Advertisement
ಸುದ್ದಿಗಳು

ಸೆಗಣಿಯಿಂದ ಬಣ್ಣ ತಯಾರಿಕೆ … ! | ನೈಸರ್ಗಿಕ ಬಣ್ಣಕ್ಕೀಗ ಡಿಮ್ಯಾಂಡ್ | ಮಹಿಳಾ ಸಬಲೀಕರಣದ ಒಂದು ಹೆಜ್ಜೆ |

Share

ಇಟ್ಟರೆ ಸೆಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೆ ನೋಸಲಿಗೆ ವಿಭೂತಿಯಾದೆ
ತಟ್ಟದೆ ಹಾಕಿದರೆ ಮೇಲು ಗೊಬ್ಬರವಾದೆ
ನೀನಾರಿಗಾದೆಯೊ ಎಲೆ ಮಾನವಾ

ನಿಜಕ್ಕೂ ಇದು ಸತ್ಯದ ಮಾತು.  ಇತ್ತೀಚಿನ ದಿನಗಳಲ್ಲಿ ಗೋ ಉತ್ಪನ್ನಗಳು ವಿವಿಧ ರೀತಿಯಲ್ಲಿ ಬಳಕೆಯಾಗುತ್ತಿದೆ. ಕೆಲವರು ಗೋ ಉತ್ಪನ್ನಗಳಿಂದ ಅನೇಕ ವಿವಿಧದ ಉತ್ಪನ್ನಗಳನ್ನು ಮಾಡಿ ಜೀವನ ಕಂಡಿಕೊಂಡಿದ್ದಾರೆ.  ಗೋಮೂತ್ರ, ಸೆಗಣಿ, ಹಾಲು ಅಷ್ಟೆ ಅಲ್ಲದೆ ಸತ್ತ ದನದಿಂದಲೂ ಸಾವಯವ ರಸಗೊಬ್ಬರಗಳನ್ನು ಮಾಡಿ ಪ್ರಯೋಜನ ಪಡೆಯುತ್ತಿದ್ದಾರೆ.  ಇಲ್ಲೊಂದು ಮಹಿಳಾ ಸ್ವ ಸಹಾಯ ಗುಂಪು ಸೆಗಣಿ ಮೂಲಕ ತಮ್ಮ ಜೀವನದ ಆದಾಯವನ್ನು ಕಂಡುಕೊಂಡಿದ್ದಾರೆ.

 

ಸೆಗಣಿಯಿಂದ ವಿವಿಧ ರೀತಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಮಹಿಳೆಯರು ಸ್ವ ಸಹಾಯ ಗುಂಪು ಮಾಡಿಕೊಂಡು ಸೆಗಣಿಯಿಂದ ನೈಸರ್ಗಿಕ ಬಣ್ಣ, ಚೀಲಗಳನ್ನು ತಯಾರಿಸುತ್ತಿದ್ದಾರೆ. ಆರ್‌ಐಪಿಎ ಅಡಿಯಲ್ಲಿ ಮಹಿಳೆಯರು ಹಸುವಿನ ಸೆಗಣಿಯಿಂದ ನೈಸರ್ಗಿಕ ಬಣ್ಣವನ್ನು ತಯಾರಿಸಲಾಗುತ್ತಿದೆ. ಈ ಬಣ್ಣವು ಸಂಪೂರ್ಣವಾಗಿ ನೈಸರ್ಗಿಕವಾಗಿದೆ, ಇದು ಯಾವುದೇ ಹಾನಿ ಉಂಟುಮಾಡುವುದಿಲ್ಲ ಎಂದು ತಿಳಿದುಬಂದಿದೆ.

ಛತ್ತೀಸ್‌ಗಢ ಬಿಲಾಸ್‌ಪುರದ ಕೋಟಾ ಪ್ರದೇಶದ ರಾಣಿಗಾಂವ್‌ ಆರ್‌ಐಪಿಎ ಯೋಜನೆಯಡಿ ಹಸುವಿನ ಸೆಗಣಿಯಿಂದ ನೈಸರ್ಗಿಕ ಬಣ್ಣವನ್ನು ಉತ್ಪಾದಿಸುತ್ತಿದೆ. ಈ ಬಣ್ಣವು ಸಂಪೂರ್ಣವಾಗಿ ನೈಸರ್ಗಿಕವಾಗಿದೆ. ಇದು ಯಾವುದೇ ಹಾನಿ ಉಂಟುಮಾಡುವುದಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಬಣ್ಣಗಳಿಗಿಂತ ಇದು ತುಂಬಾ ಅಗ್ಗವಾಗಿದೆ.ಇಲ್ಲಿನ ಜಾಗೃತಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಹಸುವಿನ ಸಗಣಿಯಿಂದ ಬಣ್ಣ ತಯಾರಿಸಿ ಸುಮಾರು 1 ಲಕ್ಷ 80 ಸಾವಿರ ರೂಪಾಯಿ ಸಂಪಾದಿಸಿದ್ದಾರೆ. ಅವರಿಗೆ 45 ಸಾವಿರ ರೂಪಾಯಿ ಲಾಭ ಬಂದಿದೆ. ಹೀಗೆ ತಯಾರಿಸಿದ ಈವರೆಗೆ ಸ್ವಸಹಾಯ ಸಂಘ 870 ಲೀಟರ್‌ ಬಣ್ಣ ಮಾರಾಟ ಮಾಡಿದೆ. ಇನ್ನೂ 7000 ಲೀಟರ್‌ಗೆ ಆರ್ಡರ್‌ ಬಂದಿದೆ ಎನ್ನಲಾಗಿದೆ.

