MIRROR FOCUS

ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾಟವು  ಇಂದು ಸಮಾರೋಪಗೊಳ್ಳಲಿದೆ.

Advertisement

ಪಂದ್ಯಾಟದಲ್ಲಿ 285 ಚೆಸ್‌ ಆಟಗಾರರು ಇದ್ದಾರೆ. ಕರ್ನಾಟಕ, ಕೇರಳ, ಗೋವಾ,ತಮಿಳುನಾಡು, ಒರಿಸ್ಸಾ, ಆಂದ್ರಪ್ರದೇಶ, ಮೇಘಾಲಯ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ದೇಶದ ವಿವಿದೆಡೆಯಿಂದ ಆಟಗಾರರು ಆಗಮಿಸಿದ್ದಾರೆ.  8 ಸುತ್ತುಗಳಲ್ಲಿ ನಡೆಯುವ ಚೆಸ್‌ ಪ೦ದ್ಯಾಟದಲ್ಲಿ ಈಗಾಗಲೇ 6 ಸುತ್ತು ಪೂರ್ತಿಗೊಂಡಿದೆ. ಇನ್ನು ಎರಡು ಸುತ್ತುಗಳು ಮಂಗಳವಾರ ನಡೆಯಲಿದೆ. ಆ ಬಳಿಕ ಸಮಾರೋಪ ಸಮಾರಂಭ ನಡೆಯುತ್ತದೆ.

ರಚನಾತ್ಮಕ ಸುದ್ದಿಗಳನ್ನು ಪಡೆಯಲು  “ದ ರೂರಲ್‌ ಮಿರರ್.ಕಾಂ” ಓದಿರಿ. ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ..

ಆರು ಸುತ್ತುಗಳ ನಂತರ ದಕ್ಷಿಣ ಕನ್ನಡದ 3 ಆಟಗಾರ್ತಿಯರು 5.5 ಅಂಕಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.  ದಕ್ಷಿಣ ಕನ್ನಡದ ಮೂವರು ಉದಯೋನ್ಮುಖ ಚೆಸ್ ಆಟಗಾರರು ಆರು ತೀವ್ರ ಸುತ್ತುಗಳ ನಂತರ ‌ ಮುನ್ನಡೆ ಸಾಧಿಸಿದ್ದಾರೆ.  ಆರುಷಿ ಎಸ್ ಎಚ್ ಡಿಸಿಲ್ವಾ, ಲಕ್ಷಿತ್ ಬಿ ಸಾಲಿಯಾನ್ ಮತ್ತು ರುದ್ರ ರಾಜೀವ್ – ಅವರು 6 ರಲ್ಲಿ 5.5 ಅಂಕಗಳನ್ನು ಗಳಿಸಿದರು.

Advertisement

5 ನೇ ಸುತ್ತಿನಲ್ಲಿ, ಆರುಷಿ ಎಸ್ ಎಚ್ ಡಿಸಿಲ್ವಾ ಪಂದ್ಯಾವಳಿಯ ಅಗ್ರ ಶ್ರೇಯಾಂಕಿತ ತಮಿಳುನಾಡಿನ ಶಾಮ್ ಆರ್ ಅವರನ್ನು  ಡ್ರಾದಲ್ಲಿ ಮುಗಿಸಿದರು.  ನಂತರ ಕೇರಳದ ಸ್ಯಾಮ್ಯುಯೆಲ್ ಅಜಿತ್ ವಿರುದ್ಧ 6 ನೇ ಸುತ್ತಿನಲ್ಲಿ  ಜಯ ಸಾಧಿಸಿದರು.

ಲಕ್ಷಿತ್ ಬಿ ಸಾಲಿಯಾನ್ ಅವರು ರಕ್ಷಣಾ ಖಾತೆಗಳ ಕ್ರೀಡಾ ನಿಯಂತ್ರಣ ಮಂಡಳಿಯ ಪ್ರದೀಪ್ ತಿವಾರಿ ಅವರೊಂದಿಗೆ 5 ನೇ ಸುತ್ತಿನಲ್ಲಿ ಡ್ರಾ ಸಾಧಿಸಿ  6 ನೇ ಸುತ್ತಿನಲ್ಲಿ, ದಕ್ಷಿಣ ಕನ್ನಡದ ಇನ್ನೊಬ್ಬ ಯುವ ಆಟಗಾರ ಆರುಷ್ ಭಟ್ ವಿರುದ್ಧ ಗೆಲುವು ಸಾಧಿಸುವ ಮೂಲಕ ತಮ್ಮ ಅಂಕಗಳನ್ನು 5.5 ಕ್ಕೆ ಏರಿಸಿಕೊಂಡರು.

ಮತ್ತೊಬ್ಬ ಆಟಗಾರ್ತಿ ರುದ್ರ ರಾಜೀವ್, 5 ನೇ ಸುತ್ತಿನಲ್ಲಿ ಕೇರಳದ ನೀರದ್ ಪಿ ವಿರುದ್ಧ ಅವರು ಜಯಗಳಿಸಿದರು ಮತ್ತು 6 ನೇ ಸುತ್ತಿನಲ್ಲಿ ತಮಿಳುನಾಡಿನ ರಕ್ಷಿತ್ ಎಂ ಅವರನ್ನು ಸೋಲಿಸುವ ಮೂಲಕ ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದರು.

ರಮೇಶ್‌ ಕೋಟೆ
ಪಂದ್ಯಾಟಕ್ಕಾಗಿ ಕಳೆದ ಕೆಲವು ದಿನಗಳಿಂದ ತಂಡವಾಗಿ ದಕ್ಷಿಣ ಕನ್ನಡ ಜಿಲ್ಲಾ ಚೆಸ್‌ ಎಸೋಸಿಯೇಶನ್‌ ಕೆಲಸ ಮಾಡಿದೆ. ದೇಶದ ವಿವಿದೆಡೆಯ ಸ್ಫರ್ಧಾಳುಗಳು ಆಗಮಿಸಿ ಆಟವಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಚೆಸ್‌ ಪ್ರತಿಭೆಗಳು ಮುಂಚೂಣಿಯಲ್ಲಿರುವುದು ಖುಷಿ ನೀಡಿದೆ ಎಂದು ದಕ್ಷಿಣ ದನ್ನಡ ಜಿಲ್ಲಾ ಚೆಸ್‌ ಎಸೋಸಿಯೇಶನ್‌ ಅಧ್ಯಕ್ಷ ರಮೇಶ್‌ ಕೋಟೆ ಹೇಳಿದರು.

ಮಂಗಳವಾರ(ಇಂದು) ಎರಡು ಪಂದ್ಯಾಟ ನಡೆಯಲಿದೆ. ಆ ಬಳಿಕ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸದ ಬ್ರಿಜೇಶ್‌ ಚೌಟ, ಕೆಎಸ್‌ಆರ್‌ಟಿಸಿ ಅಧಿಕಾರಿ ರಾಜೇಶ್‌ ಶೆಟ್ಟಿ ಭಾಗವಹಿಸುವರು.

ರಚನಾತ್ಮಕ ಸುದ್ದಿಗಳನ್ನು ಪಡೆಯಲು  “ದ ರೂರಲ್‌ ಮಿರರ್.ಕಾಂ” ಓದಿರಿ. ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ..

Advertisement

The National Open Classical Rated Chess Tournament, which has been taking place at the Mangalore Town Hall since Saturday, is set to conclude today.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೇತುವಿನ ಕಾಟ: ಈ ರಾಶಿಗಳಿಗೆ ಆರೋಗ್ಯದಲ್ಲಿ ಎಚ್ಚರಿಕೆ ಬೇಕು..!

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು ಒಂದು ನಿಗೂಢ ಗ್ರಹವಾಗಿದ್ದು, ಆಧ್ಯಾತ್ಮಿಕತೆ, ಕರ್ಮ, ಮತ್ತು ಜೀವನದಲ್ಲಿ…

10 hours ago

ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ

ಕೋಲಾರ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಗ್ರಾಮ ಪಂಚಾಯತಿ ಸೇರಿದಂತೆ ಯಾವುದೇ…

10 hours ago

ಹಾವೇರಿ ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ವರದಾ, ತುಂಗಭದ್ರಾ ನದಿ

ಹಾವೇರಿ ಜಿಲ್ಲೆಯಲ್ಲಿ ಹರಿಯುವ ವರದಾ ಹಾಗೂ ತುಂಗಭದ್ರಾ ನದಿಗಳಲ್ಲಿ ನೀರಿನ ಮಟ್ಟ ಕ್ರಮೇಣ…

10 hours ago

ರಾಜ್ಯದ 10 ಜಿಲ್ಲೆಯಲ್ಲಿ ಶ್ರಮಿಕ, ತಾತ್ಕಾಲಿಕ ವಸತಿ ಸಮುಚ್ಛಯ ನಿರ್ಮಿಸಲು ನಿರ್ಧಾರ

ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, 23 ಅಸಂಘಟಿತ ವರ್ಗಗಳ…

10 hours ago

ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಮಳೆಯಿಂದಾಗಿ 148 ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿ

ಹಾವೇರಿ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರು ಮಳೆಯಿಂದಾಗಿ 148.57 ಹೆಕ್ಟೇರ್ ಪ್ರದೇಶದಲ್ಲಿದ್ದ…

10 hours ago