Advertisement
ಅನುಕ್ರಮ

ಪ್ರಕೃತಿಯೊಳಗಣ ನಡೆ ಏನು ಅದ್ಭುತವಪ್ಪಾ…!!

Share

ವಾವ್,  ಪ್ರಕೃತಿಯ ‌ಒಳಗಣ ನಡೆ ಏನು ಅದ್ಭುತವಪ್ಪಾ….!!

ಎಲ್ಲಿಂದಲೋ ಓಡೋಡಿ ಬರುವ ಮಾರುತಗಳು, ಅದನೇರಿ ಬರುವ ಮುಗಿಲ ಸಾಲುಗಳು…. ಇದರ ಹಿಂದಿನ ಲೆಕ್ಕಗಳ ಗ್ರಹಿಸಿ ಶಿರಸಿಯ ಸುಧಾಪುರದ. ಮುಂಡಿಗೆ ಕೆರೆಗಿಳಿದು ಸಂಸಾರದ ರಥವೇರುವ ಬೆಳ್ಳಕ್ಕಿಗಳು…. ವಾವ್…. ಯಾವುದೀ ಸಂಬಂಧ …. ಇದರ ಹೆಣೆದವನ್ಯಾರೋ……??

ಪಾಪ… ಈ ಬೆಳ್ಳಕ್ಕಿಗಳ ಅಂಗೈಯಲ್ಲಿ ಮನುಜರಂತೆ ವಾಟ್ಸಾಪೂ, ಸೆಟಲೈಟೂ ಅದೂ ಇದೂ ಎನ್ನುವ ಮಹದಾದ ಸೋ ಕಾಲ್ಡ್ ತಂತ್ರಜ್ಞಾನ ಏನಿಲ್ಲ….ಆದರೂ ಕರಾರುವಾಕ್ಕಾಗಿ ಮಳೆ ಬಂದು ಕೆರೆ ತುಂಬುವ ದಿನದ ಲೆಕ್ಕ ಈ ಬೆಳ್ಳಕ್ಕಿಗಳು ಮಾಡಬಲ್ಲವು….

ಮಾನವ ನಿರ್ಮಿತ ಸೆಟಲೈಟು ಲೆಕ್ಕ ತಪ್ಪೀತು, ಆದರೆ ಪ್ರಕೃತಿಯ ಮಡಿಲಲ್ಲೊಂದಾಗಿ ನಡೆವ ಮಾನವನ ಹೊರತಾದ ಜೀವಿಗಳೆಲ್ಲ ಲೆಕ್ಕ ಪರೀಕ್ಷೆಯಲ್ಲಿ ಸದಾ ಮುಂದೆಯೇ ಸರಿ. ಹಾಗಾದರೆ ಈ ಜ್ಞಾನ ಅಜ್ಞಾನಗಳ ಮದ್ಯದ ಆ ಶಕ್ತಿ ಯಾವುದಪ್ಪಾ….?

ಹುಮ್…!!

ಸಾವಿರಾರು ವರ್ಷಗಳ ಹಿಂದೆ, ವೇದಕಾಲದಲ್ಲಿ , ತಪೋನಿರತರಾದ ಮಾನವ ಸಾಧಕರೂ ಈ ಶಕ್ತಿಯ ರಹಸ್ಯ ಕಂಡುಕೊಂಡಿದ್ದರಲ್ಲಾ…. ಹೌದು.
ಕೇನೋಪನಿಷತ್ತಿನ ಸಾಲುಗಳಲ್ಲಿ … ಬರುವ ಗುರು ಶಿಷ್ಯ ಪ್ರಶ್ನೆ ಉತ್ತರಗಳ ಮಾಲೆಯಲ್ಲಿ ಈ ಶಕ್ತಿಯ ಬಗ್ಗೆ ಪ್ರಶ್ನೆಗಳ ಮೂಲಕ ವರ್ಣನೆ ಮಾಡಲಾಗಿದೆ.