 

ಕೋಟ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುವರಾಜ್ ಸಿನ್ಹಾ ಮಾತನಾಡಿ, ರಾಣಿ ಗ್ರಾಮಾಂತರ ರಿಪಾ ಕೇಂದ್ರದಲ್ಲಿ ಸ್ವಸಹಾಯ ಗುಂಪುಗಳ ಮೂಲಕ ಗ್ರಾಮಸ್ಥರು ಉತ್ತಮ ಆದಾಯಗಳಿಸುತ್ತಿದ್ದಾರೆ. ಈ ರಿಪಾ ಕೇಂದ್ರದ ಸೌಂದರ್ಯೀಕರಣ ಕಾಮಗಾರಿಗಳು ಶೀಘ್ರದಲ್ಲಿ ಪೂರ್ಣಗೊಳ್ಳಲಿವೆ.

ಸರಕಾರ ಕೈಗೊಂಡಿರುವ ಈ ಯೋಜನೆಯಿಂದ ಗ್ರಾಮಸ್ಥರಲ್ಲೂ ಸಂತಸ ಮೂಡಿದೆ. ರಾಣಿಗಾಂವ್‌ನ ರಿಪಾ ಕೇಂದ್ರದಲ್ಲಿ ತುಳಸಿಮಾತಾ ಗ್ರೂಪ್ ಮತ್ತು ಜಾಗೃತಿ ಮಹಿಳಾ ಉಳಿತಾಯ ಗುಂಪಿನಲ್ಲಿ ಒಟ್ಟು 20 ಮಹಿಳೆಯರು ಮತ್ತು 12 ಪುರುಷರು ಕೆಲಸ ಮಾಡುತ್ತಿದ್ದಾರೆ. ಸದ್ಯದಲ್ಲೇ ಈ ರಿಪಾ ಕೇಂದ್ರದಲ್ಲಿ ಬಣ್ಣ, ಚೀಲಗಳ ಜೊತೆಗೆ ಅಗರಬತ್ತಿಗಳ ತಯಾರಿಕೆಯನ್ನೂ ಆರಂಭಿಸುವ ಸಾಧ್ಯತೆ ಇದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ

ಜಗತ್ತು ಸದಾ ನಮ್ಮ ಜೊತೆಗಿರುತ್ತದೆ ಎಂಬ ನಿರೀಕ್ಷೆಗಿಂತ, ಪರಿಸ್ಥಿತಿ ಬದಲಾದರೂ ನಮ್ಮ ದಾರಿಯಲ್ಲಿ…

5 hours ago

ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ

ಮಾರುಕಟ್ಟೆಗೆ ಯೋಗ್ಯವಲ್ಲದ ತೆಂಗಿನಕಾಯಿಯಿಂದ ಪಡೆದ ತೆಂಗಿನ ಎಣ್ಣೆಯನ್ನು ಬಳಸಿ ಸುಸ್ಥಿರ ವಿಮಾನ ಇಂಧನ…

12 hours ago

ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ

ಕೃಷಿ ಮತ್ತು ಕೃಷಿ ಸಂಬಂಧಿತ ಕ್ಷೇತ್ರಗಳು ಯುವ ಉದ್ಯಮಶೀಲತೆಗೆ ಮುಂದಿನ ದೊಡ್ಡ ಅವಕಾಶಗಳಾಗಿದ್ದು,…

15 hours ago

ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ

ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು…

24 hours ago

ರಾಜ್ಯದ 102 ತಾಲೂಕುಗಳಲ್ಲಿ ಬರದ ಛಾಯೆ – ತಿಂಗಳಾಂತ್ಯಕ್ಕೆ ಕೇಂದ್ರಕ್ಕೆ ವರದಿ ಸಲ್ಲಿಕೆ

ಕರ್ನಾಟಕದ 102 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದ್ದು, ಈ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ…

24 hours ago

ಮಂಗಳೂರಿನ ಅಶ್ಮಿತ್ ಎ.ಜೆ. ಅವರಿಗೆ ‘ಸರಿಗಮಪ 2026’ರ ಕಿರೀಟ

ಮಂಗಳೂರಿನ ಅಶ್ಮಿತ್ ಎ.ಜೆ. ಅವರು ಝೀ ಕನ್ನಡದ ‘ಸರಿಗಮಪ 2026’ರ ವಿಜೇತರಾಗಿ ₹20…

1 day ago