Advertisement
The Rural Mirror ವಾರದ ವಿಶೇಷ

ನಾಗಾಲ್ಯಾಂಡ್‌ ಆ ಹಳ್ಳಿಯ ಜನರ ಒಗ್ಗಟ್ಟು ದೇಶಕ್ಕೆ ಮಾದರಿ ಹೇಗೆ ಗೊತ್ತಾ….? | ಆ ವಿಡಿಯೋ ಒಗ್ಗಟ್ಟು ಸೂಚಿಸುತ್ತಿದೆ…! …! |

Share

Advertisement

ನಾಗಾಲ್ಯಾಂಡ್‌ ಒಂದಿಲ್ಲೊಂದು ಕಾರಣದಿಂದ ಸುದ್ದಿ ಮಾಡುತ್ತಲೇ ಇರುತ್ತದೆ. ಈ ಬಾರಿ ಆ ಪುಟ್ಟ ಹಳ್ಳಿಯ ಜನರ ಒಗ್ಗಟ್ಟಿನ ಮೂಲಕ ಸುದ್ದಿಯಾಗಿದೆ. ಅದು ಸುಮಾರು  2  ತಿಂಗಳ ಹಿಂದಿನ ಕತೆ. ಈ ಗ್ರಾಮದ ಸಾವಿರಾರು ಮಂದಿ ಸೇರಿ ಕಮರಿಗೆ ಬಿದ್ದ ಲಾರಿಯನ್ನು ಎಳೆದು ಮೇಲಕ್ಕೆತ್ತಿದ ರೀತಿ ಹಾಗೂ ಒಗ್ಗಟ್ಟು ಇಡೀ ದೇಶಕ್ಕೆ ಮಾದರಿಯಾಯಿತು.

ನಾಗಾಲ್ಯಾಂಡ್‌ನ ಫೆಕ್‌ ಜಿಲ್ಲೆಯ ಕುಟ್ಸಾಪೋ  ಗ್ರಾಮದಲ್ಲಿ ನಡೆದ ಘಟನೆ ಇದು. ಶುಂಠಿ ತುಂಬಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಮುಖ್ಯ ರಸ್ತೆಯಿಂದ  ಸುಮಾರು 100-120 ಅಡಿಗಳಷ್ಟು ಕೆಳಗೆ ಬಿದ್ದಿತ್ತು. ಲಾರಿಯಲ್ಲಿ ಒಟ್ಟು 8 ಜನರಿದ್ದರು, ಮತ್ತು ಚಾಲಕನಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿತ್ತು.ಮೂಲಭೂತ ಸೌಲಭ್ಯದ ಕೊರತೆ ಇರುವ ಈ ಹಳ್ಳಿಯ ಜನರು ಲಾರಿಗೆ ಹಗ್ಗ ಕಟ್ಟಿ ಊರಿನ ಜನರೆಲ್ಲಾ ಸೇರಿ ಎಳೆದೇ ಬಿದ್ದ ಲಾರಿಯನ್ನು ಮೇಲಕ್ಕೆತ್ತಿದ್ದರು. ಈ ಹಳ್ಳಿಯಲ್ಲಿ  ಯಾರಿಗೆ ಏನೇ ಆದರೂ ಎಲ್ಲರೂ ಒಂದಾಗಿ ಸಹಾಯ ಮಾಡುವುದು  ಇಲ್ಲಿನ ಜನರ ಸ್ವಭಾವ. ಹೀಗಾಗಿ ಅಲ್ಲಿ ಇದು ಅಚ್ಚರಿಯ ಸಂಗತಿಯಲ್ಲ, ಆದರೆ ಅಧಿಕಾರಿಯೊಬ್ಬರು ಹಾಗೂ ಜನಪ್ರತಿನಿಧಿಯೊಬ್ಬರು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಬಳಿಕ ಎಲ್ಲೆಡೆ ಈ ಹಳ್ಳಿಯ ಒಗ್ಗಟ್ಟು ಬೆಳಕಿಗೆ ಬಂದಿದೆ ಹಾಗೂ ಅಚ್ಚರಿಗೂ ಕಾರಣವಾಯಿತು.

ಗ್ರಾಮಸ್ಥರ ಪ್ರಕಾರ, ನಾಗಾಲ್ಯಾಂಡ್ ನ ಈ ಪ್ರದೇಶದಲ್ಲಿ ಕಿರಿದಾದ ರಸ್ತೆ ಇರುವುದರಿಂದ ಲಾರಿಯು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿತ್ತು. ಈ ಜಿಲ್ಲೆಯಲ್ಲಿ ಬಹುತೇಕ ಮಂದಿ ಶುಂಠಿ ಬೆಳೆಯುತ್ತಾರೆ, ಹೀಗಾಗಿ ಇದರ ಸಾಗಾಟದ ಸಂದರ್ಭ ಲಾರಿ ಉರುಳಿ ಬಿದ್ದಿತ್ತು. ಹೀಗೆ ಬಿದ್ದ ಲಾರಿಯನ್ನು ತಕ್ಷಣವೇ ತೆಗೆಯುವ ಪ್ರಯತ್ನ ನಡೆದಿರಲಿಲ್ಲ. ಊರಿನ ಜಾತ್ರೆ ಮುಗಿದ ಬಳಿಕ ಜನರೆಲ್ಲಾ ಸೇರಿ ಲಾರಿಯನ್ನು ಎಳೆದರು. ಸುಮಾರು ಅರ್ಧ ಗಂಟೆಯ ಪ್ರಯತ್ನದಲ್ಲಿ  ಗ್ರಾಮಸ್ಥರು ಲಾರಿಯನ್ನು ಎಳೆದರು. ಬಳ್ಳಿ ಕಟ್ಟಿ ಎಳೆಯುತ್ತಾ ಬಂದರೆ , ಲಾರಿ ಹಿಂದಕ್ಕೆ ಜಾರದಂತೆ ಸಲಾಕೆ ಇತ್ಯಾದಿಗಳನ್ನು ಕಟ್ಟಿದ್ದರು.

