#Melasma | ಚೆಲುವಿಗೆ ಕುಂದು ತಂದಿದೆಯೇ ಬಂಗು | ಇದಕ್ಕೆ ಆಯುರ್ವೇದದಲ್ಲಿದೆ ಪರಿಹಾರ |

August 18, 2023
1:30 PM
ಚರ್ಮದ ಕೋಶಗಳಲ್ಲಿ ಮೆಲನಿನ್ ಎಂಬ ವರ್ಣಕಾರಕ ಇದೆ. ಇದರಿಂದ ಚರ್ಮಕ್ಕೆ ಬಣ್ಣ ಬರುತ್ತದೆ. ಮೆಲನಿನ್ ಅಧಿಕ ಉತ್ಪಾದನೆ ಆಗುವುದರಿಂದ ಹೈಪರ್ ಪಿಗ್ಮೆಂಟೇಷನ್ ಉಂಟಾಗುತ್ತದೆ. ಈ ಸಮಸ್ಯೆಗೆ ಆಯುರ್ವೇದದಲ್ಲಿ ಪರಿಹಾರ ಇದೆ.

ಬಂಗು #melasma. ಇದನ್ನು ಆಯುರ್ವೇದದಲ್ಲಿ ವ್ಯಂಗ #Vyanga ಎಂದು ಕರೆಯಲಾಗುತ್ತದೆ. ಇದು ಸಾಧಾರಣ ಮಧ್ಯವಯಸ್ಕರಲ್ಲಿ ಮುಖದ ಮೇಲೆ, ಹಣೆ,ಗಲ್ಲ, ಕುತ್ತಿಗೆ ಬೆನ್ನು ಭಾಗದಲ್ಲಿ ಕಾಣಿಸಿಕೊಳ್ಳುವ ಒಂದು ತರದ ಕಪ್ಪು ಕಲೆಯುಳ್ಳ ಚರ್ಮವ್ಯಾಧಿ. ಇದರಲ್ಲಿ ಚರ್ಮ ಕಂದು ಅಥವಾ ಕೆಂಪು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದನ್ನು ಸಾಮಾನ್ಯವಾಗಿ ಬಂಗು ಅಥವಾ ಕರಂಗ ಅಥವಾ ಮೆಲಾಸ್ಮಾ ಎಂದು ಕರೆಯುತ್ತಾರೆ. ಸ್ತ್ರೀಯರಲ್ಲಿ ಅಧಿಕವಾಗಿ ಕಾಣಬಹುದು. ಚರ್ಮದ ಕೋಶಗಳಲ್ಲಿ ಮೆಲನಿನ್ ಎಂಬ ವರ್ಣಕಾರಕ ಇದೆ. ಇದರಿಂದ ಚರ್ಮಕ್ಕೆ ಬಣ್ಣ ಬರುತ್ತದೆ. ಮೆಲನಿನ್ ಅಧಿಕ ಉತ್ಪಾದನೆ ಆಗುವುದರಿಂದ ಹೈಪರ್ ಪಿಗ್ಮೆಂಟೇಷನ್ ಉಂಟಾಗುತ್ತದೆ.

Advertisement
Advertisement

ಇದಕ್ಕೆ ಕಾರಣಗಳೇನು..?:
– ಸುಡುವ ಬಿಸಿಲಿಗೆ ಸತತವಾಗಿ ಚರ್ಮವನ್ನು ಒಡ್ಡುವುದು
– ಹಾರ್ಮೋನ್ ನ ಬದಲಾವಣೆಗಳು (ಹೆರಿಗೆಯ ನಂತರ ಮಹಿಳೆಯರಲ್ಲಿ ಹಾರ್ಮೋನ್ ಬದಲಾವಣೆಯಿಂದ ಸಾಮಾನ್ಯವಾಗಿ ಕಂಡುಬರುತ್ತದೆ )
– ಅನುವಂಶಿಯತೆ
– ಆಹಾರದಲ್ಲಿ ಪೋಷಕಾಂಶಗಳ ಕೊರತೆ . ವಿಟಮಿನ್ E ಮತ್ತು C ಕೊರತೆಯಿಂದಲೂ ಹೈಪರ್ ಪಿಗ್ಮೆಂಟೇಷನ್ ಉಂಟಾಗಬಹುದು.

ಪರಿಹಾರ:
–  ಬಿಸಿಲಿಗೆ ಹೆಚ್ಚು ಹೋಗದೇ ಇರುವುದು
– ವಿಟಮಿನ್ ಸಿ ಜಾಸ್ತಿ ಇರುವ ಕಿತ್ತಳೆ ಹಣ್ಣಿನ ಸೇವನೆ ಹಾಗೂ ವಿಟಮಿನ್ E ಹೇರಳವಾಗಿರುವ ಹಸಿರು ತರಕಾರಿಗಳು, ಗೋಧಿ ರಾಗಿಯ ಅತಿ ಹೆಚ್ಚು ಬಳಕೆ ಮಾಡವುದು
– ಚರ್ಮದ ಕಾಂತಿಯನ್ನು ಹೆಚ್ಚಿಸುವ ಲೋಳೆಸರ, ಅರಸಿನ ಇವುಗಳ ಲೇಪನ
– ನೈಸರ್ಗಿಕವಾಗಿ ರಕ್ತ ಶುದ್ಧ ಮಾಡಲು ಸರಿಯಾದ ಪ್ರಮಾಣದಲ್ಲಿ ನೀರಿನ ಸೇವನೆ.
– ರಾಸಾಯನಿಕ ವಸ್ತುಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡುವಂಥದ್ದು
– ಪ್ರತಿದಿನ ಸೇವಿಸುವ ಆಹಾರದ ಬಗ್ಗೆ ಗಮನ ಹರಿಸಬೇಕು.
– ಉತ್ತಮ ಚರ್ಮದ ರಕ್ಷಣೆಗಾಗಿ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ.

ಬರಹ :
ಡಾ. ಜ್ಯೋತಿ ಕೆ, ಆಯುರ್ವೇದ ತಜ್ಞರು, ಮಂಗಳೂರು, 94481 68053

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಏಕೆ ಕೆಲವು ಹಿಂಡಿ ದನಗಳಿಗೆ ಹಿಡಿಸುವುದಿಲ್ಲ…?
June 19, 2025
9:51 PM
by: ಎ ಪಿ ಸದಾಶಿವ ಮರಿಕೆ
ಮಲೆನಾಡಿನಲ್ಲಿ “ಭಾರಿ” ಮಳೆಯ ದಿನದಲ್ಲಿ ಶಾಲೆಗೆ ರಜೆ ಕೊಡುವರಾರು…!?
June 19, 2025
6:38 AM
by: ಪ್ರಬಂಧ ಅಂಬುತೀರ್ಥ
ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಪರಿಚಯ ಮೂಡಿಸಬೇಕಿದೆ
June 14, 2025
12:11 PM
by: The Rural Mirror ಸುದ್ದಿಜಾಲ
ಪ್ರೋಟಾನ್ ಥೆರಪಿ ಮೂಲಕ ಕ್ಯಾನ್ಸರ್ ಗೆ ಚಿಕಿತ್ಸೆ | ಕಿದ್ವಾಯಿ ಆಸ್ಪತ್ರೆಯಲ್ಲಿ ಸೌಲಭ್ಯ ಜಾರಿಗೆ ಪ್ರಸ್ತಾವನೆ
June 9, 2025
9:24 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group