ಮ್ಯಾನ್ಮಾರ್ನಿಂದ ಗುವಾಹಟಿಗೆ ಸಾಗಾಟ ಮಾಡಲಾಗುತ್ತಿದ್ದ ಅಡಿಕೆ ಕಳ್ಳಸಾಗಾಣಿಕೆಯನ್ನು ಮೇಘಾಲಯದಲ್ಲಿ ಗಡಿಭದ್ರತಾ ಪಡೆಯು ಪತ್ತೆ ಮಾಡಿದ್ದು. ಸುಮಾರಿ ಒಂದು ಕೋಟಿ ರೂಪಾಯಿ ಮೌಲ್ಯದ ಅಡಿಕೆಯನ್ನು ವಶಕ್ಕೆ ತೆಗೆದುಕೊಂಡು ಇಬ್ಬರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಮೇಘಾಲಯದಲ್ಲಿ ಬಿಎಸ್ಎಫ್ನ 172 ಬೆಟಾಲಿಯನ್ ಕಾರ್ಯಾಚರಣೆ ನಡೆಸಿತು. ಮೇಘಾಲಯ ರಾಜ್ಯದ ಉಮ್ಕಿಯಾಂಗ್ ಪ್ರದೇಶದಿಂದ ಒಂದು ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಸಂಸ್ಕರಿಸಿದ ಅಡಿಕೆಯನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ವಶಪಡಿಸಿಕೊಂಡಿದೆ ಮತ್ತು ಇಬ್ಬರು ಆರೋಪಿಗಳನ್ನು ಬಂಧಿಸಿದೆ. ವಿಚಾರಣೆ ವೇಳೆ ಆರೋಪಿಗಳು ಅಡಿಕೆಯು ಮ್ಯಾನ್ಮಾರ್ನಿಂದ ಬಂದಿದ್ದು, ಗುವಾಹಟಿಗೆ ಕೊಂಡೊಯ್ಯಲಾಗುತ್ತಿತ್ತು ಎಂದು ಹೇಳಿದ್ದಾರೆ.
ಮುಂದುವರಿದ ಮ್ಯಾನ್ಮಾರ್ನಿಂದ ಅಡಿಕೆ ಕಳ್ಳಸಾಗಾಣಿಕೆ | ಮೇಘಾಲಯದಲ್ಲಿ ಒಂದು ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶ | https://t.co/I16NrGKKsl #arecanut #ಅಡಿಕೆ
— theruralmirror (@ruralmirror) February 28, 2023
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel