ಮಳೆ ಬಿದ್ದಾಗ ಪಶ್ಚಿಮಘಟ್ಟದ ಬೆಟ್ಟಗಳು ಹಸಿರಿನ ಹೊದಿಕೆ ಹೊದ್ದುಕೊಳ್ಳುತ್ತವೆ. ಅಡಿಕೆ-ತೆಂಗಿನ ಮರಗಳ ತುದಿಯ ನೀರಿನ ಹನಿ, ಹಿತವಾದ ಗಾಳಿ ಪ್ರಕೃತಿಗೆ ಸಂಗೀತ ನುಡಿಸುತ್ತದೆ. ಹಳೆಯ ಮನೆಗಳ ಹೆಂಚಿನ ಮೇಲಿಂದ ಜಾರುವ ಮಳೆಯ ಹನಿಗಳು ಪ್ರಕೃತಿಯದೇ ಒಂದು ಚಿತ್ರವಾಗಿ ಕಣ್ಣಿಗೆ ಕಟ್ಟುತ್ತವೆ. ಅಂತಹ ಜೀವಂತ ದೃಶ್ಯಗಳನ್ನು ಕ್ಯಾನ್ವಾಸ್ ಮೇಲೆ ಶಾಶ್ವತಗೊಳಿಸುವ ಸುಂದರ ಪ್ರಯತ್ನಕ್ಕೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಗುತ್ತಿಗಾರು ಸಾಕ್ಷಿಯಾಗುತ್ತಿದೆ. ದಕ್ಷಿಣ ಕನ್ನಡ, ಕಾಸರಗೋಡಿನ ಚಿತ್ರ ಕಲಾವಿದರು ಈಗ ಈ ಕ್ಯಾಂಪ್ನಲ್ಲಿದ್ದಾರೆ.
“Monsoon Colours – Watercolour Painting Camp” ಹೆಸರಿನ ಮೂರು ದಿನಗಳ ಜಲವರ್ಣ ಚಿತ್ರಕಲಾ ಕ್ಯಾಂಪ್ ಜುಲೈ 8, ರಿಂದ 10 ನಡೆಯುತ್ತಿದೆ. ಮಳೆಗಾಲದ ಪ್ರಕೃತಿಯ ಬಣ್ಣಗಳನ್ನು ಕುಂಚದ ಮೂಲಕ ಮಾತಾಡಿಸುವ ಅಪರೂಪದ ಕಲಾಯಜ್ಞವಾಗಿ ರೂಪುಗೊಂಡಿದೆ.
ಗುತ್ತಿಗಾರಿನ ಮಳೆ, ಹಸಿರು, ಗ್ರಾಮೀಣ ಬದುಕು, ತೋಟಗಳು, ಹಳೆಯ ಮನೆಗಳು, ಹೊಲಗಳು ಮತ್ತು ಪಶ್ಚಿಮಘಟ್ಟದ ನೈಸರ್ಗಿಕ ಸೊಬಗು ಇವೆಲ್ಲವೂ ಈ ಮೂರು ದಿನಗಳ ಕಾಲ ಕಲಾವಿದರ ಕಣ್ಣಿನಲ್ಲಿ ಹೊಸ ರೂಪ ಪಡೆದು ಜಲವರ್ಣಗಳಲ್ಲಿ ಅರಳಲಿವೆ. ಕ್ಷಣಿಕವಾಗಿ ಕಾಣುವ ಪ್ರಕೃತಿಯ ಸೌಂದರ್ಯವನ್ನು ಶಾಶ್ವತ ಕಲಾಕೃತಿಯನ್ನಾಗಿ ರೂಪಿಸುವ ಸೃಜನಶೀಲ ಯತ್ನವೇ ಈ ಶಿಬಿರದ ವಿಶೇಷತೆ.
ಈ ಕಲಾ ಶಿಬಿರಕ್ಕೆ ಗುತ್ತಿಗಾರಿನ ಮೆಟ್ಟಿನಡ್ಕದ ರಾಜೇಶ್ ನಾಯಕ್ ಅವರು ಹಸಿರು ಪರಿಸರದ ದಾರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಗುತ್ತಿಗಾರಿನ ಮೆಟ್ಟಿನಡ್ಕ, ಕಂದ್ರಪ್ಪಾಡಿ, ಸೇರಿದಂತೆ ಆಸುಪಾಸಿನ ಪ್ರದೇಶಗಳನ್ನು ಆಯ್ಕೆ ಮಾಡಿದ್ದಾರೆ. ಮುಂದೆ ಕುಕ್ಕೆ ಸುಬ್ರಹ್ಮಣ್ಯ, ಕುಮಾರಧಾರಾ, ಕುಲ್ಕುಂದ ಮೊದಲಾದ ಪರಿಸರವನ್ನೂ ಆಯ್ಕೆ ಮಾಡಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿರುವ ಪ್ರತಿಭಾವಂತ ಜಲವರ್ಣ ಕಲಾವಿದರು ತಮ್ಮದೇ ಕಲಾಶೈಲಿಯ ಮೂಲಕ ಮಳೆಗಾಲದ ಭಾವಗಳನ್ನು ಕ್ಯಾನ್ವಾಸ್ ಮೇಲೆ ಮೂಡಿಸಲಿದ್ದಾರೆ. ಶಿಬಿರದಲ್ಲಿ ಕಲಾವಿದರುಗಳಾಗಿ ವಿಲ್ಸನ್ ಸೋಜಾ ಕಾಸರಗೋಡು, ದೀರ್ಘ ಮಂಗಳೂರು, ನಿಕಿತ್ ಬೆಳ್ತಂಗಡಿ, ನವೀನ್ ಉಡುಪಿ ಭಾಗವಹಿಸಿದ್ದಾರೆ.
