ರಬ್ಬರ್‌ ಕೃಷಿ | ಕೃಷಿಯಲ್ಲಿ ಮಾರ್ಪಾಡು – ಹೆಚ್ಚು ಇಳುವರಿ ಪಡೆಯುತ್ತಿರುವ ಕೃಷಿಕ |

September 26, 2024
10:30 PM

ಕೇರಳ ಹಾಗೂ ಕರ್ನಾಟಕ ಗಡಿಭಾಗದಲ್ಲಿ ರಬ್ಬರ್‌ ಕೃಷಿ ಕಳೆದ ಕೆಲವು ವರ್ಷಗಳಿಂದ ಬೆಳೆದಿದೆ. ಹೊಸ ಪ್ರಯೋಗಗಳು ರಬ್ಬರ್‌ ಕೃಷಿಯಲ್ಲಿ ಕರ್ನಾಟಕದಲ್ಲಿ ಬಹಳಷ್ಟು ನಡೆದಿಲ್ಲ. ಕಾಸರಗೋಡು ಜಿಲ್ಲೆಯ ಬೆಳ್ಳೆಚ್ಚಾಲು ಪ್ರದೇಶದ ಮುಳ್ಳಂಕೊಚ್ಚಿಯ ಮುರಳಿ ಸುಬ್ಬರಾವ್‌ ಅವರು ರಬ್ಬರ್‌ ಕೃಷಿಯಲ್ಲಿ ಹೊಸ ಮಾರ್ಪಾಡುಗಳನ್ನು ಮಾಡಿ ಹೆಚ್ಚಿನ ಇಳುವರಿಯನ್ನು ಪಡೆಯುತ್ತಿದ್ದಾರೆ. …..ಮುಂದೆ ಓದಿ….

Advertisement
Advertisement

 

Advertisement

ದೇಶದ ಕೆಲವು ರಾಜ್ಯಗಳಲ್ಲಿ ರಬ್ಬರ್‌ ಕೃಷಿ ಆರಂಭಗೊಂಡ ಬಳಿಕ ಕೇರಳದಲ್ಲಿ ವ್ಯಾಪಕವಾಗಿ ರಬ್ಬರ್‌ ಕೃಷಿ ಹರಡಿಕೊಂಡಿತ್ತು.  ಕರ್ನಾಟಕದಲ್ಲಿ 1980 ರ ನಂತರ ರಬ್ಬರ್‌ ಕೃಷಿ ಬಹಳಷ್ಟು ಕಡೆ ವಿಸ್ತರಣೆಯಾಗಿತ್ತು. ಅದರಲ್ಲೂ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ಭಾಗದಲ್ಲಿ ಮಾತ್ರವೇ ರಬ್ಬರ್‌ ಕೃಷಿ ಹೆಚ್ಚಿನ ಪ್ರಮಾಣದಲ್ಲಿದೆ. ಉಳಿದ ತಾಲೂಕು, ಜಿಲ್ಲೆಗಳಲ್ಲಿ ವಾತಾವರಣದ ಕಾರಣದಿಂದ ಅಷ್ಟೊಂದು ಚೆನ್ನಾಗಿ ಬೆಳೆದಿಲ್ಲ, ವಿಸ್ತರಣೆಯೂ ಆಗಿಲ್ಲ. ಹಾಗೆಂದು ಈ ಕೃಷಿಯಲ್ಲಿ ಕೇರಳದಲ್ಲಿ ನಡೆದಿರುವಷ್ಟು ಪ್ರಯೋಗಗಳು ಕರ್ನಾಟಕದಲ್ಲಿ ನಡೆದಿಲ್ಲ. ಇದೀಗ ಕರ್ನಾಟಕದಲ್ಲಿ 1980 ರ ಆಸುಪಾಸಿನಲ್ಲಿ ರಬ್ಬರ್‌ ಪ್ಲಾಂಟೇಶನ್‌ ಮಾಡಿರುವ ಬಹುತೇಕ ಎಲ್ಲರೂ ಮರು ಪ್ಲಾಟೇಂಶನ್‌ ಮಾಡಿದ್ದಾರೆ.  ಆದರೆ ಈ ಕೃಷಿಯಲ್ಲಿ ಹೊಸ ಮಾರ್ಪಾಡುಗಳನ್ನು ಮಾಡಿಕೊಂಡರೆ ದೀರ್ಘಾವಧಿಯಾಗಿ ರಬ್ಬರ್‌ ಉಳಿಸಿಕೊಳ್ಳಬಹುದು ಹಾಗೂ ಹೆಚ್ಚಿನ ಇಳುವರಿಯನ್ನೂ ತೆಗೆಯಲು ಸಾಧ್ಯ ಎಂಬುದನ್ನು ಮುಳ್ಳಂಕೊಚ್ಚಿಯ ಮುರಳಿ ಸುಬ್ಬರಾವ್‌ ಹೇಳುತ್ತಾರೆ.

