₹250 ಕೋಟಿ ಅಡಿಕೆ ತೆರಿಗೆ ವಂಚನೆ | ಮೀರತ್‌ನಲ್ಲಿ DGGI ದಾಳಿ, 4 ಮಂದಿ ಬಂಧನ

February 4, 2026
8:16 PM

ಅಡಿಕೆ ವ್ಯಾಪಾರದಲ್ಲಿ ಸಂಭವಿಸಿರುವ ದೊಡ್ಡ ಮಟ್ಟದ ತೆರಿಗೆ ವಂಚನಾ ಪ್ರಕರಣವೊಂದನ್ನು ಕೇಂದ್ರ ಸರಕಾರದ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯ (DGGI) ಪತ್ತೆಹಚ್ಚಿದೆ. ಮೀರತ್ ವಲಯದಲ್ಲಿ ಅಡಿಕೆ ಸಾಗಣೆ ಮತ್ತು ವಿತರಣೆಯ ಹೆಸರಿನಲ್ಲಿ ನಡೆದಿರುವ ₹250 ಕೋಟಿ ಮೊತ್ತದ ಜಿಎಸ್‌ಟಿ ತಪ್ಪಿಸುವ ಜಾಲವನ್ನು ಡಿಜಿಜಿಐ ಅಧಿಕಾರಿಗಳು ಭೇದಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಅಧಿಕಾರಿಗಳ ಪ್ರಕಾರ, ಅಡಿಕೆ ಸಾಗಣೆಗಾಗಿ ನಕಲಿ ದಾಖಲೆಗಳು, ಬೋಗಸ್ ಕಂಪನಿಗಳು, ಅಸಲಿ ಅಲ್ಲದ ಇನ್ವಾಯ್ಸ್‌ಗಳನ್ನು ಬಳಸಿಕೊಂಡು ಜಿಎಸ್‌ಟಿ ತಪ್ಪಿಸುವ ಜಾಲವನ್ನು ಮಾಡಲಾಗಿತ್ತು.  ವ್ಯಾಪಾರ ಜಾಲವು ಹಲವು ಜಿಲ್ಲೆಗಳ ಮೂಲಕ ವಿಸ್ತರಿಸಿಕೊಂಡಿದ್ದು, ಮೀರತ್ ವಲಯ ಪ್ರಮುಖ ಕೇಂದ್ರವಾಗಿತ್ತು ಎಂದು ತಿಳಿದುಬಂದಿದೆ.

ಡಿಜಿಜಿಐ ದಾಳಿ ವೇಳೆ ಮಹತ್ವದ ಸಾಕ್ಷ್ಯ ವಶಪಡಿಸಿಕೊಂಡಿದ್ದು, ಡಿಜಿಜಿಐ ನಡೆಸಿದ ದಾಳಿ ವೇಳೆ ಲೆಕ್ಕಪತ್ರಗಳು, ವ್ಯಾಪಾರ ದಾಖಲೆಗಳು, ಡಿಜಿಟಲ್ ಸಾಕ್ಷ್ಯಗಳು, ಅನುಮಾನಾಸ್ಪದ ವಿತರಣಾ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಜಾಲವು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಕಾರ್ಯನಿರ್ವಹಿಸಿರುವ ಸಾಧ್ಯತೆ ಇರುವುದರಿಂದ ತನಿಖೆಯನ್ನು ವಿಸ್ತರಿಸಲಾಗುತ್ತಿದೆ. ಭಾರತದಾದ್ಯಂತ ಸುಮಾರು ₹5,000 ಕೋಟಿ ಮೌಲ್ಯದ ಅಡಿಕೆಯನ್ನು ಪಾನ್ ಮಸಾಲಾ ತಯಾರಕರಿಗೆ ಸಾಗಿಸಿದೆ ಎಂದು ಆರೋಪಿಸಲಾಗಿದೆ.

ಅಡಿಕೆ ಮಾರುಕಟ್ಟೆ ಮತ್ತು ಕೃಷಿಕರ ಬದುಕಿಗೆ ಅತ್ಯಂತ ಮುಖ್ಯವಾದ ಬೆಳೆ ಅಡಿಕೆ. ಆದರೆ ಇಂತಹ ವಂಚನಾ ಚಟುವಟಿಕೆಗಳು ವ್ಯಾಪಾರದ ನಂಬಿಕೆಗೆ ಧಕ್ಕೆ, ಮಾರುಕಟ್ಟೆಯಲ್ಲಿ ಅಸ್ಥಿರತೆ, ಕೃಷಿಕರ ಆದಾಯಕ್ಕೆ ಪರೋಕ್ಷ ಹೊಡೆತ ಉಂಟು ಮಾಡುತ್ತದೆ ಎಂದು  ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ಪ್ರಕರಣವು ಅಡಿಕೆ ವ್ಯಾಪಾರದಲ್ಲಿ ನಡೆಯುತ್ತಿರುವ ಅಕ್ರಮ ವ್ಯವಹಾರಗಳ ಮೇಲೆ ಬೆಳಕು ಚೆಲ್ಲಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಂಧನಗಳ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ….

ಭಾರತದಲ್ಲಿ 10 ಕ್ಯಾನ್ಸರ್ ಪ್ರಕರಣಗಳಲ್ಲಿ 4 ತಡೆಗಟ್ಟಬಹುದು | WHO–IARC ಅಧ್ಯಯನ ವರದಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ
July 21, 2026
11:55 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ
July 21, 2026
4:32 PM
by: ಸಾಯಿಶೇಖರ್ ಕರಿಕಳ
ಅಡಿಕೆ ರೋಗ ಸಂಕಷ್ಟಕ್ಕೆ ಸಂಸತ್ತಿನಲ್ಲಿ ಧ್ವನಿ : ನಿಯಮ 377ರಡಿ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ
July 20, 2026
10:59 PM
by: ದ ರೂರಲ್ ಮಿರರ್.ಕಾಂ
ದೇಶಾದ್ಯಂತ ಮುಂಗಾರು ಅಬ್ಬರ : ಹಲವು ರಾಜ್ಯಗಳಿಗೆ ಭಾರೀ ಮಳೆ ಎಚ್ಚರಿಕೆ, ಹಿಮಾಲಯ ತಪ್ಪಲಿನಲ್ಲಿ ರೆಡ್ ಅಲರ್ಟ್
July 20, 2026
10:18 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror