Advertisement
ಸುದ್ದಿಗಳು

ಉಪ್ಪುಕಳದಲ್ಲಿ ಕೊಚ್ಚಿ ಹೋದ ಕಾಲುಸಂಕ | ಸ್ಥಳಕ್ಕೆ ಸಚಿವ ಅಂಗಾರ ಭೇಟಿ | ಕ್ಷೇತ್ರದಲ್ಲಿ 124 ಸೇತುವೆ ಆಗಿದೆ | ಬಹಿಷ್ಕಾರದಿಂದ ಅಭಿವೃದ್ಧಿ ಆಗಲ್ಲ | ಮಾಧ್ಯಮದವರು ಆದದ್ದೂ ಬರೆಯಲಿ |

Share

ಇಡೀ ಕ್ಷೇತ್ರದಲ್ಲಿ ಇದುವರೆಗೆ 124 ಸೇತುವೆ ಈಗಾಗಲೇ ನಿರ್ಮಾಣ ಮಾಡಲಾಗಿದೆ. ಮುಂದೆಯೂ ಅಭಿವೃದ್ಧಿ ಆಗುತ್ತದೆ. ಜನರು ಗೊಂದಲಕ್ಕೆ ಒಳಗಾಗುವುದು  ಬೇಡ. ಮತ ಬಹಿಷ್ಕಾರ ಮಾಡುವುದರಿಂದ ಅಭಿವೃದ್ಧಿ ಆಗುವುದಿಲ್ಲ. ಉಪ್ಪುಕಳದಲ್ಲಿ ಕೂಡಾ ಸೇತುವೆ ನಿರ್ಮಾಣವಾಗುತ್ತದೆ. ಮಾಧ್ಯಮದವರು ಯಾವುದನ್ನು ಬರೆಯಬೇಕೋ ಅದನ್ನು ಬರೆಯುವುದಿಲ್ಲ, ಆದ ಕೆಲಸ ಹೇಳುವುದಿಲ್ಲ ಹೀಗೆಂದು ಹೇಳಿದವರು ಸಚಿವ ಎಸ್‌ ಅಂಗಾರ.

ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಉಪ್ಪುಕಳದಲ್ಲಿ ಈಚೆಗೆ ಕೊಚ್ಚಿ ಹೋದ ಕಾಲು ಸಂಕದ ಪ್ರದೇಶಕ್ಕೆ ಭೇಟಿ ನೀಡಿ ಜನರೊಂದಿಗೆ ಮಾತನಾಡಿದರು. ಜನರಿಗೆ ಸದಾ ಉತ್ತಮವಾದ ಸೇವೆ ನೀಡುವ ಕೆಲಸ ಈವರೆಗೂ ಮಾಡಲಾಗಿದೆ. ಗ್ರಾಮೀಣ ಭಾಗದಲ್ಲೂ ಜನ ಸರಾಗವಾಗಿ ಹೋಗಿ ಬರುವಂತೆ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ರಸ್ತೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕಡೆಗೆ ಗಮನಹರಿಸುತ್ತಲೇ ಇದ್ದೇವೆ. ಏನೇ ಟೀಕೆಗಳು ಬಂದರೂ ಗೊಂದಕ ಬೇಡ. ಅಪಪ್ರಚಾರ ಮಾಡುವವರು, ಟೀಕೆ ಮಾಡುವವರು ಮಾಡಲಿ. ಕ್ಷೇತ್ರದ ಜನರಿಗೆ ಕೆಲಸ ಮಾಡುವುದೇ ನನ್ನ ಉದ್ದೇಶ ಎಂದು ಅಂಗಾರ ಹೇಳಿದರು.

ಮಾಧ್ಯಮದವರು ಹೇಳುತ್ತಾರೆ, ಆದರೆ ಯಾವುದನ್ನು ಬರೆಯಬೇಕೋ ಅದನ್ನು ಬರೆಯುವುದಿಲ್ಲ ಆದ ಕೆಲಸ ಹೇಳುವುದಿಲ್ಲ.  ಅದೇ ವಾಟ್ಸಪ್‌ ಲಿ ಬರೆಯುವುದಿಲ್ಲ, ಹಾಕುವುದಿಲ್ಲ. ಬಾಳುಗೋಡಿನಲ್ಲಿ 3 ಸೇತುವೆ ಆಗಿದೆ, ಅದನ್ನು ಏಕೆ ಹೇಳುವುದಿಲ್ಲ? ಎಂದು ಪ್ರಶ್ನೆ ಮಾಡಿದ ಅಂಗಾರ ಅವರು  ಅದನ್ನೂ ಹಾಕಿ. ಆಗ ನಮಗೂ ಖುಷಿಯಾಗುತ್ತದೆ,ಇನ್ನೂ ಕೆಲಸ ಮಾಡಬೇಕು ಎಂದು ಆಗುತ್ತದೆ. ರಾಜಕೀಯವಾಗಿ ಮಾತನಾಡಲು ಹೋದರೆ, ಅದೇ ರಾಜಕೀಯವೇ ಆಗುತ್ತದೆ ಎಂದರು.

ಮತದಾನ ಬಹಿಷ್ಕಾರ ಮಾಡಿದರೂ ಅಭಿವೃದ್ಧಿ ಆಗುವುದಿಲ್ಲ. ಈ ಹಿಂದೆ ಪೆರುವಾಜೆ ಗ್ರಾಮದಲ್ಲಿ ಮತದಾನ ಬಹಿಷ್ಕಾರ ಮಾಡಿದ್ದರು. ಆದರೆ ಅಲ್ಲಿ ಒಬ್ಬ ಕಾರ್ಯಕರ್ತ ಮತ ಹಾಕಿದರು. ನಾರಾಯಣ ಎಂಬವರು ಮಾತ್ರಾ ಮತ ಹಾಕಿದರು. ಹೀಗಾಗಿ ಅಲ್ಲಿ ಅಭಿವೃದ್ಧಿ ಆಗಿದೆ.  ಪೆರುವಾಜೆಯು ಮತ ಬಹಿಷ್ಕಾರದಿಂದ ಅಭಿವೃದ್ಧಿ ಆಗಿಲ್ಲ, ಆಗುವುದೂ ಇಲ್ಲ. ಅವರ ಒಬ್ಬರ ಮತದಿಂದ ಅಭಿವೃದ್ಧಿ ಆಗಿದೆ ಎಂದರು. 

ಕ್ಷೇತ್ರದ 76  ಗ್ರಾಮಗಳಲ್ಲಿ ನದಿ ಇಲ್ಲದ ಗ್ರಾಮ ಇಲ್ಲ. ಜನಗಳಿಗೆ ಸರಾಗವಾಗಿ ಹೋಗಬೇಕಾದರೆ ಸೇತುವೆಯೇ ಪ್ರಮುಖ ಕೆಲಸ. ಅದರ ನಡುವೆ ಮುಳುಗು ಸೇತುವೆ ಇದೆ. ಎಲ್ಲಾ ಮುಳುಗು ಸೇತುವೆ ಪಕ್ಕಾ ಸೇತುವೆ ಆಗಿದೆ, ಆಗುತ್ತಲಿದೆ. ಜನ ಸರಾಗವಾಗಿ ಹೋಗಲು ವ್ಯವಸ್ಥೆ ಆಗುತ್ತದೆ.ಅಭಿವೃದ್ಧಿ ಮಾಡಲಾಗುತ್ತದೆ. ಇದುವರೆಗೆ 124 ಸೇತುವೆ ಆಗಿದೆ. ಹೊಸಮಠ, ಶಾಂತಿಮೊಗರು, ಕುಮಾರಧಾರಾದಂತಹ ದೊಡ್ಡ ಸೇತುವೆ ಆಗಿದೆ. ಎಡಮಂಗಲದ ಪಾಲೋಳಿಯಲ್ಲೂ ಸೇತುವೆಯಾಗುತ್ತಿದೆ.  ಈ ಹಿಂದೆ ಕಾಂಗ್ರೆಸ್‌ ಎಲ್ಲೆಲ್ಲಾ ಸೇತುವೆ ಮಾಡಿದೆ, ರಸ್ತೆ ಮಾಡಿದೆ ಎನ್ನುವುದನ್ನು ನೋಡಬೇಕು. ಈಗ ಮತ್ತೆ ಗೊಂದಲ ಮಾಡಿಸುತ್ತಿದೆ. ಜನ ಗೊಂದಲ ಮಾಡಬೇಡಿ, ಕೆಲಸ ನಿರಂತರ ಮಾಡುತ್ತೇವೆ ಎಂದು ಅಂಗಾರ ಹೇಳಿದರು.  ಪ್ರಾಕೃತಿಕ ವಿಕೋಪ, ಕೋವಿಡ್‌ ಸಮಯದಲ್ಲೂ ಸರ್ಕಾರ ಜನ ಹಿತವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಭಾರತದ ಹಸಿರು ಯೋಜನೆಗಳಿಗೆ ಜಪಾನ್‌ನ ಕಾರ್ಬನ್ ಕ್ರೆಡಿಟ್ ಅವಕಾಶ – ರೈತರೂ ಪಡೆಯಬಹುದೇ ಇದರ ಲಾಭ?

ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…

33 minutes ago

ಹಿಮಾಲಯದಲ್ಲಿ ಮತ್ತೊಂದು ಅಪಾಯದ ಎಚ್ಚರಿಕೆ..!

ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…

2 hours ago

ಎಲ್ ನಿನೊ ಮತ್ತಷ್ಟು ಬಲಗೊಳ್ಳುವ ಮುನ್ಸೂಚನೆ..!

2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…

3 hours ago

ಈಶಾನ್ಯದಿಂದ ಜಾರ್ಖಂಡ್‌ವರೆಗೆ ರಬ್ಬರ್‌ ಕೃಷಿಯ ವಿಸ್ತರಣೆ | ಹೊಸ ಪ್ರದೇಶಗಳಲ್ಲಿ ರಬ್ಬರ್‌ ಕೃಷಿ ವಿಸ್ತರಣೆ – ಅಪಾಯವೇ..? ಅವಕಾಶವೇ..?

ನಾಗಾಲ್ಯಾಂಡ್‌ನಲ್ಲಿ ರಬ್ಬರ್‌ ಕೃಷಿ ಸುಮಾರು 29,794 ಹೆಕ್ಟೇರ್‌ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್‌ನಲ್ಲಿ ಸೂಕ್ತ…

15 hours ago

ದಾವಣಗೆರೆಯಲ್ಲಿ ಮಳೆ ಕೊರತೆ – ಮೆಕ್ಕೆಜೋಳ, ರಾಗಿ ಬೆಳೆ ಶೇ.50 ಹಾನಿ ಭೀತಿ

ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…

18 hours ago

ಹವಾಮಾನ ವರದಿ | 05-09-2026 | ಕರಾವಳಿಯಲ್ಲಿ ತೇವಾಂಶ ಇಳಿಕೆ, ಬಳಿಕ ಒಣಹವೆ?

ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…

23 hours ago