Advertisement

ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಗ್ರಾಮದ ಬೆಳ್ಳೆಚ್ಚಾಲು ಪ್ರದೇಶದ ಮುಳ್ಳಂಕೊಚ್ಚಿ ದಿವಂಗತ ಗೋವಿಂದ ಭಟ್ಟರು ಸುಮಾರು 1981 ರಲ್ಲಿ ರಬ್ಬರ್‌ ಪ್ಲಾಂಟೇಶನ್‌ ಮಾಡಿದ್ದರು. ಇಂದಿಗೂ ಈ ಮರಗಳನ್ನು ಟ್ಯಾಪಿಂಗ್‌ ಮಾಡಲಾಗುತ್ತಿದೆ, ಉತ್ತಮ ಇಳುವರಿಯೂ ಲಭ್ಯವಾಗುತ್ತಿದೆ. ಈಗ ಕಳೆದ 3 ವರ್ಷಗಳಿಂದ ದಿವಂಗತ ಗೋವಿಂದ ಭಟ್ಟರ ಪುತ್ರ  ಮುರಳಿ ಸುಬ್ಬರಾವ್‌ ಅವರು ಕೃಷಿಯನ್ನು ಮುನ್ನಡೆಸುತ್ತಿದ್ದಾರೆ. ಕೃಷಿಯಲ್ಲಿ ಮಾಡಿಕೊಂಡಿರುವ ಮಾರ್ಪಾಡುಗಳೇ ಈ ಇಳುವರಿಗೆ ಕಾರಣ ಎನ್ನುತ್ತಾರೆ.…..ಮುಂದೆ ಓದಿ….

Advertisement

ಮುರಳಿ ಅವರು ಹೇಳುವಂತೆ,

1981 ರ ಮಳೆಗಾಲ ರಬ್ಬರ್‌ ಪ್ಲಾಂಟೇಶನ್‌ ನನ್ನ ತಂದೆ ಗೋವಿಂದ ಭಟ್‌ ಮಾಡಿದ್ದರು. ಆಗ ರಬ್ಬರ್‌ ಬೋರ್ಡ್‌ ದೂರದಲ್ಲಿತ್ತು. ಅಲ್ಲಿಂದ ಮಾಹಿತಿ ಪಡೆದುಕೊಂಡು ಬಂದು ಇಲ್ಲಿ ರಬ್ಬರ್‌ ಕೃಷಿಯನ್ನು ಮಾಡಿದ್ದರು. ನೀರು ಕಡಿಮೆ ಇರುವ ಜಾಗ ಇದಾಗಿತ್ತು. ಇದಕ್ಕಾಗಿ ನೀರು ಆಶ್ರಯ ಕಡಿಮೆ ಇರುವ ಕೃಷಿಯೇ ಆಗಬೇಕೆಂದು ರಬ್ಬರ್‌ ಆಯ್ಕೆ ಮಾಡಿಕೊಂಡಿದ್ದರು. ಕರ್ನಾಟಕ-ಕೇರಳ ಗಡಿಭಾಗದ ಇಲ್ಲಿ ರಬ್ಬರ್‌ ಕೃಷಿ ಮಾಡುವುದು ಆಗ ಸಾಹಸದ ಕೆಲಸವೇ ಆಗಿತ್ತು. ಆ ಸವಾಲುಗಳನ್ನು ದಾಟಿ ತಂದೆಯವರು ರಬ್ಬರ್‌ ಕೃಷಿಯನ್ನು ಮುನ್ನಡೆಸಿದ್ದರು. ಸಾಮಾನ್ಯವಾಗಿ ಒಂದು ತಲೆಮಾರಿಗೆ ರಬ್ಬರ್‌ ಕೃಷಿ ಎಂದು ಹೇಳುತ್ತಾರೆ. ಅಂದರೆ ಸಾಮಾನ್ಯವಾಗಿ 20-25 ವರ್ಷ ಇಳುವರಿ ನೀಡುತ್ತದೆ. ನಂತರ ಮರ ಕಟಾವು ಮಾಡಿ ಮರು ನಾಟಿ ಮಾಡಬೇಕು ಎನ್ನುತ್ತಾರೆ. ಆದರೆ ಇಲ್ಲಿ ಈಗಲೂ ಅದೇ ಮರವನ್ನು ಟ್ಯಾಪಿಂಗ್ ಮಾಡಲಾಗುತ್ತಿದೆ. ಇದಕ್ಕೆ ಕಾರಣ ನಾವು ಮಾಡಿಕೊಂಡಿರುವ ಕೆಲವು ಮಾರ್ಪಾಡುಗಳು ಕಾರಣ. 7 ದಿನಕ್ಕೊಂದು ಟ್ಯಾಪಿಂಗ್‌, ಔಷಧಿಯನ್ನು ಹಚ್ಚಿ ಟ್ಯಾಪಿಂಗ್‌ ಮಾಡುವುದು ಮತ್ತು ಇತರ ಕೆಲವು ಮಾರ್ಪಾಡುಗಳು ಕಾರಣವಾಗಿದೆ. ಈ ರೀತಿ ಮಾರ್ಪಾಡಿನ ಕಾರಣದಿಂದ ವರ್ಷಕ್ಕೆ 6 ಇಂಚು ಮಾತ್ರವೇ ಮರ ಟ್ಯಾಪಿಂಗ್‌ ಮಾಡಿ ಮುಗಿಯುತ್ತದೆ.ಹೆಚ್ಚಿನ ಇಳುವರಿ ಇದೆ, ರೋಗಗಳು ಕಡಿಮೆ ಇದೆ. ಕೆಲಸ ಕಡಿಮೆ ಇದೆ  ಕೆಲಸದ ಅವಧಿ ಹೆಚ್ಚು ಇರುತ್ತದೆ.

