ಮುಳಿಯ ಆ್ಯಂಟಿಕ್ ಕಲೆಕ್ಷನ್ ಗೆ ಚಾಲನೆ | ಗಮನಸೆಳೆದಿದೆ 10 in 1 ಆಭರಣ |

December 24, 2021
8:34 PM

ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಮುಳಿಯ ಜ್ಯುವೆಲ್ಸ್ ನಲ್ಲಿ ಭಾರತೀಯ ಸಂಸ್ಕೃತಿಯ ಪರಂಪರೆಯನ್ನು ಹೊಂದಿರುವ ಮುಳಿಯ ಪರಂಪರಾಗತ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ಮುಳಿಯ ಆ್ಯಂಟಿಕ್ ಫೆಸ್ಟ್ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕು ಅಬಕಾರಿ ಇಲಾಖಾ ನಿರೀಕ್ಷಕರಾದ ಸೌಮ್ಯಲತ ಉದ್ಘಾಟಿಸಿ,ಮುಳಿಯ ಸಂಸ್ಥೆ ಆಯೋಜಿಸಿದ ಆ್ಯಂಟಿಕ್ ಫೆಸ್ಟ್ ಗೆ  ಶುಭ ಹಾರೈಸಿದರು ಮತ್ತು ಮುಳಿಯದ ಸಮಾಜಮುಖಿ ಕಾರ್ಯಕ್ರಮವನ್ನು ಶ್ಲಾಘಿಸಿದರು.

ಸಂಸ್ಥೆಯ ಪ್ರಬಂಧಕರಾದ  ಗುರುರಾಜ್ ಅವಬೃತ  ಸ್ವಾಗತಿಸಿ, ಫೆಸ್ಟ್ ನ ವಿಶೇಷತೆಯನ್ನು ತಿಳಿಸಿದರು. ಉಪ ಶಾಖಾ ಪ್ರಬಂಧಕರಾದ  ಸತ್ಯ ಗಣೇಶ್  ವಂದಿಸಿದರು. ಸಿಬ್ಬಂದಿ ಕು. ದೀಪಿಕ  ಕಾರ್ಯಕ್ರಮ ನಿರೂಪಿಸಿದರು. ಮಾರುಕಟ್ಟೆ ವಿಭಾಗದ  ಜಯಂತ್‍ ಉಪಸ್ಥಿತರಿದ್ದರು. ಪುತ್ತೂರು ಶಾಖಾ ಪ್ರಬಂಧಕರಾದ ನಾಮ್‍ದೇವ್ ಮಲ್ಯ, ಉಪ ಪ್ರಬಂಧಕರಾದ ಪ್ರವೀಣ್, ಯತೀಶ್ ಉಪಸ್ಥಿತರಿದ್ದರು.

ಡಿಸೆಂಬರ್ 23 ರಿಂದ ಪ್ರಾರಂಭವಾದ ಈ ಉತ್ಸವವು ಜನವರಿ 3 ರವರೆಗೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ವಿವಿಧ ವಿನ್ಯಾಸಗಳನ್ನೊಳಗೊಂಡ ಆ್ಯಂಟಿಕ್ ನೆಕ್ಲೇಸ್, ಆ್ಯಂಟಿಕ್ ಜುಮ್ಕ, ಆ್ಯಂಟಿಕ್ ಬಳೆ , ಆ್ಯಂಟಿಕ್ ಹಾರ, ಆ್ಯಂಟಿಕ್ ಕಿವಿಯೋಲೆ, ಆ್ಯಂಟಿಕ್ ಪೆಂಡೆಂಟ್ ಹಾಗೂ ವಿಶಿಷ್ಟ ವಿನ್ಯಾಸದ 10 ಇನ್ 1 ಆಭರಣಗಳು, 5 ಇನ್ 1 ಆಭರಣಗಳು, 2 ಗ್ರಾಂನಿಂದ 150 ಗ್ರಾಂ ವರೆಗಿನ ಆಭರಣಗಳು, ಮೈಕ್ರೋ ಆ್ಯಂಟಿಕ್ ಆಭರಣಗಳು, ಮಹತಿ ಕಲೆಕ್ಷನ್ಸ್, ಬೋರ್ಮಲ ಡಿಸೈನ್, ಬೀಡೆಡ್ ಆ್ಯಂಟಿಕ್ ಆಭರಣಗಳ ವಿಶಿಷ್ಟ ಸಂಗ್ರಹವಿರುತ್ತದೆ.

10 in 1 ಆಭರಣ ಮತ್ತು 5 in 1 ಆಭರಣಗಳ ವಿಶೇಷತೆ: 

10 in 1 ಆಭರಣ ಮತ್ತು 5 in 1 ಆಭರಣಗಳ ವಿಶೇಷತೆ:
ಆ್ಯಂಟಿಕ್ ಆಭರಣಗಳು ವಿಶೇಷ ವಿನ್ಯಾಸಗಳಿಂದ ಕೂಡಿದ್ದು ಅತ್ಯಂತ ಪ್ರಾಮುಖ್ಯತೆಯಿಂದ ಕೂಡಿರುವ ಆಭರಣಗಳು ಇದಾಗಿದ್ದು, ಆಧುನಿಕ ಯುಗದಲ್ಲಿ ಹೆಚ್ಚು ಪ್ರಖ್ಯಾತಗೊಂಡಿರುತ್ತದೆ.

10 ಇನ್ 1 ಆಭರಣವನ್ನು ದ್ವಿಮುಖವಾಗಿ ಸೊಂಟ ಪಟ್ಟಿ, ಕೈತೋಳುಬಂದಿ, ಪೆಂಡೆಂಟ್, ನೆಕ್ಲೇಸ್, ಹಾರಂಗಳಾಗಿ 10 ವಿಭಾಗಗಳಲ್ಲಿ ಉಪಯೋಗಿಸಬಹುದು.

5 ಇನ್ 1 ಆಭರಣಗಳನ್ನು ಏಕಮುಖವಾಗಿ ಸೊಂಟ ಪಟ್ಟಿ, ತೋಳಬಂದಿ, ಪೆಂಡೆಂಟ್, ನೆಕ್ಲೇಸ್, ಹಾರಂಗಳಾಗಿ 5 ವಿಭಾಗಗಳಲ್ಲಿ ಉಪಯೋಗಿಸಬಹುದು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಂಗಳೂರು ಅಡಿಕೆ ಮಾರುಕಟ್ಟೆ | ಸ್ಥಿರತೆಯಿಂದ ಏರಿಕೆಯತ್ತ ಮುಖ ಮಾಡಿದ ಧಾರಣೆ
April 2, 2026
6:56 AM
by: ಅರುಣ್‌ ಕುಮಾರ್ ಕಾಂಚೋಡು
ಜನಗಣತಿ 2026 – ಏಪ್ರಿಲ್ 1ರಿಂದ ಸ್ವಯಂ-ಎಣಿಕೆ ಆರಂಭ – ಸಹಕರಿಸಲು ಜಿಲ್ಲಾಧಿಕಾರಿ ಕರೆ
April 2, 2026
6:37 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 01-04-2026 | ಕರಾವಳಿ-ಮಲೆನಾಡಿನಲ್ಲಿ ಗುಡುಗು ಮಳೆ ಮುಂದುವರಿಕೆ – ಏ.10 ರಿಂದ ಮತ್ತೆ ಮಳೆ ಚುರುಕು ಸಾಧ್ಯತೆ!
April 1, 2026
2:30 PM
by: ಸಾಯಿಶೇಖರ್ ಕರಿಕಳ
ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!
April 1, 2026
6:29 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror