ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾಟವು ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರ ಉದ್ಘಾಟನೆಗೊಂಡಿದೆ. ಪಂದ್ಯಾಟವನ್ನು ಎಂಆರ್ಪಿಎಲ್ ಚೀಫ್ ಜನರಲ್ ಮ್ಯಾನೇಜರ್ ಸಂದೀಪ್ ಕುಟಿನ್ಹೋ ಉದ್ಘಾಟಿಸಿದರು.
ಪಂದ್ಯಾಟ ಉದ್ಘಾ ಟಿಸಿದ ಸಂದೀಪ್ ಕುಟಿನ್ಹೋ, ಚೆಸ್ ಪಂದ್ಯದ ಮೂಲಕ ಯೋಚನಾಶಕ್ತಿಯನ್ನು ಹೆಚ್ಚಿಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು, ಆಂತರಿಕವಾಗಿಯೂ ಹೆಚ್ಚು ಬಲಗೊಳ್ಳಬೇಕು ಎಂದರು.
ಸಭಾಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಎಸೋಸಿಯೇಶನ್ ಗೌರವಾಧ್ಯಕ್ಷ ಸುನೀಲ್ ಆಚಾರ್ ವಹಿಸಿದ್ದರು. ಅತಿಥಿಗಳಾಗಿ ದಕ ಜಿಲ್ಲಾ ಯುವಜನಸೇವಾ ನಿರ್ದೇಶಕ ಪ್ರದೀಪ್ ಡಿಸೋಜಾ ಉಪಸ್ಥಿತರಿದ್ದರು. ವೇದಿಕೆಯಲ್ಲಿ ದಕ ಜಿಲ್ಲಾ ಚೆಸ್ ಎಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟೆ , ಸಲಹಾ ಸಮಿತಿ ಸದಸ್ಯರುಗಳಾದ ಅಮರಶ್ರೀ ಶೆಟ್ಟಿ,ನ್ಯಾಯವಾದಿ ನಾರಾಯಣ್ ಎಲ್, ಹಾಗೂ ಚೆಸ್ ಎಸೋಸಿಯೇಶನ್ ಪದಾಧಿಕಾರಿಗಳಾದ ಉಪಾಧ್ಯಕ್ಷೆ ವಾಣಿ ಎಸ್ ಪಣಿಕ್ಕರ್, ಕಾರ್ಯದರ್ಶಿ ಅಭಿಷೇಕ್ ಕಟ್ಟೇಮಾರ್ , ಜೊತೆ ಕಾರ್ಯದರ್ಶಿ ಸತ್ಯಪ್ರಸಾದ್ , ಖಜಾಂಜಿ ರಮ್ಯಾ ಎಸ್ ರೈ, ಖಜಾಂಜಿ ಪೂರ್ಣಿಮ ಆಳ್ವ, ಉಪಾಧ್ಯಕ್ಷ ವಿ ಪಿ ಆಶೀರ್ವಾದ್ ಇದ್ದರು.
ಪಂದ್ಯಾಟದಲ್ಲಿ 285 ಚೆಸ್ ಆಟಗಾರರು ಇದ್ದಾರೆ. ಕರ್ನಾಟಕ, ಕೇರಳ, ಗೋವಾ,ತಮಿಳುನಾಡು, ಒರಿಸ್ಸಾ, ಆಂದ್ರಪ್ರದೇಶ, ಮೇಘಾಲಯ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ದೇಶದ ವಿವಿದೆಡೆಯಿಂದ ಆಟಗಾರರು ಆಗಮಿಸಿದ್ದಾರೆ. ಮೇ.2 ರಂದು ಪಂದ್ಯಾಟ ಆರಂಭವಾಗಬೇಕಿತ್ತು. ದ ಕ ಜಿಲ್ಲೆ ಬಂದ್ ಹಿನ್ನೆಲೆಯಲ್ಲಿ ಶನಿವಾರದಿಂದ ಪಂದ್ಯಾಟ ಆರಂಭಗೊಂಡಿದ್ದು 8 ಸುತ್ತುಗಳಲ್ಲಿ ನಡೆಯುವ ಚೆಸ್ ಪ೦ದ್ಯಾಟವು ಮೇ. 6 ರಂದ ಕೊನೆಗೊಳ್ಳಲಿದೆ.
National Open Classical- Rated Chess Tournament was Started at the Mangalore Town Hall on Saturday. The tournament was inaugurated by Sandeep Coutinho, Chief General Manager of MRPL.
Sandeep Coutinho, who inaugurated the opening of the tournament, emphasized the importance of chess matches in enhancing our cognitive abilities, contributing to t inaugurated he country’s progress, and strengthening our inner selves.
There are a total of 285 chess players participating in the tournament, hailing from different regions across the country such as Karnataka, Kerala, Goa, Tamil Nadu, Orissa, Andhra Pradesh, Meghalaya, Maharashtra, and Delhi. The tournament, scheduled to commence on May 2, was delayed until Saturday due to the Bundh in the district. The chess tournament, consisting of 8 rounds, is set to conclude on May 6.
ಆತ್ಮನಿರ್ಭರ ಯೋಜನೆಯಡಿ ಸ್ವಾವಲಂಬಿ ಬದುಕಿನ ಕನಸು ಕಂಡಿದ್ದ ಬಿ. ನಂದೀಶ್ ತಮ್ಮ ಜಮೀನಿನಲ್ಲಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತಾರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ…
16.06.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಕೃಷಿಯನ್ನು ನಂಬಿ ಕೆಲಸ ಮಾಡಿದರೆ ಯಶಸ್ಸು ಕಾಣಬಹುದು ಎಂಬುದನ್ನು ರೈತ ಯೋಗೇಶ್ ತೋರಿಸಿಕೊಟ್ಟಿದ್ದಾರೆ.…