Advertisement
MIRROR FOCUS

ಫೆ.21 “ಭಾವತೀರ ಯಾನ” ಸಿನಿಮಾ ಬಿಡುಗಡೆ | ಇಬ್ಬರು ಗೆಳೆಯರ ಭಾವಯಾನ | ಮಲೆನಾಡಿನಲ್ಲಿ ನಡೆದಿದೆ ಚಿತ್ರೀಕರಣ |

Share

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಯೂರ್‌ ಅಂಬೆಕಲ್ಲು ಹಾಗೂ ತೇಜಸ್‌ ಕಿರಣ್‌ ಅವರ ಸಿನಿಮಾ ನಿರ್ದೇಶನದ “ಭಾವತೀರ ಯಾನ”  ಸಿನಿಮಾವು ಫೆ.21 ರಂದು ಬಿಡುಗಡೆಯಾಗಲಿದೆ. ಗ್ರಾಮೀಣ ಭಾಗದ ಯುವ ಪ್ರತಿಭೆಗಳು ಹಾಗೂ ಹಿರಿಯ ನಟರೂ ಭಾಗಿಯಾಗಿರುವ ಈ ಚಿತ್ರದ ಬಗ್ಗೆ ನಿರೀಕ್ಷೆಗಳು ಮೂಡಿದೆ.……… ಮುಂದೆ ಓದಿ…….

Advertisement
Advertisement
Advertisement
Advertisement

Advertisement
ಮಯೂರ ಅಂಬೆಕಲ್ಲು ಹಾಗೂ ಅವರ ಸ್ನೇಹಿತ ತೇಜಸ್‌ ಕಿರಣ್‌ ನಿರ್ದೇಶನದ ‘ಭಾವತೀರ ಯಾನ’ ಸಿನಿಮಾ  ಕಿರುಚಿತ್ರ ಮಾಡುವ ಆಲೋಚನೆಯಿಂದ ಆರಂಭವಾದ ಕಥೆ. ಕಿರುಚಿತ್ರವನ್ನು ನೋಡಿದ ಬಳಿಕ ದೊಡ್ಡ ಪರದೆಯ ಮೇಲೆ ಈ ಚಿತ್ರವನ್ನು ತೋರಿಸಬಹುದು ಎಂಬ ಹಿರಿಯರ ಸಲಹೆ ಮೇರಗೆ ಕಥೆಯನ್ನು ವಿಸ್ತರಿಸಿಕೊಂಡು ಬೆಳೆದಿರುವ ಈ ಸಿನಿಮಾವು ಪ್ರೀತಿಯ ವಿಷಯವನ್ನು ಹೊಂದಿದೆ. ಪ್ರೀತಿ ಎಂದರೆ ಹುಡುಗ-ಹುಡುಗಿಯ ನಡುವಿನ ಪ್ರೇಮವೊಂದೇ ಅಲ್ಲ.ವ್ಯಕ್ತಿಯ ಒಳಗಿನ ಭಾವ ಅದು. ಹೀಗಾಗಿ ಈ ಸಿನಿಮಾವು ಚಿಕ್ಕವರಿಂದ ತೊಡಗಿ ಹಿರಿಯರವರೆಗೆ ಜೊತೆಯಲ್ಲಿ ಕುಳಿತು ನೋಡಬಹುದಾದ ಸಿನಿಮಾ. ಈಚೆಗೆ ಬಿಡುಗಡೆಯಾಗಿರುವ ಸಿನಿಮಾಗಳಿಗಿಂತ ವಿಭಿನ್ನವಾಗಿದ್ದು ಇಂದಿನ ಯುವಕ, ಯುವತಿಯರ ಭಾವನೆ, ಪ್ರೀತಿಯ ಹಾಡು ಪಾಡು, ನೋವು ನಲಿವುಗಳನ್ನು ತೆರೆದಿರುವ ಒಬ್ಬ ಹುಡುಗನ ಕಥೆ  ಇರಲಿದೆ. ದಕ್ಷಿಣ ಕನ್ನಡ ಅದರಲ್ಲೂ ಸುಳ್ಯ, ಪುತ್ತೂರು, ಮಂಗಳೂರು ಭಾಗದಲ್ಲಿ ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದ ಹಲವು ಕಡೆ ಚಿತ್ರೀಕರಣ ನಡೆದಿದೆ. ಕೇವಲ 20-25 ದಿನದಲ್ಲಿ ಚಿತ್ರೀಕರಣವನ್ನು ಈ ತಂಡವು ಮುಗಿಸಿದೆ.
ಮಯೂರ್‌ ಅಂಬೆಕಲ್ಲು
ತೇಜಸ್‌ ಕಿರಣ್
ಮಯೂರ್‌ ಅಂಬೆಕಲ್ಲು ಹಾಗೂ ಅವರ ಗೆಳೆಯ ತೇಜಸ್‌ ಕಿರಣ್‌ ಜೊತೆಯಾಗಿ ರಚಿಸಿರುವ ಕಥೆಗೆ ತೇಜಸ್‌ ಕಿರಣ್‌ ಇದರ ನಿರ್ದೇಶನದ ಜತೆಗೆ ನಾಯಕರಾಗಿ ನಟಿಸಿದರೆ, ಮಯೂರ ಅಂಬೇಕಲ್ಲು ನಿರ್ದೇಶನದ ಜತೆಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ.  ಈ ಚಿತ್ರದಲ್ಲಿ ರಮೇಶ್‌ ಭಟ್‌ ಹಾಗೂ ವೀಣಾ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾದಲ್ಲಿ ಆರೋಹಿ ನೈನಾ-ಅನುಷಾ ಕೃಷ್ಣ ನಾಯಕಿಯರು. ಇನ್ನುಳಿದಂತೆ ಕಿರುತೆರೆ ಕಲಾವಿದೆ ಚಂದನಾ ಅನಂತಕೃಷ್ಣ, ವಿದ್ಯಾಮೂರ್ತಿ ಮತ್ತಿತರರು ಸಿನಿಮಾದಲ್ಲಿ ಇದ್ದಾರೆ. ಫೆ.21ಕ್ಕೆ ಬಿಡುಗಡೆಗೆ ಸಜ್ಜಾಗಿರುವ ಭಾವತೀರ ಯಾನ ಸಿನಿಮಾಕ್ಕೆ ಇಬ್ಬರು ಮಯೂರ್‌ ಹಾಗೂ ತೇಜಸ್‌ ಅವರ ಪೋಷಕರಾದ ಶೈಲೇಶ್‌ ಅಂಬೆಕಲ್ಲು ಹಾಗೂ ಲಕ್ಷ್ಮಣ ಬಿಕೆ ನಿರ್ಮಾಣದ ಬಲ ನೀಡಿದ್ದಾರೆ.‌

