Advertisement
ಸುದ್ದಿಗಳು

ಸೆಗಣಿಯಿಂದ ಬಣ್ಣ ತಯಾರಿಕೆ … ! | ನೈಸರ್ಗಿಕ ಬಣ್ಣಕ್ಕೀಗ ಡಿಮ್ಯಾಂಡ್ | ಮಹಿಳಾ ಸಬಲೀಕರಣದ ಒಂದು ಹೆಜ್ಜೆ |

Share

ಇಟ್ಟರೆ ಸೆಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೆ ನೋಸಲಿಗೆ ವಿಭೂತಿಯಾದೆ
ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ
ನೀನಾರಿಗಾದೆಯೊ ಎಲೆ ಮಾನವಾ

ನಿಜಕ್ಕೂ ಇದು ಸತ್ಯದ ಮಾತು.  ಇತ್ತೀಚಿನ ದಿನಗಳಲ್ಲಿ ಗೋ ಉತ್ಪನ್ನಗಳು ವಿವಿಧ ರೀತಿಯಲ್ಲಿ ಬಳಕೆಯಾಗುತ್ತಿದೆ. ಕೆಲವರು ಗೋ ಉತ್ಪನ್ನಗಳಿಂದ ಅನೇಕ ವಿವಿಧದ ಉತ್ಪನ್ನಗಳನ್ನು ಮಾಡಿ ಜೀವನ ಕಂಡಿಕೊಂಡಿದ್ದಾರೆ.  ಗೋಮೂತ್ರ, ಸೆಗಣಿ, ಹಾಲು ಅಷ್ಟೆ ಅಲ್ಲದೆ ಸತ್ತ ದನದಿಂದಲೂ ಸಾವಯವ ರಸಗೊಬ್ಬರಗಳನ್ನು ಮಾಡಿ ಪ್ರಯೋಜನ ಪಡೆಯುತ್ತಿದ್ದಾರೆ.  ಇಲ್ಲೊಂದು ಮಹಿಳಾ ಸ್ವ ಸಹಾಯ ಗುಂಪು ಸೆಗಣಿ ಮೂಲಕ ತಮ್ಮ ಜೀವನದ ಆದಾಯವನ್ನು ಕಂಡುಕೊಂಡಿದ್ದಾರೆ.

Advertisement

 

ಸೆಗಣಿಯಿಂದ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಮಹಿಳೆಯರು ಸ್ವ ಸಹಾಯ ಗುಂಪು ಮಾಡಿಕೊಂಡು ಸೆಗಣಿಯಿಂದ ನೈಸರ್ಗಿಕ ಬಣ್ಣ, ಚೀಲಗಳನ್ನು ತಯಾರಿಸುತ್ತಿದ್ದಾರೆ. ಆರ್‌ಐಪಿಎ ಅಡಿಯಲ್ಲಿ ಮಹಿಳೆಯರು ಹಸುವಿನ ಸೆಗಣಿಯಿಂದ ನೈಸರ್ಗಿಕ ಬಣ್ಣವನ್ನು ತಯಾರಿಸಲಾಗುತ್ತಿದೆ. ಈ ಬಣ್ಣವು ಸಂಪೂರ್ಣವಾಗಿ ನೈಸರ್ಗಿಕವಾಗಿದೆ, ಇದು ಯಾವುದೇ ಹಾನಿ ಉಂಟುಮಾಡುವುದಿಲ್ಲ ಎಂದು ತಿಳಿದುಬಂದಿದೆ.

Advertisement

ಛತ್ತೀಸ್‌ಗಢ ಬಿಲಾಸ್‌ಪುರದ ಕೋಟಾ ಪ್ರದೇಶದ ರಾಣಿಗಾಂವ್‌ ಆರ್‌ಐಪಿಎ ಯೋಜನೆಯಡಿ ಹಸುವಿನ ಸೆಗಣಿಯಿಂದ ನೈಸರ್ಗಿಕ ಬಣ್ಣವನ್ನು ಉತ್ಪಾದಿಸುತ್ತಿದೆ. ಈ ಬಣ್ಣವು ಸಂಪೂರ್ಣವಾಗಿ ನೈಸರ್ಗಿಕವಾಗಿದೆ. ಇದು ಯಾವುದೇ ಹಾನಿ ಉಂಟುಮಾಡುವುದಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಬಣ್ಣಗಳಿಗಿಂತ ಇದು ತುಂಬಾ ಅಗ್ಗವಾಗಿದೆ.ಇಲ್ಲಿನ ಜಾಗೃತಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಹಸುವಿನ ಸಗಣಿಯಿಂದ ಬಣ್ಣ ತಯಾರಿಸಿ ಸುಮಾರು 1 ಲಕ್ಷ 80 ಸಾವಿರ ರೂಪಾಯಿ ಸಂಪಾದಿಸಿದ್ದಾರೆ. ಅವರಿಗೆ 45 ಸಾವಿರ ರೂಪಾಯಿ ಲಾಭ ಬಂದಿದೆ. ಹೀಗೆ ತಯಾರಿಸಿದ ಈವರೆಗೆ ಸ್ವಸಹಾಯ ಸಂಘ 870 ಲೀಟರ್‌ ಬಣ್ಣ ಮಾರಾಟ ಮಾಡಿದೆ. ಇನ್ನೂ 7000 ಲೀಟರ್‌ಗೆ ಆರ್ಡರ್‌ ಬಂದಿದೆ ಎನ್ನಲಾಗಿದೆ.

