MIRROR FOCUS

ಅಮ್ಮನಲ್ಲವೇ ಆಕೆ ?! | ಮೊದಲ ಗುರು ಅವಳೇ ಅಲ್ಲವೇ…!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಮಗುವಿನ ತೊದಲು ನುಡಿಗೆ ಅಮ್ಮನೇ ಮುನ್ನುಡಿ, ಪ್ರಥಮ ಹೆಜ್ಜೆಗೆ , ಅಮ್ಮನದೇ ಆಲಿಂಗನ ಕಂದನೆಲ್ಲಾ ಬೆಳವಣಿಗಗೆ, ಅಮ್ಮನದೇ ರಾಯಭಾರ ಮೊದಲು ಕೊನೆಯಿಲ್ಲದೆಲ್ಲಾ ಆಗು ಹೋಗುಗಳ ಜವಾಬ್ದಾರಿಯನ್ನು ತನ್ನ ಹೆಗಲಿಗೇರಿಸಿಕೊಂಡು ಹೊಗಳಿಕೆಗೂ  ತೆಗಳಿಕೆಗಳೆರಡನ್ನೂ ತನ್ನದೆಂದೇ ಸ್ವೀಕರಿಸುವ ಅಮ್ಮನಿಗಮ್ಮನೇ  ಸಾಟಿ.

ತನ್ನದೆಲ್ಲವೂ ತನ್ನದಾಗಿದ್ದರೂ ತನ್ನದಲ್ಲದ  ಸ್ಥಿತಿ ಅಮ್ಮನದ್ದು.  ಅಪ್ಪ ಅಮ್ಮನ ಮುದ್ದಿನ ಮಗಳು ಪತ್ನಿಯಾಗಿ ಹೊಸ ಸ್ಥಾನವನ್ನು ಪಡೆದು  ಹೊಸಿಲು ದಾಟಿ ಸೇರಿದ ಮನೆಯೇ ತನ್ನದೆಂದು  ನವ ಜೀವನವನ್ನು ಆರಂಭಿಸುವಳು..‌ ತನ್ನದೆಂಬ  ಮನಸಿನ ಮಾತಿಗೆ ಕಿವಿಯಾಗುತ್ತಾ ಕನಸಿನ ಹಾದಿಯ ಮರೆವಳು, ವಾಸ್ತವಕ್ಕೆ ಮೈಯೊಡ್ಡುತಾ  ಬದುಕಿನ ದಾರಿಗೆ ಸಿದ್ಧಳಾಗುವಳು.  ಮನೆಯ ಆಗು ಹೋಗುಗಳಿಗೆ  ಸ್ಪಂದಿಸುವ ಮನಸಿರುವುದು ಅಮ್ಮನಿಗೆ. ಇಲ್ಲಗಳ ಸರಮಾಲೆಯನ್ನೆಂದೂ ಪಟ್ಟಿ ಮಾಡದೆ, ಇರುವುದರಲ್ಲೇ  ತೃಪ್ತಿ  ಕಾಣುವುದು ಅಮ್ಮನಿಗೆ ಮಾತ್ರ ಸಾಧ್ಯ.

Advertisement

ಕೊರೊನಾ  ಸಂಕಷ್ಟ  ಸಮಯದಲ್ಲಿ ತಾನು ಧೈರ್ಯಗುಂದದೆ   ದಿನಕ್ಕೊಂದು ಕಷಾಯ , ತಂಬುಳಿ ಮಾಡಿ ಮಾನಸಿಕ  ಸ್ಥೈರ್ಯ ತುಂಬುವುದು ಅಮ್ಮಂದಿರ ಮನಸಿಗೆ ಮಾತ್ರ ಸಾಧ್ಯ.

***********************************************************

ಕನ್ನಡಿಯೊಳಗಿನ ಗಂಟು

ಸುಮ್ಮನೇ ಹೇಳುವುದಿಲ್ಲ ಅಮ್ಮೆಂನೆಂದರೆ ಕನ್ನಡಿಯೊಳಗಿನ ಗಂಟು, ಅರ್ಥವಾಗದು ಆಕೆಯ ಮನಸು.
ಅಮ್ಮನಲ್ಲವೇ ಆಕೆ!
ತೊರೆಗೊಂದು ಗುರಿಯಿದೆ
ಅದು ನದಿಯ ಸೇರುವುದು,

ಅಮ್ಮನಿಗೂ ಒಂದು ಗುರಿಯಿದೆ
ಅದು ಮಕ್ಕಳು  ದಡ ಸೇರಲೆಂದು
ಹಗಲೆನ್ನದೆ  ಇರುಳೆನ್ನದೆ  ಬೆವರ
ಹರಿಸುವಳು ಗುರಿಯೆಡೆಗೆ .

Advertisement

ಸಾಗಲು ತೊರೆಯಂತೆ ನದಿಯೆಡೆಗೆ
ಹಸಿವು ನೀರಾಡಿಕೆಯ ಅರಿವಿರದೆ
ಪಯಣವೆಲ್ಲವೂ ಗುರಿಯೆಡೆಗೆ

ಪಯಣ ಗಮ್ಯದತ್ತಲಿರುವಾಗ ಯಾವುದೂ ಬಾಧಿಸದು
ಜ್ವರ, ಶೀತ, ಕಾಲು ನೋವು ಲೆಕ್ಕಕ್ಕಿಲ್ಲದೆ
ಗಮನವತ್ತಲೇ ಗುರಿಯೆಡೆಗೆ

ಮಾತೆಯ ಕಷ್ಟವ ನೋಡಿ ಬೆಳೆದ ಮಕ್ಕಳಿಗೆ ಆದರ್ಶವಾಗುವುದು ಅಮ್ಮನ ನಡೆಯೇ.
ಮಕ್ಕಳೂ ನಡೆಯುವರು ತಮ್ಮ ಗುರಿಯಡೆಗೆ.

ಮಕ್ಕಳು ನಿದ್ದೆಗೆಟ್ಟರೆ ಮರುಗುವಳು ಮಾತೆ
ಆಕೆಗರಿಯದೆ ಮಕ್ಕಳು
ಸಾಗುತಿರುವರು ಅವರ ಗುರಿಯೆಡೆಗೆ
ಅಮ್ಮನ ಮನಸು ಕನ್ನಡಿಯೊಳಗಿನ ಗಂಟು
ಅರ್ಥವಾಗದು ಎಂದಿಗೂ,
ಆಕೆ ಅಮ್ಮನಲ್ಲವೇ
ಸಾಗುವುದೊಂದೇ ಗೊತ್ತು ಗುರಿಯೆಡೆಗೆ

 

Advertisement

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ | ಇದುವರೆಗಿನ ಹಾನಿ ಎಷ್ಟು..?

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಮಳೆಗೆ ಇದುವರೆಗೆ ಹಾನಿಯಾಗಿರುವ ಮಾಹಿತಿಯನ್ನು ಜಿಲ್ಲಾಡಳಿತ…

8 minutes ago

ಮುಂದುವರಿದ ಮಳೆ | ಕೊಡಗು ಕರಾವಳಿ ಜಿಲ್ಲೆಯಲ್ಲಿ ಉತ್ತಮ ಮಳೆ | ಇಂದೂ ಹಲವು ಕಡೆ ರೆಡ್ ಅಲರ್ಟ್ |

ರಾಜ್ಯದ ವಿವಿಧೆಡೆ ಇಂದು ಮಳೆಯಾಗಿದೆ. ಉತ್ತರ ಕನ್ನಡದಲ್ಲಿ 27 ಸೆಂಟಿ ಮೀಟರ್, ಸಿದ್ಧಾಪುರದಲ್ಲಿ…

5 hours ago

ಆತ್ಮನಿರ್ಭರ ಯೋಜನೆಯಿಂದ ಸ್ವಾವಲಂಬಿ ಬದುಕು | ಸಾವಯವ ಕೃಷಿಯಲ್ಲಿ ಕಬ್ಬು ಬೆಳೆದು ಯಶಸ್ವಿ

ಆತ್ಮನಿರ್ಭರ ಯೋಜನೆಯಡಿ ಸ್ವಾವಲಂಬಿ ಬದುಕಿನ ಕನಸು ಕಂಡಿದ್ದ ಬಿ. ನಂದೀಶ್ ತಮ್ಮ ಜಮೀನಿನಲ್ಲಿ…

1 day ago

ಹೊಸರುಚಿ | ನೆಕ್ಕರೆ ಮಾವಿನ ಕಾಯಿ ಪಲ್ಯ

ನೆಕ್ಕರೆ ಮಾವಿನ ಕಾಯಿ ಪಲ್ಯ ಮಾಡುವ ವಿಧಾನ..

1 day ago

ಜೂನ್ ಮೂರನೇ ವಾರ ಗುರು ಆದಿತ್ಯ ರಾಜಯೋಗ, ಈ 5 ರಾಶಿಗೆ ಅದೃಷ್ಟವೋ ಅದೃಷ್ಟ.!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತಾರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

1 day ago

ಮುಂದುವರಿದ ಮಳೆಯಬ್ಬರ | 4 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ |

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.  ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ…

2 days ago