Advertisement

ರಬ್ಬರ್‌ ಕೃಷಿಯಲ್ಲಿ ಇಂತಹದ್ದೊಂದು ಮಾರ್ಪಾಡುಗಳನ್ನು ಮಾಡಿಕೊಂಡಿರುವ ಕಾರಣದಿಂದ ರಬ್ಬರ್‌ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ ಮುಳ್ಳಂಕೊಚ್ಚಿಯ ಮುರಳಿ ಸುಬ್ಬರಾವ್‌. ಯಾವುದೇ ಕೃಷಿಯಲ್ಲೂ ಆದಾಯದ ಮಾದರಿಗಳನ್ನು ಸರಿಯಾಗಿ ಮಾಡಿಕೊಂಡರೆ ಕೃಷಿಯೂ ಯಶಸ್ವಿ, ಸೋಲು ಇಲ್ಲ ಎನ್ನುವುದರಲ್ಲಿ ಎರಡು ಮಾತಿಲ್ಲ. ಮುರಳಿ ಹಾಗೂ ಅವರ ತಂದೆಯವರ ಪ್ರಯೋಗ ಸ್ತುತ್ಯರ್ಹ. (ಹೆಚ್ಚಿನ ಮಾಹಿತಿಗೆ ವಿಡಿಯೋ ಇದೆ…)

In recent years, rubber cultivation has been on the rise along the border of Kerala and Karnataka. However, there have been few new experiments in rubber cultivation in Karnataka. Murali Subbarao from Mullankochi in the Bellechalu area of Kasaragod district has introduced innovative changes in rubber cultivation, resulting in higher yields.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

ಇದನ್ನೂ ಓದಿ

 ಕ್ಯಾನ್ಸರ್ ನಿಯಂತ್ರಿಸುವಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯ | ಬಸವರಾಜ ಬೊಮ್ಮಾಯಿ
September 26, 2024
8:21 PM
by: ದ ರೂರಲ್ ಮಿರರ್.ಕಾಂ
ಸಾಮಾಜಿಕ ಬಹಿಷ್ಕಾರ ಪದ್ದತಿಯನ್ನು ಬೇರು ಸಮೇತ ಕೀಳಬೇಕು | ಶ್ಯಾಂ ಭಟ್
September 26, 2024
8:15 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಳೆ ವಿಸ್ತರಣೆ ಚರ್ಚೆ | ಭಾರತದಲ್ಲಿ ಅಡಿಕೆ ಗಿಡ ನಾಟಿ ನಿಷೇಧ ಹೇಳಿಕೆಗೆ ಮಿಜೋರಾಂನಲ್ಲಿ ವಿರೋಧ |
September 26, 2024
6:09 PM
by: ದ ರೂರಲ್ ಮಿರರ್.ಕಾಂ
ಪ್ಯಾನ್-ಡಿ ಮತ್ತು ಪ್ಯಾರಸಿಟಮಾಲ್ ಸೇರಿದಂತೆ 59 ಔಷಧಿಗಳು ಗುಣಮಟ್ಟದಿಂದ ಕೂಡಿಲ್ಲ…! | ಸ್ಯಾಂಪಲ್‌ ಪರೀಕ್ಷೆ ವೇಳೆ ಬಹಿರಂಗ |
September 26, 2024
3:07 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror