ಪುತ್ತೂರು ಪೇಟೆಯಲ್ಲಿ ರಸ್ತೆ ಬದಿ ಸಚಿವರ ಕಾರು ಪಾರ್ಕಿಂಗ್‌ | ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ ಸಾರ್ವಜನಿಕರು….! |

October 21, 2021
11:31 PM

ಪುತ್ತೂರು ನಗರದ ಮಳಿಗೆಯೊಂದರ ಬಳಿ ಜಿಲ್ಲೆಯ ಸಚಿವರೊಬ್ಬರ ಕಾರನ್ನು ಪಾರ್ಕ್ ಮಾಡಿದ ಫೋಟೋ ಇದೀಗ‌  ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ. ಸಚಿವರ ಕಾರು ಈ ರೀತಿ ಪಾರ್ಕ್‌ ಮಾಡಿರುವುದನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ಎಲ್ಲರಿಗೂ ಒಂದೇ ನಿಯಮವಲ್ಲವೇ ಇಲ್ಲಿ ? ಎಂಬುದು ಪ್ರಶ್ನೆಯ ಸಾರಾಂಶ.

Advertisement
Advertisement
Advertisement
Advertisement

ಪುತ್ತೂರು ನಗರದಲ್ಲಿ ವಾಹನಗಳಿಗೆ ಸರಿಯಾದ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ವಾಹನಗಳ ಓಡಾಟ ಹೆಚ್ಚಾದಂತೆ ಪುತ್ತೂರು ಪೇಟೆಯ ರಸ್ತೆಗಳು ಆಗಾಗ ಬ್ಲಾಕ್‌ ಆಗುತ್ತವೆ. ಹೀಗಾದಾಗ ಇಡೀ ಪೇಟೆಯಲ್ಲಿ ಟ್ರಾಫಿಕ್‌ ಜಾಂ ಆಗುತ್ತದೆ.

Advertisement

ಆದರೆ ಸಚಿವರೊಬ್ಬರ ಕಾರನ್ನು ಗುರುವಾರ ಸಂಜೆ  ನಗರದ ಮಳಿಗೆಯೊಂದರ ಎದುರಿನಲ್ಲಿ ಪಾರ್ಕ್‌ ಮಾಡಲಾಗಿತ್ತು. ಇದರಿಂದ ಕೆಲಕಾಲ ಟ್ರಾಫಿಕ್‌ ಸಮಸ್ಯೆಯಾಯಿತು ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ, ಇದೇ ವೇಳೆ, ಸಾರ್ವಜನಿಕರಿಗೆ ಒಂದು ಕಾನೂನು- ಸಚಿವರಿಗೆ ಇನ್ನೊಂದು ಕಾನೂನೇ ಎಂದೂ ಪ್ರಶ್ನೆ ಮಾಡಿದ್ದಾರೆ.  ಸಚಿವರಾಗಿ ಜವಾಬ್ದಾರಿ ಸ್ಥಾನದಲ್ಲಿರುವವರೇ ಹೀಗೆ ವಾಹನವನ್ನು ಪಾರ್ಕ್‌ ಮಾಡಿಸಿದರೆ ಹೇಗೆ ಎಂಬುದೂ ಪ್ರಶ್ನೆಯಾಗಿದೆ.

ಇಂತಹ ಸಂದರ್ಭಗಳಲ್ಲಿ ಕಾರಿನ ಚಾಲಕನಲ್ಲಿ ಕೆಲಸಕ್ಕಾಗಿ ಮಳಿಗೆಗಳಿಗೆ ಬಿಟ್ಟು  ವಾಹನವನ್ನು ಬೇರೆಡೆ ಪಾರ್ಕ್‌ ಮಾಡಿಸಿ ಕೆಲಸದ ನಂತರ ವಾಹನವನ್ನು ಮತ್ತೆ ಕರೆಯಿಸುವ ವ್ಯವಸ್ಥೆಯನ್ನು ಸಾಮಾನ್ಯ ಜನರೂ ಮಾಡುತ್ತಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಗ್ರಾಹಕನಿಗೆ ಶಾಕ್‌ ಕೊಟ್ಟ ವಿದ್ಯುತ್‌ ಇಲಾಖೆ | ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್…!
May 15, 2024
7:50 PM
by: The Rural Mirror ಸುದ್ದಿಜಾಲ
ಗ್ರಾಮೀಣ ಭಾಗದಲ್ಲೂ ಗೋಹತ್ಯೆ…!? | ವೈರಲ್‌ ಆಯ್ತು ವಿಡಿಯೋ… | ಕೊಲ್ಲಮೊಗ್ರದಲ್ಲಿ ನಕ್ಸಲ್‌ ಸದ್ದಿನ ಜೊತೆಗೆ ಗೋಹತ್ಯೆಯ ಸದ್ದು…!
March 19, 2024
7:31 PM
by: ದ ರೂರಲ್ ಮಿರರ್.ಕಾಂ
ಬಟ್ಟೆ ಗಲೀಜಾಗಿದೆ ಎಂದು ಮೆಟ್ರೋದ ಒಳಗೆ ಬಿಡದ ಸಿಬ್ಬಂದಿ | ರೈತನನ್ನು ಅವಮಾನಿಸಿದ್ದಕ್ಕೆ ಸಹಪ್ರಯಾಣಿಕರ ಆಕ್ರೋಶ | ಮೆಟ್ರೋ ಸಿಬ್ಬಂದಿ ವಜಾ
February 26, 2024
12:24 PM
by: The Rural Mirror ಸುದ್ದಿಜಾಲ
ರಾಜಕೀಯ ದ್ವೇಷಕ್ಕೆ ಮಕ್ಕಳ ಯಕ್ಷಗಾನ ಅರ್ಧಕ್ಕೆ ನಿಲ್ಲಿಸಿದ ಆ ಮಹಾಶಯ ಯಾರು..? | ಕಲೆಯ ಮೇಲೂ ರಾಜಕೀಯ ವಕ್ರದೃಷ್ಠಿ..!
November 6, 2023
10:31 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror