Advertisement
ಸುದ್ದಿಗಳು

ಸೆಗಣಿಯಿಂದ ಬಣ್ಣ ತಯಾರಿಕೆ … ! | ನೈಸರ್ಗಿಕ ಬಣ್ಣಕ್ಕೀಗ ಡಿಮ್ಯಾಂಡ್ | ಮಹಿಳಾ ಸಬಲೀಕರಣದ ಒಂದು ಹೆಜ್ಜೆ |

Share

ಇಟ್ಟರೆ ಸೆಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೆ ನೋಸಲಿಗೆ ವಿಭೂತಿಯಾದೆ
ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ
ನೀನಾರಿಗಾದೆಯೊ ಎಲೆ ಮಾನವಾ

ನಿಜಕ್ಕೂ ಇದು ಸತ್ಯದ ಮಾತು.  ಇತ್ತೀಚಿನ ದಿನಗಳಲ್ಲಿ ಗೋ ಉತ್ಪನ್ನಗಳು ವಿವಿಧ ರೀತಿಯಲ್ಲಿ ಬಳಕೆಯಾಗುತ್ತಿದೆ. ಕೆಲವರು ಗೋ ಉತ್ಪನ್ನಗಳಿಂದ ಅನೇಕ ವಿವಿಧದ ಉತ್ಪನ್ನಗಳನ್ನು ಮಾಡಿ ಜೀವನ ಕಂಡಿಕೊಂಡಿದ್ದಾರೆ.  ಗೋಮೂತ್ರ, ಸೆಗಣಿ, ಹಾಲು ಅಷ್ಟೆ ಅಲ್ಲದೆ ಸತ್ತ ದನದಿಂದಲೂ ಸಾವಯವ ರಸಗೊಬ್ಬರಗಳನ್ನು ಮಾಡಿ ಪ್ರಯೋಜನ ಪಡೆಯುತ್ತಿದ್ದಾರೆ.  ಇಲ್ಲೊಂದು ಮಹಿಳಾ ಸ್ವ ಸಹಾಯ ಗುಂಪು ಸೆಗಣಿ ಮೂಲಕ ತಮ್ಮ ಜೀವನದ ಆದಾಯವನ್ನು ಕಂಡುಕೊಂಡಿದ್ದಾರೆ.

 

ಸೆಗಣಿಯಿಂದ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಮಹಿಳೆಯರು ಸ್ವ ಸಹಾಯ ಗುಂಪು ಮಾಡಿಕೊಂಡು ಸೆಗಣಿಯಿಂದ ನೈಸರ್ಗಿಕ ಬಣ್ಣ, ಚೀಲಗಳನ್ನು ತಯಾರಿಸುತ್ತಿದ್ದಾರೆ. ಆರ್‌ಐಪಿಎ ಅಡಿಯಲ್ಲಿ ಮಹಿಳೆಯರು ಹಸುವಿನ ಸೆಗಣಿಯಿಂದ ನೈಸರ್ಗಿಕ ಬಣ್ಣವನ್ನು ತಯಾರಿಸಲಾಗುತ್ತಿದೆ. ಈ ಬಣ್ಣವು ಸಂಪೂರ್ಣವಾಗಿ ನೈಸರ್ಗಿಕವಾಗಿದೆ, ಇದು ಯಾವುದೇ ಹಾನಿ ಉಂಟುಮಾಡುವುದಿಲ್ಲ ಎಂದು ತಿಳಿದುಬಂದಿದೆ.

ಛತ್ತೀಸ್‌ಗಢ ಬಿಲಾಸ್‌ಪುರದ ಕೋಟಾ ಪ್ರದೇಶದ ರಾಣಿಗಾಂವ್‌ ಆರ್‌ಐಪಿಎ ಯೋಜನೆಯಡಿ ಹಸುವಿನ ಸೆಗಣಿಯಿಂದ ನೈಸರ್ಗಿಕ ಬಣ್ಣವನ್ನು ಉತ್ಪಾದಿಸುತ್ತಿದೆ. ಈ ಬಣ್ಣವು ಸಂಪೂರ್ಣವಾಗಿ ನೈಸರ್ಗಿಕವಾಗಿದೆ. ಇದು ಯಾವುದೇ ಹಾನಿ ಉಂಟುಮಾಡುವುದಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಬಣ್ಣಗಳಿಗಿಂತ ಇದು ತುಂಬಾ ಅಗ್ಗವಾಗಿದೆ.ಇಲ್ಲಿನ ಜಾಗೃತಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಹಸುವಿನ ಸಗಣಿಯಿಂದ ಬಣ್ಣ ತಯಾರಿಸಿ ಸುಮಾರು 1 ಲಕ್ಷ 80 ಸಾವಿರ ರೂಪಾಯಿ ಸಂಪಾದಿಸಿದ್ದಾರೆ. ಅವರಿಗೆ 45 ಸಾವಿರ ರೂಪಾಯಿ ಲಾಭ ಬಂದಿದೆ. ಹೀಗೆ ತಯಾರಿಸಿದ ಈವರೆಗೆ ಸ್ವಸಹಾಯ ಸಂಘ 870 ಲೀಟರ್‌ ಬಣ್ಣ ಮಾರಾಟ ಮಾಡಿದೆ. ಇನ್ನೂ 7000 ಲೀಟರ್‌ಗೆ ಆರ್ಡರ್‌ ಬಂದಿದೆ ಎನ್ನಲಾಗಿದೆ.

 

ಕೋಟ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುವರಾಜ್ ಸಿನ್ಹಾ ಮಾತನಾಡಿ, ರಾಣಿ ಗ್ರಾಮಾಂತರ ರಿಪಾ ಕೇಂದ್ರದಲ್ಲಿ ಸ್ವಸಹಾಯ ಗುಂಪುಗಳ ಮೂಲಕ ಗ್ರಾಮಸ್ಥರು ಉತ್ತಮ ಆದಾಯಗಳಿಸುತ್ತಿದ್ದಾರೆ. ಈ ರಿಪಾ ಕೇಂದ್ರದ ಸೌಂದರ್ಯೀಕರಣ ಕಾಮಗಾರಿಗಳು ಶೀಘ್ರದಲ್ಲಿ ಪೂರ್ಣಗೊಳ್ಳಲಿವೆ.

ಸರಕಾರ ಕೈಗೊಂಡಿರುವ ಈ ಯೋಜನೆಯಿಂದ ಗ್ರಾಮಸ್ಥರಲ್ಲೂ ಸಂತಸ ಮೂಡಿದೆ. ರಾಣಿಗಾಂವ್‌ನ ರಿಪಾ ಕೇಂದ್ರದಲ್ಲಿ ತುಳಸಿಮಾತಾ ಗ್ರೂಪ್ ಮತ್ತು ಜಾಗೃತಿ ಮಹಿಳಾ ಉಳಿತಾಯ ಗುಂಪಿನಲ್ಲಿ ಒಟ್ಟು 20 ಮಹಿಳೆಯರು ಮತ್ತು 12 ಪುರುಷರು ಕೆಲಸ ಮಾಡುತ್ತಿದ್ದಾರೆ. ಸದ್ಯದಲ್ಲೇ ಈ ರಿಪಾ ಕೇಂದ್ರದಲ್ಲಿ ಬಣ್ಣ, ಚೀಲಗಳ ಜೊತೆಗೆ ಅಗರಬತ್ತಿಗಳ ತಯಾರಿಕೆಯನ್ನೂ ಆರಂಭಿಸುವ ಸಾಧ್ಯತೆ ಇದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ದೇಹ–ಮನಸ್ಸು–ಆತ್ಮದ ಸಮತೋಲನವೇ ನಿಜವಾದ ಆರೋಗ್ಯ: ಆಯುರ್ವೇದದ ಪರಮ ಗುರಿ ಆತ್ಮಜ್ಞಾನ – ರಾಘವೇಶ್ವರ ಶ್ರೀ

ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯ ಎಂದು ರಾಮಚಂದ್ರಾಪುರ ಶ್ರೀ…

17 hours ago

2050 ರ ವೇಳೆಗೆ ಭೂಕುಸಿತದ ಅಪಾಯ ಮತ್ತಷ್ಟು ಹೆಚ್ಚಳ : ಮಳೆ ತೀವ್ರತೆ, ನಗರೀಕರಣವೇ ಪ್ರಮುಖ ಕಾರಣ – ಅಧ್ಯಯನ

2050ರ ವೇಳೆಗೆ ಮಳೆಯ ತೀವ್ರತೆ ಮತ್ತು ನಗರೀಕರಣದ ಪರಿಣಾಮವಾಗಿ ಭಾರತದ ಹಲವು ಗುಡ್ಡ…

1 day ago

ಅಕಾಲದ ಹಸಿವು, ಅಸಮಯದ ನಿದ್ದೆ ದೇಹದ ಯಂತ್ರ ಕೆಟ್ಟಿರುವ ಸಂಕೇತ : ರಾಘವೇಶ್ವರ ಶ್ರೀ

ಅಕಾಲದ ಹಸಿವು ಮತ್ತು ಅಸಮಯದ ನಿದ್ದೆ ದೇಹದ ಯಂತ್ರದಲ್ಲಿ ಸಮಸ್ಯೆಯ ಸಂಕೇತ ಎಂದು…

1 day ago

ಮತ್ತೆ ಚುರುಕುಗೊಂಡ ಮಳೆ | ಸುಳ್ಯ ಮಲೆನಾಡು ಭಾಗದಲ್ಲಿ ಬೆಳಗ್ಗಿನಿಂದ ಧಾರಾಕಾರ ಮಳೆ

ಸುಳ್ಯ ತಾಲೂಕಿನ ಮಲೆನಾಡು ಭಾಗದಲ್ಲಿ ಎರಡು ದಿನಗಳ ವಿರಾಮದ ಬಳಿಕ ಮತ್ತೆ ಭಾರೀ…

1 day ago

ದೇಶದ ಅಡಿಕೆ ಉತ್ಪಾದನೆಯಲ್ಲಿ ಕರ್ನಾಟಕದ ಮೊದಲು – 75.47% ಉತ್ಪಾದನೆ, 71.56% ವಿಸ್ತೀರ್ಣದಲ್ಲಿ ಅಡಿಕೆ ಬೆಳೆ

ದೇಶದ ಅಡಿಕೆ ಉತ್ಪಾದನೆ ಹಾಗೂ ಬೆಳೆ ವಿಸ್ತೀರ್ಣದಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ ಎಂದು ಕೇಂದ್ರ…

2 days ago

ಕಳಪೆ ವಿದೇಶಿ ಅಡಿಕೆ ಆಮದು ನಿಯಂತ್ರಿಸಿ – ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ವಿದೇಶದಿಂದ ಕಳಪೆ ಅಡಿಕೆ ಆಮದು ನಿಯಂತ್ರಿಸಿ ದೇಶೀಯ ಅಡಿಕೆ ಬೆಳೆಗಾರರನ್ನು ರಕ್ಷಿಸುವಂತೆ ಸಂಸದ…

2 days ago