The Rural Mirror ಕಾಳಜಿ

ಮಿರರ್‌ ನೆರವು | ಬಾಲಕಿಯ ಚಿಕಿತ್ಸೆಗೆ ನೆರವಾಗುವಿರಾ…

Share

ಕಾಸರಗೋಡು ಜಿಲ್ಲೆಯ  ಕುಂಬ್ದಾಜೆ ಪಂಚಾಯತ್ 13ನೇ ವಾರ್ಡ್ ವ್ಯಾಪ್ತಿಯ ಕಜೆಮಲೆ ನಿವಾಸಿ ಉದಯ ಕುಮಾರ್ ಹಾಗೂ ಸವಿತಾ ದಂಪತಿಗಳ ಪುತ್ರಿ ನಾರಂಪಾಡಿ  ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿ ಸಾನ್ವಿ (7) ಅಪರೂಪವಾಗಿ ಕಂಡುಬರುವ ತಲಸ್ಸೇಮಿಯಾ ಮೇಜರ್ ಎಂಬ  ಕಾಯಿಲೆ ತಗಲಿದ್ದು, ಚಿಕಿತ್ಸೆಗಾಗಿ ಬಡ ಕುಟುಂಬ ದಾನಿಗಳಿಂದ ನೆರವನ್ನು ಕೇಳಿಕೊಂಡಿದೆ.

Advertisement
Advertisement

ಈಗಾಗಲೇ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಈ ಬಾಲಕಿಯ ಚಿಕಿತ್ಸೆಗಾಗಿ ಈ ಬಡ ಕುಟುಂಬ ಅಪಾರ ಮೊತ್ತ ವ್ಯಯಿಸಿದ್ದು, ಮುಂದೆ ಅಸ್ಥಿಮಜ್ಜೆ ಕಸಿ ಮಾಡುವ ಶಸ್ತ್ರಕ್ರಿಯೆ ನಡೆಯಬೇಕಿದ್ದು, ಅಂದಾಜು 40 ಲಕ್ಷ ಮೊತ್ತ ಅವಶ್ಯಕವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಷ್ಟು ದೊಡ್ಡ ಮೊತ್ತವನ್ನು ಹೊಂದಿಸಲು ಅಸಾಧ್ಯವಾದ ಈ ಬಡ ಕುಟುಂಬಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ಕುಂಬ್ದಾಜೆ ಪಂಚಾಯತ್ ಅಧ್ಯಕ್ಷ ಹಮೀದ್ ಪೊಸೊಳಿಗೆ ಅಧ್ಯಕ್ಷತೆಯಲ್ಲಿ ಊರ ಪರವೂರ ಬಂಧುಗಳ ಸಹಕಾರದೊಂದಿಗೆ ಸಾನ್ವಿ ಚಿಕಿತ್ಸಾ ಸಹಾಯ ಸಮಿತಿಯನ್ನು ರೂಪಿಸಿದ್ದು, ಸಮಿತಿಯ ಖಾತೆಯ ಮುಖಾಂತರ ದಾನಿಗಳಿಂದ ಚಿಕಿತ್ಸಾ ನೆರವನ್ನು ಸ್ವೀಕರಿಸಲಾಗುತ್ತಿದೆ.

ಇದರೊಂದಿಗೆ ಸಮಿತಿಯ ಸದಸ್ಯರು ಗುಂಪುಗಳಾಗಿ ತೆರಳಿ, ವಿವಿಧ ಸ್ವ ಸಹಾಯ ಸಂಘ, ಕ್ಲಬ್, ವಿದ್ಯಾ ಸಂಸ್ಥೆ, ಪೊಲೀಸ್ ಠಾಣೆ ಸೇರಿದಂತೆ ಸರ್ಕಾರಿ ಹಾಗೂ ಸರ್ಕಾರೇತರ ಕಚೇರಿಗಳಿಂದಲೂ ಆರ್ಥಿಕ ನೆರವನ್ನು ಸ್ವೀಕರಿಸುತ್ತಿದ್ದಾರೆ. ಬೆಳಿಂಜ – ಬದಿಯಡ್ಕ – ಕಾಸರಗೋಡು ಸಂಚರಿಸುವ ಬಿಲಾಲ್, ಮಲ್ಲ – ಕಾಸರಗೋಡು – ಪೈಕ – ಮುಳ್ಳೇರಿಯಾ – ಬದಿಯಡ್ಕ – ಪೆರ್ಲ ರಸ್ತೆ ಮೂಲಕ ಸಾಗುವ ದುರ್ಗಾ ಗಣೇಶ್, ಕಿನ್ನಿಂಗಾರು- ಮುಳ್ಳೇರಿಯಾ – ಕಾಸರಗೋಡು ಸಂಚರಿಸುವ ರಶ್ಮಿ ಎಂಬ ಖಾಸಗಿ ಬಸ್ ಕಾರುಣ್ಯ ಯಾತ್ರೆ ನಡೆಸಿ, ಒಂದು ದಿನದ ಸಂಗ್ರಹವನ್ನು ಬಾಲಕಿಯ ಚಿಕಿತ್ಸೆಗಾಗಿ ನೀಡಿದ್ದು, ಕಾಸರಗೋಡು- ಮಧೂರ್- ನೀರ್ಚಾಲ್- ಬದಿಯಡ್ಕ – ಪೆರ್ಲ ಸಂಚರಿಸುವ ಸಂಘಂ ಎಂಬ ಖಾಸಗಿ ಬಸ್ ಜು. 19 ರಂದು ಕಾರುಣ್ಯ ಯಾತ್ರೆ ನಡೆಸಿ ಬಾಲಕಿಯ ಚಿಕಿತ್ಸೆಗಾಗಿ ನೆರವಾಗಲಿದೆ.

Advertisement

ಇದರೊಂದಿಗೆ ಪೆರ್ಲ ರಿಕ್ಷಾ ಚಾಲಕರು ಬುಧವಾರ ಕಾರುಣ್ಯ ನಡೆಸಿ ಒಂದು ದಿನದ ಸಂಗ್ರಹವನ್ನು ಚಿಕಿತ್ಸಾ ನಿಧಿಗೆ ಸಮರ್ಪಿಸಿದ್ದು, ಶಿವಾಜಿ ಆಟೋ ಟ್ಯಾಕ್ಸಿ ಸ್ಟ್ಯಾಂಡ್ ಮುಳ್ಳೇರಿಯಾ ಚಾಲಕರು ಮುನ್ನಡೆಸುವ ಕಾರುಣ್ಯ ಯಾತ್ರಾ ಜು.16 ಶನಿವಾರ ನಡೆಯಲಿದೆ.

ಚಿಕಿತ್ಸೆಗಾಗಿ ಮತ್ತಷ್ಟು ಮೊತ್ತದ ಅವಶ್ಯಕತೆಯಿದ್ದು ದಾನಿಗಳು ತಮ್ಮ ಕೈಲಾದಷ್ಟು ಮೊತ್ತವನ್ನು ನೀಡಿ ಬಾಲಕಿಯ ಮುಂದಿನ ಚಿಕಿತ್ಸೆಗೆ ಅನುವು ಮಾಡಿಕೊಡಬೇಕಾಗಿ ಸಮಿತಿ ಪದಾಧಿಕಾರಿಗಳು ವಿನಂತಿಸಿದ್ದಾರೆ.

ಸಂಪರ್ಕ ಹಾಗೂ ಖಾತೆ ಸಂಖ್ಯೆ :

Saanvi Medical Treatment Committee
ಕೇರಳ ಗ್ರಾಮೀಣ ಬ್ಯಾಂಕ್ ಜಯನಗರ (ಕುಂಬ್ದಾಜೆ) ಶಾಖೆ
ಖಾತೆ ಸಂಖ್ಯೆ : 40413101052286
ಐಎಫ್ಎಸ್ಸಿ ಕೋಡ್ :  KLGB0040413
ಗೂಗಲ್ ಪೇ/ ಪೇಟಿಯಂ : 8921968983

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಆಂಧ್ರಪ್ರದೇಶಕ್ಕೆ ನಾಲ್ಕು ಕುಮ್ಕಿ ಆನೆಗಳನ್ನು ಹಸ್ತಾಂತರಿಸಿದ ರಾಜ್ಯಸರ್ಕಾರ

ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ ಎಂದು…

8 hours ago

ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಸಮರ್ಪಕವಾಗಿ ಪೂರೈಸಲು ಕ್ರಮ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು…

8 hours ago

ಮಳೆ ಹಿನ್ನೆಲೆ | ಅಪಾಯಕಾರಿ ಸ್ಥಳಗಳಲ್ಲಿ ನಿರಂತರ ನಿಗಾವಹಿಸಲು ದ ಕ ಜಿಲ್ಲಾಧಿಕಾರಿ ಸೂಚನೆ

ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ  ಸಂಭಾವ್ಯ ನೆರೆ ಹಾಗೂ ಮುಳುಗಡೆ ಪ್ರದೇಶಗಳಲ್ಲಿ…

8 hours ago

ವಾಯುಭಾರ ಕುಸಿತ ರಾಜ್ಯದಲ್ಲಿ ಮುಂದುವರಿದ ಮಳೆ | ಹಲವೆಡೆ ಪ್ರವಾಹ ಭೀತಿ

ವಾಯುಭಾರ ಕುಸಿತದಿಂದಾಗಿ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕಳೆದ ಎರಡು…

8 hours ago

2028ರ ವೇಳೆಗೆ ಭಾರತದ ಉಪಗ್ರಹ ಸಂವಹನದ ಮಾರುಕಟ್ಟೆ 20 ಶತಕೋಟಿ  ಡಾಲರ್

ವಿಶ್ವ ದೂರ ಸಂಪರ್ಕ ಮತ್ತು ಮಾಹಿತಿ ಸೊಸೈಟಿ ದಿನ ಹಿನ್ನೆಲೆಯಲ್ಲಿ ಭಾರತೀಯ ದೂರಸಂಪರ್ಕ…

19 hours ago