ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಮುಳಿಯ ಜ್ಯುವೆಲ್ಸ್ ನಲ್ಲಿ ಭಾರತೀಯ ಸಂಸ್ಕೃತಿಯ ಪರಂಪರೆಯನ್ನು ಹೊಂದಿರುವ ಮುಳಿಯ ಪರಂಪರಾಗತ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ಮುಳಿಯ ಆ್ಯಂಟಿಕ್ ಫೆಸ್ಟ್ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕು ಅಬಕಾರಿ ಇಲಾಖಾ ನಿರೀಕ್ಷಕರಾದ ಸೌಮ್ಯಲತ ಉದ್ಘಾಟಿಸಿ,ಮುಳಿಯ ಸಂಸ್ಥೆ ಆಯೋಜಿಸಿದ ಆ್ಯಂಟಿಕ್ ಫೆಸ್ಟ್ ಗೆ ಶುಭ ಹಾರೈಸಿದರು ಮತ್ತು ಮುಳಿಯದ ಸಮಾಜಮುಖಿ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಸಂಸ್ಥೆಯ ಪ್ರಬಂಧಕರಾದ ಗುರುರಾಜ್ ಅವಬೃತ ಸ್ವಾಗತಿಸಿ, ಫೆಸ್ಟ್ ನ ವಿಶೇಷತೆಯನ್ನು ತಿಳಿಸಿದರು. ಉಪ ಶಾಖಾ ಪ್ರಬಂಧಕರಾದ ಸತ್ಯ ಗಣೇಶ್ ವಂದಿಸಿದರು. ಸಿಬ್ಬಂದಿ ಕು. ದೀಪಿಕ ಕಾರ್ಯಕ್ರಮ ನಿರೂಪಿಸಿದರು. ಮಾರುಕಟ್ಟೆ ವಿಭಾಗದ ಜಯಂತ್ ಉಪಸ್ಥಿತರಿದ್ದರು. ಪುತ್ತೂರು ಶಾಖಾ ಪ್ರಬಂಧಕರಾದ ನಾಮ್ದೇವ್ ಮಲ್ಯ, ಉಪ ಪ್ರಬಂಧಕರಾದ ಪ್ರವೀಣ್, ಯತೀಶ್ ಉಪಸ್ಥಿತರಿದ್ದರು.
ಡಿಸೆಂಬರ್ 23 ರಿಂದ ಪ್ರಾರಂಭವಾದ ಈ ಉತ್ಸವವು ಜನವರಿ 3 ರವರೆಗೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ವಿವಿಧ ವಿನ್ಯಾಸಗಳನ್ನೊಳಗೊಂಡ ಆ್ಯಂಟಿಕ್ ನೆಕ್ಲೇಸ್, ಆ್ಯಂಟಿಕ್ ಜುಮ್ಕ, ಆ್ಯಂಟಿಕ್ ಬಳೆ , ಆ್ಯಂಟಿಕ್ ಹಾರ, ಆ್ಯಂಟಿಕ್ ಕಿವಿಯೋಲೆ, ಆ್ಯಂಟಿಕ್ ಪೆಂಡೆಂಟ್ ಹಾಗೂ ವಿಶಿಷ್ಟ ವಿನ್ಯಾಸದ 10 ಇನ್ 1 ಆಭರಣಗಳು, 5 ಇನ್ 1 ಆಭರಣಗಳು, 2 ಗ್ರಾಂನಿಂದ 150 ಗ್ರಾಂ ವರೆಗಿನ ಆಭರಣಗಳು, ಮೈಕ್ರೋ ಆ್ಯಂಟಿಕ್ ಆಭರಣಗಳು, ಮಹತಿ ಕಲೆಕ್ಷನ್ಸ್, ಬೋರ್ಮಲ ಡಿಸೈನ್, ಬೀಡೆಡ್ ಆ್ಯಂಟಿಕ್ ಆಭರಣಗಳ ವಿಶಿಷ್ಟ ಸಂಗ್ರಹವಿರುತ್ತದೆ.
10 in 1 ಆಭರಣ ಮತ್ತು 5 in 1 ಆಭರಣಗಳ ವಿಶೇಷತೆ:
10 ಇನ್ 1 ಆಭರಣವನ್ನು ದ್ವಿಮುಖವಾಗಿ ಸೊಂಟ ಪಟ್ಟಿ, ಕೈತೋಳುಬಂದಿ, ಪೆಂಡೆಂಟ್, ನೆಕ್ಲೇಸ್, ಹಾರಂಗಳಾಗಿ 10 ವಿಭಾಗಗಳಲ್ಲಿ ಉಪಯೋಗಿಸಬಹುದು.
5 ಇನ್ 1 ಆಭರಣಗಳನ್ನು ಏಕಮುಖವಾಗಿ ಸೊಂಟ ಪಟ್ಟಿ, ತೋಳಬಂದಿ, ಪೆಂಡೆಂಟ್, ನೆಕ್ಲೇಸ್, ಹಾರಂಗಳಾಗಿ 5 ವಿಭಾಗಗಳಲ್ಲಿ ಉಪಯೋಗಿಸಬಹುದು.
ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…
ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…
E20 ನೀತಿಯಡಿ ಎಥನಾಲ್ ಉತ್ಪಾದನೆಗೆ ಜೋಳ ಸೇರಿದಂತೆ ಧಾನ್ಯಗಳ ಬೇಡಿಕೆ ಹೆಚ್ಚುತ್ತಿರುವ ನಡುವೆ…
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗದಗ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ…
ಕರ್ನಾಟಕದಲ್ಲಿ ಮಳೆಯ ತೀವ್ರತೆ ಕ್ರಮೇಣ ಕಡಿಮೆಯಾಗುವ ಲಕ್ಷಣಗಳಿದ್ದು, ಸೆಪ್ಟೆಂಬರ್ 4ರಿಂದ ಕರಾವಳಿ ಮತ್ತು…
ಭಾರತದ ಅತಿದೊಡ್ಡ ಕಾಫಿ ಉತ್ಸವ 2027 ಫೆಬ್ರವರಿ 26ರಿಂದ 28ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು,…