Advertisement
ವಿಶೇಷ ವರದಿಗಳು

ಮಲೇಷ್ಯಾದಲ್ಲಿ ರಬ್ಬರ್ ಉತ್ಪಾದನೆ ಇಳಿಕೆ – ಭಾರತೀಯ ರೈತರಿಗೆ ಏನು ಸಂದೇಶ?

Share

2026ರ ಜನವರಿಯಲ್ಲಿ ಮಲೇಷ್ಯಾದ ನೈಸರ್ಗಿಕ ರಬ್ಬರ್ ಉತ್ಪಾದನೆ ತಿಂಗಳಿಗೆ ಹೋಲಿಸಿದರೆ 0.4% ಇಳಿಕೆಯಾಗಿದ್ದು 28,579 ಟನ್‌ಗೆ ತಲುಪಿದೆ. ಡಿಸೆಂಬರ್‌ 2025ರಲ್ಲಿ ಇದು 28,684 ಟನ್‌ ಆಗಿತ್ತು ಎಂದು ಅಂಕಿಅಂಶಗಳು ತಿಳಿಸಿವೆ. ವರ್ಷಾನುಗತ ಹೋಲಿಕೆಯಲ್ಲಿ ಉತ್ಪಾದನೆ ಸುಮಾರು 5.9% ಕುಸಿತ ಕಂಡಿದ್ದು, ರಬ್ಬರ್‌ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವ ಸವಾಲುಗಳನ್ನು ಇದು ತೋರಿಸುತ್ತದೆ ಎಂದು ವರದಿಗಳು ಸೂಚಿಸಿವೆ.

ಇದೇ ವೇಳೆ, ರಬ್ಬರ್‌ ರಫ್ತು ಪ್ರಮಾಣದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಜನವರಿಯಲ್ಲಿ 41,983 ಟನ್‌ಗೆ ಏರಿಕೆಯಾಗಿದ್ದು ಇದು ಡಿಸೆಂಬರ್‌ನಿಗಿಂತ 30.6% ಹೆಚ್ಚಾಗಿದೆ. ರಫ್ತುಗಳಲ್ಲಿ ಚೀನಾ ಪ್ರಮುಖ ಗುರಿ ಮಾರುಕಟ್ಟೆಯಾಗಿದ್ದು ಒಟ್ಟು ರಫ್ತುಗಳಲ್ಲಿ ಸುಮಾರು 40% ಪಾಲು ಹೊಂದಿದೆ. ಯುಎಇ, ಜರ್ಮನಿ, ಅಮೆರಿಕಾ ಮತ್ತು ಬ್ರೆಜಿಲ್ ಕೂಡ ಪ್ರಮುಖ ಮಾರುಕಟ್ಟೆಗಳಾಗಿ ಉಳಿದಿವೆ ಎಂದು ಅಂಕಿಅಂಶಗಳು ತಿಳಿಸಿವೆ.

ಒಟ್ಟು ರಬ್ಬರ್‌ ಸಂಗ್ರಹವೂ ಏರಿಕೆಯಾಗಿದ್ದು, ಜನವರಿಯಲ್ಲಿ 1.33 ಲಕ್ಷ ಟನ್‌ ಮಟ್ಟಕ್ಕೆ ತಲುಪಿದೆ. ಇದರಲ್ಲಿ ಹೆಚ್ಚಿನ ಭಾಗವನ್ನು ಪ್ರೊಸೆಸಿಂಗ್‌ ಘಟಕಗಳು ಹೊಂದಿವೆ ಎಂದು ವರದಿ ತಿಳಿಸಿದೆ.

ಭಾರತೀಯ ರಬ್ಬರ್ ಕೃಷಿಕರಿಗೆ ಸಂದೇಶವೇನು?

ಮಲೇಷ್ಯಾದ ಉತ್ಪಾದನೆ ಕುಸಿತ ಮತ್ತು ರಫ್ತು ಏರಿಕೆ ಭಾರತೀಯ ರಬ್ಬರ್ ಕೃಷಿಕರಿಗೆ ತಕ್ಷಣದ ದೊಡ್ಡ ಲಾಭ ಕೊಡದಿದ್ದರೂ ಬೆಲೆ ಸ್ಥಿರತೆ ಹಾಗೂ ಬೇಡಿಕೆ ಹೆಚ್ಚಳದ ಸೂಚನೆ ನೀಡುತ್ತಿದೆ. ಈ ಟ್ರೆಂಡ್ ಮುಂದುವರಿದರೆ ಭಾರತೀಯ ರಬ್ಬರ್ ಕ್ಷೇತ್ರಕ್ಕೆ ಮಧ್ಯಮ ಅವಧಿಯಲ್ಲಿ ಪಾಸಿಟಿವ್ ಪರಿಣಾಮ ಕಾಣುವ ಸಾಧ್ಯತೆ ಇದೆ.

