ನೆಲ್ಯಾಡಿ | ಮುಳಿಯ ಸಿಲ್ವರಿಯದಲ್ಲಿ ಕರಿಮಣಿ ಉತ್ಸವ ಚಾಲನೆ |ಆ 15 ರಿಂದ 21 ರ ವರೆಗೆ ನೆಡೆಯಲಿರುವ ಕರಿಮಣಿ ಉತ್ಸವ |

August 16, 2022
9:54 PM

ನೆಲ್ಯಾಡಿಯ ಮುಳಿಯ ಸಿಲ್ವರಿಯ ಮಳಿಗೆಯಲ್ಲಿ ಚಿನ್ನದ ಕರಿಮಣಿ ಉತ್ಸವವನ್ನು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ  ಹರೀಶ್ ರಾವ್ ದೀಪ ಬೆಳಗಿಸಿ ಉದ್ಘಾಟಿಸಿ ಸಂಸ್ಥೆಗೆ ಶುಭ ಹಾರೈಸಿದರು.

Advertisement

ಮುಖ್ಯ ಅತಿಥಿಗಳಾಗಿ ಪ್ರಶಾಂತ್ ಪೂವಾಜೆ ಅವರು ಭಾಗವಹಿಸಿ ಸಂಸ್ಥೆಯ ಸಾಮಾಜಿಕ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಥಮ ಖರೀದಿದಾರಗಿ ಸುಬ್ರಹ್ಮಣ್ಯ ಆಚಾರ್ಯ ಇವರು ಚಿನ್ನದ ಕರಿಮಣಿಯನ್ನು ಖರೀದಿಸಿದರು. ಈ ಸಂದರ್ಭದಲ್ಲಿ 18 ಕ್ಯಾರೇಟ್ ಗುಣಮಟ್ಟದ ರೋಸ್ ಗೋಲ್ಡ್ ಕರಿಮಣಿಗಳನ್ನು ಬಿಡಿಗಡೆಗೊಳಿಸಲಾಯಿತು. ಮೊದಲ ದಿನವೇ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಈ ಕರಿಮಣಿ ಉತ್ಸವವು ಆಗಸ್ಟ್ 15 ರಿಂದ 21 ರವರೆಗೆ ನಡೆಯಲಿದೆ. ಪುತ್ತೂರು ಶಾಖಾ ಪ್ರಬಂಧಕ ನಾಮದೇವ ಮಲ್ಯ ಅವರು ಸ್ವಾಗತಿಸಿ,ಕರಿಮಣೀ ಉತ್ಸವ ಮತ್ತು ನೆಲ್ಯಾಡಿ ಸಿಲ್ವರಿಯ ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕ ಮಾತನಾಡಿದರು.

ಫ್ಲೋರ್ ಮ್ಯಾನೇಜರ್ ಪ್ರವೀಣ್ ಮಾತನಾಡಿ ನಮ್ಮಲ್ಲಿ ಗ್ರಾಹಕರಿಗೆ ಅಭಿರುಚಿಗೆ ತಕ್ಕಂತೆ ಸುಮಾರು 2 ಗ್ರಾಂ ನಿಂದ 100 ಗ್ರಾಂನ ವರೆಗೆ 300ಕ್ಕೂ ಅಧಿಕ ಡಿಸೈನ್‍ಗೆ ¼ ಕರಿಮಣಿಗಳು ನೆಲ್ಯಾಡಿ ಜನತೆಗೆ ಲಭ್ಯ ಅದಲ್ಲದೆ ಮುಷ್ಠಿ ಪಿರಿ, ಮುಷ್ಠಿ ಕಟ್ಸ್, ಕಟ್ಸ್ ಕಂಠಿ, ಗೋಲು ಕಂಠಿ, ದಳಪತಿ, ಗಾಂಚು ಕಂಠಿ, ಗಾಂಚು ಪಿರಿ, ಧೃವಂ ಕಂಠಿ, ಕೆಕೆಜಿಸಿ, ನುಗ್ಗೆ ಕಂಠಿ, ನುಗ್ಗೆ ಕವರ್, ದಳ ಕವರ್, ಧ್ರುವಂ ಕವರ್, ಅಂಜಲಿ ಕಂಠಿ, ಪಟ್ಟಿ ಕಂಠಿ, ಚಕ್ರ ಕಂಠಿ, ಎಫ್‍ಡಿಸಿ ಕಂಠಿ, ಬಾಂಬೆ ಕಂಠಿ, ಜೋಮಾಲೆ ಕಂಠಿ, ಜಿಜಿ ಕಂಠಿ, ಜಿಜಿಪಿರಿ ಕಂಠಿ, ಪವಿತ್ರ ಕಂಠಿ, ತ್ರೀರಿಂಗ್ ಕಂಠಿ, ಮುಷ್ಠಿ ಕಂಠಿ, ಗ್ಲಾಸ್ ಕಟ್ ಕಂಠಿ, ಕಟ್ಸ್ ಕವರ್ ಕಂಠಿ, ದಳ ಪಿರಿ ಕಂಠಿ. ಮುಂತಾದ ಕರಿಮಣಿ ಲಭ್ಯವಿದೆ ಎಂದು ಹೇಳಿದರು.

ನೆಲ್ಯಾಡಿ ಸಿಲ್ವರಿಯ ವ್ಯವಸ್ಥಾಪಕ ಪ್ರಶಾಂತ್ ಧನ್ಯವಾದ ಮಾಡಿದರು, ಮುಳಿಯ ಸಿಲ್ವರಿಯ ಸಿಬ್ಬಂದಿ ದೀಪಕ್ ಕುಮಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 18.04.2025 | ಕೆಲವು ಸೀಮಿತ ಪ್ರದೇಶದಲ್ಲಿ ಮಳೆ | ಎ.21ರಿಂದ ಮಳೆ ಹೆಚ್ಚಾಗುವ ಸಾಧ್ಯತೆ
April 18, 2025
3:26 PM
by: ಸಾಯಿಶೇಖರ್ ಕರಿಕಳ
ಸದ್ಯ ಮುಂಗಾರು ಮಳೆ ಆಶಾವಾದ | ಮುಂದಿರುವ ಸವಾಲುಗಳಲ್ಲಿ ತಾಪಮಾನವೇ ಪ್ರಮುಖ |
April 18, 2025
6:57 AM
by: The Rural Mirror ಸುದ್ದಿಜಾಲ
ಯಾಣವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಪಣ | ಅರಣ್ಯ ಇಲಾಖೆಯಿಂದ ಹಲವು ಕ್ರಮ
April 18, 2025
6:35 AM
by: The Rural Mirror ಸುದ್ದಿಜಾಲ
ಬೆಂಗಳೂರು-ಮುರುಡೇಶ್ವರ ಮತ್ತು ಬೆಂಗಳೂರು-ಕಣ್ಣೂರು ರೈಲು | ಎಲ್ ಹೆಚ್ ಬಿ ಬೋಗಿ ಅಳವಡಿಸಲು ನೈರುತ್ಯ ರೈಲ್ವೆ  ಸಜ್ಜು
April 18, 2025
6:23 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group