕ್ಕಳ ಮೇಳಗಳಿಗೆ ತಕ್ಷಣವೇ ನಿಲ್ಲಿಸಲು ಸಾಧ್ಯವಿಲ್ಲ. ಅದೂ ಅಲ್ಲದೆ ಧಾರ್ಮಿಕ ಕಾರ್ಯಕ್ರಮಗಳಿಗೆ ತಡೆಯಾಗುವ, ಸಮಸ್ಯೆಯಾಗುವ ಸಂದರ್ಭವಿದ್ದಲ್ಲಿ ಯಕ್ಷಗಾನದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಾರದು, ಹಮ್ಮಿಕೊಂಡರೆ ಸಾಕಷ್ಟು ಸಮಯ ನೀಡಬೇಕು, ಅವಕಾಶ ನೀಡಿ ಕಲೆಗೆ ಅವಮಾನ ಮಾಡಬಾರದು ಎಂದು ಕಲಾಭಿಮಾನಿಗಳು ವಿಷಾದ ವ್ಯಕ್ತಪಡಿಸುತ್ತಾರೆ. ಈ ಹಿಂದೆ ಇದೇ ಕ್ಷೇತ್ರದಲ್ಲಿ ಮೇಳವೊಂದರ ಯಕ್ಷಗಾನ ಬಯಲಾಟ ನಡೆದಾಗಲೂ ಮೇಳದ ಕಲಾವಿದರೂ ಅಸಮಾಧಾನ ತೋಡಿಕೊಂಡಿದ್ದರು ಎಂಬುದು ಕೂಡಾ ಈಗ ಚರ್ಚೆಯಾಗುತ್ತಿದೆ.

Advertisement

 

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 23-06-2025 | ಜೂ.29 ರಿಂದ ಬೆಳೆಗಳಿಗೆ ಔಷಧಿ ಸಿಂಪಡಣೆಗೆ ಅವಕಾಶ ಸಿಗಬಹುದೇ..? | ಜೂನ್ ಕೊನೆಯಲ್ಲಿ ಮುಂಗಾರು ದುರ್ಬಲಗೊಳ್ಳಬಹುದಾ..?
June 23, 2025
1:26 PM
by: ಸಾಯಿಶೇಖರ್ ಕರಿಕಳ
ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ
June 23, 2025
1:18 PM
by: ದ ರೂರಲ್ ಮಿರರ್.ಕಾಂ
ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವಕ್ಕೆ ಆದ್ಯತೆ | ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮುನ್ನುಡಿ
June 23, 2025
12:03 PM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಅಗತ್ಯವಿರುವ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಳ
June 23, 2025
11:40 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group