 

Advertisement

ಕೋಟ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುವರಾಜ್ ಸಿನ್ಹಾ ಮಾತನಾಡಿ, ರಾಣಿ ಗ್ರಾಮಾಂತರ ರಿಪಾ ಕೇಂದ್ರದಲ್ಲಿ ಸ್ವಸಹಾಯ ಗುಂಪುಗಳ ಮೂಲಕ ಗ್ರಾಮಸ್ಥರು ಉತ್ತಮ ಆದಾಯಗಳಿಸುತ್ತಿದ್ದಾರೆ. ಈ ರಿಪಾ ಕೇಂದ್ರದ ಸೌಂದರ್ಯೀಕರಣ ಕಾಮಗಾರಿಗಳು ಶೀಘ್ರದಲ್ಲಿ ಪೂರ್ಣಗೊಳ್ಳಲಿವೆ.

ಸರಕಾರ ಕೈಗೊಂಡಿರುವ ಈ ಯೋಜನೆಯಿಂದ ಗ್ರಾಮಸ್ಥರಲ್ಲೂ ಸಂತಸ ಮೂಡಿದೆ. ರಾಣಿಗಾಂವ್‌ನ ರಿಪಾ ಕೇಂದ್ರದಲ್ಲಿ ತುಳಸಿಮಾತಾ ಗ್ರೂಪ್ ಮತ್ತು ಜಾಗೃತಿ ಮಹಿಳಾ ಉಳಿತಾಯ ಗುಂಪಿನಲ್ಲಿ ಒಟ್ಟು 20 ಮಹಿಳೆಯರು ಮತ್ತು 12 ಪುರುಷರು ಕೆಲಸ ಮಾಡುತ್ತಿದ್ದಾರೆ. ಸದ್ಯದಲ್ಲೇ ಈ ರಿಪಾ ಕೇಂದ್ರದಲ್ಲಿ ಬಣ್ಣ, ಚೀಲಗಳ ಜೊತೆಗೆ ಅಗರಬತ್ತಿಗಳ ತಯಾರಿಕೆಯನ್ನೂ ಆರಂಭಿಸುವ ಸಾಧ್ಯತೆ ಇದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆ ಕನಿಷ್ಠ ಆಮದು ಬೆಲೆ (MIP) ಪರಿಷ್ಕರಣೆ – ರೈತರ ಹಿತಾಸಕ್ತಿಗೆ ಕೇಂದ್ರ ಸರ್ಕಾರದ ತ್ವರಿತ ನೀತಿ ನಿರ್ಧಾರ ಅನಿವಾರ್ಯ

ಅಡಿಕೆ ಉತ್ಪಾದನಾ ವೆಚ್ಚ ಭಾರೀ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕನಿಷ್ಠ ಆಮದು ಬೆಲೆ (MIP)ಯನ್ನು…

15 hours ago

ಮುಂಗಾರು ಬೆಳೆ ವಿಮೆ ನೋಂದಣಿಗೆ ಆಗಸ್ಟ್‌ 14 ಕೊನೆಯ ದಿನ – ಭತ್ತ ಬೆಳೆಗಾರರು ತಪ್ಪದೇ ಹೆಸರು ನೋಂದಾಯಿಸಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಭತ್ತದ ಬೆಳೆ ವಿಮೆ ನೋಂದಣಿ ಆರಂಭವಾಗಿದ್ದು, ಆಗಸ್ಟ್‌…

16 hours ago

ಎಲ್ ನಿನೋ ಎಚ್ಚರಿಕೆ – ದೇಶದಲ್ಲಿ 43% ಮಳೆ ಕೊರತೆ, ಕರ್ನಾಟಕ ಸೇರಿ 12 ರಾಜ್ಯಗಳ 315 ಜಿಲ್ಲೆಗಳಿಗೆ ಕೇಂದ್ರದ ವಿಶೇಷ ಕೃಷಿ ಯೋಜನೆ

ದೇಶದಲ್ಲಿ 43% ಮಳೆ ಕೊರತೆ ದಾಖಲಾಗಿರುವ ಹಿನ್ನೆಲೆ ಎಲ್ ನಿನೋ ಪರಿಣಾಮ ಎದುರಿಸಲು…

1 day ago

ತೆಂಗು ಬೆಳೆಗೂ ಏರಿದ ಉತ್ಪಾದನಾ ವೆಚ್ಚ, ರೈತರು ಸಂಕಷ್ಟದಲ್ಲಿ – ತಮಿಳುನಾಡಿನಲ್ಲಿ ತೆಂಗು ಬೆಳೆಗಾರರಿಗೆ ಕಾರ್ಮಿಕರ ಕೊರತೆ

ತೆಂಗು ಬೆಳೆಗಾರರು ಕಾರ್ಮಿಕ ಕೊರತೆ ಮತ್ತು ಹೆಚ್ಚುತ್ತಿರುವ ಕೂಲಿ ವೆಚ್ಚದಿಂದ ಸಂಕಷ್ಟ ಎದುರಿಸುತ್ತಿದ್ದಾರೆ.…

2 days ago

ಮುಂಗಾರು ಮತ್ತಷ್ಟು ಚುರುಕು – ಕರಾವಳಿ ಕರ್ನಾಟಕದಲ್ಲಿ ಜೂನ್ 26 ರವರೆಗೆ ಭಾರೀ ಮಳೆ ಎಚ್ಚರಿಕೆ

ಕರಾವಳಿ ಕರ್ನಾಟಕದಲ್ಲಿ ಜೂನ್ 26ರವರೆಗೆ ಭಾರೀದಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ…

3 days ago

ಅಡಿಕೆ ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ತಕ್ಷಣ ಕ್ರಮ – ಸರ್ಕಾರಕ್ಕೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಒತ್ತಾಯ

ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಕಾಪರ್ ಸಲ್ಫೇಟ್ ಕೊರತೆ, ಬೆಳೆ ವಿಮೆ ವಿಳಂಬ, ಕಳಪೆ…

3 days ago