ಮಲೇಷ್ಯಾ, ಥೈಲ್ಯಾಂಡ್‌, ಇಂಡೋನೇಷ್ಯಾ ದೇಶಗಳು ವಿಶ್ವದ ಪ್ರಮುಖ ನೈಸರ್ಗಿಕ ರಬ್ಬರ್ ಉತ್ಪಾದಕರು. ಈ ದೇಶಗಳಲ್ಲಿ ಉತ್ಪಾದನೆ ಕುಸಿತ ಕಂಡಾಗ ಜಾಗತಿಕ ಮಾರುಕಟ್ಟೆಯಲ್ಲಿ ಸರಬರಾಜು ಕಡಿಮೆಯಾಗುತ್ತದೆ. ಇದರಿಂದ ಜಾಗತಿಕ ರಬ್ಬರ್ ಬೆಲೆ ಏರಿಕೆ ಸಾಧ್ಯತೆ ಉಂಟಾಗುತ್ತದೆ. ಭಾರತದಲ್ಲಿ ಶೀಟ್ ರಬ್ಬರ್ ಮತ್ತು ಲ್ಯಾಟೆಕ್ಸ್ ಬೆಲೆಗಳು ಕುಸಿಯುವ ವೇಗ ಕಡಿಮೆಯಾಗಬಹುದು. ವಿಶೇಷವಾಗಿ ಕೇರಳ ಹಾಗೂ ಕರ್ನಾಟಕದ ರಬ್ಬರ್‌ ಬೆಳೆಗಾರರಿಗೆ ಇದು ಪಾಸಿಟಿವ್ ಮಾರುಕಟ್ಟೆ ಸಿಗ್ನಲ್ ಎಂದು ಪರಿಗಣಿಸಲಾಗುತ್ತಿದೆ.

ಮಲೇಷ್ಯಾದ ರಫ್ತು ಏರಿಕೆ ಒಂದು ಮುಖ್ಯ ಸೂಚನೆಯಾಗಿದ್ದು ಜಾಗತಿಕವಾಗಿ ಟೈರ್‌, ಮೆಡಿಕಲ್ ಗ್ಲೋವ್ಸ್‌, ಇಂಡಸ್ಟ್ರಿಯಲ್ ಉತ್ಪನ್ನಗಳ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಭಾರತೀಯ ರಬ್ಬರ್ ಪ್ರೊಸೆಸಿಂಗ್ ಕಂಪನಿಗಳು ಹೆಚ್ಚು ಕಚ್ಚಾ ರಬ್ಬರ್ ಖರೀದಿಸುವ ಸಾಧ್ಯತೆ ಇದೆ. ದೇಶೀಯ ಮಾರುಕಟ್ಟೆಯಲ್ಲಿ ರಬ್ಬರ್ ಮಾರಾಟ ಸುಲಭವಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು.

ಜಾಗತಿಕ ಉತ್ಪಾದನೆ ಕುಸಿದಾಗ ರಬ್ಬರ್ ರಫ್ತು ಮಾಡುವ ದೇಶಗಳು ತಮ್ಮ ದೇಶೀಯ ಅಗತ್ಯಗಳಿಗೆ ಆದ್ಯತೆ ನೀಡಬಹುದು. ಇದರಿಂದ ಭಾರತಕ್ಕೆ ಕಡಿಮೆ ದರದಲ್ಲಿ ಆಮದು ಆಗುವ ರಬ್ಬರ್ ಪ್ರಮಾಣ ತಾತ್ಕಾಲಿಕವಾಗಿ ಕಡಿಮೆಯಾಗಬಹುದು. ಸ್ಥಳೀಯ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಸ್ಪರ್ಧೆ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ.

ಆದರೆ ಭಾರತದಲ್ಲಿ ಈಗಾಗಲೇ ಕಾರ್ಮಿಕ ವೆಚ್ಚ ಮತ್ತು ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಹವಾಮಾನ ಬದಲಾವಣೆ ರಬ್ಬರ್ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತಿದೆ. ರಬ್ಬರ್‌ ಇಳುವರಿ ಕೆಲವು ಪ್ರದೇಶಗಳಲ್ಲಿ ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಬೆಲೆ ಸ್ಥಿರತೆ ಮತ್ತು ಉತ್ಪಾದನಾ ಸುಧಾರಣೆ ಅಗತ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

A slight decline in Malaysia’s natural rubber production along with a sharp rise in exports signals stronger global demand and possible price support for Indian rubber farmers. However, high production costs and climate-related yield challenges remain key concerns for India’s rubber sector.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 15-07-2026 | ರಾಜ್ಯದಲ್ಲಿ ಮಳೆ ಯಾಕೆ ಕಡಿಮೆಯಾಗಿದೆ ? ಜುಲೈ 16 ರಿಂದ ಎಲ್ಲೆಲ್ಲಿ ಮಳೆ ಆರಂಭವಾಗಲಿದೆ?

ಜುಲೈ 16ರಿಂದ ಕರಾವಳಿ ಹಾಗೂ ಮಲೆನಾಡಿನ ಕೆಲವು ಭಾಗಗಳಲ್ಲಿ ಅಲ್ಲಲ್ಲಿ ಸಾಮಾನ್ಯ ಮಳೆ…

2 hours ago

ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್…! ಕಾರಣ..?

ರಾಜ್ಯದ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಿಗೆ IMD ಯೆಲ್ಲೋ ಅಲರ್ಟ್ ಘೋಷಿಸಿದೆ.…

9 hours ago

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

1 day ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

1 day ago

ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…

1 day ago

ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ

ಯಾದಗಿರಿ ಜಿಲ್ಲೆಯಲ್ಲಿ ಮುಂಗಾರು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ತೇವಾಂಶ ಸಂರಕ್ಷಣೆ, ಬೀಜೋಪಚಾರ ಹಾಗೂ ಕಡಿಮೆ…

1 day ago