2025-26ನೇ ಸಾಲಿನ ಹಿಂಗಾರು ಮಾರುಕಟ್ಟೆ ಹಂಗಾಮಿನಲ್ಲಿ ಆರು ಬೆಳೆಗಳಿಗೆ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು(MSP) ಏರಿಕೆ ಮಾಡಿದೆ.ಪ್ರತಿ ಕ್ವಿಂಟಾಲ್ ಗೋಧಿಗೆ 150 ರೂಪಾಯಿ, ಬಾರ್ಲಿಗೆ 130 ರೂಪಾಯಿ, ಬೇಳೆಕಾಳುಗಳಿಗೆ 210 ರೂಪಾಯಿ, ಕುಸುಮೆಗೆ 140 ರೂಪಾಯಿ, ಮಸೂರು ಬೇಳೆಗೆ 275 ರೂಪಾಯಿ ಮತ್ತು ಸಾಸಿವೆಗೆ 300 ರೂಪಾಯಿಯಷ್ಟು ಏರಿಕೆ ಮಾಡಲಾಗಿದೆ.
ಕೇಂದ್ರ ಸಚಿವ ಸಂಪುಟ ಸಭೆ ನಂತರ ಮಾಹಿತಿ ನೀಡಿದ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, ಸರ್ಕಾರದ ಮೂರನೇ ಅವಧಿಯ ಮೊದಲ ಮೂರು ದಿನಗಳಲ್ಲಿ ರೈತರ ಪರ ಅನೇಕ ದೊಡ್ಡ ನಿರ್ಧಾರಗಳನ್ನುತೆಗೆದುಕೊಳ್ಳಲಾಗಿದೆ. ಈ ಪರಿವರ್ತನಾತ್ಮಕ ನಿರ್ಧಾರಗಳಿಂದ ಸಮಸ್ಯೆಗಳು ಕಡಿಮೆಯಾಗಿ ಆದಾಯ ಹೆಚ್ಚಲಿದೆ. ಅಲ್ಲದೆ, ವೈಜ್ಞಾನಿಕ ಮತ್ತು ತಾಂತ್ರಿಕ ನೆರವು ದೊರೆಯಲಿದೆ ಎಂದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel