Advertisement
MIRROR FOCUS

ಮಂಗಳೂರಿನಲ್ಲಿ ರಾಷ್ಟ್ರೀಯ ಚೆಸ್ ಪಂದ್ಯಾವಳಿ ಆರಂಭ | ಪ್ರಪಂಚದಲ್ಲಿ 60 ಕೋಟಿ ಚೆಸ್‌ ಆಟಗಾರರಿದ್ದಾರೆ – ಸತ್ಯಪ್ರಸಾದ್‌ ಕೋಟೆ |

Share

ರಾಷ್ಟ್ರೀಯ ಓಪನ್-ರಾಪಿಡ್ ರೇಟೆಡ್ ಚೆಸ್ ಪಂದ್ಯಾವಳಿ  ಮಂಗಳೂರು ಟೌನ್ ಹಾಲ್ ನಲ್ಲಿ ಆರಂಭಗೊಂಡಿದೆ. ಪಂದ್ಯಾಟವು ಅ.2 ಹಾಗೂ 3 ರಂದು ನಡೆಯಲಿದೆ. 9 ರೌಂಡ್ ಗಳಲ್ಲಿ ಸ್ಫರ್ಧೆ ನಡೆಯಲಿದೆ. 336  ಸ್ಫರ್ಧಾಳುಗಳು ಭಾಗವಹಿಸಿದ್ದಾರೆ.…..ಮುಂದೆ ಓದಿ….

Advertisement
Advertisement

ಕಾರ್ಯಕ್ರಮವನ್ನು MRPL ನ ಗ್ರೂಪ್‌ ಜನರಲ್‌ ಮ್ಯಾನೇಜರ್‌ (GGM) ಕೃಷ್ಣ ಹೆಗ್ಡೆ ಅವರು ಉದ್ಘಾಟಿಸಿ, ಚೆಸ್‌ ಪಂದ್ಯಾಟವು ಭಾರತ ಯುವಜನತೆಯಲ್ಲಿ ಈಗ ಬೆಳೆಯುತ್ತಿರುವ ಆಸಕ್ತಿಯಾಗಿದೆ. ಇನ್ನಷ್ಟು ಪ್ರತಿಭೆಗಳು ಚೆಸ್‌ ಮೂಲಕ ಹೊರಬರಬೇಕು ಎಂದರು.…..ಮುಂದೆ ಓದಿ….

Advertisement

ಮುಖ್ಯ ಅತಿಥಿಗಳಾಗಿದ್ದ ಪುತ್ತೂರಿನ ಜೀನಿಯಸ್‌ ಚೆಸ್‌ ಸ್ಕೂಲ್‌ ಮುಖ್ಯಸ್ಥ ಸತ್ಯಪ್ರಸಾದ್‌ ಕೋಟೆ ಮಾತನಾಡಿ, ಭಾರತದಲ್ಲಿ ಇಂದು ಚೆಸ್‌ ಕ್ರೀಡೆ ಬೆಳೆಯುತ್ತಿದೆ. ಹಲವಾರು ವಿದ್ಯಾರ್ಥಿಗಳು ಆಸಕ್ತಿಯನ್ನು ಬೆಳೆಸಿದ್ದಾರೆ. ಇದು ಉತ್ತಮವಾದ ಬೆಳವಣಿಗೆಯಾಗಿದೆ. ಆದರೆ ಇದೊಂದು ಮಾದರಿಯ ಏಕಾಗ್ರತೆ ಹಾಗೂ ಸಾಧನೆಯ ಆಟ. ಒಮ್ಮಿಂದೊಮ್ಮೆಲೇ ಇಲ್ಲಿ ಯಾವುದೂ ಸಾಧ್ಯವಿಲ್ಲ. ಸತತ ಪರಿಶ್ರಮ ಹಾಗೂ ಅಭ್ಯಾಸವೇ ಮುಖ್ಯವಾಗಿದೆ. ಇಡೀ ಪ್ರಪಂಚದಲ್ಲಿ ಒಟ್ಟು 60 ಕೋಟಿ ಚೆಸ್‌ ಆಟಗಾರರು ಇದ್ದಾರೆ.  ಅದರಲ್ಲಿ 82 ಲಕ್ಷ ಜನರು ಫಿಡೇ ರೇಟೆಡ್‌ ಆಟಗಾರರು ಇದ್ದಾರೆ. ಅದರಲ್ಲಿ 56 ಸಾವಿರ ಮಂದಿ ಭಾರತ ಆಟಗಾರರು. ಪ್ರಪಂಚದಲ್ಲಿ ಒಟ್ಟು‌ 3700 ಇಂಟರ್ನ್ಯಾಶನಲ್‌ ಮಾಸ್ಟರ್‌ಗಳು ಹಾಗೂ  2000 ಚೆಸ್ ಗ್ರಾಡ್‌ ಮಾಸ್ಟರ್‌ ಇದ್ದಾರೆ. ಭಾರತದಲ್ಲಿ  85 ಚೆಸ್‌ ಗ್ರಾಡ್‌ ಮಾಸ್ಟರ್ಸ್‌ ಮಾತ್ರವೇ ಇದ್ದಾರೆ. ಹೀಗಾಗಿ ಚೆಸ್‌ ಆಟದಲ್ಲಿ ಸಾಧನೆ ಎನ್ನುವುದು ಸುಲಭ ಅಲ್ಲ, ಅದೊಂದು ತಪಸ್ಸಿನ ಹಾಗೆ ಎಂದು ಸತ್ಯಪ್ರಸಾದ್‌ ಕೋಟೆ ವಿವರಿಸಿದರು. ವಿದ್ಯಾರ್ಥಿಗಳು ಹಾಗೂ ಚೆಸ್‌ ಆಟಗಾರರ ಸತತ ಪರಿಶ್ರಮ ಅಗತ್ಯವಿದೆ. ಅದಕ್ಕಾಗಿ ಸ್ಫರ್ಧೆಗಳಿಗೆ ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯ ಇದೆ ಎಂದು ಸತ್ಯಪ್ರಸಾದ್‌ ಕೋಟೆ ಹೇಳಿದರು.

Advertisement

ಸಭಾಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಚೆಸ್‌ ಅಸೋಸಿಯೇಶನ್‌ (DKCA) ಗೌರವಾಧ್ಯಕ್ಷ  ಸುನೀಲ್ ಆಚಾರ್ ಚೆಸ್‌ ಸ್ಫರ್ಧೆಗೆ ಸಾಕಷ್ಟು ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳು ಆಗಮಿಸಿದ್ದಾರೆ. ಇವರಿಗೆ ಎಲ್ಲರ ಸಹಕಾರ ಅಗತ್ಯವಿದೆ. ಮುಂದೆ ಸ್ಫರ್ಧೆ ನಡೆಸಲು ಕೂಡಾ ಸಹಕಾರ ಅಗತ್ಯ ಎಂದರು.

Advertisement

ಪ್ರಸ್ತಾವನೆಗೈದ ‌ರಾಜ್ಯ ಚೆಸ್‌ ಅಸೋಸಿಯೇಶನ್‌ ಉಪಾಧ್ಯಕ್ಷ,  ದಕ್ಷಿಣ ಕನ್ನಡ ಚೆಸ್‌ ಅಸೋಸಿಯೇಶನ್‌ ಅಧ್ಯಕ್ಷ ರಮೇಶ್‌ ಕೋಟೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಮಂದಿ ಕ್ರೀಡಾಪಟುಗಳು ಇದ್ದಾರೆ. ಈಗಾಗಲೇ  ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ದ ಕ ಜಿಲ್ಲೆ ಹೊಂದಿದೆ. ಇವರಿಗೆಲ್ಲಾ ಬೆಂಬಲ ಹಾಗೂ ಪ್ರೋತ್ಸಾಹ ಅಗತ್ಯ ಎಂದರು.

Advertisement

ವೇದಿಕೆಯಲ್ಲಿ ದಕ್ಷಿಣ ಕನ್ನಡ ಚೆಸ್‌ ಅಸೋಸಿಯೇಶನ್‌  ಖಜಾಂಜಿ  ಪೂರ್ಣಿಮಾ ಎಸ್ ಆಳ್ವಾ , ಪಂದ್ಯಾಟದ ಸಲಹಾಸಮಿತಿ ಸದಸ್ಯೆ ಡಾ.ಅಮರಶ್ರೀ ಶೆಟ್ಟಿ, ದಕ್ಷಿಣ ಕನ್ನಡ ಚೆಸ್‌ ಅಸೋಸಿಯೇಶನ್‌ ಉಪಾಧ್ಯಕ್ಷ ವಿ ಪಿ ಆಶೀರ್ವಾದ್‌,  ಜೊತೆಕಾರ್ಯದರ್ಶಿ ಸತ್ಯಪ್ರಸಾದ್ ಕಮಿಲ,  ಜೊತೆ ಖಜಾಂಜಿ  ರಮ್ಯಾ ಎಸ್ ರೈ ಇದ್ದರು.

ದಕ್ಷಿಣ ಕನ್ನಡ ಚೆಸ್‌ ಅಸೋಸಿಯೇಶನ್‌ ಅಧ್ಯಕ್ಷ ರಮೇಶ್‌ ಕೋಟೆ ಸ್ವಾಗತಿಸಿ, ಉಪಾಧ್ಯಕ್ಷೆ ವಾಣಿ ಎಸ್ ಪಣಿಕ್ಕರ್ ವಂದಿಸಿದರು.ದಕ್ಷಿಣ ಕನ್ನಡ ಚೆಸ್‌ ಅಸೋಸಿಯೇಶನ್‌ ಕಾರ್ಯದರ್ಶಿ ಅಭಿಷೇಕ್‌ ಕಟ್ಟೆಮಾರ್‌ ವಂದಿಸಿದರು.

