Advertisement
MIRROR FOCUS

ಅಮ್ಮನಲ್ಲವೇ ಆಕೆ ?! | ಮೊದಲ ಗುರು ಅವಳೇ ಅಲ್ಲವೇ…!

Share
ಮಗುವಿನ ತೊದಲು ನುಡಿಗೆ ಅಮ್ಮನೇ ಮುನ್ನುಡಿ, ಪ್ರಥಮ ಹೆಜ್ಜೆಗೆ , ಅಮ್ಮನದೇ ಆಲಿಂಗನ ಕಂದನೆಲ್ಲಾ ಬೆಳವಣಿಗಗೆ, ಅಮ್ಮನದೇ ರಾಯಭಾರ ಮೊದಲು ಕೊನೆಯಿಲ್ಲದೆಲ್ಲಾ ಆಗು ಹೋಗುಗಳ ಜವಾಬ್ದಾರಿಯನ್ನು ತನ್ನ ಹೆಗಲಿಗೇರಿಸಿಕೊಂಡು ಹೊಗಳಿಕೆಗೂ  ತೆಗಳಿಕೆಗಳೆರಡನ್ನೂ ತನ್ನದೆಂದೇ ಸ್ವೀಕರಿಸುವ ಅಮ್ಮನಿಗಮ್ಮನೇ  ಸಾಟಿ.

ತನ್ನದೆಲ್ಲವೂ ತನ್ನದಾಗಿದ್ದರೂ ತನ್ನದಲ್ಲದ  ಸ್ಥಿತಿ ಅಮ್ಮನದ್ದು.  ಅಪ್ಪ ಅಮ್ಮನ ಮುದ್ದಿನ ಮಗಳು ಪತ್ನಿಯಾಗಿ ಹೊಸ ಸ್ಥಾನವನ್ನು ಪಡೆದು  ಹೊಸಿಲು ದಾಟಿ ಸೇರಿದ ಮನೆಯೇ ತನ್ನದೆಂದು  ನವ ಜೀವನವನ್ನು ಆರಂಭಿಸುವಳು..‌ ತನ್ನದೆಂಬ  ಮನಸಿನ ಮಾತಿಗೆ ಕಿವಿಯಾಗುತ್ತಾ ಕನಸಿನ ಹಾದಿಯ ಮರೆವಳು, ವಾಸ್ತವಕ್ಕೆ ಮೈಯೊಡ್ಡುತಾ  ಬದುಕಿನ ದಾರಿಗೆ ಸಿದ್ಧಳಾಗುವಳು.  ಮನೆಯ ಆಗು ಹೋಗುಗಳಿಗೆ  ಸ್ಪಂದಿಸುವ ಮನಸಿರುವುದು ಅಮ್ಮನಿಗೆ. ಇಲ್ಲಗಳ ಸರಮಾಲೆಯನ್ನೆಂದೂ ಪಟ್ಟಿ ಮಾಡದೆ, ಇರುವುದರಲ್ಲೇ  ತೃಪ್ತಿ  ಕಾಣುವುದು ಅಮ್ಮನಿಗೆ ಮಾತ್ರ ಸಾಧ್ಯ.

Advertisement
Advertisement
Advertisement
Advertisement
Advertisement

ಕೊರೊನಾ  ಸಂಕಷ್ಟ  ಸಮಯದಲ್ಲಿ ತಾನು ಧೈರ್ಯಗುಂದದೆ   ದಿನಕ್ಕೊಂದು ಕಷಾಯ , ತಂಬುಳಿ ಮಾಡಿ ಮಾನಸಿಕ  ಸ್ಥೈರ್ಯ ತುಂಬುವುದು ಅಮ್ಮಂದಿರ ಮನಸಿಗೆ ಮಾತ್ರ ಸಾಧ್ಯ.

Advertisement

***********************************************************

ಕನ್ನಡಿಯೊಳಗಿನ ಗಂಟು

ಸುಮ್ಮನೇ ಹೇಳುವುದಿಲ್ಲ ಅಮ್ಮೆಂನೆಂದರೆ ಕನ್ನಡಿಯೊಳಗಿನ ಗಂಟು, ಅರ್ಥವಾಗದು ಆಕೆಯ ಮನಸು.
ಅಮ್ಮನಲ್ಲವೇ ಆಕೆ!
ತೊರೆಗೊಂದು ಗುರಿಯಿದೆ
ಅದು ನದಿಯ ಸೇರುವುದು,

Advertisement

ಅಮ್ಮನಿಗೂ ಒಂದು ಗುರಿಯಿದೆ
ಅದು ಮಕ್ಕಳು  ದಡ ಸೇರಲೆಂದು
ಹಗಲೆನ್ನದೆ  ಇರುಳೆನ್ನದೆ  ಬೆವರ
ಹರಿಸುವಳು ಗುರಿಯೆಡೆಗೆ .

ಸಾಗಲು ತೊರೆಯಂತೆ ನದಿಯೆಡೆಗೆ
ಹಸಿವು ನೀರಾಡಿಕೆಯ ಅರಿವಿರದೆ
ಪಯಣವೆಲ್ಲವೂ ಗುರಿಯೆಡೆಗೆ

Advertisement

ಪಯಣ ಗಮ್ಯದತ್ತಲಿರುವಾಗ ಯಾವುದೂ ಬಾಧಿಸದು
ಜ್ವರ, ಶೀತ, ಕಾಲು ನೋವು ಲೆಕ್ಕಕ್ಕಿಲ್ಲದೆ
ಗಮನವತ್ತಲೇ ಗುರಿಯೆಡೆಗೆ

ಮಾತೆಯ ಕಷ್ಟವ ನೋಡಿ ಬೆಳೆದ ಮಕ್ಕಳಿಗೆ ಆದರ್ಶವಾಗುವುದು ಅಮ್ಮನ ನಡೆಯೇ.
ಮಕ್ಕಳೂ ನಡೆಯುವರು ತಮ್ಮ ಗುರಿಯಡೆಗೆ.

Advertisement

ಮಕ್ಕಳು ನಿದ್ದೆಗೆಟ್ಟರೆ ಮರುಗುವಳು ಮಾತೆ
ಆಕೆಗರಿಯದೆ ಮಕ್ಕಳು
ಸಾಗುತಿರುವರು ಅವರ ಗುರಿಯೆಡೆಗೆ
ಅಮ್ಮನ ಮನಸು ಕನ್ನಡಿಯೊಳಗಿನ ಗಂಟು
ಅರ್ಥವಾಗದು ಎಂದಿಗೂ,
ಆಕೆ ಅಮ್ಮನಲ್ಲವೇ
ಸಾಗುವುದೊಂದೇ ಗೊತ್ತು ಗುರಿಯೆಡೆಗೆ

 

Advertisement

# ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ  ವರದಿಯ ಅನ್ವಯ, ಉತ್ತರ ಕನ್ನಡ…

1 hour ago

ಹವಾಮಾನ ವರದಿ | 04-03-2025 | ಮಾ.8 ರವರೆಗೆ ಮಳೆ ಲಕ್ಷಣ ಇಲ್ಲ | ಬಿಸಿಲಿನ ವಾತಾವರಣ ಮುಂದುವರಿಕೆ |

ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಮಿಶ್ರಿತ ಬಿಸಿಲಿನ ವಾತಾವರಣದ ಮುನ್ಸೂಚನೆ…

3 hours ago

ಹವಾಮಾನ ವರದಿ | 03-03-2025 | ಬಿಸಿಲಿನ ವಾತಾವರಣ ಮುಂದುವರಿಕೆ | ಮಾ.6 ರ ನಂತರ ಅಲ್ಲಲ್ಲಿ ತುಂತುರು ಮಳೆ ನಿರೀಕ್ಷೆ |

ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…

1 day ago

ಚಿಕ್ಕಮಗಳೂರಿನ ಅರಣ್ಯದಲ್ಲಿ ಕಾಡ್ಗಿಚ್ಚು | 20 ಕ್ಕೂ ಹೆಚ್ಚು ಎಕರೆ ಅರಣ್ಯ ನಾಶ

ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…

1 day ago

Weather Update | ಕೆಲವು ಕಡೆ ಮಳೆ ಸಾಧ್ಯತೆ | ಕರಾವಳಿ ಜಿಲ್ಲೆಗೆ ಇಂದೂ ಹೀಟ್‌ವೇವ್‌ ಎಚ್ಚರಿಕೆ |

ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…

1 day ago