ಕೇನೇಷಿತಂ ಪತತಿ ಪ್ರೇಷಿತಂ ಮನಃ
ಕೇನಃ ಪ್ರಥಮಃ ಪ್ರೈತಿಯುಕ್ತಃ
ಕೇನೇಷಿತಾಂ ವಾಚಮಿಮಾಮ್ ವದಂತಿ
ಚಕ್ಷು ಶ್ರೋತಂ ಕ ಉ ದೇವೋ ಯುನಕ್ತಿಃ…

ಅಂದರೆ…,

ಓ ಗುರುದೇವಾ..

ನನ್ನ ಮನಸಿನ ಆಲೋಚನಾ ಲಹರಿಯ ಪ್ರೇರಕನಾರು
ನನ್ನ ಮಾತಿನ,ದೃಷ್ಟಿಯ,ಶ್ರೋತೃಗುಣದ ಹಿಂದಿನ ಶಕ್ತಿ ಯಾರೋ
ಇದಕ್ಕೆಲ್ಲ ಶಕ್ತಿತುಂಬುವ ಪ್ರಾಣ ಪ್ರಥಮನಾರೂ

ಎಂಬುದಾಗಿ ಕೇಳಿದ ಶಿಷ್ಯನಿಗೆ ಗುರುವು…ತತ್ವಂ ಅಸಿ….ಇದು ಇಷ್ಟೇ… ಸರ್ವಂ ಖಲ್ವಿದಂ ಬ್ರಹ್ಮಾಸಿ…. ಅಂದರೆ…ನಿನ್ನನ್ನೂ ನನ್ನನ್ನೂ ಆವರಿಸಿ, ವ್ಯಾಪಿಸಿ ನಡೆಸುವ ಆ ಮಹತೋ ಶಕ್ತಿ ಅದೇ ಪರಮಾತ್ಮ… ಅಣುರೇಣು ತೃಣಕಾಯದಲೂ ಅವನದೇ ಛಾಯೇ ಎಂಬುದಾಗಿ‌ ಪ್ರಕೃತಿಗೆ ತಲೆಬಾಗುವ ಪಾಠವನ್ನು ಹೇಳುತ್ತಾರೆ ಅಂತೆಯೇ ಶಿಷ್ಯ ಪ್ರಕೃತಿಯ ಮದ್ಯದ ಜೀವನದಲ್ಲಿ ಸಂತೃಪ್ತನಾಗುತ್ತಾನೆ.

ಅಂತೆಯೇ … ಈ ಬೆಳ್ಲಕ್ಕಿಗಳಿಗೂ ದಾರಿದೀವಿಗೆಯಾದವನು ಆ ಪರಮಪುರುಷನೇ ಅಲ್ಲವೇ….

ಯಬ್ಬ, ಸಮಯಕ್ಕನುಗುಣವಾಗಿ ವಿಶ್ವ ಪಥವ ದಿಗ್ದರ್ಶಿಸುವ ಆತನ ಮೀರುವ ಪ್ರಯತ್ನ ಮಾಡುವವ ಮನುಜ ಮಾತ್ರರಲ್ಲವೇ… ಹಾಗಿದ್ದರೆ ತಾನು ತಿಳಿದ ಒಂದು ಕೊಂಡಿಯೇ ಸಂಪೂರ್ಣ ವಿಜ್ಞಾನ ಎಂದು ತಿಳಿದ ಮಾನವ ಯಾವ ಲೆಕ್ಕ… ಹಾಗಿದ್ದರೆ ಜ್ಞಾನ ಎಂದರೆ ಯಾವುದು…?

ಖಂಡಿತಾ… ನಾವು ತಿಳಿದ ವಿಜ್ಞಾನಕ್ಕಿಂತಲೂ ಮೇಲೆ ಒಂದು ಸುಜ್ಞಾನವೊಂದಿದೆ..ಅದರ ಅರಿವ ಸತ್ವ ನಮ್ಮದಾಗಬೇಕಿದೆ ಅಷ್ಟೇ

 

# ಟಿ ಆರ್‌ ಸುರೇಶ್ಚಂದ್ರ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

Published by
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Recent Posts

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…

2 hours ago

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

1 day ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

1 day ago