Advertisement

The National Open-Rapid Rated Chess Tournament has commenced at Mangalore Town Hall. The tournament is scheduled to take place on the 2nd and 3rd of this month, with a total of 9 rounds of competition. A total of 336 participants have registered to compete in the tournament.

Advertisement

Sathyaprasad Kote, the Founder of Genius Chess School in Puttur, and the chief guest at the event, mentioned that the popularity of chess is on the rise in India. He noted that many students are showing interest in the sport, which he views as a positive development. Kote emphasized that chess is a game that requires high levels of concentration and offers opportunities for achievement.

Mastering the game of chess is no simple feat. Satyaprasad Kote emphasized the importance of persistent effort, dedication, and consistent practice in achieving success in this strategic game.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಧಾರಣೆ ಇಳಿಕೆ | ಅನಾವಶ್ಯಕ ಗೊಂದಲ ಬೇಡ | ಅಡಿಕೆಗೆ ಬೇಡಿಕೆ ಇದ್ದು ಧಾರಣೆ ಕುಸಿಯುವ ಲಕ್ಷಣವಿಲ್ಲ – ಕಿಶೋರ್‌ ಕುಮಾರ್‌ ಕೊಡ್ಗಿ |

ಅಡಿಕೆ ಧಾರಣೆಗೆ ಸಂಬಂಧಿಸಿದ  ಅನಾವಶ್ಯಕ ಗೊಂದಲಗಳಿಂದ ಕೂಡಿದ, ಆಡಿಕೆ ಬೆಳೆಗಾರರ ಆತ್ಮ ಸೈರ್ಯ ಕುಗ್ಗಿಸುವ…

22 hours ago

ಡಾಕ್ಟರೇಟ್ ಪದವಿ ಪಡೆದ ಪುತ್ತೂರಿನ ವಿವೇಕಾನಂದ ಪ್ರಾಧ್ಯಾಪಕಿ ವಿದ್ಯಾ ಎಸ್

ವಿದ್ಯಾ ಎಸ್‌ ಅವರಿಗೆ "ಕರ್ನಾಟಕದ ಹವ್ಯಕ ಸಮುದಾಯ: ಒಂದು ಸಮಾಜಶಾಸ್ತ್ರೀಯ ಅಧ್ಯಯನ" ಎಂಬ…

23 hours ago

ಹವಾಮಾನ ವರದಿ | 03-10-2024 | ಅಲ್ಲಲ್ಲಿ ತುಂತುರು ಮಳೆ ಸಾಧ್ಯತೆ | ಹಿಂಗಾರು ಆರಂಭ ವಿಳಂಬ ಸಾಧ್ಯತೆ |

ಅರಬ್ಬಿ ಸಮುದ್ರದಿಂದ ಕಡೆಯಿಂದ ವಾಯವ್ಯದಿಂದ ಹಾಗೂ ದಕ್ಷಿಣದ ಶ್ರೀಲಂಕಾ ಕಡೆಯಿಂದ ಬೀಸುತ್ತಿರುವ ಅಲ್ಪ…

23 hours ago

ಊಹಾ ಪತ್ರಿಕೋದ್ಯಮವೇ ಇಂದು ಬೇಕೇ..? – ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

ಗಂಡ ಹೆಂಡತಿ ಜಗಳವನ್ನೇ ಇಡೀ ದಿನ ತೋರಿಸಿದರೆ ಅದು ನೈತಿಕ ಪತ್ರಿಕೋದ್ಯಮನಾ  ಮುಖ್ಯಮಂತ್ರಿ …

2 days ago

ಮಕ್ಕಳಿಗೆ ಬೇಕು ಪರಿಸರದ ಸ್ಪರ್ಶ

"ಶಾಲೆಗಳು ಅಂಕ ನೀಡುವ ಕೇಂದ್ರಗಳಾಗಿ, ಅಂಕಗಳು ಉದ್ಯೋಗಾರ್ಹತೆಯ ಮಾಪಕಗಳಾಗಿ, ಈ ಮಾಪನವು ಹೆಚ್ಚು…

2 days ago

ಪರಿಸರ ಮಾಲಿನ್ಯ ತಗ್ಗಬೇಕು, ಜನರಿಗೆ ಉತ್ತಮ ಸೇವೆ ಸಿಗಬೇಕು

ಪರಿಸರ ಮಾಲಿನ್ಯ ತಗ್ಗಬೇಕು, ಜನರಿಗೆ ಉತ್ತಮ ಸೇವೆ ಸಿಗಬೇಕು ಎಂದು ವಿಮಾನ ನಿಲ್ದಾಣದಲ್ಲಿ…

2 days ago