ಈ ಘಟನೆಯ ಬಗ್ಗೆ ಮಾತನಾಡಿದ ಅಲ್ಲಿನ ವಿಭಾಗೀಯ ಅಧಿಕಾರಿ ಭವಾನಿ ಅವರು, ಈ ಗ್ರಾಮದ ನಿವಾಸಿಗಳು ಸೌಹಾರ್ದತೆ ಹಾಗೂ ಒಗ್ಗಟ್ಟಿಗೆ ಅಚ್ಚರಿ ಪಡಬೇಕಿಲ್ಲ. ಇಲ್ಲಿ ಇದು ಮಾಮೂಲು ಸಂಗತಿಯಾಗಿದೆ.ಈ ಪ್ರದೇಶದಲ್ಲಿ ಮೂಲಭೂತ ಸೌಲಭ್ಯದ ಕೊರತೆ ಇದೆ. ಇಲ್ಲಿನ ಒಂದು ಕುಟುಂಬವು ತೊಂದರೆಯಲ್ಲಿದ್ದರೆ ಇಡೀ ಗ್ರಾಮವೇ ಅವರ ಜೊತೆ ನಿಲ್ಲುತ್ತದೆ ಎನ್ನುತ್ತಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ದೇಶದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿತ : ಮಳೆಯ ಕೊರತೆ ಪರಿಣಾಮ

ಮಳೆಯ ಕೊರತೆಯಿಂದ ದೇಶದ ಜಲಾಶಯಗಳ ನೀರಿನ ಮಟ್ಟ ಕುಸಿದಿರುವುದು ಬೇಸಿಗೆ ತಿಂಗಳುಗಳಲ್ಲಿ ನೀರಿನ…

12 minutes ago

ಭಾರತ–ಬ್ರೆಜಿಲ್ ಕೃಷಿ ಸಹಕಾರ : ನೈಸರ್ಗಿಕ ಕೃಷಿಗೆ ಒತ್ತು, ಶೀಘ್ರದಲ್ಲೇ MoU

ಭಾರತ ಮತ್ತು ಬ್ರೆಜಿಲ್ ನಡುವೆ ಕೃಷಿ ಕ್ಷೇತ್ರದಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಮಹತ್ವದ…

19 minutes ago

ಕರಾವಳಿಯಲ್ಲಿ ಅಕಾಲಿಕ ಮಳೆ ಅಬ್ಬರ | ಸುಬ್ರಹ್ಮಣ್ಯದ ಬಳಿ 42 ಮಿಮೀ, ಅಡಿಕೆ ಬೆಳೆಗಾರರಿಗೆ ಸಂಕಷ್ಟ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವೆಡೆ ಶನಿವಾರ ಸಂಜೆ ಅಕಾಲಿಕ ಮಳೆಯಾಗಿದ್ದು,…

13 hours ago

ಹವಾಮಾನ ವರದಿ | 21-02-2026 | ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಲಕ್ಷಣ | ಎಲ್ಲೆಲ್ಲಾ ಮಳೆ ಇದೆ…? ಎಷ್ಟು ದಿನ ಮಳೆ ಸಾಧ್ಯತೆ…?

ಕರ್ನಾಟಕದಲ್ಲಿ ಫೆಬ್ರುವರಿ 27ರವರೆಗೆ ಬಿಸಿಲಿನ ಜೊತೆಗೆ ತುಂತುರು ಮತ್ತು ಗುಡುಗು ಮಳೆಯ ಮುನ್ಸೂಚನೆ.…

19 hours ago

ಮಿಶ್ರ ಕೃಷಿಯತ್ತ ಮಲೆನಾಡಿನ ರೈತನ ಹೆಜ್ಜೆ ಅನಿವಾರ್ಯ

ಮಲೆನಾಡಿನಲ್ಲಿ ಅಡಿಕೆ ರೈತರು ಮಿಶ್ರ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಹವಾಮಾನ ಬದಲಾವಣೆ, ಬೆಲೆ…

24 hours ago

ನಂದಿನಿ ಉತ್ಪನ್ನಗಳ ವಿರುದ್ಧದ ವದಂತಿ ನಂಬಬೇಡಿ : ಗ್ರಾಹಕರಿಗೆ ಕೆಎಂಎಫ್ ಮನವಿ

ನಂದಿನಿ ಹಾಲು ಮತ್ತು ಉತ್ಪನ್ನಗಳು ಸೇವನೆಗೆ ಸಂಪೂರ್ಣ ಸುರಕ್ಷಿತವೆಂದು ಕೆಎಂಎಫ್ ಸ್ಪಷ್ಟನೆ ನೀಡಿದೆ.…

24 hours ago