ಇದು ಕೇವಲ ಚಿತ್ರ ಬಿಡಿಸುವ ಶಿಬಿರವಲ್ಲ. ಪ್ರಕೃತಿಯನ್ನು ನೋಡುವ ದೃಷ್ಟಿಯನ್ನು ವಿಸ್ತರಿಸುವ ಕಲಾ ಸಂವಾದವೂ ಹೌದು. ಮಳೆ, ಮಂಜು, ಬೆಳಕು, ನೆರಳು, ಹಸಿರು, ಹಳ್ಳಿಯ ಬದುಕು ಇವೆಲ್ಲವೂ ಕಲಾವಿದರ ಕುಂಚದಲ್ಲಿ ಹೊಸ ಅರ್ಥ ಪಡೆದು, ಪ್ರಕೃತಿಯೊಂದಿಗೆ ಮನುಷ್ಯನ ಬಾಂಧವ್ಯವನ್ನು ಮತ್ತೊಮ್ಮೆ ನೆನಪಿಸುವ ಪ್ರಯತ್ನ ಇಲ್ಲಿ ನಡೆಯುತ್ತಿದೆ.
ಗುತ್ತಿಗಾರಿನಂತಹ ಗ್ರಾಮೀಣ ಪರಿಸರದಲ್ಲಿ ಇಂತಹ ಕಲಾ ಶಿಬಿರ ಆಯೋಜನೆಯಾಗುತ್ತಿರುವುದು ತೀರಾ ಅಪರೂಪ. ಸ್ಥಳೀಯ ಪ್ರಕೃತಿ ವೈಭವವನ್ನು ರಾಷ್ಟ್ರಮಟ್ಟದ ಕಲಾ ಲೋಕಕ್ಕೆ ಪರಿಚಯಿಸುವ ಹೆಜ್ಜೆಯೂ ಇದಾಗಿದೆ. ಮಳೆಗಾಲದ ಸೌಂದರ್ಯವನ್ನು ಕೇವಲ ಕಣ್ಣಿನಲ್ಲಿ ಮಾತ್ರವಲ್ಲ, ಕಲಾಕೃತಿಗಳಲ್ಲೂ ಉಳಿಸಬೇಕೆಂಬ ಆಶಯದೊಂದಿಗೆ ನಡೆಯುತ್ತಿರುವ ಈ “ಮಾನ್ಸೂನ್ ಕಲರ್ಸ್” ಶಿಬಿರವು ಪ್ರಕೃತಿ ಮತ್ತು ಕಲೆಯ ಸುಂದರ ಸಂಗಮವಾಗಿ ಗಮನ ಸೆಳೆಯುತ್ತಿದೆ.
ಪ್ರಕೃತಿ ಬಣ್ಣಗಳನ್ನು ಕೊಡುತ್ತದೆ… ಕಲಾವಿದ ಅದಕ್ಕೆ ಜೀವ ತುಂಬುತ್ತಾನೆ. ಗುತಿಗಾರಿನಲ್ಲಿ ನಡೆಯುತ್ತಿರುವ ಈ ಕಲಾಯಜ್ಞ ಅದನ್ನೇ ಮತ್ತೊಮ್ಮೆ ಸಾಬೀತುಪಡಿಸುತ್ತಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ-ಹವಾಮಾನ ಬದಲಾವಣೆ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಫಾಲೋಮಾಡಲು ಇಲ್ಲಿ ಕ್ಲಿಕ್ ಮಾಡಿ
A three-day Monsoon Colours Watercolour Landscape Camp is being held at Guthigar near Subrahmanya from July 8–10, 2026. Curated by Rajesh Nayak, the camp brings together watercolour artists from Kasaragod, Mangaluru, Belthangady and Udupi to capture the beauty of the monsoon landscape.
ಗೋಮಯವನ್ನು ಶುದ್ಧ ಇಂಧನ ಹಾಗೂ ಸಾವಯವ ಗೊಬ್ಬರವಾಗಿ ಬಳಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಉತ್ತರ…
ಬ್ರೆಜಿಲ್ನಲ್ಲಿ ಮಳೆಯಿಂದ ಕಾಫಿ ಕೊಯ್ಲು ವಿಳಂಬವಾಗಿರುವ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ಕಾಫಿ ಬೆಲೆ…
ಜುಲೈ 10ರಿಂದ ಕರ್ನಾಟಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಜುಲೈ 11…
ಪವರ್ ಸ್ಪ್ರೇಯರ್ ಸಮಸ್ಯೆಯ ಅನುಭವದ ಮೂಲಕ E20 ಪೆಟ್ರೋಲ್ನ ಪರಿಣಾಮಗಳ ಬಗ್ಗೆ ಪ್ರಶ್ನೆ…
ಮ್ಯಾನ್ಮಾರ್ನಿಂದ ಅಕ್ರಮ ಅಡಿಕೆ ಸಾಗಾಟ ಮಾಡಿ ₹1,500 ಕೋಟಿ ಹಣ ವರ್ಗಾವಣೆ ನಡೆಸಿದ…
ಮಹಾರಾಷ್ಟ್ರದಲ್ಲಿ ತಡೆಹಿಡಿದಿರುವ 50ಕ್ಕೂ ಹೆಚ್ಚು ಅಡಿಕೆ ಲಾರಿಗಳನ್ನು ಬಿಡುಗಡೆ ಮಾಡುವಂತೆ ಫಡ್ನವೀಸ್ಗೆ ಅಡಿಕೆ…