 

 

Advertisement
ಶೈಲೇಶ್‌ ಅಂಬೆಕಲ್ಲು

“Bhavatheera Yana,” an eagerly anticipated film helmed by directors Mayur Ambekallu and Tejas Kiran from the Sullia taluk of Dakshina Kannada district, is scheduled for release on February 21. This cinematic project has garnered significant attention, primarily due to its unique amalgamation of emerging talents from rural backgrounds alongside seasoned veteran actors. The film stands as a testament to the burgeoning creativity and potential within communities often overlooked by mainstream media. As anticipation builds, “Bhavthira Yana” is expected to offer a refreshing narrative that resonates with diverse audiences, promising both artistic innovation and cultural depth. The collaboration of these young directors with experienced actors is poised to deliver a memorable cinematic experience, further elevating the profile of regional cinema.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ನನಗೆ ಹೇಗೆ ಕೂಡುತ್ತೋ, ಹಾಗೆ ಮಾತ್ರ ನಾನು ಕೃಷಿ ಮಾಡೋದು…

ಸಾಕಷ್ಟು ಜನ ಅಡಿಕೆ‌ ರೈತರು ಕೇವಲ ಹವ್ಯಾಸೀ ಕೃಷಿಕರು ಹೊರತು ವೃತ್ತಿಪರ ಅಲ್ಲವೇ…

19 hours ago

ದೆಹಲಿ ಚುನಾವಣೆ “ರಾಜಕೀಯ ಅಹಂಕಾರ”ಕ್ಕೆ ಉತ್ತರ | ರಚನಾತ್ಮಕ ವಿಪಕ್ಷವಾಗಿ ಕೆಲಸ ಮಾಡಬಹುದೇ ಎಎಪಿ..?

ಒಂದು ಹೋರಾಟದಿಂದ ರಾಜಕೀಯ ಪಕ್ಷವಾಗಿ ವೇಗವಾಗಿ ಬೆಳೆದಿರುವ ಆಮ್‌ ಆದ್ಮಿಪಕ್ಷ ಕೇವಲ 13…

1 day ago

ದುಬೈಯಿಂದ ಅಡಿಕೆ ಕಳ್ಳಸಾಗಾಣಿಕೆ ದಂಧೆ | 1.47 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ | 6 ಮಂದಿ ಬಂಧನ |

ದುಬೈಯಿಂದ ಒಣಖರ್ಜೂರ ಹೆಸರಿನಲ್ಲಿ ಅಡಿಕೆ ಕಳ್ಳಸಾಗಾಣಿಕೆಯ ಮತ್ತೊಂದು ಪ್ರಕರಣವನ್ನು ಡಿಆರ್‌ಐ ಪತ್ತೆ ಮಾಡಿದೆ.26.32…

1 day ago

ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ ಒತ್ತುವರಿ ತೆರವು

ಹಸಿರು ನ್ಯಾಯಾಧೀಕರಣ ಆದೇಶ ಹಾಗೂ ಜಿಲ್ಲಾಧಿಕಾರಿ ಸೂಚನೆಯಂತೆ ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ…

2 days ago

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಕಳಸ ಬಂದ್ |

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ  ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳನ್ನು…

2 days ago

ಗ್ರಾಮೀಣ ಮಹಿಳೆಯರ ಸಶಕ್ತೀಕರಣ, ಡ್ರೋನ್ ದೀದಿ ನೆರವು | ಈವರೆಗೂ 500 ಡ್ರೋನ್ ಗಳ ವಿತರಣೆ

ಭವಿಷ್ಯದಲ್ಲಿ ದೇಶದ 6 ಲಕ್ಷ ಗ್ರಾಮಗಳಿಗೆ ತಲಾ 10 ಡ್ರೋಣ್ ಗಳನ್ನು ವಿತರಿಸುವ…

2 days ago